ದೇಶ
‘Shri Ram Mandir Prasad’ ಹೆಸರಿನಲ್ಲಿ ಸಿಹಿ ಮಾರಾಟ: Amazon ಗೆ ಕೇಂದ್ರದಿಂದ ಭಾರೀ ಕ್ರಮ!
ನವದೆಹಲಿ: ಅಯೋಧ್ಯೆಯ Shri Ram Mandir Prasad ವೆಂದು ಪ್ರತಿಪಾದಿಸಿ ಸಾಮಾನ್ಯ ಸಿಹಿ ತಿಂಡಿಗಳನ್ನು ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿAmazon ಇಂಡಿಯಾಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸಿದೆ.
‘ಶ್ರೀ ರಾಮಮಂದಿರ ಅಯೋಧ್ಯೆ ಪ್ರಸಾದ’ ಎಂಬ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿತ್ತು. ಆದರೆ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಅಯೋಧ್ಯೆ ರಾಮಮಂದಿರ ಟ್ರಸ್ಟ್ನಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು CCPA ತಿಳಿಸಿದೆ. ಇದರಿಂದ ಗ್ರಾಹಕರನ್ನು ದಾರಿ ತಪ್ಪಿಸಲಾಗಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.
Amazon ₹1 ಲಕ್ಷ ದಂಡ
CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರಿದ್ದ ಪ್ರಾಧಿಕಾರವು ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ಗೆ ದಂಡ ವಿಧಿಸಿದೆ. ದಂಡದ ಮೊತ್ತವನ್ನು 15 ದಿನಗಳ ಒಳಗಾಗಿ ಪಾವತಿಸುವಂತೆ ಸೂಚಿಸಲಾಗಿದೆ.
ಖಾಸಗಿ ಕಂಪನಿಯೊಂದು ತನ್ನದೇ ಬ್ರ್ಯಾಂಡ್ ಅಡಿಯಲ್ಲಿ ತುಪ್ಪದ ಲಾಡು, ಖೋವಾ ಲಾಡು, ಬೂಂದಿ ಲಾಡು ಹಾಗೂ ಹಸುವಿನ ಹಾಲಿನ ಪೇಡಾಗಳನ್ನು ‘ಪ್ರಸಾದ’ ಎಂದು ಜಾಹೀರಾತು ನೀಡಿ ಮಾರಾಟ ಮಾಡುತ್ತಿತ್ತು ಎಂದು CCPA ತಿಳಿಸಿದೆ.
CAIT ದೂರಿನ ಬಳಿಕ ತನಿಖೆ
ಅಖಿಲ ಭಾರತ ವರ್ತಕರ ಒಕ್ಕೂಟ (CAIT) ನೀಡಿದ ದೂರಿನ ಆಧಾರದ ಮೇಲೆ CCPA ಈ ಕುರಿತು ವಿಚಾರಣೆ ನಡೆಸಿತ್ತು. ಧಾರ್ಮಿಕ ಕ್ಷೇತ್ರದ ಹೆಸರನ್ನು ಬಳಸಿಕೊಂಡು ಸಾಮಾನ್ಯ ಸಿಹಿ ತಿಂಡಿಗಳನ್ನು ಪ್ರಸಾದವೆಂದು ಮಾರಾಟ ಮಾಡುವುದು ಗ್ರಾಹಕರನ್ನು ದಾರಿ ತಪ್ಪಿಸುವುದಲ್ಲದೆ, ಭಕ್ತರ ಧಾರ್ಮಿಕ ಭಾವನೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಪ್ರಾಧಿಕಾರ ಪರಿಗಣಿಸಿದೆ.
ಈ ಪ್ರಕರಣದಲ್ಲಿ ಅಮೆಜಾನ್ ತನ್ನನ್ನು ಕೇವಲ ಮಧ್ಯವರ್ತಿ ಇ-ಕಾಮರ್ಸ್ ವೇದಿಕೆ ಎಂದು ಸಮರ್ಥಿಸಿಕೊಂಡಿತ್ತು. ಆದರೆ ಈ ವಾದವನ್ನು CCPA ತಳ್ಳಿಹಾಕಿದೆ.
‘ಮಧ್ಯವರ್ತಿ’ ವಾದ ತಳ್ಳಿಹಾಕಿದ CCPA
ತನ್ನ ವೇದಿಕೆಯಲ್ಲಿ ಇಂತಹ ಉತ್ಪನ್ನಗಳನ್ನು ಪ್ರದರ್ಶಿಸಿ, ಅವುಗಳ ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಅಮೆಜಾನ್ ಕೂಡ ಗ್ರಾಹಕರನ್ನು ದಾರಿ ತಪ್ಪಿಸುವ ಪ್ರಕ್ರಿಯೆಯಲ್ಲಿ ಹೊಣೆಗಾರಿಕೆಯ ಭಾಗವಾಗಿದೆ ಎಂದು CCPA ಸ್ಪಷ್ಟಪಡಿಸಿದೆ.
ಪ್ರಸಾದ ಎಂದು ತಪ್ಪಾಗಿ ಬಿಂಬಿಸಲಾದ ಉತ್ಪನ್ನಗಳನ್ನು ಗ್ರಾಹಕರು ನಿಜವಾಗಿಯೂ ಅಯೋಧ್ಯೆ ರಾಮಮಂದಿರದಿಂದ ಬಂದ ಪ್ರಸಾದ ಎಂದು ನಂಬುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಜಾಹೀರಾತುಗಳ ಬಗ್ಗೆ ಇ-ಕಾಮರ್ಸ್ ವೇದಿಕೆಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಪ್ರಾಧಿಕಾರ ಸೂಚಿಸಿದೆ.
ಇನ್ನು ಮುಂದೆ ಇಂತಹ ಮಾರಾಟಕ್ಕೆ ಬ್ರೇಕ್
ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಟ್ರಸ್ಟ್ಗಳ ಅನುಮತಿ ಇಲ್ಲದೆ ‘ಪ್ರಸಾದ’, ‘ಮಹಾಪ್ರಸಾದ’ ಅಥವಾ ‘ಭೋಗ್’ ಎಂಬ ಹೆಸರಿನಲ್ಲಿ ಯಾವುದೇ ಉತ್ಪನ್ನಗಳನ್ನು ತನ್ನ ವೇದಿಕೆಯಲ್ಲಿ ಮಾರಾಟ ಮಾಡದಂತೆ ಅಮೆಜಾನ್ಗೆ CCPA ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕ್ರಮವು ಧಾರ್ಮಿಕ ಸಂಸ್ಥೆಗಳ ಹೆಸರನ್ನು ಬಳಸಿಕೊಂಡು ನಡೆಯುವ ದಾರಿ ತಪ್ಪಿಸುವ ಜಾಹೀರಾತುಗಳು ಹಾಗೂ ಆನ್ಲೈನ್ ಮಾರಾಟದ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಕೈಗೊಂಡಿರುವ ಮಹತ್ವದ ಕ್ರಮವಾಗಿದೆ.
ದೇಶ
Strait of Hormuz ಮೇಲೆ ಟ್ರಂಪ್ ಹೊಸ ಘೋಷಣೆ; ಇರಾನ್ಗೆ ಭಾರೀ ಸವಾಲು!
ವಾಷಿಂಗ್ಟನ್: Iran America ನಡುವಿನ ಸಂಘರ್ಷದ ನಡುವೆಯೇ ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿ (Strait of Hormuz) ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೋರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದು, ಇರಾನ್ನ ಹಿಡಿತ ಈ ಪ್ರದೇಶದಲ್ಲಿ ಸಡಿಲವಾಗುತ್ತಿದೆ ಎಂದು ವರದಿಗಳು ಸೂಚಿಸಿವೆ.
ಟ್ರಂಪ್ ತಮ್ಮ Truth Social ಖಾತೆಯಲ್ಲಿ ಹೋರ್ಮುಜ್ ಜಲಸಂಧಿಯ ನಕ್ಷೆಯನ್ನು ಹಂಚಿಕೊಂಡು, ಜಲಮಾರ್ಗದಲ್ಲಿ ಇರಾನ್ ಹಾಕಿದ್ದ ಎನ್ನಲಾದ ಎಲ್ಲಾ ಸಮುದ್ರ ಮೈನ್ಗಳನ್ನು ತೆರವುಗೊಳಿಸಲಾಗಿದೆ ಅಥವಾ ಸ್ಫೋಟಿಸಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಇರಾನ್ ಜೊತೆ ಯಾವುದೇ ಮಾತುಕತೆ ಅಥವಾ ಸಂಭಾಷಣೆ ನಡೆಯುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೋರ್ಮುಜ್ನಲ್ಲಿ ಹೆಚ್ಚಿದ ಹಡಗು ಸಂಚಾರ
ಹೋರ್ಮುಜ್ ಜಲಸಂಧಿ ಜಾಗತಿಕ ಇಂಧನ ಪೂರೈಕೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ವಿಶ್ವದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಐದನೇ ಒಂದು ಭಾಗ ಈ ಮಾರ್ಗದ ಮೂಲಕ ಸಾಗುತ್ತದೆ.
ಸಮುದ್ರ ಸಂಚಾರದ ಅಂಕಿ-ಅಂಶಗಳ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಹೋರ್ಮುಜ್ ಮೂಲಕ ಹಡಗುಗಳ ಸಂಚಾರ ಹೆಚ್ಚಾಗಿದೆ. ಹಲವು ಹಡಗುಗಳು ಇರಾನ್ ವಿರೋಧಿಸುತ್ತಿರುವ ಒಮಾನ್ ಮಾರ್ಗವನ್ನು ಬಳಸುತ್ತಿವೆ ಎನ್ನಲಾಗಿದೆ. ಅಮೆರಿಕದ ಭದ್ರತಾ ಭರವಸೆಯ ಹಿನ್ನೆಲೆಯಲ್ಲಿ ಹಡಗುಗಳು ಈ ಮಾರ್ಗವನ್ನು ಆಯ್ಕೆ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ.
ಇರಾನ್ನ ಹಿಡಿತಕ್ಕೆ ಸವಾಲು?
ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಇರಾನ್ ತನ್ನ ಪ್ರಮುಖ ತಂತ್ರಗಾರಿಕಾ ಬಲವೆಂದು ಪರಿಗಣಿಸುತ್ತದೆ. ಆದರೆ ಇತ್ತೀಚಿನ ಹಡಗು ಸಂಚಾರದ ಬೆಳವಣಿಗೆಗಳು ಇರಾನ್ನ ಪ್ರಭಾವಕ್ಕೆ ಸವಾಲು ಎದುರಾಗಿರುವ ಸೂಚನೆ ನೀಡುತ್ತಿವೆ.
ಸೌದಿ ಅರೇಬಿಯಾ, ಕುವೈತ್ ಮತ್ತು ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ತೈಲ ಸಾಗಿಸುವ ದೊಡ್ಡ ಟ್ಯಾಂಕರ್ಗಳು ಅಪಾಯಕಾರಿ ಪ್ರದೇಶವನ್ನು ತಪ್ಪಿಸಲು ಹೊಸ ತಂತ್ರಗಳನ್ನು ಅನುಸರಿಸುತ್ತಿವೆ. ಕೆಲವು ಹಡಗುಗಳು ತಮ್ಮ ಟ್ರಾನ್ಸ್ಪಾಂಡರ್ಗಳನ್ನು ಸ್ಥಗಿತಗೊಳಿಸಿ ಸಂಚರಿಸುತ್ತಿರುವುದರಿಂದ ಇಂತಹ ಸಾಗಣೆಯನ್ನು ‘ಡಾರ್ಕ್ ಶಿಪ್ಪಿಂಗ್’ ಎಂದು ಕರೆಯಲಾಗುತ್ತಿದೆ.
ಈ ಬೆಳವಣಿಗೆಗಳ ನಡುವೆ ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಯ ಉಪಸ್ಥಿತಿ ಹಾಗೂ ಹಡಗು ಸಂಚಾರದ ಹೆಚ್ಚಳ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇರಾನ್-ಅಮೆರಿಕ ಸಂಘರ್ಷ ಮತ್ತಷ್ಟು ತೀವ್ರವಾದರೆ ತೈಲ ಬೆಲೆ ಮತ್ತು ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಆತಂಕವೂ ಮುಂದುವರಿದಿದೆ.
ದೇಶ
Dog Mask Protest ನಾಯಿ ಕಾಟಕ್ಕೆ ಜನ ಹೈರಾಣ! ಜಿಲ್ಲಾಧಿಕಾರಿ ಕಚೇರಿಗೆ ನಾಯಿ ವೇಷದಲ್ಲಿ ಬಂದ ವ್ಯಕ್ತಿ, ವಿಡಿಯೋ ವೈರಲ್
ಮಧ್ಯಪ್ರದೇಶ: Dog Mask Protest ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ವಿರುದ್ಧ ಜನರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ವ್ಯಕ್ತಿಯೊಬ್ಬರು ನಾಯಿ ಮುಖವಾಡ ಧರಿಸಿ ಆಗಮಿಸಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಾಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ವಾರದ ಅಹವಾಲು ಸಭೆಗೆ ನಾಯಿ ವೇಷಧಾರಿ ವ್ಯಕ್ತಿ ಆಗಮಿಸಿದ್ದರು. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ದೀಪಕ್ ರಾಥೋಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನಾಯಿ ವೇಷದಲ್ಲಿದ್ದ ವ್ಯಕ್ತಿ ಸಾರ್ವಜನಿಕರ ಪರವಾಗಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ನಾಯಿ ವೇಷದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ!
ಬೀದಿ ನಾಯಿಗಳ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತರಲು ಪ್ರತಿಭಟನಾಕಾರರು ಈ ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ. ನಾಯಿ ವೇಷದಲ್ಲಿ ವ್ಯಕ್ತಿಯೊಬ್ಬರು ಅಹವಾಲು ಸಭೆಗೆ ಬಂದಿದ್ದನ್ನು ಕಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಂತಾನಹರಣ ಕಾರ್ಯಕ್ರಮದ ಮೇಲೂ ಆರೋಪ
ಇದೇ ವೇಳೆ, ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಸಂತಾನಹರಣ ಕಾರ್ಯಕ್ರಮದಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನಾಯಿಗಳ ಸಂತಾನಹರಣಕ್ಕಾಗಿ ಸುಮಾರು ₹40 ಲಕ್ಷ ಹಣ ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ ಇದೇ ಅವಧಿಯಲ್ಲಿ ನಗರದಲ್ಲಿ 13,225 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ ಎಂದು ಅಂಕಿ-ಅಂಶಗಳನ್ನು ಉಲ್ಲೇಖಿಸಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.
ಜನರ ಸುರಕ್ಷತೆಗೆ ಕ್ರಮಕ್ಕೆ ಒತ್ತಾಯ
ಬೀದಿ ನಾಯಿಗಳ ನಿಯಂತ್ರಣದ ಹೆಸರಿನಲ್ಲಿ ಹಣ ಖರ್ಚು ಮಾಡುತ್ತಿದ್ದರೂ ಸಮಸ್ಯೆ ಕಡಿಮೆಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ನಾಯಿ ಕಡಿತ ಪ್ರಕರಣಗಳಿಂದ ಸಾರ್ವಜನಿಕರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿದ್ದು, ನಗರದಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತವನ್ನು ಒತ್ತಾಯಿಸಲಾಗಿದೆ.
ಖಾಂಡ್ವಾದಲ್ಲಿ ನಡೆದ ಈ Dog Mask Protest ಇದೀಗ ಬೀದಿ ನಾಯಿಗಳ ಸಮಸ್ಯೆ ಹಾಗೂ ಸಂತಾನಹರಣ ಯೋಜನೆಯ ಅನುಷ್ಠಾನದ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ.
ರಾಜ್ಯ
Tamil Nadu CM ವಿಜಯ್-ತ್ರಿಷಾ ಭೇಟಿಗೆ ರಾಜಕೀಯ ಬಣ್ಣ! Murasoli ಸಂಪಾದಕೀಯದಿಂದ ತಮಿಳುನಾಡಿನಲ್ಲಿ ಹೊಸ ವಿವಾದ
ಚೆನ್ನೈ: Tamil Nadu ಆಡಳಿತಾರೂಢ ಡಿಎಂಕೆ ಪಕ್ಷದ ಮುಖವಾಣಿ ‘ಮುರಸೋಳಿ’ ಪತ್ರಿಕೆಯ ಮಂಗಳವಾರದ ಸಂಪಾದಕೀಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ಪ್ರಸಿದ್ಧ ನಟಿ ತ್ರಿಷಾ ಕೃಷ್ಣನ್ ಅವರ ನಡೆ-ನುಡಿಗಳನ್ನು ತೀವ್ರವಾಗಿ ಟೀಕಿಸಲಾಗಿದೆ. ಫೋರ್ಟ್ ಸೇಂಟ್ ಜಾರ್ಜ್ನಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಮುಂಚೂಣಿ ಸಾಲಿನಲ್ಲಿ ಕುಳಿತಿದ್ದ ನಟಿ ತ್ರಿಷಾ ಹಾಗೂ ಸಿಎಂ ವಿಜಯ್ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದನ್ನು ಲೇಖನದಲ್ಲಿ ‘ಅಶ್ಲೀಲತೆ’ ಎಂದು ಬಣ್ಣಿಸಲಾಗಿದೆ.
ಸಿನಿಮಾ ರಂಗದವರಿಗೆ ಆಡಳಿತಾತ್ಮಕ ಹುದ್ದೆ ನೀಡಿದ್ದಕ್ಕೆ ಆಕ್ಷೇಪ ಮುರಸೋಳಿ ಲೇಖನದಲ್ಲಿ ಸಿಎಂ ವಿಜಯ್ ಅವರ ಆಡಳಿತ ವೈಖರಿಯನ್ನೂ ಪ್ರಶ್ನಿಸಲಾಗಿದೆ. ವಿಜಯ್ ಅವರು ತಮ್ಮ ಸಿನಿಮಾಗಳಿಗೆ ಹಣ ಹೂಡಿದ ನಿರ್ಮಾಪಕರಿಗೆ ಉನ್ನತ ಸರ್ಕಾರಿ ಹುದ್ದೆಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ‘ಜನ ನಾಯಕನ್’ ನಿರ್ಮಾಪಕ ವೆಂಕಟ ನಾರಾಯಣ್ ಅವರನ್ನು ದೆಹಲಿಯ ವಿಶೇಷ ಪ್ರತಿನಿಧಿಯಾಗಿ, ‘ಬಿಗಿಲ್’ ಮತ್ತು ‘ಗೋಟ್’ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ದೇವಸ್ಥಾನಗಳ ಟ್ರಸ್ಟಿಗಳ ಆಯ್ಕೆ ಸಮಿತಿಗೆ ಹಾಗೂ ‘ಲಿಯೋ’ ನಿರ್ಮಾಪಕ ಜಗದೀಶ್ ಪಳನಿಸ್ವಾಮಿ ಅವರನ್ನು ಸಿಎಂ ಅವರ ವೈಯಕ್ತಿಕ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಪತ್ರಿಕೆ ದೂರಿದೆ.
ಕಾನೂನು ಸುವ್ಯವಸ್ಥೆ ವೈಫಲ್ಯದ ಆರೋಪ ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಾದಕದ್ರವ್ಯ ಜಾಲದ ಹಾವಳಿ ಹೆಚ್ಚಾಗಿದೆ ಎಂದು ಹೇಳಿರುವ ಲೇಖನವು, ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದೆ. ಈ ಘಟನೆ ಕುರಿತು ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು ಮೌನ ವಹಿಸಿದ್ದಾರೆ ಎಂದು ಲೇಖನದಲ್ಲಿ ಟೀಕಿಸಲಾಗಿದೆ.
ಡಿಎಂಕೆ ವಿರುದ್ಧ ಬಿಜೆಪಿ ಕೆಂಡ ಮುರಸೋಳಿ ಲೇಖನದ ಹೇಳಿಕೆಗಳನ್ನು ತಮಿಳುನಾಡು ಬಿಜೆಪಿ ಘಟಕ ತೀವ್ರವಾಗಿ ಖಂಡಿಸಿದೆ. ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಮಾತನಾಡಿ, “ನಟಿಯೊಬ್ಬರು ಮುಂಚೂಣಿ ಸಾಲಿನಲ್ಲಿ ಕುಳಿತುಕೊಳ್ಳುವುದು ಅಶ್ಲೀಲವೇ? ನಟಿಯಾಗುವುದು ಅಪರಾಧವೇ? ಮಾಜಿ ಸಿಎಂ ಜಯಲಲಿತಾ ಅವರೂ ನಟಿಯಾಗಿದ್ದು, ಅವರಿಂದ ಅನುಭವಿಸಿದ ಸತತ ಸೋಲಿನ ಭಯ ಹಾಗೂ ದ್ವೇಷ ಡಿಎಂಕೆ ಹಾಗೂ ಮುರಸೋಳಿಗೆ ಇನ್ನೂ ಬಿಟ್ಟಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
-
ಸಿನಿಮಾ3 ಗಂಟೆಗಳು ago‘Toxic’ ಅಬ್ಬರ ಶುರು! ವಿಶ್ವದಾದ್ಯಂತ 12,000+ ಸ್ಕ್ರೀನ್ಗಳಲ್ಲಿ Yash ಸಿನಿಮಾ, ಇಲ್ಲಿದೆ ರಿಲೀಸ್ ಡೇಟ್
-
ಬೆಂಗಳೂರು7 ಗಂಟೆಗಳು agoVaramahalakshmi ಹಬ್ಬಕ್ಕೆ 3 ದಿನ ಬಾಕಿ: ಕನಕಾಂಬರ ಕೆ.ಜಿ.ಗೆ ₹3,000! ಬೆಂಗಳೂರಿನಲ್ಲಿ ಹೂ-ಹಣ್ಣಿನ ಬೆಲೆ ಶಾಕ್
-
ಬೆಂಗಳೂರು3 ಗಂಟೆಗಳು agoಶ್ರಾವಣ ಶುಕ್ರವಾರ ವಿಶೇಷ ಪೂಜೆ: ಯಶವಂತಪುರ MLA S T Somashekhar ಕಚೇರಿಯಲ್ಲಿ ಭಕ್ತಿಭಾವದ ಸಂಭ್ರಮ
-
ದೇಶ2 ಗಂಟೆಗಳು agoBihar ‘ಸರ್ಕಾರ ತಲೆಬಾಗಲೇಬೇಕು’: ವಾಟರ್ ಕ್ಯಾನನ್ ಪ್ರಯೋಗಕ್ಕೂ ಜಗ್ಗದ Tejashwi Yadav
-
ಅಪರಾಧ5 ಗಂಟೆಗಳು agoAAPಗೆ ಬಿಗ್ ಶಾಕ್: ಸತ್ಯೇಂದ್ರ ಜೈನ್ ಮತ್ತೆ ಬಂಧನ; ₹1.52 ಕೋಟಿ ಲಂಚದ ಆರೋಪ
-
ಬೆಂಗಳೂರು7 ಗಂಟೆಗಳು agoCM DK Shivakumar ಖಡಕ್ ಸೂಚನೆ: ನಾಗೇಂದ್ರರನ್ನು ಬಿಡಬೇಡಿ, ಬಿಜೆಪಿಗೆ ತಿರುಗೇಟು ನೀಡಿ!
-
ದೇಶ2 ಗಂಟೆಗಳು agoJio Prime Membership ಮತ್ತೆ ಲಾಂಚ್! ₹300 ಕೊಟ್ಟರೆ 1 ವರ್ಷದ ಬೆಲೆ ಗ್ಯಾರಂಟಿ; ₹600 ಕ್ಯಾಶ್ಬ್ಯಾಕ್ ವೋಚರ್
-
ದೇಶ2 ಗಂಟೆಗಳು ago‘ನಾನು ಯಾರೆಂದು ಅವರಿಗೆ ಗೊತ್ತಿರಲಿಲ್ಲ…’: ಕನ್ನಡಿಗರ ಮಾನವೀಯತೆ ಬಗ್ಗೆ Akkineni Nagarjuna ಮಾತು ವೈರಲ್
