Connect with us

ಕ್ರೀಡೆ

ಸ್ಕೇಟಿಂಗ್ ಕ್ರೀಡೆಯಲ್ಲಿ ರಾಜ್ಯಕ್ಕೆ ಹೆಮ್ಮೆ ತಂದ ವರ್ಷಿಣಿ ಅಪರ್ಣ

Published

on

ವಿಶಾಖಪಟ್ಟಣಂ: ಇಲ್ಲಿ ನಡೆದ 63ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್–2025 ಪಂದ್ಯಾವಳಿಯಲ್ಲಿ ಕರ್ನಾಟಕದ ಪ್ರತಿಭಾವಂತ ಸ್ಕೇಟರ್ ವರ್ಷಿಣಿ ಅಪರ್ಣ ಅಪೂರ್ವ ಸಾಧನೆ ಮಾಡಿದ್ದಾರೆ. ಅವರು ಈ ಚಾಂಪಿಯನ್‌ಶಿಪ್‌ನಲ್ಲಿ ಒಂದು ಚಿನ್ನದ ಪದಕ, ಮೂರು ಬೆಳ್ಳಿ ಪದಕಗಳು ಮತ್ತು ಒಂದು ಕಂಚಿನ ಪದಕವನ್ನು ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಬೆಸ್ಟ್ ಕ್ಲಬ್‌ನ ಕೋಚ್ ರಾಘವೇಂದ್ರ ಜಿ.ವಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದ ವರ್ಷಿಣಿ ಅಪರ್ಣ, ಈ ಸಾಧನೆಯ ಮೂಲಕ ನಾಡಿನ ಕ್ರೀಡಾ ಕ್ಷೇತ್ರದ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕಠಿಣ ಶ್ರಮ, ನಿರಂತರ ಅಭ್ಯಾಸ ಮತ್ತು ಶಿಸ್ತಿನ ತರಬೇತಿಯ ಫಲವಾಗಿ ಈ ಮಹತ್ವದ ಯಶಸ್ಸು ಸಾಧ್ಯವಾಗಿದೆ.

ಈ ಸಾಧನೆ ಕುರಿತು ಮಾತನಾಡಿದ ವರ್ಷಿಣಿ ಅಪರ್ಣ,
“ಸ್ಕೇಟಿಂಗ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ದೃಢ ಸಂಕಲ್ಪದಿಂದ ಕೋಚ್ ರಾಘವೇಂದ್ರ ಜಿ.ವಿ. ಅವರ ಉತ್ತಮ ಮಾರ್ಗದರ್ಶನದಲ್ಲಿ ಸತತ ತರಬೇತಿ ಪಡೆದೆ. ಅವರ ಬೆಂಬಲ ಮತ್ತು ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಯಿತು” ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಕೋಚ್ ರಾಘವೇಂದ್ರ ಜಿ.ವಿ. ಮಾತನಾಡಿ,
“ಸ್ಕೇಟಿಂಗ್ ಕ್ರೀಡೆಯಲ್ಲಿ ಆಸಕ್ತಿ ಇರುವ ಬಾಲಕ–ಬಾಲಕಿಯರಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಉದ್ದೇಶದಿಂದ ಬೆಸ್ಟ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ನಮ್ಮ ಕ್ಲಬ್‌ನಿಂದ ನೂರಾರು ಸ್ಕೇಟಿಂಗ್ ಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಕೀರ್ತಿ ಗಳಿಸಿದ್ದಾರೆ” ಎಂದರು.

ಸ್ಕೇಟಿಂಗ್ ಕ್ರೀಡೆಗೆ ರಾಜ್ಯ ಕ್ರೀಡಾ ಇಲಾಖೆ ನೀಡುತ್ತಿರುವ ಸಹಕಾರವನ್ನು ಪ್ರಶಂಸಿಸಿದ ಅವರು,
“ಭವಿಷ್ಯದಲ್ಲಿ ನಮ್ಮ ರಾಜ್ಯದ ಯುವಕರು ಮತ್ತು ಯುವತಿಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂಬುದೇ ನಮ್ಮ ಆಶಯ” ಎಂದು ಹೇಳಿದರು.

ಕ್ರೀಡೆ

ಹಾಂಗ್ ಕಾಂಗ್‌ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಇಬ್ಬರು ಆಯ್ಕೆ

Published

on

ಬೆಂಗಳೂರು: ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್‌ಗೆ ಹೆಮ್ಮೆಯ ಕ್ಷಣ ಒದಗಿದ್ದು, ರಾಜ್ಯದ ಇಬ್ಬರು ಜಿಮ್ನಾಸ್ಟ್‌ಗಳು ಮತ್ತು ಇಬ್ಬರು ಕೋಚ್‌ಗಳು ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಮೇ 23 ಮತ್ತು 24ರಂದು ನಡೆಯಲಿರುವ 2ನೇ ಏಷ್ಯನ್ ಏಜ್ ಗ್ರೂಪ್ ಸ್ಪರ್ಧೆ ಹಾಗೂ 7ನೇ ಸೀನಿಯರ್ ಏಷ್ಯನ್ ಟ್ರಾಂಪೋಲಿನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತ ಪರ ಕಣಕ್ಕಿಳಿಯಲಿದ್ದಾರೆ.

Aavni Amit ಮಹಿಳಾ AG1 ವಿಭಾಗದಲ್ಲಿ ಮತ್ತು Satvik Gupta ಪುರುಷರ AG3 ವಿಭಾಗದಲ್ಲಿ ಭಾರತ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಜೊತೆಗೆ ಕರ್ನಾಟಕದ ಕೋಚ್‌ಗಳಾದ Jitesh Chandran ಹಾಗೂ Basavaraj S. Tambur ಕೂಡ ಭಾರತೀಯ ತಂಡದೊಂದಿಗೆ ಹಾಂಗ್ ಕಾಂಗ್‌ಗೆ ತೆರಳಲಿದ್ದಾರೆ.

ಭಾರತೀಯ ತಂಡ ಮೇ 21ರಂದು ಹಾಂಗ್ ಕಾಂಗ್‌ಗೆ ಪ್ರಯಾಣ ಬೆಳೆಸಲಿದ್ದು, ಚಾಂಪಿಯನ್‌ಶಿಪ್ ಮುಗಿದ ಬಳಿಕ ಭಾರತಕ್ಕೆ ಮರಳಲಿದೆ. ಕರ್ನಾಟಕದ ಆಟಗಾರರು ಮತ್ತು ಕೋಚ್‌ಗಳ ಆಯ್ಕೆಗೆ ರಾಜ್ಯದ ಕ್ರೀಡಾ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಜಿಮ್ನಾಸ್ಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ Dr. C. Prabhakar ಆಯ್ಕೆಯಾದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಕರ್ನಾಟಕದ ಪ್ರತಿಭೆಗಳು ಏಷ್ಯನ್ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅವರು ಶುಭ ಹಾರೈಸಿದರು.

ಈ ಆಯ್ಕೆ ಕರ್ನಾಟಕದ ಜಿಮ್ನಾಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದ್ದು, ರಾಜ್ಯದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.

Continue Reading

ಕ್ರೀಡೆ

ಪ್ಲೇಆಫ್ ಕನಸು ಜೀವಂತ: ಮುಂಬೈ ಮಣಿಸಿದ ಕೆಕೆಆರ್‌ಗೆ ಇನ್ನೂ ಉಳಿದಿದೆ ದೊಡ್ಡ ಸವಾಲ್!

Published

on

Indian Premier League ಟೂರ್ನಿಯ ಪ್ಲೇಆಫ್ ಹೋರಾಟ ಇದೀಗ ಮತ್ತಷ್ಟು ರೋಚಕ ಹಂತ ತಲುಪಿದೆ. ಬುಧವಾರ ಕೋಲ್ಕತ್ತಾದ Eden Gardens ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ Kolkata Knight Riders ತಂಡವು Mumbai Indians ವಿರುದ್ಧ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಟೂರ್ನಿಯ ಆರಂಭದಲ್ಲಿ ಮೊದಲ ಆರು ಪಂದ್ಯಗಳಲ್ಲಿ ಜಯ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್, ನಂತರ ಅದ್ಭುತ ಕಂಬ್ಯಾಕ್ ಮಾಡಿ ಕೊನೆಯ ಏಳು ಪಂದ್ಯಗಳಲ್ಲಿ ಆರು ಗೆಲುವು ದಾಖಲಿಸಿದೆ. ಮುಂಬೈ ವಿರುದ್ಧದ ಗೆಲುವಿನೊಂದಿಗೆ ಕೋಲ್ಕತ್ತಾ ತಂಡವು 13 ಅಂಕಗಳನ್ನು ಸಂಪಾದಿಸಿದ್ದು, +0.011 ನಿವ್ವಳ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಪ್ರಸ್ತುತ ಪ್ಲೇಆಫ್ ರೇಸ್‌ನಲ್ಲಿ Rajasthan Royals, Delhi Capitals, Punjab Kings ಹಾಗೂ Chennai Super Kings ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ.

ಕೆಕೆಆರ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 24ರಂದು ಇದೇ ಈಡನ್ ಗಾರ್ಡನ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಕೋಲ್ಕತ್ತಾ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಸಮರವಾಗಿದ್ದು, ಗೆಲುವು ಅನಿವಾರ್ಯವಾಗಿದೆ.

ಕೆಕೆಆರ್ ಪ್ಲೇಆಫ್ ಲೆಕ್ಕಾಚಾರ ಹೇಗಿದೆ?

ಡೆಲ್ಲಿ ವಿರುದ್ಧ ಗೆದ್ದರೆ:
ಕೆಕೆಆರ್ 15 ಅಂಕಗಳಿಗೆ ಏರಲಿದೆ. ಆದರೆ ಪ್ಲೇಆಫ್ ಸ್ಥಾನ ಖಚಿತವಾಗುವುದಿಲ್ಲ. ರಾಜಸ್ಥಾನ್ 16 ಅಂಕಗಳಿಗೆ ಏರಬಹುದಾದರೆ, ಪಂಜಾಬ್ ಕೂಡ 15 ಅಂಕ ತಲುಪಿ ಉತ್ತಮ ರನ್‌ರೇಟ್‌ನಿಂದ ಕೆಕೆಆರ್‌ಗಿಂತ ಮುಂದೆ ಸಾಗುವ ಸಾಧ್ಯತೆ ಇದೆ.

ಡೆಲ್ಲಿ ವಿರುದ್ಧ ಸೋತರೆ:
13 ಅಂಕಗಳಲ್ಲೇ ಉಳಿಯುವ ಕೆಕೆಆರ್ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.

ಪಂದ್ಯ ರದ್ದಾದರೆ:
ಮಳೆ ಅಥವಾ ಬೇರೆ ಕಾರಣಗಳಿಂದ ಪಂದ್ಯ ನಡೆಯದಿದ್ದರೆ ಕೆಕೆಆರ್ 14 ಅಂಕಗಳೊಂದಿಗೆ ಉಳಿಯಲಿದೆ. ಆಗ ಇತರ ತಂಡಗಳ ಫಲಿತಾಂಶಗಳ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

Continue Reading

ಕ್ರೀಡೆ

ಟೆಸ್ಟ್ ನಾಯಕತ್ವ ಬಿಟ್ಟ ಬಳಿಕ ‘ಸಂಪೂರ್ಣ ಖಾಲಿಯಾಗಿದ್ದೆ’: ವಿರಾಟ್ ಕೊಹ್ಲಿ ಭಾವುಕ ಮಾತು

Published

on

ನವದೆಹಲಿ: ಭಾರತೀಯ ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರ ಪೈಕಿ ವಿರಾಟ್‌ ಕೊಹ್ಲಿ (Virat Kohli) ಹೆಸರು ಸದಾ ಅಗ್ರಸ್ಥಾನದಲ್ಲಿರುತ್ತದೆ. ತಮ್ಮ ಆಕ್ರಮಣಕಾರಿ ನಾಯಕತ್ವ ಮತ್ತು ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ವಿಶ್ವದ ಬಲಿಷ್ಠ ತಂಡವನ್ನಾಗಿ ರೂಪಿಸಿದ್ದ ಕೊಹ್ಲಿ, 2022ರಲ್ಲಿ ಏಕಾಏಕಿ ಟೆಸ್ಟ್‌ ನಾಯಕತ್ವ ತೊರೆದಾಗ ಕ್ರಿಕೆಟ್ ಜಗತ್ತೇ ಅಚ್ಚರಿಗೆ ಒಳಗಾಗಿತ್ತು. ಇದೀಗ ಆ ನಿರ್ಧಾರದ ಹಿಂದಿನ ನಿಜವಾದ ಕಾರಣವನ್ನು ಕೊಹ್ಲಿ ಮೊದಲ ಬಾರಿಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಬೆಂಗಳೂರುದಲ್ಲಿ ನಡೆದ ಆರ್‌ಸಿಬಿ ಇನೋವೇಷನ್‌ ಲ್ಯಾಬ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, ನಾಯಕತ್ವ ಮತ್ತು ಬ್ಯಾಟಿಂಗ್ ಎಂಬ ಎರಡು ದೊಡ್ಡ ಜವಾಬ್ದಾರಿಗಳನ್ನು ಒಂದೇ ವೇಳೆ ನಿರ್ವಹಿಸುವುದು ತಮ್ಮ ಮೇಲೆ ಭಾರೀ ಮಾನಸಿಕ ಒತ್ತಡ ತಂದಿತ್ತು ಎಂದು ಒಪ್ಪಿಕೊಂಡರು.

“ನಾನು ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರನಾಗಿದ್ದೆ. ಜೊತೆಗೆ ನಾಯಕತ್ವದ ಜವಾಬ್ದಾರಿಯೂ ನನ್ನ ಮೇಲಾಗಿತ್ತು. ಈ ಎರಡೂ ಹೊಣೆಗಾರಿಕೆಗಳು ನನ್ನ ದಿನನಿತ್ಯದ ಜೀವನದ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತಿವೆ ಎಂಬುದನ್ನು ನಾನು ಆಗ ಅರಿತುಕೊಂಡಿರಲಿಲ್ಲ,” ಎಂದು ಕೊಹ್ಲಿ ಹೇಳಿದ್ದಾರೆ.

ಭಾರತ ತಂಡ ಯಾವಾಗಲೂ ವಿಶ್ವದ ಅಗ್ರ ಸ್ಥಾನದಲ್ಲಿರಬೇಕು ಎಂಬ ಬಲವಾದ ಬಯಕೆ ತಮ್ಮೊಳಗಿದ್ದ ಕಾರಣ, ಒತ್ತಡವನ್ನು ಕಡೆಗಣಿಸಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿದರು. ಆದರೆ, ಕಾಲಕ್ರಮೇಣ ಅದು ತಮ್ಮ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು ಎಂದು ಭಾವುಕರಾದರು.

“ನಾಯಕತ್ವ ತೊರೆದ ಸಮಯಕ್ಕೆ ನಾನು ಸಂಪೂರ್ಣವಾಗಿ ಖಾಲಿಯಾಗಿದ್ದೆ. ನನ್ನೊಳಗೆ ಯಾವುದೇ ಶಕ್ತಿ ಉಳಿದಿರಲಿಲ್ಲ. ಆ ಜವಾಬ್ದಾರಿಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಅದು ತುಂಬಾ ಕಠಿಣ ಅನುಭವವಾಗಿತ್ತು,” ಎಂದು ಕೊಹ್ಲಿ ಮನದಾಳದ ಮಾತು ಹಂಚಿಕೊಂಡರು.

ವಿರಾಟ್‌ ಕೊಹ್ಲಿ ಭಾರತ ತಂಡವನ್ನು ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಭಾರತ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ನಾಯಕ ಎಂಬ ದಾಖಲೆ ಕೂಡ ಅವರ ಹೆಸರಿನಲ್ಲಿದೆ.

ಆದರೆ ನಾಯಕತ್ವ ತೊರೆದ ಬಳಿಕ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಕುಸಿಯತೊಡಗಿತು. ಬಳಿಕ ಅವರು 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ತಮ್ಮ ಟೆಸ್ಟ್‌ ವೃತ್ತಿಜೀವನದಲ್ಲಿ 123 ಪಂದ್ಯಗಳಿಂದ 9,230 ರನ್ ಗಳಿಸಿರುವ ಕೊಹ್ಲಿ, 30 ಶತಕಗಳನ್ನು ಸಿಡಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

Continue Reading

Trending