Connect with us

Blog

ನಟರಾಜಾಸನ

Published

on

ನಟರಾಜಾಸನ

ಯೋಗವು ದೇಹ, ಉಸಿರು ಮತ್ತು ಮನಸ್ಸನ್ನು ಸಂಪರ್ಕಿಸುವ ಅಭ್ಯಾಸವಾಗಿದೆ .ಸಾವಿರಾರು ವರ್ಷಗಳ ಹಿಂದೆ ಯೋಗವನ್ನು ಆಧ್ಯಾತ್ಮಿಕ ಅಭ್ಯಾಸವಾಗಿ ಅಭಿವೃದ್ಧಿಪಡಿಸಲಾಯಿತು.ಈ ಯೋಗಾಸನವನ್ನು ನೀವು ಖಾಲಿ ಹೊಟ್ಟೆಯಲ್ಲಿ ಅಥವಾ ಊಟವಾದ ನಾಲ್ಕು ಗಂಟೆಗಳ ಬಳಿಕ ಮಾಡುವುದು ಉತ್ತಮ.
ನಟರಾಜಾಸನವು ಕಾಲು ಮತ್ತು ಕೈಗಳನ್ನ ಒಳಗೊಂಡಿರುವಂತಹ ಯೋಗ ಭಂಗಿಯಾಗಿದೆ.ನಟ(ನೃತ್ಯ)+ರಾಜ(ದೊರೆ/ದೇವರು)+ ಆಸನ= ನಟರಾಜಾಸನ ಅಥವಾ ದೇವನಟರಾಜ ಎಂದರೆ ನೃತ್ಯದ ದೇವರು ಎಂದು ಹೇಳಲಾಗುತ್ತದೆ. ಅದೇ ನಟರಾಜಾಸನವು ಯೋಗದಲ್ಲಿದೆ. ಇದು ತುಂಬಾ ಲಾಭಕಾರಿ ಕೂಡ.ನೃತ್ಯ ಭಂಗಿ.
ಶಿವನನ್ನು ತುಂಬಾ ಕಠಿಣ, ತೀವ್ರ ಹಾಗೂ ಸಮತೋಲಿತ ದೇವರು ಎಂದು ಕರೆಯಲಾಗುತ್ತದೆ.ಇದರಲ್ಲಿ ಶಿವ ತಾಂಡವವೆಂದು ಕರೆಯಲಾಗುವ ಶಿವನ ನೃತ್ಯದಲ್ಲಿ ನಟರಾಜ ಭಂಗಿಯೂ ಒಂದು.ಈ ವ್ಯಾಯಾಮವನ್ನು ಮಾಡಿದರೆ ಅದರಿಂದ ಸಂಪೂರ್ಣ ದೇಹವು ಶಕ್ತಿ ಪಡೆಯುವುದು, ದೇಹದ ಸಮತೋಲನ ಕಾಪಾಡುವುದು, ಸ್ಥಿತಿಸ್ಥಾಪಕತ್ವ ಹೆಚ್ಚುವುದು ಮತ್ತು ಸಂಪೂರ್ಣ ಶಕ್ತಿಯು ಹೆಚ್ಚಾಗುವುದು.

ನಟರಾಜಾಸನ ಮಾಡುವ ವಿಧಾನ:
ಬೆರಳುಗಳನ್ನು ಜತೆಯಾಗಿರಿಸಿಕೊಂಡು ಹಾಗೆ ನೇರವಾಗಿ ನಿಂತುಕೊಂಡು ಒಂದು ಕೇಂದ್ರದ ಮೇಲೆ ದೃಷ್ಟಿಯನ್ನು ಇರಿಸಿ.
ಸ್ವಲ್ಪ ಮುಂದಕ್ಕೆ ಬಾಗಿ ಬಲಗಾಲನ್ನು ಹಿಂದಕ್ಕೆ ತಂದು ಎತ್ತಿ ಬಲಗೈಯಿಂದ ಹಿಡಿಯಿರಿ.
ಎಡಕಾಲನ್ನು ನೇರವಾಗಿ ಇಟ್ಟುಕೊಂಡು ಎಡಕೈಯನ್ನು ಮುಂದಕ್ಕೆ ತನ್ನಿ.
ಎಡದ ಕೈಯ ತೋರು ಬೆರಳು ಮತ್ತು ಹೆಬ್ಬೆರಳಿನ ಜತೆಗೆ ಮೊಣಕೈಯನ್ನು ಕೂಡ ಮುಂದಿನ ಭಾಗಕ್ಕೆ ತರುವುದು. ಎಡದ ಕೈ ಕಡೆಗೆ ದೃಷ್ಟಿಯನ್ನಿಡಿ.
ಇದು ಕೊನೆಯ ಭಂಗಿ ಮತ್ತು ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ.
ಎಡದ ಕೈಯನ್ನು ಈಗ ಕೆಳಗೆ ತನ್ನಿ. ಬಲದ ಕಾಲನ್ನು ಈಗ ಮೊದಲಿನ ಭಂಗಿಗೆ ತನ್ನಿ.
ಆರಾಮ ಮಾಡಿ ಮತ್ತು ಇದೇ ಭಂಗಿಯನ್ನು ಮತ್ತೊಂದು ಬದಿಯಿಂದಲೂ ಮಾಡಿ.
ಅಭ್ಯಾಸದ ವೇಳೆ ಸಾಮಾನ್ಯವಾಗಿ ಉಸಿರಾಡಿ.

ನಟರಾಜಾಸನದ ಅನುಕೂಲಗಳೂ:
ನಟರಾಜಾಸನವು ಸಮನ್ವಯ ಮತ್ತು ಸಮತೋಲನವನ್ನು ಒಳಗೊಂಡಿದೆ. ಇದು ಭೂಜ, ಬೆನ್ನು, ಕೈಗಳು ಮತ್ತು ಕಾಲುಗಳನ್ನು ನೇರವಾಗಿಸಿ, ಬಲಪಡಿಸುವುದು.
ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಇಳಿಸಲು ಸಹಕಾರಿ.
ಈ ಭಂಗಿಯು ಜೀರ್ಣಕ್ರಿಯೆ ವ್ಯವಸ್ಥೆ ನಿಯಂತ್ರಿಸುವುದು.
ಕೈಗಳು, ತೊಡೆ, ಕಾಲುಗಳು, ಮಣಿಗಂಟು ಮತ್ತು ಹೊಟ್ಟೆ ಸಹಿತ ದೇಹದ ವಿವಿಧ ಭಾಗಗಳು ಇದರಿಂದ ಎಳೆಯಲ್ಪಡುವುದು.
ದೇಹದ ಸಮತೋಲನ ಮತ್ತು ಭಂಗಿ ಸುಧಾರಣೆ ಮಾಡುವುದು. ಈ ಭಂಗಿಯನ್ನು ಪಾಲಿಸಿದರೆ ಅದರಿಂದ ನೋವು ಮತ್ತು ಸೆಳೆತ ಕಡಿಮೆ ಆಗುವುದು.
ಈ ಆಸನವು ಮನಸ್ಸನ್ನು ಆರಾಮಗೊಳಿಸುವುದು, ಒತ್ತಡ ಕಡಿಮೆ ಮಾಡುವುದು ಮತ್ತು ಏಕಾಗ್ರತೆ ಹೆಚ್ಚಿಸುವುದು.
ಈ ಆಸನವನ್ನು ನಿಯಮಿತವಾಗಿ ಅಭ್ಯಾಸಿಸಿದರೆ ಅದರಿಂದ ದೇಹವು ಹೆಚ್ಚು ಸ್ಥಿತಿಸ್ಥಾಪಕತ್ವ ಪಡೆಯುವುದು.

ಎಚ್ಚರಿಕೆ:
ಹೃದಯದ ಸಮಸ್ಯೆ ಅಥವಾ ಅನಿಯಮಿತ ರಕ್ತದೊತ್ತಡ ಇರುವವರು ಇದನ್ನು ಮಾಡಬಾರದು.
ಬೆನ್ನು ಅಥವಾ ಬೆನ್ನುಹುರಿ ನೋವು ಇದ್ದರೆ ನಟರಾಜಾಸನ ಪ್ರಯತ್ನಿಸಲು ಹೋಗಬೇಡಿ. ಇದರಿಂದ ಸಮಸ್ಯೆ ತೀವ್ರವಾಗಬಹುದು.
ತಲೆಸುತ್ತು ಬರುವ ಸಮಸ್ಯೆ ಇರುವವರು ಕೂಡ ಇದರಿಂದ ದೂರವಿರಬೇಕು.

Blog

ಗೋಡಂಬಿ ತಿನ್ನಿದರೆ ತೂಕ ಹೆಚ್ಚುತ್ತದಾ? ನಿಜ-ಸುಳ್ಳು ಬಹಿರಂಗ!

Published

on

ಬೆಂಗಳೂರು, ಏ. 4: ಇದೀಗ ಗೋಡಂಬಿ ಅಥವಾ Cashew (ಗೇರುಬೀಜ)ಗಳ ಋತು ಆರಂಭವಾಗಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಗೇರುಹಣ್ಣಿನ ಮರಗಳು ಸಮೃದ್ಧವಾಗಿ ಕಾಣಿಸುತ್ತಿವೆ. ಭಾರತೀಯ ಅಡುಗೆಗಳಲ್ಲಿ ಸಿಹಿ-ಖಾರದ ತಿನಿಸುಗಳಿಗೆ ವಿಶೇಷ ರುಚಿ ನೀಡುವ ಗೋಡಂಬಿ ಬಗ್ಗೆ ಹಲವಾರು ಗೊಂದಲಗಳು ಹಾಗೂ ತಪ್ಪು ಕಲ್ಪನೆಗಳು ಹರಿದಾಡುತ್ತಿವೆ.

ಕೆಲವರು ಗೋಡಂಬಿ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂದು ನಂಬಿದರೂ, ತಜ್ಞರ ಪ್ರಕಾರ ಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಲಾಭಕಾರಿ. 100 ಗ್ರಾಂ ಗೋಡಂಬಿಯಲ್ಲಿ ಸುಮಾರು 550 ಕ್ಯಾಲರಿಗಳು ಇದ್ದರೂ, ಇದರಲ್ಲಿರುವ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬು ದೇಹದ ಒಳ್ಳೆಯ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಸಹಕಾರಿಯಾಗಿದೆ.

ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬ ಮತ್ತೊಂದು ಭೀತಿ ಕೂಡ ಸಂಪೂರ್ಣ ಸತ್ಯವಲ್ಲ. ಗೋಡಂಬಿಯಲ್ಲಿ ಇರುವ ಫೈಟೊಸ್ಟೆರಾಲ್ ಅಂಶಗಳು ದೇಹದ ಕೆಟ್ಟ ಕೊಲೆಸ್ಟ್ರಾಲ್ (LDL) ನಿಯಂತ್ರಿಸಲು ಸಹಾಯ ಮಾಡಬಹುದು. ದಿನಕ್ಕೆ ಸುಮಾರು 25 ಗ್ರಾಂ ಮಿತಿಯಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಧುಮೇಹದ ಬಗ್ಗೆ ಆತಂಕವಿರುವವರಿಗೂ ಗೋಡಂಬಿ ಸಂಪೂರ್ಣ ಹಾನಿಕಾರಕವಲ್ಲ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಏರಿಸುತ್ತದೆ. ಆದರೆ ಮಿತಿಮೀರಿದ ಸೇವನೆ ತಪ್ಪಿಸಬೇಕು.

ಇನ್ನು ಮೊಡವೆ ಹೆಚ್ಚುತ್ತದೆ ಎಂಬ ಮಾತಿಗೂ ವೈಜ್ಞಾನಿಕ ಆಧಾರವಿಲ್ಲ. ಗೋಡಂಬಿಯಲ್ಲಿರುವ ಸೆಲೆನಿಯಂ ಹಾಗೂ ವಿಟಮಿನ್ C ಚರ್ಮದ ಆರೋಗ್ಯಕ್ಕೆ ಸಹಾಯಕ.

ಆದಾಗ್ಯೂ, ಕೆಲವು ಮಂದಿಗೆ ಬೀಜಗಳ ಅಲರ್ಜಿ ಇರುವ ಸಾಧ್ಯತೆ ಇದ್ದು, ಇಂತಹವರು ಎಚ್ಚರಿಕೆಯಿಂದ ಇರಬೇಕು. ಒಟ್ಟಿನಲ್ಲಿ, ಗೋಡಂಬಿ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಲಾಭಕಾರಿ ಆಹಾರವಾಗಿದ್ದು, ಅತಿಯಾದ ಸೇವನೆ ಮಾತ್ರ ಸಮಸ್ಯೆಗೆ ಕಾರಣವಾಗಬಹುದು.

Continue Reading

Blog

Bengaluru : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ: ಜನತೆಗೆ ಫೆಡರೇಷನ್ ಸ್ಪಷ್ಟನೆ

Published

on

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗಬಹುದು ಎಂಬ ಆತಂಕದ ನಡುವೆ ಮಹತ್ವದ ಸ್ಪಷ್ಟನೆ ಹೊರಬಂದಿದೆ. Akhila Karnataka Federation of Petroleum Traders (ಎಕೆಎಫ್‌ಪಿಟಿ) ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಯಾವುದೇ ರೀತಿಯ ಕೊರತೆಯಿಲ್ಲ ಎಂದು ತಿಳಿಸಿದೆ.

ಇತ್ತೀಚೆಗೆ United States, Israel ಮತ್ತು Iran ನಡುವೆ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಇಂಧನ ಪೂರೈಕೆ ಬಗ್ಗೆ ಕೆಲ ಆತಂಕಕಾರಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಆದರೆ ಈ ರೀತಿಯ ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಫೆಡರೇಷನ್ ಮನವಿ ಮಾಡಿದೆ.

ಪ್ರಕಟಣೆಯಲ್ಲಿ ತಿಳಿಸಿರುವಂತೆ, ರಾಜ್ಯದಲ್ಲಿ ತೈಲ ಪೂರೈಕೆ ಸರಾಗವಾಗಿ ನಡೆಯುತ್ತಿದೆ. Indian Oil Corporation, Bharat Petroleum Corporation Limited, Hindustan Petroleum Corporation Limited ಹಾಗೂ Mangalore Refinery and Petrochemicals Limited ಕಂಪನಿಗಳು ರಾಜ್ಯದ ವಿವಿಧ ಟರ್ಮಿನಲ್‌ಗಳಿಂದ ನಿರಂತರವಾಗಿ ಇಂಧನ ಪೂರೈಕೆ ಮಾಡುತ್ತಿವೆ.

ಈ ಎಲ್ಲಾ ಕಂಪನಿಗಳಿಂದ ರಾಜ್ಯಾದ್ಯಂತ ಇರುವ ಪೆಟ್ರೋಲ್ ಬಂಕ್‌ಗಳಿಗೆ ಸುಗಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ನಡೆಯುತ್ತಿದೆ. ಹೀಗಾಗಿ ಜನರು ಭಯಪಡದೆ ಸಾಮಾನ್ಯ ರೀತಿಯಲ್ಲಿ ಇಂಧನ ಖರೀದಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸುವುದರಿಂದ ಮಾತ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವದಂತಿಗಳಿಗೆ ಒಳಗಾಗದೇ ಸರ್ಕಾರ ಮತ್ತು ತೈಲ ಕಂಪನಿಗಳ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಫೆಡರೇಷನ್ ಮನವಿ ಮಾಡಿದೆ.

Continue Reading

Blog

ಬೆಂಗಳೂರು ದಂಪತಿಯ ಆರ್ಥಿಕ ಸಂಕಷ್ಟ ಪೋಸ್ಟ್ ವೈರಲ್: ಮೆಟ್ರೋ ಜೀವನದ ಖರ್ಚು ಚರ್ಚೆಗೆ

Published

on

ಬೆಂಗಳೂರು: ಬೆಂಗಳೂರುನಲ್ಲಿ ಹೊಸದಾಗಿ ಮದುವೆಯಾದ ದಂಪತಿಯ ಆರ್ಥಿಕ ಒತ್ತಡಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ದೊಡ್ಡ ಚರ್ಚೆಗೆ ಕಾರಣವಾಗಿದೆ.

Xನಲ್ಲಿ ಅಭಿಷೇಕ್ ಸಿಂಗ್ ಎಂಬ ಬಳಕೆದಾರರು ತಮ್ಮ ಸ್ನೇಹಿತನ ಕಥೆಯನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ತಕ್ಷಣ ಪತ್ನಿ “ಪೂರ್ಣ ಸಮಯ ಸರ್ಕಾರಿ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ ಬಗ್ಗೆ ಅವರು ವಿವರಿಸಿದ್ದಾರೆ.


ಮದುವೆಗೆ ಮೊದಲು – ಉತ್ತಮ ಉಳಿತಾಯ

ಅವರ ಪ್ರಕಾರ, ಸ್ನೇಹಿತನ ವಾರ್ಷಿಕ ವೇತನ ₹18 ಲಕ್ಷ (CTC), ತಿಂಗಳಿಗೆ ಸುಮಾರು ₹1.15 ಲಕ್ಷ ಕೈಗೆ ಸಿಗುತ್ತಿತ್ತು.

ಮದುವೆಗೆ ಮೊದಲು ಖರ್ಚುಗಳು (ಅಂದಾಜು):

  • ಬಾಡಿಗೆ/ಪಿಜಿ – ₹16,000
  • ಆಹಾರ – ₹7,000
  • ಪ್ರಯಾಣ – ₹3,000
  • ಇಂಟರ್ನೆಟ್/ಫೋನ್ – ₹1,500
  • ಜಿಮ್ – ₹1,500
  • ಹೊರಗೆ ಊಟ – ₹4,000
  • ಶಾಪಿಂಗ್ – ₹2,000

ಒಟ್ಟು ಖರ್ಚು: ₹35,000
ಉಳಿತಾಯ: ಸುಮಾರು ₹80,000 ತಿಂಗಳಿಗೆ


ಮದುವೆಯ ನಂತರ – ಖರ್ಚು ಏರಿಕೆ

1BHK ಮನೆಗೆ ಸ್ಥಳಾಂತರವಾದ ಬಳಿಕ ಖರ್ಚುಗಳು ದ್ವಿಗುಣಗೊಂಡವು:

  • ಬಾಡಿಗೆ – ₹40,000
  • ತರಕಾರಿ/ಕಿಚನ್ – ₹18,000
  • ಅಡುಗೆ/ಮೈಡ್ – ₹7,000
  • ವಿದ್ಯುತ್/ವೈಫೈ/ಗ್ಯಾಸ್ – ₹6,000
  • ಇಬ್ಬರ ಪ್ರಯಾಣ – ₹10,000
  • ವೀಕೆಂಡ್/ಔಟಿಂಗ್ – ₹12,000
  • ಸಣ್ಣ ಶಾಪಿಂಗ್ – ₹8,000
  • ಆರೋಗ್ಯ/ಔಷಧಿ – ₹5,000
  • ಫರ್ನಿಚರ್/EMI – ₹15,000

ಒಟ್ಟು: ₹1,21,000 (ತಿಂಗಳಿಗೆ)

ಇದರಿಂದ ತಿಂಗಳ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆರ್ಥಿಕ ಒತ್ತಡ ಶುರುವಾಯಿತು.


ಆಚರಣಾತ್ಮಕ ನಿರ್ಧಾರ

ನಂತರ ಪತ್ನಿ ₹7 ಲಕ್ಷ CTC (ಸುಮಾರು ₹45,000 ತಿಂಗಳಿಗೆ) ವೇತನದ ಉದ್ಯೋಗ ಸ್ವೀಕರಿಸಿದರು. ಇದರಿಂದ ದಿನನಿತ್ಯದ ಖರ್ಚುಗಳು ಸಮತೋಲನಗೊಂಡು ಕುಟುಂಬದ ಹಣಕಾಸು ಸ್ಥಿತಿ ಸ್ಥಿರವಾಯಿತು.

ಪೋಸ್ಟ್‌ನಲ್ಲಿ “ಮೆಟ್ರೋ ನಗರದಲ್ಲಿ ಮದುವೆಯಾದ ಬಳಿಕ ಸರ್ಕಾರಿ ಪರೀಕ್ಷೆ ತಯಾರಿ ಮಾಡಿಕೊಳ್ಳುವುದು ಆರ್ಥಿಕವಾಗಿ ದುಬಾರಿ” ಎಂದು ಅಭಿಪ್ರಾಯ ವ್ಯಕ್ತವಾಗಿದೆ.


ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ

ಈ ಪೋಸ್ಟ್‌ಗೆ 1.97 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿದ್ದು, ಹಲವರು ಮೆಟ್ರೋ ನಗರ ಜೀವನದ ಖರ್ಚು ಹಾಗೂ ಹಣಕಾಸು ಯೋಜನೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡ ಮಾಹಿತಿಯನ್ನು ಆಧರಿಸಿದೆ. ಇಲ್ಲಿ ಉಲ್ಲೇಖಿಸಿದ ಘಟನೆ, ಹಣಕಾಸು ವಿವರಗಳು ಹಾಗೂ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಈ ವಿಷಯದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಂಬಂಧಿತ ಬಳಕೆದಾರರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ನಮ್ಮ ವೇದಿಕೆಯ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ.

Continue Reading

Trending