Connect with us

Blog

ನಟರಾಜಾಸನ

Published

on

ನಟರಾಜಾಸನ

ಯೋಗವು ದೇಹ, ಉಸಿರು ಮತ್ತು ಮನಸ್ಸನ್ನು ಸಂಪರ್ಕಿಸುವ ಅಭ್ಯಾಸವಾಗಿದೆ .ಸಾವಿರಾರು ವರ್ಷಗಳ ಹಿಂದೆ ಯೋಗವನ್ನು ಆಧ್ಯಾತ್ಮಿಕ ಅಭ್ಯಾಸವಾಗಿ ಅಭಿವೃದ್ಧಿಪಡಿಸಲಾಯಿತು.ಈ ಯೋಗಾಸನವನ್ನು ನೀವು ಖಾಲಿ ಹೊಟ್ಟೆಯಲ್ಲಿ ಅಥವಾ ಊಟವಾದ ನಾಲ್ಕು ಗಂಟೆಗಳ ಬಳಿಕ ಮಾಡುವುದು ಉತ್ತಮ.
ನಟರಾಜಾಸನವು ಕಾಲು ಮತ್ತು ಕೈಗಳನ್ನ ಒಳಗೊಂಡಿರುವಂತಹ ಯೋಗ ಭಂಗಿಯಾಗಿದೆ.ನಟ(ನೃತ್ಯ)+ರಾಜ(ದೊರೆ/ದೇವರು)+ ಆಸನ= ನಟರಾಜಾಸನ ಅಥವಾ ದೇವನಟರಾಜ ಎಂದರೆ ನೃತ್ಯದ ದೇವರು ಎಂದು ಹೇಳಲಾಗುತ್ತದೆ. ಅದೇ ನಟರಾಜಾಸನವು ಯೋಗದಲ್ಲಿದೆ. ಇದು ತುಂಬಾ ಲಾಭಕಾರಿ ಕೂಡ.ನೃತ್ಯ ಭಂಗಿ.
ಶಿವನನ್ನು ತುಂಬಾ ಕಠಿಣ, ತೀವ್ರ ಹಾಗೂ ಸಮತೋಲಿತ ದೇವರು ಎಂದು ಕರೆಯಲಾಗುತ್ತದೆ.ಇದರಲ್ಲಿ ಶಿವ ತಾಂಡವವೆಂದು ಕರೆಯಲಾಗುವ ಶಿವನ ನೃತ್ಯದಲ್ಲಿ ನಟರಾಜ ಭಂಗಿಯೂ ಒಂದು.ಈ ವ್ಯಾಯಾಮವನ್ನು ಮಾಡಿದರೆ ಅದರಿಂದ ಸಂಪೂರ್ಣ ದೇಹವು ಶಕ್ತಿ ಪಡೆಯುವುದು, ದೇಹದ ಸಮತೋಲನ ಕಾಪಾಡುವುದು, ಸ್ಥಿತಿಸ್ಥಾಪಕತ್ವ ಹೆಚ್ಚುವುದು ಮತ್ತು ಸಂಪೂರ್ಣ ಶಕ್ತಿಯು ಹೆಚ್ಚಾಗುವುದು.

ನಟರಾಜಾಸನ ಮಾಡುವ ವಿಧಾನ:
ಬೆರಳುಗಳನ್ನು ಜತೆಯಾಗಿರಿಸಿಕೊಂಡು ಹಾಗೆ ನೇರವಾಗಿ ನಿಂತುಕೊಂಡು ಒಂದು ಕೇಂದ್ರದ ಮೇಲೆ ದೃಷ್ಟಿಯನ್ನು ಇರಿಸಿ.
ಸ್ವಲ್ಪ ಮುಂದಕ್ಕೆ ಬಾಗಿ ಬಲಗಾಲನ್ನು ಹಿಂದಕ್ಕೆ ತಂದು ಎತ್ತಿ ಬಲಗೈಯಿಂದ ಹಿಡಿಯಿರಿ.
ಎಡಕಾಲನ್ನು ನೇರವಾಗಿ ಇಟ್ಟುಕೊಂಡು ಎಡಕೈಯನ್ನು ಮುಂದಕ್ಕೆ ತನ್ನಿ.
ಎಡದ ಕೈಯ ತೋರು ಬೆರಳು ಮತ್ತು ಹೆಬ್ಬೆರಳಿನ ಜತೆಗೆ ಮೊಣಕೈಯನ್ನು ಕೂಡ ಮುಂದಿನ ಭಾಗಕ್ಕೆ ತರುವುದು. ಎಡದ ಕೈ ಕಡೆಗೆ ದೃಷ್ಟಿಯನ್ನಿಡಿ.
ಇದು ಕೊನೆಯ ಭಂಗಿ ಮತ್ತು ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ.
ಎಡದ ಕೈಯನ್ನು ಈಗ ಕೆಳಗೆ ತನ್ನಿ. ಬಲದ ಕಾಲನ್ನು ಈಗ ಮೊದಲಿನ ಭಂಗಿಗೆ ತನ್ನಿ.
ಆರಾಮ ಮಾಡಿ ಮತ್ತು ಇದೇ ಭಂಗಿಯನ್ನು ಮತ್ತೊಂದು ಬದಿಯಿಂದಲೂ ಮಾಡಿ.
ಅಭ್ಯಾಸದ ವೇಳೆ ಸಾಮಾನ್ಯವಾಗಿ ಉಸಿರಾಡಿ.

ನಟರಾಜಾಸನದ ಅನುಕೂಲಗಳೂ:
ನಟರಾಜಾಸನವು ಸಮನ್ವಯ ಮತ್ತು ಸಮತೋಲನವನ್ನು ಒಳಗೊಂಡಿದೆ. ಇದು ಭೂಜ, ಬೆನ್ನು, ಕೈಗಳು ಮತ್ತು ಕಾಲುಗಳನ್ನು ನೇರವಾಗಿಸಿ, ಬಲಪಡಿಸುವುದು.
ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಇಳಿಸಲು ಸಹಕಾರಿ.
ಈ ಭಂಗಿಯು ಜೀರ್ಣಕ್ರಿಯೆ ವ್ಯವಸ್ಥೆ ನಿಯಂತ್ರಿಸುವುದು.
ಕೈಗಳು, ತೊಡೆ, ಕಾಲುಗಳು, ಮಣಿಗಂಟು ಮತ್ತು ಹೊಟ್ಟೆ ಸಹಿತ ದೇಹದ ವಿವಿಧ ಭಾಗಗಳು ಇದರಿಂದ ಎಳೆಯಲ್ಪಡುವುದು.
ದೇಹದ ಸಮತೋಲನ ಮತ್ತು ಭಂಗಿ ಸುಧಾರಣೆ ಮಾಡುವುದು. ಈ ಭಂಗಿಯನ್ನು ಪಾಲಿಸಿದರೆ ಅದರಿಂದ ನೋವು ಮತ್ತು ಸೆಳೆತ ಕಡಿಮೆ ಆಗುವುದು.
ಈ ಆಸನವು ಮನಸ್ಸನ್ನು ಆರಾಮಗೊಳಿಸುವುದು, ಒತ್ತಡ ಕಡಿಮೆ ಮಾಡುವುದು ಮತ್ತು ಏಕಾಗ್ರತೆ ಹೆಚ್ಚಿಸುವುದು.
ಈ ಆಸನವನ್ನು ನಿಯಮಿತವಾಗಿ ಅಭ್ಯಾಸಿಸಿದರೆ ಅದರಿಂದ ದೇಹವು ಹೆಚ್ಚು ಸ್ಥಿತಿಸ್ಥಾಪಕತ್ವ ಪಡೆಯುವುದು.

ಎಚ್ಚರಿಕೆ:
ಹೃದಯದ ಸಮಸ್ಯೆ ಅಥವಾ ಅನಿಯಮಿತ ರಕ್ತದೊತ್ತಡ ಇರುವವರು ಇದನ್ನು ಮಾಡಬಾರದು.
ಬೆನ್ನು ಅಥವಾ ಬೆನ್ನುಹುರಿ ನೋವು ಇದ್ದರೆ ನಟರಾಜಾಸನ ಪ್ರಯತ್ನಿಸಲು ಹೋಗಬೇಡಿ. ಇದರಿಂದ ಸಮಸ್ಯೆ ತೀವ್ರವಾಗಬಹುದು.
ತಲೆಸುತ್ತು ಬರುವ ಸಮಸ್ಯೆ ಇರುವವರು ಕೂಡ ಇದರಿಂದ ದೂರವಿರಬೇಕು.

Blog

‘ಲಂಚ ಕೇಳಿದರೆ ತಕ್ಷಣ ದೂರು ನೀಡಿ’: ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ

Published

on

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಉಪಮುಖ್ಯಮಂತ್ರಿ D. K. Shivakumar ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಹಲವು ಮಹತ್ವದ ಸೂಚನೆಗಳನ್ನು ನೀಡಿದರು.

ಸಾರ್ವಜನಿಕರ ಕೆಲಸಗಳಿಗೆ ಯಾರಾದರೂ ಲಂಚ ಕೇಳಿದರೆ ತಕ್ಷಣ ದೂರು ಸಲ್ಲಿಸಲು ಅನುಕೂಲವಾಗುವಂತೆ ಪ್ರತಿ ಸರ್ಕಾರಿ ಕಚೇರಿಯಲ್ಲೂ ದೂರು ಸ್ವೀಕಾರದ ದೂರವಾಣಿ ಸಂಖ್ಯೆಯನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಅವರು ನಿರ್ದೇಶಿಸಿದರು. “ನಾವು ಎಲ್ಲರೂ ‘ಟೀಮ್ ಕರ್ನಾಟಕ’ ಆಗಿ ಕಾರ್ಯನಿರ್ವಹಿಸಿ ಜನರಿಗೆ ಸ್ವಚ್ಛ ಮತ್ತು ಪರಿಣಾಮಕಾರಿ ಆಡಳಿತ ನೀಡಬೇಕು” ಎಂದು ಹೇಳಿದರು.

ರಾಜ್ಯದಲ್ಲಿ ಮುಂದುವರಿದಿರುವ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಯಾವುದೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಹಾಗೂ ಮೊದಲ ಮತ್ತು ಎರಡನೇ ಬೆಳೆಗೆ ನೀರಿನ ಕೊರತೆ ಆಗದಂತೆ ನಿಗಾ ವಹಿಸಬೇಕು ಎಂದು ಆದೇಶಿಸಿದರು. ಜಿಲ್ಲೆಗಳ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಶೀಘ್ರದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಯ ಪ್ರಗತಿಯನ್ನೂ ಪರಿಶೀಲಿಸಲಾಯಿತು. ಕೆಎಸ್‌ಆರ್‌ಟಿಸಿಯ ನಾಲ್ಕು ವಿಭಾಗಗಳ ಮೂಲಕ ಕೇವಲ ಎರಡು ದಿನಗಳಲ್ಲಿ 2,764 ಉಚಿತ ಬಸ್ ಪಾಸ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದೇ ವೇಳೆ ಸರ್ಕಾರದ ‘100 ದಿನಗಳ ಅಭಿಯಾನ’ ಕುರಿತು ಜಿಲ್ಲಾವಾರು ಪರಿಶೀಲನೆ ನಡೆಸಲಾಯಿತು. ಬಿ-ಖಾತೆಯಿಂದ ಎ-ಖಾತೆಗೆ ಇ-ಖಾತಾ ವರ್ಗಾವಣೆ, ವಸತಿ ರಹಿತರಿಗೆ ಮನೆ ಮತ್ತು ವಿದ್ಯುತ್ ಸಂಪರ್ಕ, ಉದ್ಯೋಗ ವಿನಿಮಯ ಕೇಂದ್ರಗಳ ಆರಂಭ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಅನುಷ್ಠಾನ ವೇಗಗೊಳಿಸಲು ಸೂಚನೆ ನೀಡಲಾಯಿತು.

Continue Reading

Blog

ಮುಂಬೈ ಏರ್‌ಪೋರ್ಟ್‌ನಲ್ಲಿ ವೈರಲ್ ಆದ ವಿರಾಟ್ ಕೊಹ್ಲಿ; ಪಾಪರಾಜಿಗಳ ಜೊತೆಗಿನ ಸಂವಾದಕ್ಕೆ ಫ್ಯಾನ್ಸ್ ಫಿದಾ

Published

on

ಮುಂಬೈ: Virat Kohli ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಬುಧವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾದ ಮಾಜಿ ನಾಯಕ ತಮ್ಮ ಸರಳತೆ, ಸ್ಟೈಲಿಶ್ ಲುಕ್ ಹಾಗೂ ಪಾಪರಾಜಿಗಳೊಂದಿಗೆ ನಡೆಸಿದ ಸ್ನೇಹಪರ ಸಂವಾದದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮದ ಬಳಿಕ ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಣಿಸಿಕೊಂಡ ಕೊಹ್ಲಿ, ಬಿಳಿ ಬಣ್ಣದ ಕ್ಯಾಶುಯಲ್ ಟಿ-ಶರ್ಟ್, ಕಂಫರ್ಟಬಲ್ ಪ್ಯಾಂಟ್ ಹಾಗೂ ಸನ್‌ಗ್ಲಾಸ್ ಧರಿಸಿ ವಿಮಾನ ನಿಲ್ದಾಣದಿಂದ ಹೊರಬಂದರು. ಅವರ ಸರಳ ಆದರೆ ಆಕರ್ಷಕ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವೇಳೆ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಛಾಯಾಗ್ರಾಹಕರನ್ನು ಕೊಹ್ಲಿ ಮುಗುಳ್ನಗೆಯೊಂದಿಗೆ ಸ್ವಾಗತಿಸಿದರು. ಫೋಟೋಗ್ರಾಫರ್‌ಗಳ ಮನವಿಗೆ ಸ್ಪಂದಿಸಿ ಕೆಲ ಹೊತ್ತು ಫೋಟೋಗಳಿಗೆ ಪೋಸ್ ನೀಡಿದ ಅವರು, ತಮಾಷೆಯಾಗಿ “ಈಗ ಇನ್ನೇನು ಮಾಡಬೇಕು?” ಎಂದು ಪ್ರಶ್ನಿಸಿ ಅಲ್ಲಿದ್ದವರಲ್ಲಿ ನಗುವಿನ ಅಲೆ ಎಬ್ಬಿಸಿದರು. ಅವರ ಈ ಸರಳ ವರ್ತನೆ ಮತ್ತು ಸ್ನೇಹಪರ ನಡವಳಿಕೆ ಅಭಿಮಾನಿಗಳ ಮನಗೆದ್ದಿದೆ.

ಇತ್ತೀಚೆಗೆ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಲ್ಲೂ ಕೊಹ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಪತ್ನಿ Anushka Sharma ಅವರೊಂದಿಗೆ ಹಂಚಿಕೊಂಡ ಭಾವನಾತ್ಮಕ ಕ್ಷಣಗಳು ಹಾಗೂ ತಂಡದ ಬ್ಯಾಟಿಂಗ್ ಕೋಚ್ Dinesh Karthik ಅವರೊಂದಿಗೆ ನಡೆಸಿದ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅವರ ಪ್ರತಿಯೊಂದು ಸಾರ್ವಜನಿಕ ಕಾಣಿಸಿಕೊಳ್ಳುವಿಕೆಯೂ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತಿದ್ದು, ಮುಂಬೈ ವಿಮಾನ ನಿಲ್ದಾಣದ ಈ ವಿಡಿಯೊ ಕೂಡ ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

Continue Reading

Blog

ಶಾಲೆ ಶುರುವಾಗುವ ಮುನ್ನವೇ ಪೋಷಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್

Published

on

ಬೆಂಗಳೂರು: ರಾಜ್ಯದ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಬೆಲೆ ಏರಿಕೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಶಾಲಾ ಮಕ್ಕಳ ಪೋಷಕರಿಗೆ ಮತ್ತೊಂದು ದೊಡ್ಡ ಆರ್ಥಿಕ ಹೊರೆ ಎದುರಾಗಿದೆ.

ಈಗಾಗಲೇ Petrol ಮತ್ತು Diesel ದರ ಏರಿಕೆಯಿಂದ ಸಂಕಷ್ಟದಲ್ಲಿರುವ ಪೋಷಕರಿಗೆ, ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಾಲಾ ವೆಚ್ಚಗಳು ಭಾರೀ ಹೊರೆ ತಂದಿವೆ. ಶಾಲಾ ಅಡ್ಮಿಷನ್ ಫೀಸ್‌, ವ್ಯಾನ್ ಹಾಗೂ ಆಟೋ ಶುಲ್ಕ ಏರಿಕೆಯ ಬೆನ್ನಲ್ಲೇ ಇದೀಗ ನೋಟ್‌ಬುಕ್‌, ವರ್ಕ್‌ಬುಕ್‌ ಮತ್ತು ಬಿಳಿ ಪೇಪರ್‌ಗಳ ದರ ಕೂಡ ಶೇಕಡಾ 20ರಿಂದ 25ರಷ್ಟು ಏರಿಕೆಯಾಗಿದೆ.

ಸ್ಟೇಷನರಿ ಅಂಗಡಿಗಳಲ್ಲೂ ಪೋಷಕರಿಗೆ ಆಘಾತ

ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಮುನ್ನವೇ ಪೋಷಕರು ಸ್ಟೇಷನರಿ ಅಂಗಡಿಗಳತ್ತ ಮುಖ ಮಾಡಿದ್ದು, ಅಲ್ಲಿ ಹೆಚ್ಚಿದ ಬೆಲೆಗಳು ಆತಂಕ ಮೂಡಿಸಿವೆ. ದಿನನಿತ್ಯ ಮಕ್ಕಳಿಗೆ ಅಗತ್ಯವಾಗುವ ನೋಟ್‌ಬುಕ್‌ಗಳ ಬೆಲೆ ಹೆಚ್ಚಳದಿಂದ ಕುಟುಂಬಗಳ ಮಾಸಿಕ ಬಜೆಟ್ ಸಂಪೂರ್ಣ ಹದಗೆಟ್ಟಿದೆ.

ಕೇವಲ ಶಾಲಾ ಶುಲ್ಕವಷ್ಟೇ ಅಲ್ಲ, ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಿರುವುದರಿಂದ ಪೋಷಕರು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ.

ಜಾಗತಿಕ ಪರಿಸ್ಥಿತಿ ಮತ್ತು ಇಂಧನ ದರ ಏರಿಕೆ ಪರಿಣಾಮ

ಪುಸ್ತಕ ಹಾಗೂ ಪೇಪರ್ ದರ ಏರಿಕೆಗೆ ಜಾಗತಿಕ ಮತ್ತು ಸ್ಥಳೀಯ ಮಟ್ಟದ ಹಲವು ಕಾರಣಗಳಿವೆ ಎಂದು ಉದ್ಯಮ ವಲಯ ತಿಳಿಸಿದೆ.

ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಕಾಗದ ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಕಲರ್ಸ್‌ಗಳ ಆಮದು ವ್ಯತ್ಯಯಗೊಂಡಿದೆ. ಇದರ ಪರಿಣಾಮ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.

ಇದರ ಜೊತೆಗೆ ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಕೂಡ ಹೆಚ್ಚಾಗಿದೆ. ಕಚ್ಚಾ ವಸ್ತು ಸಾಗಣೆ ಮತ್ತು ಸಿದ್ಧಪಡಿಸಿದ ಪುಸ್ತಕಗಳನ್ನು ಮಾರುಕಟ್ಟೆಗೆ ತಲುಪಿಸಲು ಹೆಚ್ಚಿನ ಹಣ ಖರ್ಚಾಗುತ್ತಿದ್ದು, ಮುದ್ರಣ ವೆಚ್ಚವೂ ದುಪ್ಪಟ್ಟಾಗಿದೆ.

ಪೋಷಕರ ಬಜೆಟ್ ಮೇಲೆ ಭಾರೀ ಹೊರೆ

ಅಂತಿಮವಾಗಿ ಈ ಎಲ್ಲಾ ವೆಚ್ಚದ ಹೊರೆ ಪೋಷಕರ ಮೇಲೆಯೇ ಬೀಳುತ್ತಿದೆ. ಈಗಾಗಲೇ ದಿನಸಿ, ವಿದ್ಯುತ್‌, ಸಾರಿಗೆ ವೆಚ್ಚಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಲಾ ಸಾಮಗ್ರಿಗಳ ದರ ಏರಿಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.

ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಈ ಬಗ್ಗೆ ಗಮನ ಹರಿಸಿ ಬೆಲೆ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಸಾಮಾನ್ಯ ಜನರ ಬದುಕು ಇನ್ನಷ್ಟು ದುಸ್ತರವಾಗುವ ಸಾಧ್ಯತೆ ಇದೆ.

Continue Reading

Trending