Connect with us

ರಾಜ್ಯ

ಡಿ-ಬಾಸ್’ ಕಾಟೇರ ಸಿನಿಮಾಗೆ 4 ನೋಟಿಸ್, ಕೋಟಿ ಕೋಟಿ ದುಡಿದಿದ್ದೇ ಸಂಕಷ್ಟ ತಂದಿದೆಯಾ?

Published

on

ಡಿ-ಬಾಸ್’ ದರ್ಶನ್ ಏನನ್ನೇ ಮಾಡಿದ್ರೂ ದೊಡ್ಡ ಸುದ್ದಿಯಾಗುತ್ತೆ, ಈ ನಟನ ಸಿನಿಮಾಗಳು ನೂರಾರು ಕೋಟಿ ದುಡ್ಡು ಮಾಡುತ್ತವೆ. ಹೀಗೆ ನಟ ದರ್ಶನ್ ಅವರ ಅಬ್ಬರ ಕಂಡು ಈಗ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಶೇಕ್ ಆಗಿದೆ. ಹೀಗಿದ್ದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ‘ಕಾಟೇರ’ಗೆ ಒಟ್ಟಾರೆ 4 ನೋಟಿಸ್ ಬಂದಿದೆಯಂತೆ.
ದಾಸ ದರ್ಶನ್ ಅವರು ಕಾಟೇರ ಸಿನಿಮಾ ಮೂಲಕ ಅಬ್ಬರಿಸಿದ್ದು ಬಾಕ್ಸ್ ಆಫಿಸ್‌ನಲ್ಲೂ ಅಬ್ಬರ ತೋರಿಸಿದ್ದಾರೆ. ಈ ಸಮಯದಲ್ಲಿ ಕಾಟೇರ ಸಿನಿಮಾ ಎಷ್ಟು ದುಡ್ಡು ಮಾಡಿದೆ? ಅನ್ನೋ ಬಗ್ಗೆ ಚರ್ಚೆಯೂ ಜೋರಾಗಿದೆ. ಅದ್ರಲ್ಲೂ ಕಾಟೇರ ಸಿನಿಮಾ 200 ಕೋಟಿ ದುಡ್ಡನ್ನ ಮಾಡಿದೆ 250 ಕೋಟಿ ರೀಚ್ ಆಗುತ್ತೆ ಅಂತೆಲ್ಲಾ ಪೋಸ್ಟ್‌ ಹರಿದಾಡಿವೆ. ಆದರೆ ಈಗ ಅಂತಹ ಹೇಳಿಕೆ ಸಂಬಂಧ ‘ಡಿ-ಬಾಸ್’ ಕಾಟೇರ ಸಿನಿಮಾಗೆ 4 ನೋಟಿಸ್ ಬಂದಿದೆಯಂತೆ! ಯಾಕೆ ಗೊತ್ತಾ? ನೋಟಿಸ್ ಕೊಟ್ಟಿದ್ದು ಯಾರು ಗೊತ್ತಾ? ಬನ್ನಿ ತಿಳಿಯೋಣ, 4 ನೋಟಿಸ್ ಬಂದಿದ್ದು ಯಾಕೆ? ಕನ್ನಡಿಗರ ಸಿನಿಮಾ ಕಾಟೇರ ಗಲ್ಲಾಪೆಟ್ಟಿಗೆಯ ತುಂಬಾ ಕಾಸು ಮಾಡಿದೆ, ಕಥೆ ಮತ್ತು ಮೇಕಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲೂ ಕಾಟೇರ ಸಕ್ಸಸ್ ಕಂಡಿದೆ. ಹೀಗೆ ಕಾಸು ಮಾಡಿ ಅಭಿಮಾನಿಗಳ ಮನಸ್ಸು ಕೂಡ ಗೆದ್ದಿರುವ ಕಾಟೇರ ಬಗ್ಗೆ ದಿನಕ್ಕೊಂದು ಸುದ್ದಿಗಳು ಓಡಾಡುತ್ತಿವೆ. ಅದರಲ್ಲೂ ‘ಕಾಟೇರ’ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ನೂರಾರು ಕೋಟಿ ದುಡಿದು, ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತಿದ್ದಾರೆ ಕೆಲವರು. ಹೀಗೆ ಸುದ್ದಿ ಹಬ್ಬಿಸುವವರ ವಿರುದ್ಧ ಕಾಟೇರ ನಿರ್ಮಾಪಕರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗೇ ಇಂತಹ ಸುದ್ದಿಗಳಿಂದ ತಮಗೆ 4 ನೋಟಿಸ್ ಬಂದಿವೆ ಎಂದಿದ್ದಾರೆ.
200 ಕೋಟಿ ರೂಪಾಯಿ ಗಳಿಸಿಲ್ವಾ? ಹೌದು ‘ಕಾಟೇರ’ ಸಿನಿಮಾ 200 ಕೋಟಿ ರೂಪಾಯಿ ದುಡಿದಿದೆ ಎಂಬ ವದಂತಿ ನಡುವೆ ತಮಗೆ 4 ನೋಟಿಸ್ ಬಂದಿವೆ ಎಂದಿದ್ದಾರೆ ಕಾಟೇರ ಸಿನಿಮಾದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಹೀಗೆ ಕಾಟೇರ ಸಿನಿಮಾ ಬಗ್ಗೆ ಕೆಲವರು ಏನೇನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಈಗ, ಅವರ ಇಂಥ ಸುದ್ದಿಗಳಿಂದಲೇ ನನಗೆ ಸಮಸ್ಯೆ ಆಗಿದೆ. ಇಡಿ, ಐಟಿ ಹೀಗೆ ಸಖತ್ ನೋಟಿಸ್ ಬಂದಿವೆ. ನಾನು ಹೀಗೆ ಸುದ್ದಿ ಹಬ್ಬಿಸಿದ್ದವರ ನಂಬರ್ ಕೊಟ್ಟಿದ್ದೀನಿ ಅಂತಾ ಹೇಳಿದ್ದಾರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಈ ಮೂಲಕ ಕಾಟೇರ ಸಿನಿಮಾ ದುಡಿದಿರುವ ಹಣ ಎಷ್ಟು? ಅನ್ನೋ ಬಗ್ಗೆ ಸುಳ್ಳು ಸುದ್ದಿ ಓಡಾಡುತ್ತಿದೆ ಅಂತಿದ್ದಾರೆ.
50 ಡೇಸ್ ಕಂಪ್ಲೀಟ್ ಆಯ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಹೀಗಾಗಿಯೆ ದರ್ಶನ್ ಅವರ ಸಿನಿಮಾ ನೋಡಲು ಬೇರೆ ರಾಜ್ಯದಲ್ಲೂ ಫ್ಯಾನ್ಸ್ ಕಾಯುತ್ತಾರೆ. ಇದೇ ರೀತಿ ಇದೀಗ ‘ಕಾಟೇರ’ ಸಿನಿಮಾ ಭರ್ಜರಿ ಅಬ್ಬರ ತೋರಲು ಶುರು ಮಾಡಿದೆ. ಇದೀಗ ಕಾಟೇರ ಬಿಡುಗಡೆ ಆಗಿ ಒಟ್ಟಾರೆ 50 ದಿನ ಕಳೆದಿದೆ. ಹೀಗೆ ಕಾಟೇರ ಸಿನಿಮಾ 50 ಡೇಸ್ ಕಂಪ್ಲೀಟ್ ಮಾಡಿದ ಕಾರಣಕ್ಕಾಗಿ ಇಂದು ಭರ್ಜರಿಯಾಗಿ ಸಂಭ್ರಮ ಆಚರಣೆ ಮಾಡಲಾಯಿತು.
ಬೆಂಗಳೂರಲ್ಲಿ ಭರ್ಜರಿ ಸೆಲೆಬ್ರೇಷನ್ ಡಿ-ಬಾಸ್ ದರ್ಶನ್ ಅಭಿನಯ ಮಾಡಿದ ಸಿನಿಮಾ ಕಾಟೇರ ಬರೋಬ್ಬರಿ 50 ದಿನ ಯಶಸ್ವಿಯಾಗಿ ಪೂರೈಸಿದ್ದು. ಕಾಟೇರ 50 ದಿನ ಪೂರೈಸಿದ ಕಾರಣಕ್ಕೆ ಇಂದು, ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಪ್ರಸನ್ನ ಸಿನಿಮಾ ಮಂದಿರದಲ್ಲಿ ಕಾಟೇರ ಸಿನಿಮಾದ 50ನೇ ದಿನದ, ಸಂಭ್ರಮಾಚರಣೆ ನಡೆಯಿತು. ಸಂಭ್ರಮ ನಡೆಯುವಾಗ ದರ್ಶನ್ ಅವರು, ತಮ್ಮ ಸೆಲೆಬ್ರಿಟಿಸ್ ಅಂದ್ರೆ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ್ರು. ಹಾಗೆ ಚಿತ್ರದ ನಟರು ಮತ್ತು ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಖುಷಿಪಟ್ಟರು.

 

ದೇಶ

ರಾಜ್ಯಸಭೆ ಸ್ಥಾನದಿಂದ ಮೋದಿ ಜೊತೆಗಿನ ಸಂಬಂಧ ಮುಗಿಯಲ್ಲ: ದೇವೇಗೌಡ ಸ್ಪಷ್ಟನೆ

Published

on

ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ತಮ್ಮ ಹಾಗೂ ಪ್ರಧಾನಿ Narendra Modi ಅವರ ನಡುವಿನ ಸಂಬಂಧ ಕೊನೆಗೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ H. D. Deve Gowda ಸ್ಪಷ್ಟಪಡಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದೊಂದಿಗಿನ ತಮ್ಮ ಬಾಂಧವ್ಯ ಜೀವನದ ಕೊನೆಯವರೆಗೂ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಗೌಡರು, ರಾಜ್ಯಸಭೆ ಸದಸ್ಯತ್ವದ ವಿಚಾರವಾಗಿ ತಾವು ಎಂದಿಗೂ ಬಿಜೆಪಿ ಅಥವಾ ಕೇಂದ್ರ ನಾಯಕರ ಬಳಿ ಮನವಿ ಮಾಡಿಲ್ಲ ಎಂದು ತಿಳಿಸಿದರು. “ನನಗೆ ರಾಜ್ಯಸಭೆ ಸದಸ್ಯನಾಗಿ ಮುಂದುವರಿಯಬೇಕೆಂಬ ಆಸೆ ಇದ್ದಿದ್ದರೆ ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿಯಾಗಿ ಮಾತನಾಡಬಹುದಿತ್ತು. ಆದರೆ ನಾನು ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ” ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಮೋದಿ ಅವರೊಂದಿಗೆ ವೈಯಕ್ತಿಕ ಸಂಬಂಧ ಹೊಂದಿರುವುದಾಗಿ ತಿಳಿಸಿದ ಅವರು, ಒಂದು ಸ್ಥಾನಕ್ಕಾಗಿ ಆ ಬಾಂಧವ್ಯವನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದರು. “ಮೋದಿ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕ. ನನ್ನ ಮತ್ತು ಅವರ ನಡುವಿನ ಸಂಬಂಧ ರಾಜಕೀಯವನ್ನು ಮೀರಿದೆ” ಎಂದು ಹೇಳಿದರು.

ಇದೇ ವೇಳೆ, ತಮ್ಮ ಪಕ್ಷ ಎನ್‌ಡಿಎ ಮೈತ್ರಿಕೂಟದಲ್ಲೇ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದ ದೇವೇಗೌಡರು, ಕೇಂದ್ರ ಸಚಿವರಾಗಿರುವ H. D. Kumaraswamy ತಮ್ಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ ಎಂದರು.

ಪಕ್ಷ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಮುಂದೆಯೂ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಆರೋಗ್ಯ ಸಮಸ್ಯೆಗಳ ನಡುವೆಯೂ ದೇಶ ಮತ್ತು ರಾಜ್ಯದ ಹಿತಾಸಕ್ತಿಯ ವಿಚಾರಗಳಲ್ಲಿ ಸಕ್ರಿಯವಾಗಿರುವುದಾಗಿ ಹೇಳಿದರು. ಕಾಂಗ್ರೆಸ್ ಟೀಕೆಗಳಿಗೆ ಈ ಮೂಲಕ ದೇವೇಗೌಡರು ಸ್ಪಷ್ಟ ಉತ್ತರ ನೀಡಿದ್ದಾರೆ.

Continue Reading

ದೇಶ

ಖ್ಯಾತ ನಿರ್ದೇಶಕ ಭಾರತಿರಾಜ ಇನ್ನಿಲ್ಲ: ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟ

Published

on

ಚೆನ್ನೈ: ತಮಿಳು ಚಿತ್ರರಂಗದ ದಿಗ್ಗಜ, ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಹಾಗೂ ನಟ Bharathiraja ಇಂದು (ಜೂನ್ 10) ವಿಧಿವಶರಾಗಿದ್ದಾರೆ. ಅವರು ತಮ್ಮ 84ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು, ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನರಾಗಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನು ತೆರೆಗೆ ತಂದ ನಿರ್ದೇಶಕರಾಗಿ ಭಾರತಿರಾಜ ಅವರು ವಿಶಿಷ್ಟ ಸ್ಥಾನ ಪಡೆದಿದ್ದರು. ಅವರ ನಿರ್ದೇಶನದ ಅನೇಕ ಚಿತ್ರಗಳು ತಮಿಳು ಸಿನೆಮಾಗೆ ಹೊಸ ದಿಕ್ಕು ನೀಡಿದವು. ಕಥನಶೈಲಿ ಮತ್ತು ಸಾಮಾಜಿಕ ವಿಷಯಗಳ ಪ್ರಾತಿನಿಧ್ಯಕ್ಕಾಗಿ ಅವರು ಚಿತ್ರರಂಗದಲ್ಲಿ ಪ್ರಖ್ಯಾತರಾಗಿದ್ದರು.

ತಮಿಳು ಚಿತ್ರರಂಗದ ಜೊತೆಗೆ ಭಾರತೀಯ ಚಿತ್ರರಂಗದ ಮೇಲೂ ಅವರ ಪ್ರಭಾವ ಅಪಾರವಾಗಿತ್ತು. ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಅವರ ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರೆತಿದ್ದವು.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. Tamil film industry ವಲಯದಲ್ಲಿ ಈ ಸುದ್ದಿ ಆಘಾತ ಮೂಡಿಸಿದೆ.

ಭಾರತಿರಾಜ ಅವರ ಅಂತಿಮ ವಿಧಿವಿಧಾನಗಳು ಚೆನ್ನೈನಲ್ಲಿ ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಅವರ ಅಗಲಿಕೆ ತಮಿಳು ಚಿತ್ರರಂಗಕ್ಕೆ ಅಪಾರ ನಷ್ಟವೆಂದು ಚಿತ್ರರಂಗದವರು ಹೇಳಿದ್ದಾರೆ.

Continue Reading

ಅಪರಾಧ

ಕಾರು ಓಡಿಸುವ ವಿಚಾರಕ್ಕೆ ಮಾರಾಮಾರಿ: ಕೃಷ್ಣ ಮಠದಲ್ಲಿ ಗಲಾಟೆ

Published

on

ಉಡುಪಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರವಾಗಿರುವ Sri Krishna Mutt Udupi ಆವರಣದ ಪಾರ್ಕಿಂಗ್ ಸ್ಥಳದಲ್ಲಿ ರಾತ್ರಿ ವೇಳೆ ಪ್ರವಾಸಿಗರು ಮತ್ತು ಸ್ಥಳೀಯ ವ್ಯಕ್ತಿಯ ನಡುವೆ ಭೀಕರ ಮಾರಾಮಾರಿ ನಡೆದಿದೆ.

ಪಾರ್ಕಿಂಗ್ ಏರಿಯಾದಲ್ಲಿ ವಾಹನ ಚಲಾಯಿಸುವ ವಿಚಾರಕ್ಕೆ ಸಂಬಂಧಿಸಿದ ಸಣ್ಣ ತಕರಾರು ಕ್ಷಣಾರ್ಧದಲ್ಲೇ ಗಂಭೀರ ಘರ್ಷಣೆಗೆ ತಿರುಗಿದೆ. ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಪ್ರವಾಸಿಗರು ಕುಟುಂಬದೊಂದಿಗೆ ಶ್ರೀಕೃಷ್ಣ ಮಠದ ದರ್ಶನಕ್ಕೆ ಬಂದಿದ್ದರು. ಇದೇ ವೇಳೆ ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಎಂಬ ಸ್ಥಳೀಯ ವ್ಯಕ್ತಿಯ ಕಾರು ವೇಗವಾಗಿ ಚಲಾಯಿಸುತ್ತಿದ್ದಾನೆ ಎಂದು ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಮಾತಿನ ಜಗಳ ಹೆಚ್ಚಾಗಿ, “ನಾನು ಲೋಕಲ್ ವ್ಯಕ್ತಿ, ಹೀಗೆ ಕಾರು ಓಡಿಸುವುದು ನನ್ನ ರೀತಿಯೇ” ಎಂದು ಸುಪ್ರೀತ್ ಧಮ್ಕಿ ಹಾಕಿದನೆಂಬ ಆರೋಪ ಕೇಳಿಬಂದಿದೆ. ನಂತರ ಪರಿಸ್ಥಿತಿ ನಿಯಂತ್ರಣ ತಪ್ಪಿ, ಕಾರು ಹಾಯಿಸಲು ಯತ್ನಿಸಿದ ಜೊತೆಗೆ ತನ್ನ ಕಾರಿನಲ್ಲಿದ್ದ ಕಂಬಳದ ಕೋಲಿನಿಂದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೈದರಾಬಾದ್ ಮೂಲದ ಪವನ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆಯಲ್ಲಿ ಪ್ರವಾಸಿಗರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಇದಕ್ಕೆ ಪ್ರತಿಯಾಗಿ ಸುಪ್ರೀತ್ ಕೂಡ ಪ್ರವಾಸಿಗರ ವಿರುದ್ಧ ಪ್ರತಿದೂರು ದಾಖಲಿಸಿದ್ದು, ತಾನು ಪತ್ನಿಯೊಂದಿಗೆ ಇದ್ದಾಗ ಪ್ರವಾಸಿಗರು ಅನಗತ್ಯವಾಗಿ ಜಗಳ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಮೇಲೆ ಚೇರ್ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆದಿದ್ದು, ಬಾಯಿಯಿಂದ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘರ್ಷಣೆಯ ಸಂದರ್ಭದಲ್ಲಿ ಪ್ರವಾಸಿಗರು ತಮ್ಮ ಕಾರಿನ ಗ್ಲಾಸ್‌ಗಳನ್ನು ಜಖಂಗೊಳಿಸಿದ್ದಾರೆ ಎನ್ನಲಾಗಿದ್ದು, ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದ್ದಾರೆ.

ಈ ಘಟನೆ ಕುರಿತು ಉಡುಪಿ ನಗರ ಠಾಣೆ ಪೊಲೀಸರು ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರವಾಸಿ ತಾಣದಲ್ಲಿ ನಡೆದ ಈ ಗಲಾಟೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Continue Reading

Trending