ರಾಜಕೀಯ
ಮಾಧ್ಯಮದ ಮುಂದೆ ಹೋದ್ರೆ ಹುದ್ದೆ ಸಿಗುತ್ತಾ..? ಅದೇನು ಅಂಗಡಿಯಲ್ಲಿ ಸಿಗೋ ವಸ್ತುನಾ..?
ನವದೆಹಲಿ: ಕಾಂಗ್ರೆಸ್ ನಲ್ಲಿ ಸದ್ಯ ಎಲ್ಲವೂ ಸರಿಯಿಲ್ಲ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕೂಗು ಜೋರಾಗಿದೆ, ಈ ಮಧ್ಯೆ ಪವರ್ ಶೇರಿಂಗ್ ಬಗ್ಗೆಯೂ ದೊಡ್ಡ ಚರ್ಚೆಯಾಗ್ತಿದೆ, ಹೀಗಿರುವಾಗ ಡಿಸಿಎಂ ಡಿಕೆಶಿ ಸ್ವಪಕ್ಷದ ಮುಖಂಡರಿಗೆ ಕೌಂಟರ್ ನೀಡಿದ್ದಾರೆ,
ದೆಹಲಿಯಲ್ಲಿ ಮಾತನಾಡಿದ ಡಿಸಿಎಂ ಹುದ್ದೆ ಬೇಕಾದವರು ಮಾಧ್ಯಮ ಗಳ ಮುಂದೆ ಕೂತು ಕೇಳಬಾರದು, ಅದೇನು ಅಂಗಡಿಯಲ್ಲಿ ಸಿಗುವ ವಸ್ತುನಾ? ಹೈ ಕಮಾಂಡ್ ನಾಯಕರು ಎಲ್ಲರ ಶಕ್ತಿ ಹಾಗೂ ಕೊಡುಗೆಗಳನ್ನು ಗಮನಿಸಿ ಸೂಕ್ತ ಸ್ಧಾನಮಾನ ನೀಡಲಿದ್ದಾರೆ ಎಂದು ಹೇಳಿದ್ದಾರೆ,
ಸತೀಶ್ ಜಾರಕಿಹೊಳಿ ಯೂ ಟರ್ನ್ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಡಿಕೆಶಿ, ಆ ಬಗ್ಗೆ ಅವರನ್ನೇ ಕೇಳಿ, ತಮಗೂ ಅದಕ್ಕೂ ಸಂಬಂಧ ಎಲ್ಲ ಎಂದಷ್ಟೇ ಹೇಳಿ ಜಾರಿಕೊಂಡಿದ್ದಾರೆ,
ಡಿಕೆಶಿ ವಿರೋಧಿ ಬಣ ಕೆಪಿಸಿಸಿ ಅಧ್ಯಕ್ಷರ ಬದಲಾವಣಗೆ ಒಳಗೊಳಗೆ ತಂತ್ರ ರೂಪಿಸ್ತಿದೆ, ಇನ್ನೊಂದೆಡೆ ಪವರ್ ಶೇರಿಂಗ್ ಬಗ್ಗೆ ಡಿನ್ನರ್ ಪಾರ್ಟಿ ಗಳು ಜೋರಾಗಿದೆ, ಇದೆಲ್ಲದರ ಮಧ್ಯೆ ಡಿಸಿಎಂ ಡಿಕೆಶಿ, ವಿರೋಧಿಗಳಿಗೆ ರಾಜಕೀಯವಾಗಿಯೇ ತಿರುಗೇಟು ನೀಡಿದ್ದಾರೆ,
ದೇಶ
“ನಾನು ಶಿಸ್ತು ಪಾಲಿಸಿದ್ದೇನೆ” – ಜಮೀರ್ ತಿರುಗೇಟು
ಬೆಂಗಳೂರು: ಕರ್ನಾಟಕ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉದ್ಭವಿಸಿರುವ ಗೊಂದಲವು ಕಾಂಗ್ರೆಸ್ಸಿನ ಒಳಜಗಳವನ್ನು ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ನಡೆಗೆ ಸ್ಪಷ್ಟನೆ ನೀಡಿದ್ದು, “ಪಾರ್ಟಿ ಹೇಳಿದ ಶಿಸ್ತನ್ನೇ ನಾನು ಕಟ್ಟುನಿಟ್ಟಾಗಿ ಪಾಲಿಸಿದ್ದೇನೆ” ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ಮುಖಂಡ ನಜೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಜಮೀರ್, “ಪಕ್ಷವು ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಮುಖ್ಯಮಂತ್ರಿಗಳ ಸೂಚನೆಗಳನ್ನೂ ಪಾಲಿಸಿದ್ದೇನೆ” ಎಂದು ತಿಳಿಸಿದರು. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಸ್ತು ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್, “ಅವರು ಹೇಳಿರುವುದು ಸರಿಯೇ, ನಾನು ಕೂಡ ಅದನ್ನೇ ಅನುಸರಿಸಿದ್ದೇನೆ” ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಉಪಚುನಾವಣೆಯ ಟಿಕೆಟ್ ಗೊಂದಲವು ಪಕ್ಷದೊಳಗಿನ ಅಸಮಾಧಾನವನ್ನು ಹೆಚ್ಚಿಸಿದೆ. ಈ ಪ್ರಕರಣದಲ್ಲಿ ನಜೀರ್ ಅಹ್ಮದ್ ಮತ್ತು ಎಂಎಲ್ಸಿ ಅಬ್ದುಲ್ ಜಬ್ಬಾರ್ ಅಮಾನತು ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ವೈರಲ್ ಆದ ಆಡಿಯೋ ವಿಚಾರದಲ್ಲಿ ಜಮೀರ್ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿದೆ.
ಕೇರಳ ಪ್ರಚಾರದ ವಿಚಾರದಲ್ಲೂ ಸ್ಪಷ್ಟನೆ ನೀಡಿದ ಜಮೀರ್, “ನಾನು ಕೇರಳಕ್ಕೆ ವೈಯಕ್ತಿಕ ಕಾರಣಕ್ಕಾಗಿ ಹೋಗಿರಲಿಲ್ಲ. ಹೈಕಮಾಂಡ್ ಸೂಚನೆಯ ಮೇರೆಗೆ ಪ್ರಚಾರ ಮಾಡಿದ್ದೇನೆ” ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ದಾವಣಗೆರೆ ಮತ್ತು ಬಾಗಲಕೋಟೆ ಕಡೆಗೆ ತೆರಳಿದ್ದಾಗಿ ಅವರು ವಿವರಿಸಿದರು.
ಒಟ್ಟಿನಲ್ಲಿ, ಟಿಕೆಟ್ ಗೊಂದಲದಿಂದ ಕಾಂಗ್ರೆಸ್ ಒಳರಾಜಕೀಯ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದ್ದು, ಮುಸ್ಲಿಂ ಸಮುದಾಯವೂ ಇಬ್ಬಾಗವಾದ ಲಕ್ಷಣಗಳು ಕಾಣಿಸುತ್ತಿವೆ.
ಬೆಂಗಳೂರು
ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಗಂಭೀರ ಆರೋಪ!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ಸೃಷ್ಟಿಯಾಗಿದ್ದು, Janata Dal Secular ಪಕ್ಷವು ಉಪಮುಖ್ಯಮಂತ್ರಿ D K Shivakumar ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿದೆ. ಕುರ್ಚಿ ಆಸೆಗಾಗಿ ತಮ್ಮ ವಿರೋಧಿ ಬಣದ ನಾಯಕರನ್ನು ಗುರಿಯಾಗಿಸಿ ಸಂಚು ರೂಪಿಸುತ್ತಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ.
Indian National Congress ಪಕ್ಷದೊಳಗಿನ ಅಬ್ದುಲ್ ಜಬ್ಬರ್ ಅಮಾನತು ವಿಚಾರವನ್ನು ಉಲ್ಲೇಖಿಸಿ ಜೆಡಿಎಸ್ ಈ ಟೀಕೆಯನ್ನು ಮಾಡಿದೆ. Abdul Jabbar ಅವರನ್ನು ಪಕ್ಷದಿಂದ ಹೊರಹಾಕಿರುವುದು ಸಾಮಾಜಿಕ ಅನ್ಯಾಯದ ಉದಾಹರಣೆ ಎಂದು ಆರೋಪಿಸಿದೆ.
ಇದಕ್ಕೂ ಮೊದಲು ಪರಿಶಿಷ್ಟ ಸಮುದಾಯದ ನಾಯಕ K N Rajanna ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು ಎಂಬುದನ್ನು ಜೆಡಿಎಸ್ ನೆನಪಿಸಿದೆ. “ಕಾಂಗ್ರೆಸ್ನಲ್ಲಿ ನಾಯಕತ್ವದ ನಿರ್ಧಾರಗಳಲ್ಲಿ ಸಮಾನತೆ ಇಲ್ಲ. ಕೆಲವರಿಗೆ ಕ್ಷಮೆ, ಇತರರಿಗೆ ಶಿಕ್ಷೆ ಎಂಬ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ,” ಎಂದು ಜೆಡಿಎಸ್ ಆರೋಪಿಸಿದೆ.
ಡಿಕೆ ಶಿವಕುಮಾರ್ ಹಣಬಲ ಮತ್ತು ತೋಳ್ಬಲದ ಮೂಲಕ ಪಕ್ಷವನ್ನು ನಡೆಸುತ್ತಿದ್ದು, ತಳಮಟ್ಟದ ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕರನ್ನು ಗುರಿಯಾಗಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ. ಈ ನಡೆ ಕಾಂಗ್ರೆಸ್ನ ನಿಜಸ್ವರೂಪವನ್ನು ತೋರಿಸುತ್ತದೆ ಎಂದು ಜೆಡಿಎಸ್ ಟೀಕಿಸಿದೆ.
ಈ ಆರೋಪಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇತ್ತ ಕಾಂಗ್ರೆಸ್ ನಾಯಕರು ಈ ಆರೋಪಗಳಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ದೇಶ
GBA ELECTION 2026 : ಚುನಾವಣಾ ದಿನಾಂಕಕ್ಕೆ ಕಾದಿರುವ ನಗರ!
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು Supreme Court of India ಗೆ ಮಹತ್ವದ ಅಫಿಡವಿಟ್ ಸಲ್ಲಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಜೂನ್ ಅಂತ್ಯದೊಳಗೆ ಚುನಾವಣೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಇದೀಗ ವಾರ್ಡ್ ಪುನರ್ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಸರ್ಕಾರ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ. ಈ ಮೂಲಕ ಚುನಾವಣೆ ನಡೆಸಲು ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕೋರ್ಟ್ಗೆ ಸ್ಪಷ್ಟಪಡಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ Surya Kant ಮತ್ತು ನ್ಯಾಯಮೂರ್ತಿ Joymalya Bagchi ಅವರನ್ನೊಳಗೊಂಡ ಪೀಠವು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಮುಗಿಸಬೇಕೆಂದು ಗಡುವು ವಿಧಿಸಿತ್ತು.
ಕೋರ್ಟ್ ಆದೇಶದ ಹಿನ್ನೆಲೆ ರಾಜ್ಯ ಸರ್ಕಾರವು ವೇಗವಾಗಿ ಕಾರ್ಯನಿರ್ವಹಿಸಿ, ವಾರ್ಡ್ ಮರುರಚನೆ ಹಾಗೂ ಮೀಸಲಾತಿ ಪ್ರಕ್ರಿಯೆಗಳನ್ನು ಅಂತಿಮಗೊಳಿಸಿದೆ. ಈಗ ಚುನಾವಣೆ ನಡೆಸುವ ಅಂತಿಮ ನಿರ್ಧಾರ Karnataka State Election Commission ಕೈಯಲ್ಲಿದ್ದು, ಶೀಘ್ರದಲ್ಲೇ ದಿನಾಂಕ ಘೋಷಣೆಯ ನಿರೀಕ್ಷೆ ಇದೆ.
ಈ ಬೆಳವಣಿಗೆ ಬೆಂಗ್ಳೂರಿನ ಸ್ಥಳೀಯ ಆಡಳಿತ ವ್ಯವಸ್ಥೆಗೆ ಮಹತ್ವದ ತಿರುವು ನೀಡಲಿದ್ದು, ಬಹುಕಾಲದಿಂದ ಬಾಕಿಯಾಗಿದ್ದ ನಗರ ಪಾಲಿಕೆ ಚುನಾವಣೆಗಳಿಗೆ ಹೊಸ ಚೈತನ್ಯ ನೀಡಲಿದೆ. ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷಗಳು ಈಗಲೇ ಚುನಾವಣಾ ತಯಾರಿ ಆರಂಭಿಸಿರುವುದು ಗಮನಾರ್ಹವಾಗಿದೆ.
-
ಅಪರಾಧ9 hours agoಐಪಿಎಲ್ ಟಿಕೆಟ್ ಕಾಳಸಂತೆ: KSCA ಸದಸ್ಯ ಸೇರಿ FIR!
-
ಅಪರಾಧ4 hours agoಯೋಗೇಶ್ ಗೌಡ ಹತ್ಯೆ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
-
ಅಪರಾಧ10 hours agoTCS Nashik Case : ಗರ್ಭಿಣಿ ಎಂದು ಹೇಳಿ ಜಾಮೀನು ಅರ್ಜಿ!
-
ದೇಶ12 hours ago“ನಾನು ಶಿಸ್ತು ಪಾಲಿಸಿದ್ದೇನೆ” – ಜಮೀರ್ ತಿರುಗೇಟು
-
ದೇಶ11 hours agoಟ್ರಾಫಿಕ್ ಸಮಸ್ಯೆಗೆ ದೊಡ್ಡ ಪರಿಹಾರ: 75 ಕಿಮೀ ಎಲಿವೇಟೆಡ್ ರಸ್ತೆ
-
ದೇಶ10 hours ago“PoK ಭಾರತದ್ದೇ” – ಬಿಜೆಪಿ ನಾಯಕ ನರ್ಸಯ್ಯ ಹೇಳಿಕೆ
-
ದೇಶ12 hours agoಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಜಾತ್ರೆ!
-
ದೇಶ7 hours ago“ಪುನರ್ವಿಂಗಡಣೆ = ರಾಜಕೀಯ ನೋಟು ಅಮಾನ್ಯೀಕರಣ!” ತರೂರ್ ಟೀಕೆ
