Connect with us

ಕ್ರೀಡೆ

ಹ್ಯಾಪಿ ಜರ್ನಿ ಎಂದು ಬಾಬರ್​ ಪಡೆಗೆ ಕುಟುಕಿದ ಸೆಹವಾಗ್

ಹ್ಯಾಪಿ ಜರ್ನಿ ಎಂದು ಬಾಬರ್ ಪಡೆಗೆ ಕುಟುಕಿದ ಸೆಹವಾಗ್
ಹ್ಯಾಪಿ ಜರ್ನಿ ಎಂದು ಬಾಬರ್ ಪಡೆಗೆ ಕುಟುಕಿದ ಸೆಹವಾಗ್

ನವದೆಹಲಿ: ನ್ಯೂಜಿಲ್ಯಾಂಡ್​ ತಂಡ ಶ್ರೀಲಂಕಾ ವಿರುದ್ಧ 5 ವಿಕೆಟ್​ಗಳ ಗೆಲುವು ಸಾಧಿಸಿದ ಪರಿಣಾಮ ಪಾಕಿಸ್ತಾನದ ಸೆಮಿಫೈನಲ್​ ಕನಸು ಬಹುತೇಕ ಭಗ್ನಗೊಂಡಿದೆ. ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಪವಾಡ ರೀತಿಯಲ್ಲಿ ಗೆದ್ದರೆ ಮಾತ್ರ ಪಾಕ್​ ತಂಡಕ್ಕೆ ಅವಕಾಶ. ಆದರೆ ಇದು ಅಸಾಧ್ಯ. ಹೀಗಾಗಿ ಪಾಕ್​ ಟೂರ್ನಿಯಿಂದ ಹೊರಬೀಳುವುದು ಖಚಿತ. ಇದೇ ಖುಷಿಯಲ್ಲಿ ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್​ ಓಪನರ್​ ವೀರೇಂದ್ರ ಸೆಹವಾಗ್

​ ಪೋಸ್ಟ್​ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ ವೈರಲ್​ ಆಗಿದೆ.

ವಿರೇಂದ್ರ ಸೆಹವಾಗ್​ ಅವರು ತಮ್ಮ ಟ್ವಿಟರ್​ ಎಕ್ಸ್​ ಮತ್ತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ‘ಬೈ ಬೈ ಪಾಕಿಸ್ತಾನ!’ ಎಂದು ಬರೆದಿರುವ ಫೋಟೊವನ್ನು ಹಾಕಿ ‘ಪಾಕಿಸ್ತಾನ್ ಜಿಂದಾಭಾಗ್! ಬಸ್ ಯಾಹಿಂ ತಕ್ ಥಾ ಜೋ ಥಾ(ನಿಮ್ಮ ಆಟ ಇಲ್ಲಿ ತನಕ ಮಾತ್ರ ಇತ್ತು). ನೀವು ಬಿರಿಯಾನಿ ಮತ್ತು ಆತಿಥ್ಯವನ್ನು ಆನಂದಿಸಿದ್ದೀರಿ ಎಂದು ಭಾವಿಸುತ್ತೇವೆ. ಸುರಕ್ಷಿತವಾಗಿ ಮನೆಗೆ ಹಿಂತಿರುಗಿ” ಎಂದು ಬರೆದು ಕಿಚಾಯಿಸಿದ್ದಾರೆ. ಪಾಕಿಸ್ತಾನ ತಂಡ ಶನಿವಾರ ನಡೆಯುವ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್(England vs Pakistan)​ ವಿರುದ್ಧ ಕಣಕ್ಕಿಳಿಯಲಿದೆ. ಸದ್ಯ ಪಾಕ್​ ತಂಡ ಆಡಿದ 8 ಪಂದ್ಯಗಳಲ್ಲಿ ತಲಾ 4 ಗೆಲುವು ಮತ್ತು ಸೋಲು ಕಾಣುವ ಮೂಲಕ 8 ಅಂಕ ಪಡೆದಿದೆ. +0.036 ರನ್‌ ರೇಟ್‌ ಹೊಂದಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ. ಶ್ರೀಲಂಕಾ ವಿರುದ್ಧ ಗೆದ್ದ ನ್ಯೂಜಿಲ್ಯಾಂಡ್​ 10 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್​ ತಂಡ ಲಂಕಾ ವಿರುದ್ಧ ಸೋಲು ಕಾಣುತ್ತಿದ್ದರೆ, ಆಗ ಪಾಕಿಸ್ತಾನಕ್ಕೆ ಯಾವುದೇ ಚಿಂತೆ ಇರುತ್ತಿರಲಿಲ್ಲ. ಜಸ್ಟ್​ ಪಂದ್ಯ ಗೆದ್ದರೆ ಸಾಕಿತ್ತು. ಆದರೆ ಈಗ ಪವಾಡ ನಡೆದಂತೆ ಗೆಲ್ಲಬೇಕಾದ ಸ್ಥಿತಿ ಎದುರಾಗಿದೆ.

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಬಾಬರ್​ ಅಜಂ ಪಡೆ ಮೊದಲು ಬ್ಯಾಟಿಂಗ್​ ನಡೆಸಿ ಮಾಡಿ 300 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡವನ್ನು ಕೇವಲ 13 ರನ್‌ಗಳಿಗೆ ಆಲ್​ಔಟ್​ ಮಾಡಬೇಕು. ಆ ಮೂಲಕ ಪಾಕಿಸ್ತಾನ 287 ರನ್‌ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಬೇಕು. ಆಗ ಮಾತ್ರ ಪಾಕಿಸ್ತಾನ ಉತ್ತಮ ರನ್​ ರೇಟ್​ ಸಾಧಿಸಿ ಕಿವೀಸ್‌ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು. ಒಂದೊಮ್ಮೆ ಪಾಕಿಸ್ತಾನ ಈ ಪಂದ್ಯದಲ್ಲಿ ಮೊದಲು ಬೌಲಿಂಗ್​ ನಡಸುವ ಸನ್ನಿವೇಶ ಎದುರಾದರೆ ಇಂಗ್ಲೆಂಡ್‌ ತಂಡವನ್ನು ಕೇವಲ 100 ರನ್‌ಗಳಿಗೆ ಆಲ್‌ಔಟ್‌ ಮಾಡಬೇಕು. ಬಳಿಕ ಪಾಕ್​ ಈ ಮೊತ್ತವನ್ನು ಕೇವಲ 2.5 ಓವರ್‌ಗಳಿಗೆ ಚೇಸ್‌ ಮಾಡಬೇಕು. ಆ ಮೂಲಕ 283 ಎಸೆತಗಳು ಬಾಕಿ ಇರುವಾಗಲೇ ಪಾಕ್‌ ಪಂದ್ಯವನ್ನು ಗೆಲ್ಲಬೇಕು. ಇದು ಸಾಧ್ಯವಾಗದೇ ಇದ್ದರೆ ಪಾಕ್ ವಿಶ್ವಕಪ್ ಅಭಿಯಾನ ಕೊನೆಗೊಳ್ಳುತ್ತದೆ. ಮತ್ತೊಂದೆಡೆ, -0.338 ರನ್‌ರೇಟ್ ಹೊಂದಿರುವ ಅಫ್ಘಾನಿಸ್ತಾನವು ಸೆಮಿಸ್‌ಗೆ ಅರ್ಹತೆ ಪಡೆಯಲು ಇಂದು ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಕನಿಷ್ಠ 438 ರನ್‌ಗಳಿಂದ ಗೆಲ್ಲಬೇಕಾಗಿದೆ. ಇದಕ್ಕಿಂತ ಕಡಿಮೆ ರನ್​ನಿಂದ ಗೆದ್ದರೆ ಅಫಘಾನಿಸ್ತಾನವೂ ಟೂರ್ನಿಯಿಂದ ಹೊರಬೀಳಲಿದೆ.

ಕ್ರೀಡೆ

Belgavi: ಸಂಸದರು ಮತ್ತು ಮುಖಂಡರು ಸ್ನೇಹಪೂರ್ಣ ಕ್ರಿಕೆಟ್

ಬೆಳಗಾವಿ: ದೈಹಿಕ ಆರೋಗ್ಯ, ಮಾನಸಿಕ ಸ್ಥಿತಿ ಸುಧಾರಣೆ ಮತ್ತು ಶಾರೀರಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ವ್ಯಾಯಾಮ, ನಡಿಗೆ ಮತ್ತು ಕ್ರೀಡೆಗಳು ಅಗತ್ಯ ಎಂದು ಭાજપಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬೆಳಗಾವಿ ವಿಧಾನಸಭೆಯ ಚಳಿಗಾಲ ಅಧಿವೇಶನದ ನಡುವೆ, ಮಾಧ್ಯಮದವರ ಒತ್ತಾಯಕ್ಕೆ ಪ್ರತಿಯಾಗಿ, ಬೆಳಗಾವಿ KCA ಕ್ರೀಡಾಂಗಣದಲ್ಲಿ ವಿಧಾನಸಭಾ ಸದಸ್ಯರು, ಪಕ್ಷದ ಮುಖಂಡರು ಮತ್ತು ಮತ್ತಿತರರು ಸ್ನೇಹಪೂರ್ಣವಾಗಿ ಕ್ರಿಕೆಟ್ ಆಡಿದರು.

ಈ ಕ್ರೀಡಾ ಚಟುವಟಿಕೆ ರಂಜನೆ ಮಾತ್ರವಲ್ಲದೆ, ದೈಹಿಕ ಸುಸ್ಥಿತಿ, ಮನಸಿಗೆ ಉಲ್ಲಾಸ ಮತ್ತು ಶಕ್ತಿಯನ್ನು ಒದಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಟದಲ್ಲಿ ಪಾಲ್ಗೊಂಡವರು ತಮ್ಮ ಆನಂದ, ಒಗ್ಗಟ್ಟಿನ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಕ್ರಿಕೆಟ್ ಮಹತ್ವವನ್ನು ಒತ್ತಿಹೇಳಿದರು. ಅನೇಕ ಸದಸ್ಯರು ಶಾರೀರಿಕ ಕ್ಷಮತೆ, ತಂಡದ ಕಾರ್ಯಸಾಮರ್ಥ್ಯ ಮತ್ತು ಹೊಣೆಗಾರಿಕೆಯ ಸಂಬಂಧಿತ ಉತ್ಪಾದಕತೆ ಬಗ್ಗೆ ಚರ್ಚೆ ನಡೆಸಿದರು.

ಆಟದ ಸಂದೇಶ:
ಸ್ನೇಹಪೂರ್ಣ, ಸಂತೋಷಭರಿತ ಮತ್ತು ಆರೋಗ್ಯ–ಪ್ರೋತ್ಸಾಹಕ ಈ ಕ್ರೀಡೆ ಸದಸ್ಯರಿಗೆ ದಿನನಿತ್ಯದ ಜೀವನದಲ್ಲಿ ಕಸರತ್ತು ಮತ್ತು ಕ್ರೀಡೆಗಳನ್ನು ಭಾಗವನ್ನಾಗಿಸಿಕೊಳ್ಳುವ ಮಹತ್ವವನ್ನು ಮನಸಿಗೆ ತರುವಂತಿತ್ತು. ಇದರಿಂದ ಸಂಸದರು ಮತ್ತು ಪಾಲುಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರೇರಣೆ ಪಡೆದರು.

Continue Reading

ಕ್ರೀಡೆ

ಐಪಿಎಲ್ ಬ್ರಾಂಡ್ 20% ಕುಸಿತ: ಕಾರಣವೇನು? – ಸಂಪೂರ್ಣ ವರದಿ ಇಲ್ಲಿದೆ

ನವದೆಹಲಿ, ಡಿ.11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬ್ರಾಂಡ್ ಮೌಲ್ಯ ಈ ವರ್ಷ ಗಣನೀಯವಾಗಿ ಕುಸಿದಿದ್ದು, ತಂಡಗಳ ಮೌಲ್ಯದಲ್ಲೂ ಭಾರೀ ಇಳಿಕೆ ಕಂಡಿದೆ. 18 ವರ್ಷಗಳ ಬಳಿಕ ಮೊದಲ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವೂ ಮೌಲ್ಯ ಕುಸಿತದಿಂದ ತಪ್ಪಿಸಿಕೊಳ್ಳಲಿಲ್ಲ. ಕಳೆದ ಸಾಲಿನಿಗಿಂತ ಶೇ.10ರಷ್ಟು ಇಳಿಕೆ ಕಂಡು, ಈಗ ₹876.75 ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ.

ತಂಡಗಳಲ್ಲಿ ಅತ್ಯಧಿಕ ಮೌಲ್ಯ ಕುಸಿತ ರಾಜಸ್ಥಾನ್ ರಾಯಲ್ಸ್‌ಗೆ ಸಂಭವಿಸಿದ್ದು, ಶೇ.35ರಷ್ಟು ಇಳಿಕೆ ದಾಖಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ (ಶೇ.34), ಕೆಕೆಆರ್ (ಶೇ.33), ಡೆಲ್ಲಿ ಕ್ಯಾಪಿಟಲ್ಸ್ (ಶೇ.26), ಚೆನ್ನೈ (ಶೇ.24), ಮುಂಬೈ (ಶೇ.9), ಪಂಜಾಬ್ ಕಿಂಗ್ಸ್ (ಶೇ.3) ಹಾಗೂ ಲಖನೌ ಸೂಪರ್ ಜೈಂಟ್ಸ್ (ಶೇ.2) ಕೂಡ ಮೌಲ್ಯ ಇಳಿಕೆಯ ದಂಡನೆ ಅನುಭವಿಸಿವೆ. 10 ತಂಡಗಳಲ್ಲಿ ಗುಜರಾತ್ ಟೈಟಾನ್ಸ್ ಮಾತ್ರ ಶೇ.2ರಷ್ಟು ಏರಿಕೆ ದಾಖಲಿಸಿದ ಏಕೈಕ ತಂಡ.

ಒಟ್ಟಾರೆ ಐಪಿಎಲ್ ಬ್ರಾಂಡ್ ಮೌಲ್ಯವು 2024ರಿಗಿಂತ ಶೇ.20ರಷ್ಟು ಕುಸಿತವಾಗಿದೆ ಎಂದು ಬ್ರ್ಯಾಂಡ್ ಫೈನಾನ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್ ಫ್ರಾನ್ಸಿಸ್ ತಿಳಿಸಿದ್ದಾರೆ.

ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಸೀಸನ್-19ರ ಮಿನಿ ಹರಾಜಿಗಾಗಿ 350 ಆಟಗಾರರು ಸ್ಪರ್ಧಿಸುತ್ತಿದ್ದು, ಗರಿಷ್ಠ 77 ಸ್ಥಾನಗಳು ಲಭ್ಯವಿವೆ.

ಈ ನಡುವೆ, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ನಿಷೇಧ ತೆರವು ಕುರಿತು ರಾಜ್ಯ ಸರ್ಕಾರ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

Continue Reading

ಕ್ರೀಡೆ

ಕೆಎಸ್‌ಸಿಎ ಸಿಹಿ ಸುದ್ದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಆರಂಭಕ್ಕೆ ಹಸಿರು ನಿಶಾನೆ!

ಹುಬ್ಬಳ್ಳಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಪುನರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಮ್ಮತಿ ಸೂಚಿಸಿದ್ದಾರೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ ತಿಳಿಸಿದ್ದಾರೆ. ಬೆಳಗಾವಿಗೆ ಭೇಟಿ ನೀಡಿದಾಗ ನಾಯಕರು ಈ ಸಂಬಂಧ ಸಿಹಿ ಸುದ್ದಿ ನೀಡಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೆಂಕಟೇಶ್ ಪ್ರಸಾದ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಹೊರಬರುವ ಸಾಧ್ಯತೆ ಇದೆ ಎಂದರು. ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ನಡೆದ ಕಾಲ್ತುಳಿತ ಘಟನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರತಿಷ್ಠೆಗೆ ಹಾನಿಯಾಗಿದ್ದರೂ, ಈಗ ಮತ್ತೆ ಮೌಲ್ಯ ಮರಳಿ ಪಡೆಯಲು ಸರ್ಕಾರದ ಸಹಕಾರ ದೊರೆಯಲಿದೆ ಎಂದು ಹೇಳಿದರು.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ ವಲಯದಲ್ಲಿನ ಕ್ರೀಡಾಂಗಣಗಳ ಅಭಿವೃದ್ಧಿಗೆ ಕೆಎಸ್‌ಸಿಎ ಹೆಚ್ಚಿನ ಒತ್ತು ನೀಡಲಿದೆ. ಕ್ರಿಕೆಟ್ ಬೆಳವಣಿಗೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಎಂದು ಪ್ರಸಾದ್ ಸ್ಪಷ್ಟಪಡಿಸಿದರು.

Continue Reading

Trending