ರಾಜ್ಯ
ಡಿ-ಬಾಸ್’ ಕಾಟೇರ ಸಿನಿಮಾಗೆ 4 ನೋಟಿಸ್, ಕೋಟಿ ಕೋಟಿ ದುಡಿದಿದ್ದೇ ಸಂಕಷ್ಟ ತಂದಿದೆಯಾ?
ಡಿ-ಬಾಸ್’ ದರ್ಶನ್ ಏನನ್ನೇ ಮಾಡಿದ್ರೂ ದೊಡ್ಡ ಸುದ್ದಿಯಾಗುತ್ತೆ, ಈ ನಟನ ಸಿನಿಮಾಗಳು ನೂರಾರು ಕೋಟಿ ದುಡ್ಡು ಮಾಡುತ್ತವೆ. ಹೀಗೆ ನಟ ದರ್ಶನ್ ಅವರ ಅಬ್ಬರ ಕಂಡು ಈಗ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಶೇಕ್ ಆಗಿದೆ. ಹೀಗಿದ್ದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ‘ಕಾಟೇರ’ಗೆ ಒಟ್ಟಾರೆ 4 ನೋಟಿಸ್ ಬಂದಿದೆಯಂತೆ.
ದಾಸ ದರ್ಶನ್ ಅವರು ಕಾಟೇರ ಸಿನಿಮಾ ಮೂಲಕ ಅಬ್ಬರಿಸಿದ್ದು ಬಾಕ್ಸ್ ಆಫಿಸ್ನಲ್ಲೂ ಅಬ್ಬರ ತೋರಿಸಿದ್ದಾರೆ. ಈ ಸಮಯದಲ್ಲಿ ಕಾಟೇರ ಸಿನಿಮಾ ಎಷ್ಟು ದುಡ್ಡು ಮಾಡಿದೆ? ಅನ್ನೋ ಬಗ್ಗೆ ಚರ್ಚೆಯೂ ಜೋರಾಗಿದೆ. ಅದ್ರಲ್ಲೂ ಕಾಟೇರ ಸಿನಿಮಾ 200 ಕೋಟಿ ದುಡ್ಡನ್ನ ಮಾಡಿದೆ 250 ಕೋಟಿ ರೀಚ್ ಆಗುತ್ತೆ ಅಂತೆಲ್ಲಾ ಪೋಸ್ಟ್ ಹರಿದಾಡಿವೆ. ಆದರೆ ಈಗ ಅಂತಹ ಹೇಳಿಕೆ ಸಂಬಂಧ ‘ಡಿ-ಬಾಸ್’ ಕಾಟೇರ ಸಿನಿಮಾಗೆ 4 ನೋಟಿಸ್ ಬಂದಿದೆಯಂತೆ! ಯಾಕೆ ಗೊತ್ತಾ? ನೋಟಿಸ್ ಕೊಟ್ಟಿದ್ದು ಯಾರು ಗೊತ್ತಾ? ಬನ್ನಿ ತಿಳಿಯೋಣ, 4 ನೋಟಿಸ್ ಬಂದಿದ್ದು ಯಾಕೆ? ಕನ್ನಡಿಗರ ಸಿನಿಮಾ ಕಾಟೇರ ಗಲ್ಲಾಪೆಟ್ಟಿಗೆಯ ತುಂಬಾ ಕಾಸು ಮಾಡಿದೆ, ಕಥೆ ಮತ್ತು ಮೇಕಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲೂ ಕಾಟೇರ ಸಕ್ಸಸ್ ಕಂಡಿದೆ. ಹೀಗೆ ಕಾಸು ಮಾಡಿ ಅಭಿಮಾನಿಗಳ ಮನಸ್ಸು ಕೂಡ ಗೆದ್ದಿರುವ ಕಾಟೇರ ಬಗ್ಗೆ ದಿನಕ್ಕೊಂದು ಸುದ್ದಿಗಳು ಓಡಾಡುತ್ತಿವೆ. ಅದರಲ್ಲೂ ‘ಕಾಟೇರ’ ಸಿನಿಮಾ ಬಾಕ್ಸ್ ಆಫಿಸ್ನಲ್ಲಿ ನೂರಾರು ಕೋಟಿ ದುಡಿದು, ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತಿದ್ದಾರೆ ಕೆಲವರು. ಹೀಗೆ ಸುದ್ದಿ ಹಬ್ಬಿಸುವವರ ವಿರುದ್ಧ ಕಾಟೇರ ನಿರ್ಮಾಪಕರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗೇ ಇಂತಹ ಸುದ್ದಿಗಳಿಂದ ತಮಗೆ 4 ನೋಟಿಸ್ ಬಂದಿವೆ ಎಂದಿದ್ದಾರೆ.
200 ಕೋಟಿ ರೂಪಾಯಿ ಗಳಿಸಿಲ್ವಾ? ಹೌದು ‘ಕಾಟೇರ’ ಸಿನಿಮಾ 200 ಕೋಟಿ ರೂಪಾಯಿ ದುಡಿದಿದೆ ಎಂಬ ವದಂತಿ ನಡುವೆ ತಮಗೆ 4 ನೋಟಿಸ್ ಬಂದಿವೆ ಎಂದಿದ್ದಾರೆ ಕಾಟೇರ ಸಿನಿಮಾದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಹೀಗೆ ಕಾಟೇರ ಸಿನಿಮಾ ಬಗ್ಗೆ ಕೆಲವರು ಏನೇನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಈಗ, ಅವರ ಇಂಥ ಸುದ್ದಿಗಳಿಂದಲೇ ನನಗೆ ಸಮಸ್ಯೆ ಆಗಿದೆ. ಇಡಿ, ಐಟಿ ಹೀಗೆ ಸಖತ್ ನೋಟಿಸ್ ಬಂದಿವೆ. ನಾನು ಹೀಗೆ ಸುದ್ದಿ ಹಬ್ಬಿಸಿದ್ದವರ ನಂಬರ್ ಕೊಟ್ಟಿದ್ದೀನಿ ಅಂತಾ ಹೇಳಿದ್ದಾರೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಈ ಮೂಲಕ ಕಾಟೇರ ಸಿನಿಮಾ ದುಡಿದಿರುವ ಹಣ ಎಷ್ಟು? ಅನ್ನೋ ಬಗ್ಗೆ ಸುಳ್ಳು ಸುದ್ದಿ ಓಡಾಡುತ್ತಿದೆ ಅಂತಿದ್ದಾರೆ.
50 ಡೇಸ್ ಕಂಪ್ಲೀಟ್ ಆಯ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಹೀಗಾಗಿಯೆ ದರ್ಶನ್ ಅವರ ಸಿನಿಮಾ ನೋಡಲು ಬೇರೆ ರಾಜ್ಯದಲ್ಲೂ ಫ್ಯಾನ್ಸ್ ಕಾಯುತ್ತಾರೆ. ಇದೇ ರೀತಿ ಇದೀಗ ‘ಕಾಟೇರ’ ಸಿನಿಮಾ ಭರ್ಜರಿ ಅಬ್ಬರ ತೋರಲು ಶುರು ಮಾಡಿದೆ. ಇದೀಗ ಕಾಟೇರ ಬಿಡುಗಡೆ ಆಗಿ ಒಟ್ಟಾರೆ 50 ದಿನ ಕಳೆದಿದೆ. ಹೀಗೆ ಕಾಟೇರ ಸಿನಿಮಾ 50 ಡೇಸ್ ಕಂಪ್ಲೀಟ್ ಮಾಡಿದ ಕಾರಣಕ್ಕಾಗಿ ಇಂದು ಭರ್ಜರಿಯಾಗಿ ಸಂಭ್ರಮ ಆಚರಣೆ ಮಾಡಲಾಯಿತು.
ಬೆಂಗಳೂರಲ್ಲಿ ಭರ್ಜರಿ ಸೆಲೆಬ್ರೇಷನ್ ಡಿ-ಬಾಸ್ ದರ್ಶನ್ ಅಭಿನಯ ಮಾಡಿದ ಸಿನಿಮಾ ಕಾಟೇರ ಬರೋಬ್ಬರಿ 50 ದಿನ ಯಶಸ್ವಿಯಾಗಿ ಪೂರೈಸಿದ್ದು. ಕಾಟೇರ 50 ದಿನ ಪೂರೈಸಿದ ಕಾರಣಕ್ಕೆ ಇಂದು, ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಪ್ರಸನ್ನ ಸಿನಿಮಾ ಮಂದಿರದಲ್ಲಿ ಕಾಟೇರ ಸಿನಿಮಾದ 50ನೇ ದಿನದ, ಸಂಭ್ರಮಾಚರಣೆ ನಡೆಯಿತು. ಸಂಭ್ರಮ ನಡೆಯುವಾಗ ದರ್ಶನ್ ಅವರು, ತಮ್ಮ ಸೆಲೆಬ್ರಿಟಿಸ್ ಅಂದ್ರೆ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ್ರು. ಹಾಗೆ ಚಿತ್ರದ ನಟರು ಮತ್ತು ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಖುಷಿಪಟ್ಟರು.
ದೇಶ
ದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ
ದೇವನಹಳ್ಳಿ, ಫೆಬ್ರವರಿ 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದಾರೆ.
ಹೊಸಕೋಟೆ–ದಾಬಸ್ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್, ಬೈಕ್ ಮತ್ತು ಎಕ್ಸ್ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅತಿವೇಗವೇ ಕಾರಣ?
ಪ್ರಾಥಮಿಕ ತನಿಖೆಯ ಪ್ರಕಾರ, ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಕ್ಸ್ಯುವಿ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ಕ್ಯಾಂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ತಿಳಿದುಬಂದಿದೆ.
ಪೊಲೀಸ್ ಪರಿಶೀಲನೆ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಮೃತದೇಹಗಳನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
‘ಅವೈಜ್ಞಾನಿಕ ರಸ್ತೆ’ ಆರೋಪ
ಅಪಘಾತ ನಡೆದ ಸ್ಥಳದ ರಸ್ತೆ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಸಾಧುಪ್ಪನಹಳ್ಳಿಯಿಂದ ಕಮಳಿಪುರ ಬ್ರಿಡ್ಜ್ ವರೆಗಿನ ಹೆದ್ದಾರಿ ಸರಿಯಾದ ವಿನ್ಯಾಸ ಹೊಂದಿಲ್ಲ ಎಂದು ಅವರು ದೂರಿದ್ದಾರೆ.
ಸ್ಥಳೀಯ ನಿವಾಸಿ ಮಂಜುನಾಥ್ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದೆ ಎಂದು ಆರೋಪಿಸಿದ್ದಾರೆ. ಕಾಮಗಾರಿ ಸಂದರ್ಭದಲ್ಲೇ ಎಂಜಿನಿಯರ್ ಒಬ್ಬರು ವಿನ್ಯಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಅದನ್ನು ಪರಿಗಣಿಸಲಿಲ್ಲ ಎಂದು ಹೇಳಿದ್ದಾರೆ.
ಸರ್ವೀಸ್ ರಸ್ತೆಗಳು ಕನಿಷ್ಠ 18 ಅಡಿ ಅಗಲ ಇರಬೇಕಿದ್ದರೂ, ಕೆಲವೆಡೆ ಮೂರೂವರೆ ಅಥವಾ ಎರಡೂವರೆ ಅಡಿ ಮಾತ್ರ ಇರುವುದಾಗಿ ಅವರು ತಿಳಿಸಿದ್ದಾರೆ. 2010ರಲ್ಲಿ ರೈತರು ಜಮೀನುಗಳನ್ನು ಹೆದ್ದಾರಿ ಯೋಜನೆಗೆ ನೀಡಿದ್ದರೂ, ಸಮರ್ಪಕ ಪರಿಹಾರವೂ ಸಿಗಲಿಲ್ಲ ಮತ್ತು ರಸ್ತೆ ಗುಣಮಟ್ಟವೂ ಸಮರ್ಪಕವಾಗಿಲ್ಲ ಎಂದು ಆರೋಪಿಸಲಾಗಿದೆ.
ದೇಶ
VALENTINES DAY : ಚಿಕ್ಕಬಳ್ಳಾಪುರದಲ್ಲಿ ರೆಡ್ ರೋಸ್ಗೆ ಭಾರೀ ಬೇಡಿಕೆ
ಚಿಕ್ಕಬಳ್ಳಾಪುರ: ಕೆಂಪು ಗುಲಾಬಿ ಕಂಡರೆ ಯಾರಿಗೇನು ಇಷ್ಟವಾಗಲ್ಲ ಹೇಳಿ! ಫೆಬ್ರವರಿ 14ರ Valentine’s Day ಸಮೀಪಿಸುತ್ತಿದ್ದಂತೆ ರೆಡ್ ರೋಸ್ಗಳಿಗೆ ಭಾರೀ ಬೇಡಿಕೆ ಏರಿಕೆಯಾಗಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇಮಿಗಳು ಮೊದಲು ಆಯ್ಕೆಮಾಡುವ ಹೂವೇ ಕೆಂಪು ಗುಲಾಬಿ. ಇದೇ ಕಾರಣಕ್ಕೆ ಈಗ ಮಾರುಕಟ್ಟೆಯಲ್ಲಿ ರೆಡ್ ರೋಸ್ಗಳ ದರ ಗಗನಕ್ಕೇರಿದೆ.
ಪ್ರತಿ ಹೂವಿಗೆ ರೂ.20ರಷ್ಟು ನೀಡಿ ಹೂ ವ್ಯಾಪಾರಿಗಳು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ರೆಡ್ ರೋಸ್ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ರೈತ ಕೃಷ್ಣರೆಡ್ಡಿಗೆ ಲಾಭದ ಹಬ್ಬ
ಚಿಂತಾಮಣಿ ತಾಲೂಕಿನ ಆನೂರು ಹೊಸಕೋಟೆ ಗ್ರಾಮದ ರೈತ ಕೃಷ್ಣರೆಡ್ಡಿ ಅವರು 4 ಎಕರೆ ಪಾಲಿಹೌಸ್ನಲ್ಲಿ 16 ಬಣ್ಣಗಳ ಗುಲಾಬಿ ಬೆಳೆದಿದ್ದಾರೆ. ಆದರೆ ಪ್ರೇಮಿಗಳ ದಿನದ ಪ್ರಯುಕ್ತ ಕೆಂಪು ಗುಲಾಬಿಗೆ ಮಾತ್ರ ಭಾರೀ ಬೇಡಿಕೆ ಬಂದಿದೆ.
ಉದ್ದ ಕಾಂಡ, ಹೊಳಪು, ವೈಯ್ಯಾರ ಮತ್ತು ಮುಳ್ಳು ಕಡಿಮೆ ಇರುವ ಕೆಂಪು ಗುಲಾಬಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.
ದೇಶ–ವಿದೇಶಗಳಲ್ಲಿ ಬೇಡಿಕೆ
ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಬಿಗೆ ದೇಶ–ವಿದೇಶಗಳಲ್ಲಿ ವಿಶೇಷ ಬೇಡಿಕೆ ಇದೆ. ಫೆಬ್ರವರಿ ತಿಂಗಳಲ್ಲಿ ವಿಶೇಷವಾಗಿ ಪ್ರೇಮಿಗಳ ವಾರದ ಸಂದರ್ಭದಲ್ಲಿ ರಫ್ತು ಪ್ರಮಾಣ ಹೆಚ್ಚುತ್ತದೆ.
ಪ್ರೇಮಿಗಳ ವಾರದಲ್ಲಿ ಆಚರಿಸಲಾಗುವ ಪ್ರಮುಖ ದಿನಗಳು:
- Rose Day
- Propose Day
- Teddy Day
- Chocolate Day
- Promise Day
- Hug Day
- Kiss Day
ಈ ಎಲ್ಲಾ ದಿನಗಳಲ್ಲಿ ಪ್ರೀತಿ ವ್ಯಕ್ತಪಡಿಸಲು ರೆಡ್ ರೋಸ್ ಮುಖ್ಯ ಪಾತ್ರವಹಿಸುತ್ತದೆ.
ರೈತರಿಗೆ ಸಿಹಿ ಸುದ್ದಿ
ವರ್ಷಪೂರ್ತಿ ಹೂ ಬೆಳೆದರೂ, ಫೆಬ್ರವರಿ ತಿಂಗಳು ರೈತರಿಗೆ ವಿಶೇಷ ಲಾಭ ತರುತ್ತದೆ. ಪ್ರೇಮಿಗಳ ದಿನದ ಸಂಭ್ರಮದಲ್ಲಿ ರೆಡ್ ರೋಸ್ ಬೆಳೆಗಾರರಿಗೆ ಉತ್ತಮ ಆದಾಯ ಸಿಗುತ್ತಿದ್ದು, ಗ್ರಾಮೀಣ ಆರ್ಥಿಕತೆಗೆ ಇದು ಸಹಕಾರಿಯಾಗುತ್ತಿದೆ.
ದೇಶ
BMSCE ವಿಜ್ಞಾನ ಪ್ರದರ್ಶನ: 14 ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ 60+ ಮಾದರಿ ಪ್ರದರ್ಶನ
ಬೆಂಗಳೂರು: BMS College of Engineering ವತಿಯಿಂದ ಯುವಕ ಸಂಘದ ಕ್ಯಾಂಪಸ್–2 ಕಮ್ಯೂನಿಟಿ ಯೋಜನೆ ಅಡಿಯಲ್ಲಿ ವಿಜ್ಞಾನ ಮಾದರಿಗಳ ಅಂತಿಮ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಕಾಲೇಜು ಆವರಣದಲ್ಲಿ ಭರ್ಜರಿಯಾಗಿ ಆಯೋಜಿಸಲಾಯಿತು.
ಕಳೆದ 8 ತಿಂಗಳುಗಳಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಸರ, ವಿಜ್ಞಾನ, ಜೀವನ ಕೌಶಲ್ಯ ಮತ್ತು ಮಾನಸಿಕ ಸಮಾಲೋಚನೆ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗಿತ್ತು. ತರಬೇತಿಯ ಬಳಿಕ ಆಯ್ಕೆಯಾದ ಪ್ರಾಜೆಕ್ಟ್ಗಳನ್ನು ಈ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.
60ಕ್ಕೂ ಹೆಚ್ಚು ವಿಜ್ಞಾನ ಮಾದರಿ ಪ್ರದರ್ಶನ
14 ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, 60ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಮತ್ತು ನವೀನ ಆಲೋಚನೆಗಳು ವಿಶೇಷವಾಗಿ ಗಮನಸೆಳೆದವು.
🎓 ಗಣ್ಯರ ಉಪಸ್ಥಿತಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎನ್ಎಸ್ಎಸ್ ರಾಜ್ಯ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ:
- ಡಾ. ಭೀಮಶಾ ಆರ್ಯ – ಪ್ರಾಂಶುಪಾಲರು
- ಡಾ. ಎಲ್. ರವಿಕುಮಾರ್ – ಉಪ ಪ್ರಾಂಶುಪಾಲರು
- ಡಾ. ಶೇಷಾಚಲಂ – ಉಪ ಪ್ರಾಂಶುಪಾಲರು
- ಡಾ. ಸುಜಾತಾ ಎನ್. – ಯೋಜನಾ ಅಧಿಕಾರಿ
- ಯುವಕ ಸಂಘದ ಸಂಯೋಜಕರು
ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳಿಗೆ ಸೌಲಭ್ಯ
ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಬರವಣಿಗೆ ಪ್ಯಾಡ್ಗಳನ್ನು ವಿತರಿಸಲಾಯಿತು. ಜೊತೆಗೆ ಊಟ ಹಾಗೂ ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ವೈಜ್ಞಾನಿಕ ಚಿಂತನೆಗೆ ಉತ್ತೇಜನ
ಒಟ್ಟಾರೆ, ಈ ವಿಜ್ಞಾನ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ನವೀನತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಶಾಲಾ–ಕಾಲೇಜು ಸಹಯೋಗದ ಉತ್ತಮ ಉದಾಹರಣೆಯಾಗಿ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.
-
ಕ್ರೀಡೆ19 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ24 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ಅಪರಾಧ24 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ21 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ದೇಶ19 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ22 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ದೇಶ19 hours agoಜೈರಾಮ್ ರಮೇಶ್ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”
-
ದೇಶ18 hours agoವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ: “ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ”
