Connect with us

ದೇಶ

ಪಾಕ್ ಮೀಡಿಯಾ ಸುಳ್ಳು ಬೊಗುಳುತ್ತಿದೆ- ಅಲ್ಲಾ ನಮ್ಮನ್ನು ಕ್ಷಮಿಸು ಎಂದು ಪಾಕಿಸ್ತಾನಿ ನಾಗರಿಕ!

Published

on

ಪಾಕಿಸ್ತಾನ: ಪಹಲ್ಗಾಮ್ ಪ್ರತೀಕಾರದ ಹಿನ್ನೆಲೆಯಲ್ಲಿ ಭಾರತವು ತೆಗೆದುಕೊಂಡ ಕ್ರಮದ ಅಂಗವಾಗಿ ಮೇ 7 ರಿಂದ ಗಡಿಯಲ್ಲಿ ಏರ್ ಸ್ಟ್ರೈಕ್ ಪ್ರಾರಂಭವಾಗಿದೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಇದುವರೆಗೂ ಮುಂದುವರೆದಿದ್ದು ಲಾಹೋರ್ ವರೆಗೂ ಭಾರತವು ಶೆಲ್ ದಾಳಿ ನಡೆಸುತ್ತಿರುವುದು ಪಾಕಿಸ್ತಾನದ ನಾಗರಿಕರಿಂದಲೇ ಖಚಿತಪಡಿಸಲ್ಪಟ್ಟಿದೆ,
ನೇರವಾಗಿ ವಿಡಿಯೋ ಮಾಡುತ್ತಿರುವ ಅಲ್ಲಿನ ನಾಗರಿಕ ಪ್ರತಿ ಎರಡು ನಿಮಿಷಕ್ಕೆ ಒಂದು ಮಿಸೈಲ್ ಬಂದು ಲಾಹೋರ್ ಮೇಲೆ ಬೀಳುತ್ತಿದೆ, ಇಲ್ಲಂತೂ ಭಯಾನಕವಾದ ವಾತಾವರಣ ಸೃಷ್ಟಿಯಾಗಿದೆ, ಅದರೆ ಪಾಕಿಸ್ತಾನದ ಮೀಡಿಯಾಗಳು ಮಾತ್ರ ಸುಳ್ಳು ಹೇಳುತ್ತಿವೆ ಎಂದು ಅವಲತ್ತುಕೊಂಡಿದ್ದಾನೆ, ಅಲ್ಲದೇ ಪ್ರತಿಯೊಂದು ಜಾಗಜಾಗವನ್ನೂ ಭಾರತೀಯ ಸೇನೆ ಹುಡುಕಿ ಹೊಡೆಯುತ್ತಿದೆ ಎಂದು ಪಾಕ್ ಪ್ರಜೆ ಗೋಳು ತೋಡಿಕೊಂಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಇದುವರೆಗೂ ಪಾಕಿಸ್ತಾನದ ಮಾಧ್ಯಮಗಳು ಪಾಕ್ ದಾಳಿಯಿಂದಾಗಿ ಭಾರತ ಬೆಚ್ಚಿ ಬಿದ್ದಿದೆ, ಭಾರತದ 8-10 ರೆಫೇಲ್ ಯುದ್ಧವಿಮಾನಗಳನ್ನು ಪಾಕ್ ಹೊಡೆದುರುಳಿಸಿದೆ, ಭಾರತಕ್ಕೆ ಸಾವಿರಾರು ಕೋಟಿ ರೂ ನಷ್ಟವಾಗಿದೆ ಎಂದು ಅಸಂಬದ್ಧ ಕಪೋಲಕಲ್ಪಿತ ಸುದ್ದಿಗಳನ್ನು ಹರಿಬಿಡುತ್ತಿದೆ,

J S Vasudev is a journalist and writer with 15 years of experience in writing and journalism. He founded Hosasuddi.in in 2023 with a vision to deliver credible and timely Kannada news. With a strong passion for journalism, he focuses on presenting news in a clear, simple and reader-friendly manner. His work covers current affairs, Karnataka news, national developments, business, technology and social issues. He believes in independent journalism and responsible reporting that puts readers first. His guiding motto is “Write on Your Own,” reflecting his commitment to original and independent content. Through Hosasuddi.in, he continues to contribute to Kannada digital journalism with dedication and integrity.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೇಶ

PM Narendra Modi Birthday: ವಡ್‌ನಗರದಲ್ಲಿ ಮೋದಿ ಬಾಲ್ಯದ ನೆನಪು; ಶಾಲಾ ಗೆಳೆಯರು ಹಂಚಿಕೊಂಡ ಅಪರೂಪದ ಕ್ಷಣಗಳು

Published

on

ಗುಜರಾತ್: PM Narendra Modi ಅವರು 76ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಅವರ ಹುಟ್ಟೂರು ಗುಜರಾತ್‌ನ ವಡ್‌ನಗರದಲ್ಲಿ ಬಾಲ್ಯದ ನೆನಪುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಧಾನಿಯವರ ಶಾಲಾ ದಿನಗಳ ಗೆಳೆಯರು ತಮ್ಮ ಬಾಲ್ಯದ ಸ್ನೇಹ, ಶಾಲಾ ಜೀವನ ಹಾಗೂ ವಡ್‌ನಗರದಲ್ಲಿ ಕಳೆದ ಸರಳ ದಿನಗಳ ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರೊಂದಿಗೆ ಬಿಎನ್‌ಎ ಶಾಲೆಯಲ್ಲಿ (ಪ್ರೇರಣಾ ಶಾಲೆ) 4ರಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಡೋಲತ್ ಖಾನ್ ಪರಾಣ್ ಹಾಗೂ ಶ್ಯಾಮಲದಾಸ್ ಮೋದಿ ಅವರು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ್ದಾರೆ.

ಪಕ್ಕದ ಮನೆಯ ಗೆಳೆಯರಾಗಿದ್ದ ಮೋದಿ

ಡೋಲತ್ ಖಾನ್ ಪರಾಣ್ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, 1960ರ ದಶಕದಲ್ಲಿ ತಾವು ಮತ್ತು ನರೇಂದ್ರ ಮೋದಿ ವಡ್‌ನಗರದಲ್ಲಿ ಒಟ್ಟಿಗೆ ಬೆಳೆದಿದ್ದಾಗಿ ಹೇಳಿದ್ದಾರೆ.

ಮೋದಿ ಅವರ ಮನೆಯಿದ್ದ ಬೀದಿಯ ಪಕ್ಕದಲ್ಲೇ ಸುಮಾರು 250ರಿಂದ 300 ಪರಾಣ್ ಕುಟುಂಬಗಳು ವಾಸಿಸುತ್ತಿದ್ದವು ಎಂದು ಅವರು ತಿಳಿಸಿದ್ದಾರೆ. ತಮ್ಮ ಮತ್ತು ಮೋದಿ ಕುಟುಂಬಗಳ ಆರ್ಥಿಕ ಪರಿಸ್ಥಿತಿಯೂ ಕಷ್ಟಕರವಾಗಿತ್ತು ಎಂದು ಪರಾಣ್ ಸ್ಮರಿಸಿದ್ದಾರೆ.

ತಂದೆಯ ನಿಧನದ ಬಳಿಕ ತಮ್ಮ ಕುಟುಂಬ ಸಣ್ಣ ಪಿಂಚಣಿ ಹಣವನ್ನು ಅವಲಂಬಿಸಿತ್ತು. ಮತ್ತೊಂದೆಡೆ, ಮೋದಿ ಅವರ ಕುಟುಂಬವೂ ತಂದೆಯ ಸಂಪಾದನೆಯನ್ನೇ ಮುಖ್ಯ ಆದಾಯವಾಗಿ ಹೊಂದಿತ್ತು ಎಂದು ಅವರು ಹೇಳಿದ್ದಾರೆ.

ಆ ದಿನಗಳಲ್ಲಿ ಇಬ್ಬರೂ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದೆವು ಎಂದು ಪರಾಣ್ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಮೋದಿಗೆ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ

ತಮ್ಮ ಬಾಲ್ಯದ ಗೆಳೆಯ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಡೋಲತ್ ಖಾನ್ ಪರಾಣ್ ಹೇಳಿದ್ದಾರೆ.

ವಡ್‌ನಗರದ ಶ್ರೀ ಹಟೇಶ್ವರ ಮಹಾದೇವ ದೇವಸ್ಥಾನದಲ್ಲಿ ಪ್ರಧಾನಿ ಮೋದಿಯವರಿಗೆ ಉತ್ತಮ ಆರೋಗ್ಯ ಹಾಗೂ ದೇಶದ ಸೇವೆ ಮಾಡಲು ಮತ್ತಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದ್ದಾರೆ.

ಅದೇ ವೇಳೆ, ತಮ್ಮ ಹುಟ್ಟೂರು ವಡ್‌ನಗರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿರುವ ಗಮನಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

ವಡ್‌ನಗರದ ಬಾಲ್ಯದಿಂದ ಪ್ರಧಾನಿಯವರೆಗೆ

ಸೆಪ್ಟೆಂಬರ್ 17, 1950ರಂದು ವಡ್‌ನಗರದಲ್ಲಿ ಜನಿಸಿದ ನರೇಂದ್ರ ಮೋದಿ ಅವರ ಬಾಲ್ಯದ ದಿನಗಳ ಕುರಿತು ಅವರ ಶಾಲಾ ಗೆಳೆಯರು ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸರಳ ಕುಟುಂಬ ಹಿನ್ನೆಲೆ, ವಡ್‌ನಗರದ ಪರಿಸರ ಹಾಗೂ ಬಾಲ್ಯದಲ್ಲಿ ಎದುರಿಸಿದ ಅನುಭವಗಳು ತಮ್ಮ ಗೆಳೆಯ ನರೇಂದ್ರ ಮೋದಿ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಬಾಲ್ಯದ ಸ್ನೇಹಿತರು ಸ್ಮರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಡ್‌ನಗರದಲ್ಲಿ ಅವರ ಬಾಲ್ಯ ಮತ್ತು ಶಾಲಾ ಜೀವನದ ನೆನಪುಗಳು ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿವೆ.

Continue Reading

ಬೆಂಗಳೂರು

Nelamangala ಟ್ರಾಫಿಕ್‌ಗೆ ಶೀಘ್ರ ಪರಿಹಾರ? CM D K Shivkumar ಮುಂದೆ ಮೆಟ್ರೋ-ಫ್ಲೈಓವರ್ ಪ್ರಸ್ತಾವಕ್ಕೆ ಸಮ್ಮತಿ

Published

on

ಬೆಂಗಳೂರು: Nelamangala ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾರಿಗೆ ಮತ್ತು ಟ್ರಾಫಿಕ್ ದಟ್ಟಣೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಮೂಲಸೌಕರ್ಯ ಯೋಜನೆಗಳ ಕುರಿತು ಚರ್ಚೆ ನಡೆದಿದೆ.

ಶಾಸಕ ಎನ್. ಶ್ರೀನಿವಾಸ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ನೆಲಮಂಗಲ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.

ನಾಗಸಂದ್ರ-ನೆಲಮಂಗಲ ಮೆಟ್ರೋ ವಿಸ್ತರಣೆಗೆ ಮನವಿ

ಸಭೆಯಲ್ಲಿ ಪ್ರಮುಖವಾಗಿ ನಾಗಸಂದ್ರದಿಂದ ನೆಲಮಂಗಲದವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆ ಮಾಡುವ ಕುರಿತು ಮನವಿ ಸಲ್ಲಿಸಲಾಗಿದೆ. ಇದರ ಜತೆಗೆ ಪ್ರಮುಖ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮತ್ತು ಅಗತ್ಯವಿರುವ ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆಯೂ ಚರ್ಚೆ ನಡೆದಿದೆ.

ಬೆಂಗಳೂರು-ತುಮಕೂರು ಹೆದ್ದಾರಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಮನವಿ ಮಾಡಿದ್ದಾರೆ.

ಯೋಜನಾ ವರದಿ ಸಿದ್ಧಪಡಿಸಲು ಮನವಿ

ನೆಲಮಂಗಲ ಭಾಗದಲ್ಲಿ ಉಂಟಾಗುತ್ತಿರುವ ಸಂಚಾರ ಅಡಚಣೆಗಳನ್ನು ಸಮಗ್ರವಾಗಿ ನಿವಾರಿಸಲು ಅಗತ್ಯವಿರುವ ಯೋಜನೆಗಳ ಕುರಿತು ವಿವರವಾದ ಯೋಜನಾ ವರದಿ ಸಿದ್ಧಪಡಿಸುವಂತೆ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ನೆಲಮಂಗಲವು ಬೆಂಗಳೂರಿನ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿ ತಿಳಿಸಿದೆ.

ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ?

ಮೆಟ್ರೋ ಮಾರ್ಗ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣದಂತಹ ಯೋಜನೆಗಳು ಅನುಷ್ಠಾನಗೊಂಡರೆ ನೆಲಮಂಗಲ ಮಾತ್ರವಲ್ಲದೆ ತುಮಕೂರು ಹಾಗೂ ಹಾಸನ ಭಾಗಗಳಿಂದ ಬೆಂಗಳೂರಿನತ್ತ ಸಂಚರಿಸುವ ವಾಹನ ಸವಾರರಿಗೂ ಅನುಕೂಲವಾಗುವ ನಿರೀಕ್ಷೆ ಇದೆ.

ಸಂಚಾರ ವ್ಯವಸ್ಥೆ ಸುಧಾರಿಸಿದರೆ ಸ್ಥಳೀಯ ವ್ಯಾಪಾರ, ಕೈಗಾರಿಕೆ ಮತ್ತು ಇತರ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಬಹುದು. ಆದರೆ ಈ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಅಂತಿಮ ಅನುಮೋದನೆ, ಯೋಜನಾ ವರದಿ ಹಾಗೂ ಅನುದಾನ ಸೇರಿದಂತೆ ಮುಂದಿನ ಹಂತಗಳ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.

Continue Reading

ದೇಶ

Wadi ಯ ಭೀಮಾಬಾಯಿ ಯಶೋಗಾಥೆ: ಪೊರಕೆ ಉದ್ಯಮದಿಂದ ₹17 ಸಾವಿರ ಮಾಸಿಕ ಆದಾಯ!

Published

on

ವಾಡಿ: ಗ್ರಾಮೀಣ ಭಾಗದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸ್ವಸಹಾಯ ಸಂಘಗಳು ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಕಾರ್ಯಕ್ರಮಗಳು ನೆರವಾಗುತ್ತಿವೆ. ಕಲಬುರಗಿ ಜಿಲ್ಲೆಯ ವಾಡಿ ಸಮೀಪದ ರಾವೂರು ಗ್ರಾಮದ ಭೀಮಾಬಾಯಿ ಅವರ ಪೊರಕೆ ತಯಾರಿಕಾ ಉದ್ಯಮ ಇದಕ್ಕೆ ಒಂದು ಉದಾಹರಣೆಯಾಗಿದೆ ಎಂದು ACC ಹಾಗೂ Adani Foundation ತಿಳಿಸಿವೆ.

ಭೀಮಾಬಾಯಿ ಅವರ ಕುಟುಂಬಕ್ಕೆ ಆರಂಭದಲ್ಲಿ ತಿಂಗಳಿಗೆ ಸುಮಾರು ₹7,000ರಿಂದ ₹8,000 ಆದಾಯವಿತ್ತು. ಕುಟುಂಬದ ದೈನಂದಿನ ಖರ್ಚು ಹಾಗೂ ಮಕ್ಕಳ ಶಿಕ್ಷಣದ ವೆಚ್ಚಗಳನ್ನು ನಿರ್ವಹಿಸುವುದು ಸವಾಲಾಗಿತ್ತು. 2024ರಲ್ಲಿ ಅವರು Adani Foundation ಬೆಂಬಲಿತ **‘ರೇಣುಕಾ ಯಲ್ಲಮ್ಮ ಸ್ವಸಹಾಯ ಸಂಘ’**ಕ್ಕೆ ಸೇರ್ಪಡೆಯಾದರು.

ಸ್ವಸಹಾಯ ಸಂಘದ ಮೂಲಕ ದೊರೆತ ಸಾಲದ ನೆರವು ಮತ್ತು ಮಾರ್ಗದರ್ಶನವನ್ನು ಬಳಸಿಕೊಂಡು ಭೀಮಾಬಾಯಿ ಕೈಯಿಂದ ಪೊರಕೆ ತಯಾರಿಸುವ ಸಣ್ಣ ಉದ್ಯಮವನ್ನು ಆರಂಭಿಸಿದರು. ಆರಂಭದಲ್ಲಿ ತಿಂಗಳಿಗೆ ಸುಮಾರು 200 ಪೊರಕೆಗಳನ್ನು ತಯಾರಿಸುತ್ತಿದ್ದರು.

ಯಂತ್ರದ ನೆರವಿನಿಂದ ಉತ್ಪಾದನೆ ಹೆಚ್ಚಳ

ಭೀಮಾಬಾಯಿ ಅವರ ಉದ್ಯಮದ ಪ್ರಯತ್ನವನ್ನು ಗಮನಿಸಿದ Adani Foundation 2025ರಲ್ಲಿ ಪೊರಕೆ ತಯಾರಿಕಾ ಯಂತ್ರವನ್ನು ಒದಗಿಸಿತು ಎಂದು ಸಂಸ್ಥೆ ತಿಳಿಸಿದೆ. ಯಂತ್ರದ ಬಳಕೆಯಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಿ ತಿಂಗಳಿಗೆ ಸುಮಾರು 200ರಿಂದ 500 ಪೊರಕೆಗಳಿಗೆ ಏರಿಕೆಯಾಯಿತು.

ಉತ್ಪಾದನೆ ಹೆಚ್ಚಾದ ಪರಿಣಾಮ ಕುಟುಂಬದ ಆದಾಯದಲ್ಲೂ ಏರಿಕೆಯಾಗಿದೆ. ಪ್ರಸ್ತುತ ಕುಟುಂಬದ ಮಾಸಿಕ ಆದಾಯವು ಸುಮಾರು ₹15,000ರಿಂದ ₹17,000ಕ್ಕೆ ತಲುಪಿದೆ ಎಂದು ಸಂಸ್ಥೆಯ ಮಾಹಿತಿಯಲ್ಲಿ ತಿಳಿಸಲಾಗಿದೆ.

ಮಕ್ಕಳ ಶಿಕ್ಷಣಕ್ಕೂ ನೆರವು

ಆದಾಯ ಹೆಚ್ಚಳದಿಂದ ಮಕ್ಕಳ ಶಿಕ್ಷಣದ ವೆಚ್ಚ ಸೇರಿದಂತೆ ಕುಟುಂಬದ ಭವಿಷ್ಯದ ಅಗತ್ಯಗಳನ್ನು ಯೋಜಿಸಲು ಹೆಚ್ಚಿನ ಅವಕಾಶ ದೊರೆತಿದೆ ಎಂದು ತಿಳಿಸಲಾಗಿದೆ. ಸ್ವಸಹಾಯ ಸಂಘದ ಸಾಲ, ಮಾರ್ಗದರ್ಶನ ಮತ್ತು ಉದ್ಯಮಕ್ಕೆ ಅಗತ್ಯವಾದ ಉಪಕರಣಗಳ ನೆರವು ಗ್ರಾಮೀಣ ಮಹಿಳೆಯರಿಗೆ ಸಣ್ಣ ಉದ್ಯಮಗಳನ್ನು ಆದಾಯದ ಮೂಲವನ್ನಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಬಹುದು.

952 ಸ್ವಸಹಾಯ ಸಂಘಗಳಿಗೆ ಬೆಂಬಲ

ACCಯ 2024–25ರ ಸಮಗ್ರ ವರದಿಯ ಪ್ರಕಾರ, ಮಹಿಳಾ ಸಬಲೀಕರಣದ ಭಾಗವಾಗಿ Adani Foundation 952 ಸ್ವಸಹಾಯ ಸಂಘಗಳಿಗೆ ಬೆಂಬಲ ನೀಡಿದ್ದು, ಈ ಸಂಘಗಳಲ್ಲಿ 9,799 ಸದಸ್ಯರು ಇದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಈ ಸ್ವಸಹಾಯ ಸಂಘಗಳ ಸದಸ್ಯರು ಹೊಲಿಗೆ, ಬೇಕರಿ, ಅಣಬೆ ಕೃಷಿ ಸೇರಿದಂತೆ ವಿವಿಧ ಆದಾಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಾಡಿ ಭಾಗದಲ್ಲಿಯೂ ಮಹಿಳಾ ನೇತೃತ್ವದ ಜೀವನೋಪಾಯ ಚಟುವಟಿಕೆಗಳಿಗೆ ಬೆಂಬಲ ನೀಡಲಾಗುತ್ತಿದೆ.

ಭೀಮಾಬಾಯಿ ಅವರ ಅನುಭವದಲ್ಲಿ ಸ್ವಸಹಾಯ ಸಂಘದ ನೆರವಿನಿಂದ ಆರಂಭವಾದ ಸಣ್ಣ ಪ್ರಯತ್ನವು ನಂತರ ತಂತ್ರಜ್ಞಾನ ಮತ್ತು ನಿರಂತರ ಪರಿಶ್ರಮದ ಮೂಲಕ ಉತ್ಪಾದನೆ ಹಾಗೂ ಆದಾಯ ಹೆಚ್ಚಿಸಿಕೊಂಡ ಉದ್ಯಮವಾಗಿ ರೂಪುಗೊಂಡಿದೆ. ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸ್ಥಳೀಯ ಮಟ್ಟದ ಇಂತಹ ಉದ್ಯಮಗಳು ನೆರವಾಗಬಹುದು.

Continue Reading
Advertisement

Trending