Blog
ನಿತೀಶ್ ಕುಮಾರ್ ಆಹ್ವಾನಿಸಿದ್ರು ಎಚ್ ಡಿ ದೇವೇಗೌಡ

ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವನ್ನು ತಮ್ಮ ಜನತಾದಳ ಸಂಯುಕ್ತದ (ಜೆಡಿಯು) ಜತೆ ವಿಲೀನಗೊಳಿಸುವಂತೆ ಹಾಗೂ ವಿರೋಧ ಪಕ್ಷಗಳ ಐಎನ್ಡಿಐಎ ಬಣ ಸೇರುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಸ್ತಾಪಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದಾಗಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ತಿಳಿಸಿದ್ದಾರೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ದೇವೇಗೌಡ, ಹಿಂದಿನ ಜನತಾದಳದ ವಿವಿಧ ಗುಂಪುಗಳಾದ ಜೆಡಿಯು- ಜೆಡಿಎಸ್ ಹಾಗೂ ಸಮಾಜವಾದಿ ಪಕ್ಷವನ್ನೂ ಒಳಗೊಂಡಂತೆ ಜನತಾ ಫ್ರೀಡಂ ಫ್ರಂಟ್ ರಚಿಸುವ ಬಯಕೆಯೊಂದಿಗೆ ಸುಮಾರು ಮೂರು ನಾಲ್ಕು ತಿಂಗಳ ಹಿಂದೆ ನಿತೀಶ್ ಕುಮಾರ್ ನನ್ನನ್ನು ಸಂಪರ್ಕಿಸಿದರು ಎಂದು ಹೇಳಿದರು
ಜೆಡಿಯು ಜೊತೆಗೆ ಜೆಡಿಎಸ್ ವಿಲೀನವಾಗಿ ಇಂಡಿಯಾ ಒಕ್ಕೂಟ ಸೇರುವ ಕುರಿತು ನಿತೀಶ್ ಕುಮಾರ್ ಆಹ್ವಾನ ನೀಡಿದ್ದರು ಇದನ್ನ ಜೆಡಿಎಸ್ ನಿರಾಕರಿಸಿತ್ತು ಎಂದು ಬಿಜೆಪಿ ಜೊತೆಗೆ ಮೈತ್ರಿಯಾಗಿ ಎರಡು ವಾರಗಳ ಬಳಿಕ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ನಾಲ್ಕು ತಿಂಗಳ ಹಿಂದೆ ಜನತಾ ಫ್ರೀಡಂ ಫ್ರಂಟ್ ಪ್ರಸ್ತಾವನೆಯೊಂದಿಗೆ ಸಂಪರ್ಕಿಸಲಾಯಿತು. ಆದರೆ, ನಾನು ಒಪ್ಪುವುದಿಲ್ಲ ಎಂದು ಹೇಳಲಾಯಿತು ಎಂದ ದೇವೇಗೌಡ್ರು, ನನಗೆ ರಾಷ್ಟ್ರೀಯ ಹುದ್ದೆಗಳಲ್ಲಿ ಆಸಕ್ತಿ ಇಲ್ಲ. ಈಗಾಗಲೇ ನನಗೆ 91 ವರ್ಷ ಮತ್ತು ಕಾಂಗ್ರೆಸ್ ನನ್ನನ್ನು ಹೇಗೆ ಕೈಬಿಟ್ಟಿದೆ ಎಂಬುದನ್ನು ನೋಡಿದ್ದೇನೆ. ಈ ವಯಸ್ಸಿನಲ್ಲಿ ನನಗೆ ಯಾವುದೇ ಪ್ರಯೋಗಗಳು ಬೇಡ ಎಂದು ಹೇಳಿದರು. ನನ್ನ ಮನವೊಲಿಸಲು ನಿತೀಶ್ ತಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕಳುಹಿಸಿದರು. ಆದರೆ, ನಾನು ಒಪ್ಪಲಿಲ್ಲ. ನಾನು ಅವರಿಗೆ ಹೇಳಿದ್ದೇನೆ, ನೀವು ಮುಂದುವರಿಯಲು ಬಯಸಿದರೆ, ನೀವು ಇತರ ಪಕ್ಷಗಳನ್ನು ಸಂಪರ್ಕಿಸಬಹುದು ಎಂದು ಹೇಳಿದ್ದೇನೆ ಎಂದರು.
ಈ ಹಿಂದೆ ಜೆಡಿಎಸ್ನಲ್ಲಿ ಇದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ದೇವೇಗೌಡ, ಕಾಂಗ್ರೆಸ್ನ ಸಿದ್ದರಾಮಯ್ಯ… ನಾನು ರಾಜಕಾರಣಕ್ಕೆ ತಂದ ವ್ಯಕ್ತಿ… ಜೆಡಿಎಸ್ ಬಂದರೆ ನಾನು ಹೊರನಡೆಯುತ್ತೇನೆ ಎಂದು ಹೇಳಿದ್ದರು ಎಂದರು.
ನಾನು ಮತ್ತಷ್ಟು ಚರ್ಚೆ ನಡೆಸಲು ಬಯಸುವುದಿಲ್ಲ. ನಾನು ಸಾಕಷ್ಟು ಅನುಭವಿಸಿದ್ದೇನೆ ಎಂದು ಜೆಡಿಎಸ್, ಬಿಜೆಪಿಯ ‘ಬಿ’ ಟೀಂ ಎಂದು 2018ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದರ ಕುರಿತು ಪ್ರತಿಕ್ರಿಯಿಸಿದರು. ಈ ಟೀಕೆಯನ್ನು ಕಳೆದ ಪುನರುಚ್ಚರಿಸಿದ್ದರು.
ರಾಹುಲ್ ಗಾಂಧಿ ಅವರು ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ‘ಬಿ’ ಟೀಮ್ ಪ್ರಮಾಣಪತ್ರ ನೀಡಿದ್ದರು. ಕಳೆದ ಚುನಾವಣೆಯಲ್ಲಿ ಮಾತ್ರವಲ್ಲ, ಅದರ ಹಿಂದಿನ ಚುನಾವಣೆಯಲ್ಲಿ ಕೂಡ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
Blog
ಬೆಂಗಳೂರು ಪಿಜಿ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟ ಜಲಮಂಡಳಿ
ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ಮಾಲೀಕರಿಗೆ ಬೆಂಗಳೂರು ಜಲಮಂಡಳಿಯ (BWSSB) ದಿಢೀರ್ ನೀರಿನ ಬಿಲ್ ಏರಿಕೆಯಿಂದ ಆಘಾತವಾಗಿದೆ. ಏಪ್ರಿಲ್ 2025ರಿಂದ ಜಾರಿಗೆ ಬಂದಿರುವ ವಸತಿಯೇತರ ಬಳಕೆಯ ನೀರಿನ ದರ ಏರಿಕೆಯಿಂದಾಗಿ, ಪಿಜಿಗಳಿಗೆ ಬರುತ್ತಿದ್ದ ₹3,000-₹4,000 ಬಿಲ್ ಏಕಾಏಕಿ ₹20,000-₹25,000ಕ್ಕೆ ಏರಿಕೆಯಾಗಿದೆ. ಈ ಅವೈಜ್ಞಾನಿಕ ದರ ಏರಿಕೆಯಿಂದ ಕಂಗಾಲಾಗಿರುವ ಪಿಜಿ ಮಾಲೀಕರು, ಜಲಮಂಡಳಿಯಿಂದ ಶುಲ್ಕ ಕಡಿಮೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು ಜಲಮಂಡಳಿಗೆ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಸಲ್ಲಿಸಲಾಗಿದ್ದು, ಈ ದರ ಏರಿಕೆಯನ್ನು ವಾಪಸ್ ಪಡೆಯುವಂತೆ ಕೋರಲಾಗಿದೆ. ಪಿಜಿಗಳನ್ನು ದೊಡ್ಡ ವಾಣಿಜ್ಯ ಚಟುವಟಿಕೆಯ ರೀತಿಯಲ್ಲಿ ಪರಿಗಣಿಸಿ, ಒಳಚರಂಡಿ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ದುಬಾರಿಗೊಳಿಸಲಾಗಿದೆ ಎಂದು ಸಂಘ ದೂರಿದೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಬರುವ ಲಕ್ಷಾಂತರ ಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಪಿಜಿಗಳು ಒದಗಿಸುತ್ತಿವೆ. ಕಾನೂನುಬದ್ಧವಾಗಿ ನಡೆಯುವ ಈ ಸಂಸ್ಥೆಗಳು ಸಾಮಾಜಿಕ ಸೇವೆಯ ಭಾಗವಾಗಿದ್ದರೂ, ಜಲಮಂಡಳಿಯ ದರ ಏರಿಕೆ ಇವುಗಳನ್ನು ಆರ್ಥಿಕವಾಗಿ ಒತ್ತಡಕ್ಕೆ ಸಿಲುಕಿಸಿದೆ.
ನಗರದ ಸಣ್ಣ ಪಿಜಿಗಳು ಈಗಾಗಲೇ ಏರುತ್ತಿರುವ ವೆಚ್ಚಗಳಿಂದ ಕಂಗಾಲಾಗಿವೆ. ವಿದ್ಯುತ್, ಆಹಾರ, ಮತ್ತು ಕಾರ್ಮಿಕ ವೆಚ್ಚಗಳ ಜೊತೆಗೆ ಈ ಹೊಸ ಶುಲ್ಕವು ಮಾಲೀಕರಿಗೆ ಭಾರವಾಗಿದೆ. ಕೆಲವು ಪಿಜಿ ಮಾಲೀಕರು ತಮ್ಮ ವ್ಯವಹಾರವನ್ನೇ ಮುಚ್ಚುವ ಆಲೋಚನೆಯಲ್ಲಿದ್ದಾರೆ. “ಪಿಜಿಗಳು ಸಾಮಾಜಿಕ ಸೇವೆಯಾಗಿದ್ದು, ಇವುಗಳಿಗೆ ವಾಣಿಜ್ಯ ದರ ವಿಧಿಸುವುದು ಸರಿಯಲ್ಲ. ಜಲಮಂಡಳಿಯು ಈ ದರವನ್ನು ಕಡಿಮೆ ಮಾಡದಿದ್ದರೆ, ಅನೇಕ ಸಣ್ಣ ಪಿಜಿಗಳು ಮುಚ್ಚಲ್ಪಡಬಹುದು,” ಎಂದು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್ ತಿಳಿಸಿದ್ದಾರೆ.
ಅವರು ಮಾತನಾಡುತ್ತಾ, “ಕಳೆದ ತಿಂಗಳು ₹3,450 ಆಗಿದ್ದ ನೀರಿನ ಬಿಲ್ ಈ ತಿಂಗಳು ₹23,682ಕ್ಕೆ ಏರಿಕೆಯಾಗಿದೆ. ಒಳಚರಂಡಿ ಶುಲ್ಕವನ್ನು ಅವೈಜ್ಞಾನಿಕವಾಗಿ ವಿಧಿಸಲಾಗಿದ್ದು, ಇದರಿಂದ ಸಣ್ಣ ಪಿಜಿಗಳಿಗೆ ತೊಂದರೆಯಾಗಿದೆ. ಜಲಮಂಡಳಿಯು ಈ ವಿಷಯವನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದೆ,” ಎಂದು ತಿಳಿಸಿದರು.
ಬೆಂಗಳೂರು ಜಲಮಂಡಳಿಯ ದರ ಏರಿಕೆಯಿಂದ ಸಾಮಾನ್ಯ ನಾಗರಿಕರಿಗೂ ತೊಂದರೆಯಾಗಿದೆಯಾದರೂ, ಪಿಜಿಗಳಿಗೆ ಇದರ ಪರಿಣಾಮ ತೀವ್ರವಾಗಿದೆ. ಪಿಜಿಗಳು ಒಂದು ಕೊಠಡಿಯಲ್ಲಿ 3-4 ಜನರಿಗೆ ವಸತಿಯನ್ನು ಒದಗಿಸುತ್ತವೆ, ಆದರೆ ಜಲಮಂಡಳಿಯು ಇವುಗಳನ್ನು ಹೆಚ್ಚಿನ ನೀರಿನ ಬಳಕೆಯ ವಾಣಿಜ್ಯ ಘಟಕಗಳೆಂದು ಪರಿಗಣಿಸಿದೆ. ಇದರಿಂದಾಗಿ, ಪಿಜಿಗಳಿಗೆ ವಿಧಿಸಲಾಗಿರುವ ಒಳಚರಂಡಿ ಶುಲ್ಕವು 50%-60% ರಷ್ಟು ಏರಿಕೆಯಾಗಿದೆ.
ಜಲಮಂಡಳಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಿಜಿಗಳಿಗೆ ವಿಶೇಷ ದರ ವಿಧಾನವನ್ನು ರೂಪಿಸಬೇಕೆಂದು ಸಂಘ ಒತ್ತಾಯಿಸಿದೆ. “ಪಿಜಿಗಳನ್ನು ವಾಣಿಜ್ಯ ಘಟಕವೆಂದು ಪರಿಗಣಿಸುವ ಬದಲು, ಸಾಮಾಜಿಕ ಸೇವೆಯಾಗಿ ಗುರುತಿಸಿ, ಕಡಿಮೆ ದರದ ನೀರಿನ ಶುಲ್ಕವನ್ನು ವಿಧಿಸಬೇಕು,” ಎಂದು ಅರುಣ್ ಕುಮಾರ್ ಒತ್ತಾಯಿಸಿದ್ದಾರೆ. ಜಲಮಂಡಳಿಯು ಈ ಮನವಿಯನ್ನು ಪರಿಶೀಲಿಸಿ, ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ಈ ದರ ಏರಿಕೆಯಿಂದಾಗಿ ಬೆಂಗಳೂರಿನ ಪಿಜಿ ವಲಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಸಣ್ಣ ಪಿಜಿಗಳು ಮುಚ್ಚಿದರೆ, ನಗರಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಕೈಗೆಟುಕುವ ವಸತಿ ಸೌಲಭ್ಯ ಕಡಿಮೆಯಾಗಬಹುದು. ಇದು ಬೆಂಗಳೂರಿನ ಆರ್ಥಿಕತೆ ಮತ್ತು ಜೀವನ ಶೈಲಿಯ ಮೇಲೆ ಪರಿಣಾಮ ಬೀರಬಹುದು.
Blog
ಈ ಸಲ ಕಪ್ ನಮ್ದೆ ಆದ್ರೆ ಒನ್ ಡೇ ಪಾನಿಪುರಿ ನಿಮ್ದು- ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನ ಮಾಲೀಕ

ಬೆಂಗಳೂರು: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಸೆನಸಲಿವೆ, ಆರ್ಸಿಬಿ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಿದ್ದು, ಕಪ್ ಗೆಲ್ಲಲೇಬೇಕು ಎಂದು ಫ್ಯಾನ್ಸ್ ಹಾರೈಕೆ ಮಾಡ್ತಿದ್ದಾರೆ,
ಆರ್ಸಿಬಿ ಕ್ರೇಜ್ ಯಾವ ಮಟ್ಟಿಗೆ ಇದೆ ಅಂದ್ರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ನ ಮಾಲೀಕರು ಉಚಿತ ಚಾಟ್ಸ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.
ಆರ್ ಸಿ ಬಿ ಕಟ್ಟಾ ಅಭಿಮಾನಿಯಾಗಿರೋ ಚಾಟ್ಸ್ ಮಾಲೀಕರು ತಮ್ಮ ನೆಚ್ಚಿನ ತಂಟ ಫೈನಲ್ ಪ್ರವೇಶ ಮಾಡಿರೋ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ,
ಈ ಸಲ ಕಪ್ ನಮ್ದೆ ಆದ್ರೆ ಒನ್ ಡೇ ಪಾನಿಪುರಿ ನಿಮ್ದು, ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ ಫ್ರೀ ಕೊಡುವುದಾಗಿ ಬರೆದುಕೊಂಡಿದ್ದಾರೆ, ಇದೇ ಜೂ.4 ರಂದು ಸಂಜೆ 5 ಗಂಟೆಯಿಂದ ಉಚಿತ ಚಾಟ್ಸ್ ನೀಡಲಿದ್ದಾರೆ,
Blog
ಅಕ್ರಮ ಗಣಿಗಾರಿಕೆ ಕೇಸ್- ಜನಾರ್ದನ ರೆಡ್ಡಿಗೆ 7 ವರ್ಷ ಜೈಲು

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ.
ಗಾಲಿ ಜನಾರ್ದನ ರೆಡ್ಡಿ ಜೊತೆಗೆ ಶ್ರೀನಿವಾಸ್ ರೆಡ್ಡಿ ಮತ್ತು ಅಲಿ ಖಾನ್ಗೆ ಕೋರ್ಟ್ ಸೇರಿ ಐದು ಆರೋಪಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅವಿಭಜಿತ ಆಂಧ್ರಪ್ರದೇಶ ಗಣಿ ಸಚಿವೆಯಾಗಿದ್ದ ಸಬಿತಾ ಇಂದ್ರರೆಡ್ಡಿ, ಕೃಷ್ಣ ನಂದಾಗೆ ಕೋರ್ಟ್ ಕ್ಲೀನ್ಚಿಟ್ ನೀಡಿದೆ.
ಏನಿದು ಪ್ರಕರಣ?
ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.
-
ಬಿಬಿಎಂಪಿ4 weeks ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು7 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ