ದೇಶ
ಆಪರೇಷನ್ ಸಿಂಧೂರ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಧಾನಿ ಮೋದಿ!
ಪಹಲ್ಗಾಮ್ ದಾಳಿಗೆ (Pahalgam Attack) ಭಾರತ ಆಪರೇಷನ್ ಸಿಂಧೂರ್ (Operation Sindoor) ಮೂಲಕ ಪ್ರತೀಕಾರ (Revenge) ತೀರಿಸಿಕೊಂಡಿತು. ಆಪರೇಷನ್ ಸಿಂಧೂರ್ ಸಮಯದಲ್ಲಿ, ಭಾರತ ಕನಿಷ್ಠ ಆರು ಪಾಕಿಸ್ತಾನಿ ಜೆಟ್ಗಳು (Pakistan Jet Destroy) ಮತ್ತು ಒಂದು ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉನ್ನತ ರಕ್ಷಣಾ ಮೂಲಗಳು ಮಾಹಿತಿ ನೀಡಿವೆ. ಏಪ್ರಿಲ್ 23 ರಂದು, ಅಂದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಪ್ರಧಾನ ಕಚೇರಿಗಳನ್ನು ಪ್ರಮುಖ ಗುರಿಗಳಾಗಿ ಆಯ್ಕೆ ಮಾಡಿಕೊಂಡಿತ್ತು ಎಂದು ಹೇಳಲಾಗಿದೆ.
ಇನ್ನೂ ಮೇ.10 ರಂದು ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಭಾರತ ಅಮೆರಿಕ ಅಥವಾ ಡೊನಾಲ್ಡ್ ಟ್ರಂಪ್ನಿಂದ ಒತ್ತಡಕ್ಕೆ ಒಳಗಾಗಿತ್ತು ಎಂಬುದು ಸುಳ್ಳು ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ. “ಟ್ರಂಪ್ ಮತ್ತು ಪ್ರಧಾನಿ ಮೋದಿ ಎಂದಿಗೂ ಮಾತನಾಡಲಿಲ್ಲ ಎಂಬುದೇ ಸತ್ಯ. ಜೆಡಿ ವ್ಯಾನ್ಸ್ ಕರೆ ಮಾಡಿ ಮಾತನಾಡಿದಾಗಲೂ ಪ್ರಧಾನಿ ತುಂಬಾ ದೃಢವಾಗಿದ್ದರು ಎನ್ನಲಾಗಿದೆ.
ಆಪರೇಷನ್ ಸಿಂಧೂರ್ ವಿಚಾರವಾಗಿ ಕಾಂಗ್ರೆಸ್ ಮತ್ತು ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡಿದ್ದಾರೆ. ಮೋದಿಯವರು ‘ಅಮೆರಿಕದ ಒತ್ತಡಕ್ಕೆ ಮಣಿದರು’ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದರು. ಇದೀಗ ಇದಕ್ಕೆ ಉತ್ತರ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ನಾವು ಟ್ರಂಪ್ ಒತ್ತಡಕ್ಕೆ ಮಣಿದಿಲ್ಲ ಎಂದು ಬಿಜೆಪಿ ಕೇಂದ್ರ ಸರ್ಕಾರ ಹೇಳಿದೆ.
ಆಪರೇಷನ್ ಸಿಂಧೂರ್ ಯೋಜನೆ ಹೇಗೆ ಮಾಡಲಾಯಿತು?
ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಂತರ ಮುರಿಡ್ಕೆ ಮತ್ತು ಬಹವಾಲ್ಪುರ ಭಾರತದ ಪ್ರಮುಖ ಗುರಿಗಳಾಗಿದ್ವು ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 23 ರ ಸಭೆಯಲ್ಲಿಯೇ ಇದನ್ನು ನಿರ್ಧರಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏಪ್ರಿಲ್ 23 ರ ಬೆಳಿಗ್ಗೆ ಮೂರು ಸೇನಾ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರೊಂದಿಗೆ ದೀರ್ಘ ಸಭೆ ನಡೆಸಿದರು.
ಮುರಿಡ್ಕೆ ಮತ್ತು ಬಹವಾಲ್ಪುರದ ನಾಶದ ಯೋಜನೆಯಲ್ಲಿ ಈ ಸಭೆಯಲ್ಲಿಯೇ ನಿರ್ಧರಿಸಲಾಯ್ತು. ಇದು ಪಹಲ್ಗಾಮ್ ದಾಳಿಯ ಒಂದು ದಿನದ ನಂತರವೇ ಪ್ಲಾನ್ ಮಾಡಲಾಗಿತ್ತು. ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಸೇನಾ ಮುಖ್ಯಸ್ಥರು ಈ ಸಭೆಯಲ್ಲಿ ಹೇಳಿದ್ದರು. ಏಪ್ರಿಲ್ 23ರ ಸಂಜೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಈ ಆಯ್ಕೆಗಳನ್ನು ಮುಂದಿಡಲಾಯಿತು ಎಂದು ಹೇಳಲಾಗಿದೆ.
ದಾಳಿ ರಾತ್ರಿ ವೇಳೆಯೇ ಏಕೆ ನಿರ್ಧರಿಸಲಾಯಿತು?
ರಕ್ಷಣಾ ಮೂಲಗಳ ಪ್ರಕಾರ, ಆಪರೇಷನ್ ಸಿಂಧೂರ್ ಅಡಿಯಲ್ಲಿ ದಾಳಿಗೆ ಹಲವಾರು ದಿನಾಂಕಗಳನ್ನು ಪರಿಗಣಿಸಲಾಗಿತ್ತು. ಮತ್ತು ಸಮಯವನ್ನು 12.30 ರಿಂದ 2 ರ ನಡುವೆ ನಿಗದಿಪಡಿಸಲಾಯಿತು. ರಾತ್ರಿಯ ಕತ್ತಲೆಯಲ್ಲಿಯೂ ಸಹ ಗುರಿಗಳ ಮೇಲೆ ಉಂಟಾದ ವಿನಾಶವನ್ನು ಕ್ಯಾಮೆರಾಗಳು ಸೆರೆಹಿಡಿಯಬಹುದೆಂದು ಖಚಿತಪಡಿಸಿಕೊಳ್ಳಲಾಯಿತು. ಅದಾಗ್ಯೂ, ಅಂತರರಾಷ್ಟ್ರೀಯ ಗಡಿ ಅಥವಾ ನಿಯಂತ್ರಣ ರೇಖೆಯನ್ನು (LoC) ದಾಟಬಾರದು ಎಂಬುದು ಸಭೆಯಲ್ಲಿ ನಿರ್ಧಾರವಾಗಿತ್ತು.
ಅಂತಿಮವಾಗಿ, ಭಾರತವು ಮೇ 7 ರಂದು ಬೆಳಗಿನ ಜಾವ 1.05 ರಿಂದ 1.30 ರ ನಡುವಿನ 22 ನಿಮಿಷಗಳ ಒಳಗೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಹಲವಾರು ಭಯೋತ್ಪಾದಕ ಕೇಂದ್ರಗಳ ಮೇಲೆ ದಾಳಿ ಮಾಡಿತು. ಈ ಕಾರ್ಯಾಚರಣೆಯ ಆರಂಭಿಕ ಹಂತದಲ್ಲಿ ‘ಕಾರ್ಯತಂತ್ರದ ತಪ್ಪು’ಗಳಿಂದಾಗಿ ಭಾರತ ಕೆಲವು ಜೆಟ್ಗಳನ್ನು ಕಳೆದುಕೊಂಡಿದೆ ಎಂದು ಸಿಡಿಎಸ್ ಇತ್ತೀಚೆಗೆ ಒಪ್ಪಿಕೊಂಡಿತು, ಆದರೆ ಎಲ್ಲಾ ಭಾರತೀಯ ಪೈಲಟ್ಗಳು ಸುರಕ್ಷಿತವಾಗಿ ಮರಳಿದರು.
ಪಾಕಿಸ್ತಾನಕ್ಕೆ ಎಷ್ಟು ನಷ್ಟ?
ಅದಾಗ್ಯೂ, ಮೇ 7 ಮತ್ತು ಮೇ 10 ರ ಬೆಳಿಗ್ಗೆ ಭಾರತೀಯ ದಾಳಿಯಲ್ಲಿ ಆರಕ್ಕೂ ಹೆಚ್ಚು ಪಾಕಿಸ್ತಾನಿ ಜೆಟ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಭಾರತ ದೃಢಪಡಿಸಿದೆ. ಪಾಕಿಸ್ತಾನಿ ಸೇನೆಯ C-130J ಮಿಲಿಟರಿ ಸಾರಿಗೆ ವಿಮಾನವನ್ನು ಸಹ ಹೊಡೆದುರುಳಿಸಲಾಗಿದೆ. ಇವುಗಳಲ್ಲಿ ಪಾಕಿಸ್ತಾನ ವಾಯುಪಡೆಯ F-16 ಮತ್ತು JF-17 ಫೈಟರ್ ಜೆಟ್ಗಳು ಮತ್ತು ಪಾಕಿಸ್ತಾನಿ SAAB-2000 AWACS ಸೇರಿವೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ. ಭಾರತೀಯ ನೌಕಾಪಡೆಯು ವಾಸ್ತವವಾಗಿ ಯುದ್ಧಕ್ಕೆ ಪ್ರವೇಶಿಸಲಿಲ್ಲ, ಆದರೆ ಅದನ್ನು ಸಿದ್ಧಪಡಿಸಲಾಗಿತ್ತು. ಭಾರತೀಯ ನೌಕಾಪಡೆಯು ಕರಾಚಿ ಬಂದರಿನ ಮೇಲೆ ದಾಳಿ ಮಾಡಬಹುದೆಂದು ಪಾಕಿಸ್ತಾನ ಭಯಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ದೇಶ
Medical Store CCTV: ಮೆಡಿಕಲ್ ಸ್ಟೋರ್ಗಳಲ್ಲಿ CCTV ಕಡ್ಡಾಯ? ಕೇಂದ್ರದ ಹೊಸ ಕರಡು ಪ್ರಸ್ತಾವನೆ
ನವದೆಹಲಿ: ಪ್ರಿಸ್ಕ್ರಿಪ್ಷನ್ ಆಧಾರದಲ್ಲಿ ಮಾರಾಟವಾಗುವ ಔಷಧಗಳ ವಿತರಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಿಯಂತ್ರಿಸುವ ಉದ್ದೇಶದಿಂದ Medical Store ಗಳಲ್ಲಿ ಸಿಸಿಟಿವಿ ಕಣ್ಗಾವಲು ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಮುಂದಿಟ್ಟಿದೆ.
ಈ ಸಂಬಂಧ ಔಷಧ ನಿಯಮಗಳು, 1945ಕ್ಕೆ ತಿದ್ದುಪಡಿ ತರಲು ಸೆಪ್ಟೆಂಬರ್ 8ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈ ನಿಯಮ ಇನ್ನೂ ಜಾರಿಗೆ ಬಂದಿಲ್ಲ. ಇದು ಪ್ರಸ್ತುತ ಕರಡು ಹಂತದಲ್ಲಿದ್ದು, ಸಾರ್ವಜನಿಕರು ಮತ್ತು ಸಂಬಂಧಿತ ವಲಯಗಳಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಮೆಡಿಕಲ್ ಸ್ಟೋರ್ಗಳಲ್ಲಿ CCTV ಕಡ್ಡಾಯ?
ಕರಡು ನಿಯಮ ಜಾರಿಗೆ ಬಂದರೆ, ನೋಂದಾಯಿತ ವೈದ್ಯರು ನೀಡುವ ಪ್ರಿಸ್ಕ್ರಿಪ್ಷನ್ ಆಧರಿಸಿ ಔಷಧಗಳನ್ನು ಮಾರಾಟ ಮಾಡುವ ಪರವಾನಗಿ ಹೊಂದಿರುವ ಮೆಡಿಕಲ್ ಸ್ಟೋರ್ಗಳಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸಿ ನಿರ್ವಹಿಸುವುದು ಕಡ್ಡಾಯವಾಗಲಿದೆ.
ಔಷಧ ಮಾರಾಟದ ಪ್ರಕ್ರಿಯೆಯನ್ನು ಪರಿಶೀಲಿಸಲು ಸಾಧ್ಯವಾಗುವ ರೀತಿಯಲ್ಲಿ ಸಿಸಿಟಿವಿ ವ್ಯವಸ್ಥೆ ಇರಬೇಕು ಎಂದು ಪ್ರಸ್ತಾವಿಸಲಾಗಿದೆ. ಸಗಟು ಔಷಧ ವಹಿವಾಟಿಗೆ ಸಂಬಂಧಿಸಿದ ಕೆಲವು ಪರವಾನಗಿ ವರ್ಗಗಳನ್ನು ಪ್ರಸ್ತಾವನೆಯಿಂದ ಹೊರಗಿಡಲಾಗಿದೆ.
3 ತಿಂಗಳು CCTV ದೃಶ್ಯ ಸಂರಕ್ಷಣೆ
ಕರಡು ನಿಯಮದ ಪ್ರಕಾರ, ಮೆಡಿಕಲ್ ಸ್ಟೋರ್ಗಳಲ್ಲಿ ದಾಖಲಾಗುವ ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ ಮೂರು ತಿಂಗಳ ಕಾಲ ಸಂರಕ್ಷಿಸಬೇಕು.
ಔಷಧ ಮಾರಾಟಕ್ಕೆ ಸಂಬಂಧಿಸಿದಂತೆ ನಂತರದ ಹಂತದಲ್ಲಿ ಪರಿಶೀಲನೆ ನಡೆಸಲು ಹಾಗೂ ನಿಯಮ ಉಲ್ಲಂಘನೆಯಾಗಿದ್ದರೆ ಸಂಬಂಧಿತ ವಹಿವಾಟನ್ನು ಪತ್ತೆಹಚ್ಚಲು ಈ ದೃಶ್ಯಾವಳಿಗಳು ನೆರವಾಗಬಹುದು.
H, H1 ಮತ್ತು X ಔಷಧಗಳ ಮೇಲೆ ನಿಗಾ
ಅನಧಿಕೃತವಾಗಿ H, H1 ಮತ್ತು X ವರ್ಗದ ಔಷಧಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಪ್ರಸ್ತಾವನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಮತ್ತು ನಿಯಂತ್ರಿತ ಔಷಧಗಳ ಮಾರಾಟದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಪ್ರಸ್ತಾಪಿಸಲಾಗಿದೆ.
ಔಷಧ ಸಲಹಾ ಸಮಿತಿಯಲ್ಲಿ ಚರ್ಚೆ
ಮೆಡಿಕಲ್ ಸ್ಟೋರ್ಗಳಲ್ಲಿ ಸಿಸಿಟಿವಿ ಅಳವಡಿಕೆಯನ್ನು ನಿಯಮ ತಿದ್ದುಪಡಿ ಮೂಲಕ ಕಡ್ಡಾಯಗೊಳಿಸುವ ಸಾಧ್ಯತೆಯ ಕುರಿತು ಔಷಧ ಸಲಹಾ ಸಮಿತಿಯಲ್ಲೂ ಚರ್ಚೆ ನಡೆದಿದೆ. ನಂತರ ಔಷಧ ತಾಂತ್ರಿಕ ಸಲಹಾ ಮಂಡಳಿ ಮಟ್ಟದಲ್ಲೂ ಈ ಪ್ರಸ್ತಾವನೆ ಪರಿಗಣನೆಯಾಗಿದೆ.
ನಿಯಮ ಯಾವಾಗ ಜಾರಿಗೆ ಬರಲಿದೆ?
ಸದ್ಯಕ್ಕೆ ಮೆಡಿಕಲ್ ಸ್ಟೋರ್ಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸುವ ನಿಯಮ ಜಾರಿಗೆ ಬಂದಿಲ್ಲ. ಸೆಪ್ಟೆಂಬರ್ 8ರಂದು ಹೊರಡಿಸಿರುವುದು ಕರಡು ಅಧಿಸೂಚನೆಯಾಗಿದ್ದು, ಪ್ರಕಟಣೆಯ ಬಳಿಕ 30 ದಿನಗಳ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಸಂಬಂಧಿತ ವಲಯಗಳು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಅಂತಿಮ ಅಧಿಸೂಚನೆ ಹೊರಬಂದು, ಸರ್ಕಾರ ನಿಗದಿಪಡಿಸುವ ದಿನಾಂಕದಿಂದ ಮಾತ್ರ ಹೊಸ ನಿಯಮ ಜಾರಿಗೆ ಬರಲಿದೆ. ಹೀಗಾಗಿ ಸದ್ಯ ಮೆಡಿಕಲ್ ಸ್ಟೋರ್ಗಳಿಗೆ ಈ ಕರಡು ಪ್ರಸ್ತಾವನೆ ಆಧರಿಸಿ ತಕ್ಷಣವೇ ಹೊಸ ಕಡ್ಡಾಯ ನಿಯಮ ಅನ್ವಯಿಸುವುದಿಲ್ಲ.
ದೇಶ
PM Narendra Modi Birthday: ವಡ್ನಗರದಲ್ಲಿ ಮೋದಿ ಬಾಲ್ಯದ ನೆನಪು; ಶಾಲಾ ಗೆಳೆಯರು ಹಂಚಿಕೊಂಡ ಅಪರೂಪದ ಕ್ಷಣಗಳು
ಗುಜರಾತ್: PM Narendra Modi ಅವರು 76ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಅವರ ಹುಟ್ಟೂರು ಗುಜರಾತ್ನ ವಡ್ನಗರದಲ್ಲಿ ಬಾಲ್ಯದ ನೆನಪುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಧಾನಿಯವರ ಶಾಲಾ ದಿನಗಳ ಗೆಳೆಯರು ತಮ್ಮ ಬಾಲ್ಯದ ಸ್ನೇಹ, ಶಾಲಾ ಜೀವನ ಹಾಗೂ ವಡ್ನಗರದಲ್ಲಿ ಕಳೆದ ಸರಳ ದಿನಗಳ ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ನರೇಂದ್ರ ಮೋದಿ ಅವರೊಂದಿಗೆ ಬಿಎನ್ಎ ಶಾಲೆಯಲ್ಲಿ (ಪ್ರೇರಣಾ ಶಾಲೆ) 4ರಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಡೋಲತ್ ಖಾನ್ ಪರಾಣ್ ಹಾಗೂ ಶ್ಯಾಮಲದಾಸ್ ಮೋದಿ ಅವರು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ್ದಾರೆ.
ಪಕ್ಕದ ಮನೆಯ ಗೆಳೆಯರಾಗಿದ್ದ ಮೋದಿ
ಡೋಲತ್ ಖಾನ್ ಪರಾಣ್ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, 1960ರ ದಶಕದಲ್ಲಿ ತಾವು ಮತ್ತು ನರೇಂದ್ರ ಮೋದಿ ವಡ್ನಗರದಲ್ಲಿ ಒಟ್ಟಿಗೆ ಬೆಳೆದಿದ್ದಾಗಿ ಹೇಳಿದ್ದಾರೆ.
ಮೋದಿ ಅವರ ಮನೆಯಿದ್ದ ಬೀದಿಯ ಪಕ್ಕದಲ್ಲೇ ಸುಮಾರು 250ರಿಂದ 300 ಪರಾಣ್ ಕುಟುಂಬಗಳು ವಾಸಿಸುತ್ತಿದ್ದವು ಎಂದು ಅವರು ತಿಳಿಸಿದ್ದಾರೆ. ತಮ್ಮ ಮತ್ತು ಮೋದಿ ಕುಟುಂಬಗಳ ಆರ್ಥಿಕ ಪರಿಸ್ಥಿತಿಯೂ ಕಷ್ಟಕರವಾಗಿತ್ತು ಎಂದು ಪರಾಣ್ ಸ್ಮರಿಸಿದ್ದಾರೆ.
ತಂದೆಯ ನಿಧನದ ಬಳಿಕ ತಮ್ಮ ಕುಟುಂಬ ಸಣ್ಣ ಪಿಂಚಣಿ ಹಣವನ್ನು ಅವಲಂಬಿಸಿತ್ತು. ಮತ್ತೊಂದೆಡೆ, ಮೋದಿ ಅವರ ಕುಟುಂಬವೂ ತಂದೆಯ ಸಂಪಾದನೆಯನ್ನೇ ಮುಖ್ಯ ಆದಾಯವಾಗಿ ಹೊಂದಿತ್ತು ಎಂದು ಅವರು ಹೇಳಿದ್ದಾರೆ.
ಆ ದಿನಗಳಲ್ಲಿ ಇಬ್ಬರೂ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದೆವು ಎಂದು ಪರಾಣ್ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಮೋದಿಗೆ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ
ತಮ್ಮ ಬಾಲ್ಯದ ಗೆಳೆಯ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಡೋಲತ್ ಖಾನ್ ಪರಾಣ್ ಹೇಳಿದ್ದಾರೆ.
ವಡ್ನಗರದ ಶ್ರೀ ಹಟೇಶ್ವರ ಮಹಾದೇವ ದೇವಸ್ಥಾನದಲ್ಲಿ ಪ್ರಧಾನಿ ಮೋದಿಯವರಿಗೆ ಉತ್ತಮ ಆರೋಗ್ಯ ಹಾಗೂ ದೇಶದ ಸೇವೆ ಮಾಡಲು ಮತ್ತಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದ್ದಾರೆ.
ಅದೇ ವೇಳೆ, ತಮ್ಮ ಹುಟ್ಟೂರು ವಡ್ನಗರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿರುವ ಗಮನಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.
ವಡ್ನಗರದ ಬಾಲ್ಯದಿಂದ ಪ್ರಧಾನಿಯವರೆಗೆ
ಸೆಪ್ಟೆಂಬರ್ 17, 1950ರಂದು ವಡ್ನಗರದಲ್ಲಿ ಜನಿಸಿದ ನರೇಂದ್ರ ಮೋದಿ ಅವರ ಬಾಲ್ಯದ ದಿನಗಳ ಕುರಿತು ಅವರ ಶಾಲಾ ಗೆಳೆಯರು ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸರಳ ಕುಟುಂಬ ಹಿನ್ನೆಲೆ, ವಡ್ನಗರದ ಪರಿಸರ ಹಾಗೂ ಬಾಲ್ಯದಲ್ಲಿ ಎದುರಿಸಿದ ಅನುಭವಗಳು ತಮ್ಮ ಗೆಳೆಯ ನರೇಂದ್ರ ಮೋದಿ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಬಾಲ್ಯದ ಸ್ನೇಹಿತರು ಸ್ಮರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಡ್ನಗರದಲ್ಲಿ ಅವರ ಬಾಲ್ಯ ಮತ್ತು ಶಾಲಾ ಜೀವನದ ನೆನಪುಗಳು ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿವೆ.
ಬೆಂಗಳೂರು
Nelamangala ಟ್ರಾಫಿಕ್ಗೆ ಶೀಘ್ರ ಪರಿಹಾರ? CM D K Shivkumar ಮುಂದೆ ಮೆಟ್ರೋ-ಫ್ಲೈಓವರ್ ಪ್ರಸ್ತಾವಕ್ಕೆ ಸಮ್ಮತಿ
ಬೆಂಗಳೂರು: Nelamangala ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾರಿಗೆ ಮತ್ತು ಟ್ರಾಫಿಕ್ ದಟ್ಟಣೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಮೂಲಸೌಕರ್ಯ ಯೋಜನೆಗಳ ಕುರಿತು ಚರ್ಚೆ ನಡೆದಿದೆ.
ಶಾಸಕ ಎನ್. ಶ್ರೀನಿವಾಸ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ನೆಲಮಂಗಲ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ನಾಗಸಂದ್ರ-ನೆಲಮಂಗಲ ಮೆಟ್ರೋ ವಿಸ್ತರಣೆಗೆ ಮನವಿ
ಸಭೆಯಲ್ಲಿ ಪ್ರಮುಖವಾಗಿ ನಾಗಸಂದ್ರದಿಂದ ನೆಲಮಂಗಲದವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆ ಮಾಡುವ ಕುರಿತು ಮನವಿ ಸಲ್ಲಿಸಲಾಗಿದೆ. ಇದರ ಜತೆಗೆ ಪ್ರಮುಖ ಜಂಕ್ಷನ್ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮತ್ತು ಅಗತ್ಯವಿರುವ ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆಯೂ ಚರ್ಚೆ ನಡೆದಿದೆ.
ಬೆಂಗಳೂರು-ತುಮಕೂರು ಹೆದ್ದಾರಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಮನವಿ ಮಾಡಿದ್ದಾರೆ.
ಯೋಜನಾ ವರದಿ ಸಿದ್ಧಪಡಿಸಲು ಮನವಿ
ನೆಲಮಂಗಲ ಭಾಗದಲ್ಲಿ ಉಂಟಾಗುತ್ತಿರುವ ಸಂಚಾರ ಅಡಚಣೆಗಳನ್ನು ಸಮಗ್ರವಾಗಿ ನಿವಾರಿಸಲು ಅಗತ್ಯವಿರುವ ಯೋಜನೆಗಳ ಕುರಿತು ವಿವರವಾದ ಯೋಜನಾ ವರದಿ ಸಿದ್ಧಪಡಿಸುವಂತೆ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ನೆಲಮಂಗಲವು ಬೆಂಗಳೂರಿನ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿ ತಿಳಿಸಿದೆ.
ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ?
ಮೆಟ್ರೋ ಮಾರ್ಗ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣದಂತಹ ಯೋಜನೆಗಳು ಅನುಷ್ಠಾನಗೊಂಡರೆ ನೆಲಮಂಗಲ ಮಾತ್ರವಲ್ಲದೆ ತುಮಕೂರು ಹಾಗೂ ಹಾಸನ ಭಾಗಗಳಿಂದ ಬೆಂಗಳೂರಿನತ್ತ ಸಂಚರಿಸುವ ವಾಹನ ಸವಾರರಿಗೂ ಅನುಕೂಲವಾಗುವ ನಿರೀಕ್ಷೆ ಇದೆ.
ಸಂಚಾರ ವ್ಯವಸ್ಥೆ ಸುಧಾರಿಸಿದರೆ ಸ್ಥಳೀಯ ವ್ಯಾಪಾರ, ಕೈಗಾರಿಕೆ ಮತ್ತು ಇತರ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಬಹುದು. ಆದರೆ ಈ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಅಂತಿಮ ಅನುಮೋದನೆ, ಯೋಜನಾ ವರದಿ ಹಾಗೂ ಅನುದಾನ ಸೇರಿದಂತೆ ಮುಂದಿನ ಹಂತಗಳ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.
-
ಬೆಂಗಳೂರು21 ಗಂಟೆಗಳು agoKSRTC ಬಸ್ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ರೆ ದಂಡ; ಆಗಸ್ಟ್ನಲ್ಲಿ 4,862 ಪ್ರಯಾಣಿಕರಿಗೆ ಶಿಕ್ಷೆ
-
ದೇಶ23 ಗಂಟೆಗಳು agoPM Narendra Modi ಆಡಳಿತಕ್ಕೆ ಯದುವೀರ್ ಒಡೆಯರ್ ಮೆಚ್ಚುಗೆ; ಅ.7ರಂದು ಮೈಸೂರಿನಲ್ಲಿ ಸೇವಾ ಸಂಕಲ್ಪ ಸಮಾವೇಶ
-
ದೇಶ21 ಗಂಟೆಗಳು agoUPI ಬಳಕೆದಾರರಿಗೆ ಗುಡ್ ನ್ಯೂಸ್: ₹2,000ವರೆಗಿನ ಪಾವತಿ ಉಚಿತ; ಹೊಸ ನಿಯಮಗಳೇನು?
-
ದೇಶ23 ಗಂಟೆಗಳು agoGovernment School ಸುಧಾರಣೆಗೆ ರಾಷ್ಟ್ರವ್ಯಾಪಿ ಅಭಿಯಾನ: ಆಗಸ್ಟ್ 15ಕ್ಕೆ ಅಭಿಜಿತ್ ದೀಪ್ಕೆ ಕರೆ
-
ದೇಶ22 ಗಂಟೆಗಳು agoShahzad Bhatti Network ಉಗ್ರ ಸಂಘಟನೆ ಎಂದು ಘೋಷಣೆ; UAPA ಪಟ್ಟಿಯಲ್ಲಿ 46ನೇ ಸ್ಥಾನ
-
ಬೆಂಗಳೂರು22 ಗಂಟೆಗಳು agoAnanth Nag ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ಕನ್ನಡಿಗರಿಗೆ ಸಂತಸದ ಸುದ್ದಿ
-
ಬೆಂಗಳೂರು20 ಗಂಟೆಗಳು agoಫ್ಲೈಓವರ್, ಮೆಟ್ರೋ, ಉಪನಗರ ರೈಲು: Bengaluru ರಿನ ಟ್ರಾಫಿಕ್ಗೆ ಹೊಸ ಮಾಸ್ಟರ್ ಪ್ಲಾನ್
-
ದೇಶ20 ಗಂಟೆಗಳು ago₹2,000 ಮೇಲ್ಪಟ್ಟ UPI ಪಾವತಿಗೆ 0.4% MDR: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
