ದೇಶ
ಇರುವೆಗಳೂ ಆಪರೇಷನ್ ಮಾಡ್ತವೆ..! ಮನುಷ್ಯರ ಹೊರತುಪಡಿಸಿದ್ರೆ ಈ ಕಲೆಗಾರಿಕೆ ಇರೋದು ಇವುಗಳಿಗೆ ಮಾತ್ರ..!
ಇರಲಾರದೇ ಇರುವೆ ಬಿಟ್ಕೊಂಡರು ಅನ್ನುವ ಹಾಗೆ ಸಂಶೋಧನೆಗೆ ಅಂತಾ ಒಂದಷ್ಟು ಇರುವೆಗಳನ್ನು ಬಿಟ್ಕೊಂಡಿದ್ದ ವಿಜ್ಞಾನಿಗಳ ತಂಡಕ್ಕೆ ಅಚ್ಚರಿಯ ಸಂಗತಿಯೊಂದು ಸಿಕ್ಕಿದೆ. ಇದು ವಿಜ್ಞಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದ್ದು, ಇನ್ನಷ್ಟು ಸಂಶೋಧನೆಗೆ ಮುಂದಾಗಿದ್ದಾರೆ. ಅಸಲಿ ವಿಚಾರ ಏನಂದರೆ ಇರುವೆಗಳು ಕೂಡ ತಮ್ಮವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುತ್ತವೆಯಂತೆ!
ಅಚ್ಚರಿ ಅನಿಸಿದರೂ ನಿಜ! ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಹೀಗೊಂದು ಮಾಹಿತಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಮನುಷ್ಯರಿಗೆ ದೈಹಿಕ ಸಮಸ್ಯೆಗಳು ಅಥವಾ ಅನಾರೋಗ್ಯ ಉಂಟಾದಾಗ ಗುಣಪಡಿಸಲು ಚಿಕಿತ್ಸೆಯ ಮೊರೆ ಹೋಗುತ್ತೇವೆ. ತೀರಾ ಅಗತ್ಯ ಬಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆಯನ್ನೂ ಮಾಡುತ್ತಾರೆ. ಅಂತಹ ಪ್ರತಿಭೆ ಕೇವಲ ಮನುಷ್ಯರಿಗೆ ಮಾತ್ರ ಇರೋದು ಅನ್ಕೊಂಡರೆ ಅದು ಖಂಡಿತ ತಪ್ಪು. ಮಾನವರು ಮಾತ್ರವಲ್ಲ, ಇರುವೆಗಳು ಕೂಡ ಆಪರೇಷನ್ ಮಾಡಿಕೊಳ್ಳುತ್ತವೆ ಎಂದರೆ ನೀವು ನಂಬಲೇಬೇಕು!
ಈ ಮೂಲಕ ಮನುಷ್ಯರನ್ನು ಹೊರತುಪಡಿಸಿ ಭೂಮಿ ಮೇಲೆ ವೈದ್ಯಕೀಯ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಎರಡನೇ ಜೀವಿ ಇರುವೆಗಳು. ಹೌದು, ಫ್ಲೋರಿಡಾದಲ್ಲಿ (Florida) ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಇರುವೆಗಳು (Ants) ಪತ್ತೆಯಾಗಿವೆ. ಅವುಗಳನ್ನು ಕ್ಯಾಂಪೊನೋಟಸ್ (Camponotus) ಇರುವೆ ಎಂದು ಕರೆಯಲಾಗುತ್ತಿದೆ. ಅಧ್ಯಯನದಲ್ಲಿ ತಿಳಿದುಬಂದಿರುವ ಅಂಶಗಳ ಪ್ರಕಾರ, ಇವು ಗೂಡಿನಲ್ಲಿ ಸಂಗಾತಿಗಳ ಜೊತೆ ಇರುತ್ತವೆ. ಈ ಸಂದರ್ಭದಲ್ಲಿ ತಮ್ಮ ಸಂಗಾತಿಗಳ ಕಾಲುಗಳಿಗೆ ಆಗಿರುವ ಗಾಯವನ್ನು ಗುರುತಿಸುತ್ತವೆ. ಗಾಯವನ್ನು ಗುರುತಿಸಿ ಅದಕ್ಕೆ ಟ್ರೀಟ್ಮೆಂಟ್ ನೀಡಿ ಸ್ವಚ್ಛವಾಗಿ ಗುಣಪಡಿಸುತ್ತವೆ. ಕೆಲವೊಮ್ಮೆ ಕಾಲು ಅಥವಾ ಇರುವೆಗಳ ಇತರೆ ಭಾಗಗಳನ್ನು ಕತ್ತರಿಸಿ ಹಾಕುತ್ತವೆ ಎಂದು Current Biology ಜರ್ನಲ್ ಜುಲೈ 2 ರಂದು ವರದಿಯನ್ನು ಪ್ರಕಟಿಸಿದೆ.
ಜರ್ನಮನಿಯ University of Wurzburg ವಿಶ್ವವಿದ್ಯಾಲಯದ ಪರಿಸರ ಶಾಸ್ತ್ರಜ್ಞ ಎರಿಕ್ ಫ್ರಾಂಕ್ (Erik Frank) ಹೇಳುವಂತೆ.. ಜೀವ ಇರುವ ಯಾವುದೇ ಜೀವಿಗಳ ಅಂಗವನ್ನು ಕತ್ತರಿಸಬೇಕು ಅಂದಾಗ ಸಾಕಷ್ಟು ಪ್ರತಿಭೆ ಇರಬೇಕು. ಅದೊಂದು ಲಯಬದ್ಧ ಮತ್ತು ಸಂಕೀರ್ಣ ವಿಧಾನ. ಅಂತಹ ಕೆಲಸ ಮಾಡಲು ಮನುಷ್ಯರಿಗೆ ಸಾಕಷ್ಟು ಅಧ್ಯಯನ, ಸಮಯ ಹಾಗೂ ನಿಖರತೆಯ ಅಗತ್ಯ ಇರುತ್ತದೆ. ಆದರೆ ಈ ಇರುವೆಗಳ ಶಸ್ತ್ರಚಿಕಿತ್ಸೆಯು ಅಚ್ಚರಿ ತಂದಿದೆ ಎನ್ನುತ್ತಾರೆ.
2023ರಲ್ಲಿ ಫ್ರಾಂಕ್ ಅವರ ತಂಡವು ಆಫ್ರಿಕನ್ ಇರುವೆಗಳ ಜಾತಿಗಳನ್ನು (African ant species) ಕಂಡು ಹಿಡಿದಿದೆ. ಮೆಗಾಪೊನೆರಾ (Megaponera analis) ಎಂಬ ಪ್ರಬೇಧದ ಇರುವೆ ಗಾಯಗೊಂಡ ತನ್ನ ಸಹಚರರಿಗೆ ಆಂಟಿಮೈಕ್ರೋಬಿಯಲ್ (antimicrobial substance) ಮೂಲಕ ಚಿಕಿತ್ಸೆ ನೀಡುತ್ತಿತ್ತು. ಈ antimicrobial ಇರುವೆಯ ದೇಹದಿಂದ ಹೊರ ಬರುತ್ತದೆ. ಫ್ಲೊರಿಡಾದ ಕ್ಯಾಂಪೊನೋಟಸ್ ಜಾತಿಯ ಇರುವೆಗಳು ಈ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಅವು ಕಾಲು ಕತ್ತರಿಸುವುದರಲ್ಲಿ ನಿಪುಣವಾಗಿರುತ್ತವೆ ಎಂದು ಸ್ಟಡಿ ಹೇಳಿದೆ.
ಅಧ್ಯಯನದಲ್ಲಿ ವಿಜ್ಞಾನಿಗಳು ಇರುವೆಗಳ ಎರಡು ರೀತಿಯ ಚಿಕಿತ್ಸೆಯನ್ನು ಗಮನಿಸಿದ್ದಾರೆ. ಇರುವೆಗಳ ತೊಡೆಯ ಭಾಗದಲ್ಲಿ ಸೀಳುವಿಕೆ ಆದಾಗ ಹಾಗೂ ಟಿಬಿಯಾದಲ್ಲಿ ಸೀಳುವಿಕೆ ಆದಾಗ ಅದನ್ನು ಗುಣಪಡಿಸಲು ಪ್ರಯತ್ನಿಸುತ್ತವೆ. ಮೊದಲು ಗಾಯವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತವೆ. ಅದಕ್ಕಾಗಿ ಇರುವೆಗಳು ತಮ್ಮ ಬಾಯಿ ಬಳಸುತ್ತವೆ. ಒಂದು ವೇಳೆ ವಾಸಿಯಾಗದಿದ್ದರೆ ಬಾಯಿ ಮೂಲಕವೇ ಕತ್ತರಿಸಿ ಪ್ರತ್ಯೇಕಿಸಿ ಜೀವ ಉಳಿಸುತ್ತವೆಯಂತೆ.
ಎರಡು ರೀತಿಯ ಚಿಕಿತ್ಸೆಯಲ್ಲೂ ಜೀವದಾನ
ಟಿಬಿಯಾವನ್ನು ಸ್ವಚ್ಛಗೊಳಿಸುವ ಮೂಲಕ ಗಾಯವನ್ನು ವಾಸಿ ಮಾಡಲು ಪ್ರಯತ್ನಿಸುತ್ತವೆ. ಇದರಿಂದ ಅವು ಸಾಯದಂತೆ ರಕ್ಷಣೆಯಾಗುತ್ತದೆ. ತೊಡೆಯ ಮೇಲಿನ ಗಾಯವು ವಾಸಿಯಾದರೆ ಶೇಕಡಾ 40 ರಷ್ಟು ಇರುವೆಗಳು ಬದುಕುತ್ತವೆ. ತೊಡೆಯನ್ನು ಕತ್ತರಿಸಿಕೊಂಡ ಇರುವೆಗಳು ಶೇಕಡಾ 90 ರಿಂದ 95 ರಷ್ಟು ಇರುವೆಗಳು ಬದುಕುಳಿಯುತ್ತವೆ. ಅದೇ ರೀತಿ ಟಿಬಿಯಾ ಗಾಯವನ್ನು ಗುಣಪಡಿಸಿದ ನಂತರ ಶೇಕಡಾ 15 ರಿಂದ 75 ರಷ್ಟು ಪತಿಶತ ಇರುವೆಗಳು ಬದುಕುಳಿಯುತ್ತವೆ. ತೊಡೆಗೆ ಗಾಯವಾದಾಗ ಮಾತ್ರ ಇರುವೆಗಳು ಕಾಲನ್ನು ಕಚ್ಚುತ್ತವೆ. ಕಾಲಿನ ಇತರೆ ಭಾಗಗಳಲ್ಲಿ ಗಾಯವಾದರೆ ಕಾಲನ್ನು ಕತ್ತರಿಸುವುದಿಲ್ಲ. ಗಾಯಗೊಂಡ ಇರುವೆಯ ಕಾಲನ್ನು ಕತ್ತರಿಸಲು ಅವುಗಳಿಗೆ ಕನಿಷ್ಠ 40 ನಿಮಿಷಗಳು ಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
Micro-CT scans ಬಳಸಿ ಅಧ್ಯಯನ
ಈ ಅಧ್ಯಯನಕ್ಕಾಗಿ ವಿಜ್ಞಾನಿಗಳು ಮೈಕ್ರೋ ಸಿಟಿ ಸ್ಕ್ಯಾನ್ ಸಹಾಯವನ್ನು ತೆಗೆದುಕೊಂಡರು. ಗಾಯಗೊಂಡ ಕಾಲಿನಿಂದ ರಕ್ತ ಸೋರುತ್ತಿದ್ದಾಗ, ರಕ್ತವನ್ನು ಪೂರೈಸುವ ಸ್ನಾಯುಗಳಲ್ಲಿನ ರಕ್ತದ ಹರಿವನ್ನು ನಿಧಾನಗೊಳಿಸುವುದನ್ನೂ ವಿಜ್ಞಾನಿಗಳು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ. ಏನೇ ಇರಲಿ. ನೋಡೋಕೆ ಇರುವೆ ಅಂತೀವಿ. ಮನುಷ್ಯರನ್ನೂ ಮೀರಿ ಚಿಕಿತ್ಸೆ ನೀಡುವ ಕಲೆಗಾರಿಕೆ ಮತ್ತು ನ್ಯಾಕ್ ಇರುವೆಗಳಿಗೆ ಇದೆ ಅಂದರೆ ಅದು ಸಾಮಾನ್ಯ ಸಂಗತಿಯೇನಲ್ಲ.
ದೇಶ
ಕಾಂಗ್ರೆಸ್ನಲ್ಲಿ ಭಾರಿ ಶಿಸ್ತು ಕ್ರಮ: ನಟಿ ಭಾವನಾ ರಾಮಣ್ಣ ಸೇರಿ ಹಲವರಿಗೆ ಶಾಕ್
ಬೆಂಗಳೂರು: Karnataka Pradesh Congress Committee ಪ್ರಮುಖ ಸಭೆಗೆ ಗೈರಾಗಿದ್ದ ಪದಾಧಿಕಾರಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ D. K. Shivakumar ಭಾರೀ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SSR) ಕುರಿತ ಮಹತ್ವದ ಸಭೆಯನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಮೇಲೆ ಹಲವು ಹಿರಿಯ ನಾಯಕರನ್ನು ಪಕ್ಷದ ಹುದ್ದೆಗಳಿಂದ ತಕ್ಷಣದಿಂದಲೇ ವಜಾಗೊಳಿಸಲಾಗಿದೆ.
ಈ ಕ್ರಮದಡಿ ಕೆಪಿಸಿಸಿ ವಕ್ತಾರರಾದ Niketh Raj Maurya, Bhavana Ramanna ಸೇರಿದಂತೆ ಶಿವಮೂರ್ತಿ ನಾಯಕ್, ಎಂ.ಸಿ. ವೇಣುಗೋಪಾಲ್, ಷಣ್ಮುಖ ಶಿವಳ್ಳಿ ಹಾಗೂ ಸಿ.ಆರ್. ಮನೋಹರ್ ಅವರಿಗೆ ಪಕ್ಷದಿಂದ “ಗೇಟ್ ಪಾಸ್” ನೀಡಲಾಗಿದೆ. ಇವರ ಜೊತೆಗೆ ಮೂವರು ಉಪಾಧ್ಯಕ್ಷರು ಮತ್ತು 29 ಪ್ರಧಾನ ಕಾರ್ಯದರ್ಶಿಗಳನ್ನೂ ಹುದ್ದೆಗಳಿಂದ ಕೈಬಿಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಈ ಮಹತ್ವದ ಸಭೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ Randeep Singh Surjewala ಕೂಡ ಭಾಗವಹಿಸಿದ್ದರು. ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದ ಸಭೆಗೆ ಇಷ್ಟೊಂದು ಪ್ರಮಾಣದಲ್ಲಿ ನಾಯಕರು ಗೈರಾಗಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರು ಎನ್ನಲಾಗಿದೆ.
ಸಭೆಯನ್ನು ಲಘುವಾಗಿ ತೆಗೆದುಕೊಂಡವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸುರ್ಜೇವಾಲಾ ಸೂಚನೆ ನೀಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಆಕ್ಷನ್ ಮೋಡ್ಗೆ ಇಳಿದಿದ್ದಾರೆ. ಈ ಮೂಲಕ ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇದೇ ವೇಳೆ ರಾಜ್ಯ ರಾಜಕೀಯದಲ್ಲಿ Siddaramaiah ಅವರ ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ಈ ಕ್ರಮ ಕಾಂಗ್ರೆಸ್ ಪಾಳಯದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸಿದೆ.
ಪಕ್ಷದಲ್ಲಿ ಹಿರಿಯರಾಗಿರಲಿ ಅಥವಾ ಪ್ರಮುಖ ಹುದ್ದೆಯಲ್ಲಿರಲಿ, ಜವಾಬ್ದಾರಿ ಮತ್ತು ಶಿಸ್ತು ಪಾಲನೆ ಕಡ್ಡಾಯ ಎಂಬುದನ್ನು ಡಿಕೆ ಶಿವಕುಮಾರ್ ಈ ನಿರ್ಧಾರದ ಮೂಲಕ ಸ್ಪಷ್ಟಪಡಿಸಿದ್ದಾರೆ.
ದೇಶ
ಕರ್ನಾಟಕಕ್ಕೆ ಹೊಸ ಸಿಎಂ? ಡಿಕೆ ಶಿವಕುಮಾರ್ ಪಾಲಿಗೆ ‘ಶುಭ ಶುಕ್ರವಾರ’ ಫಿಕ್ಸ್!
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಕಳೆದ ಮೂರು ವರ್ಷಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಮುಖ್ಯಮಂತ್ರಿ ಬದಲಾವಣೆಯ ವಿಚಾರಕ್ಕೆ ಕೊನೆಗೂ ಅಂತಿಮ ರೂಪ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆಯ ಬಳಿಕ ಉಪಮುಖ್ಯಮಂತ್ರಿ D. K. Shivakumar ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಪ್ರಸ್ತುತ ಮುಖ್ಯಮಂತ್ರಿ Siddaramaiah ಅವರು ಗುರುವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆ ದಟ್ಟವಾಗಿದ್ದು, ಶುಕ್ರವಾರ ಡಿಕೆ ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯ ನಡುವೆಯೇ ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಮಹತ್ವದ ಉಪಹಾರ ಕೂಟ ಆಯೋಜಿಸಲಾಗಿದ್ದು, ಸಚಿವರು ಹಾಗೂ ಕಾಂಗ್ರೆಸ್ನ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಸಭೆಯ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ಮರಳಿದ್ದರೆ, ಡಿಕೆ ಶಿವಕುಮಾರ್ ದೆಹಲಿಯಲ್ಲೇ ಉಳಿದಿದ್ದರು. ಆದರೆ ಇಂದಿನ ಸಭೆಗಾಗಿ ಡಿಕೆಶಿ ಹಾಗೂ ಅವರ ಆಪ್ತರು ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಹೈಕಮಾಂಡ್ ಅವರು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆಗೆ ಮಹತ್ವದ ಜವಾಬ್ದಾರಿ ನೀಡುವ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಹೊಸ ರಾಜಕೀಯ ಸಮತೋಲನಕ್ಕಾಗಿ ವಿವಿಧ ಸಮುದಾಯಗಳ ನಾಲ್ವರು ನಾಯಕರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸೂತ್ರವೂ ಚರ್ಚೆಯಲ್ಲಿದೆ. ಸಿಎಂ ರೇಸ್ನಲ್ಲಿದ್ದ ಹಲವು ಪ್ರಮುಖ ನಾಯಕರ ಹೆಸರುಗಳು ಡಿಸಿಎಂ ಹುದ್ದೆಗೆ ಕೇಳಿಬರುತ್ತಿವೆ.
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಕುರಿತು ಆಂತರಿಕ ಒಪ್ಪಂದವಾಗಿತ್ತು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಈಗ ಆ ಸೂತ್ರ ಜಾರಿಯಾಗುತ್ತಿರುವುದಾಗಿ ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.
ಕ್ರೀಡೆ
“That’s a silly question!”: ಆರ್ಸಿಬಿ ಸೋಲಿನ ಬಳಿಕ ಪತ್ರಕರ್ತರ ಮೇಲೆ ಫಿಲಿಪ್ಸ್ ಸಿಡಿತ
ಧರ್ಮಶಾಲಾ: Gujarat Titans ತಂಡದ ಆಟಗಾರ Glenn Phillips, ಐಪಿಎಲ್ 2026ರ ಕ್ವಾಲಿಫೈಯರ್-1ರಲ್ಲಿ Royal Challengers Bengaluru ವಿರುದ್ಧ ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಂದ್ಯದಲ್ಲಿ ಆಡಿದ 11 ಸದಸ್ಯರ ಬಳಗದಲ್ಲಿ ಫಿಲಿಪ್ಸ್ ಸ್ಥಾನ ಪಡೆದಿರಲಿಲ್ಲ. ಆದರೂ ಗುಜರಾತ್ ಟೈಟಾನ್ಸ್ ತಂಡ ಅವರನ್ನು ಸುದ್ದಿಗೋಷ್ಠಿಗೆ ಕಳುಹಿಸಿತ್ತು. ಈ ವೇಳೆ ಪತ್ರಕರ್ತರೊಬ್ಬರು, 255 ರನ್ಗಳ ಬೃಹತ್ ಗುರಿ ಬೆನ್ನಟ್ಟುವಾಗ ಜಿಟಿ ತಂಡ ಮಾನಸಿಕವಾಗಿ ಮೊದಲೇ ಸೋಲನ್ನು ಒಪ್ಪಿಕೊಂಡಿತ್ತೇ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಗ್ಲೆನ್ ಫಿಲಿಪ್ಸ್, “That’s a silly question” ಎಂದು ಉತ್ತರಿಸಿದರು. ಯಾವುದೇ ತಂಡವೂ ಮೈದಾನಕ್ಕಿಳಿಯುವ ಮೊದಲು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
250ಕ್ಕೂ ಅಧಿಕ ರನ್ಗಳ ಗುರಿ ಬೆನ್ನಟ್ಟುವಾಗ ಸ್ಕೋರ್ಬೋರ್ಡ್ ಒತ್ತಡ ಹೆಚ್ಚಾಗಿರುತ್ತದೆ. Punjab Kings ತಂಡದಂತಹ ಕೆಲವೇ ತಂಡಗಳು ಇಂತಹ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿವೆ. ಆದರೆ ಅದು ಸುಲಭದ ಕೆಲಸವಲ್ಲ ಎಂದು ಫಿಲಿಪ್ಸ್ ತಂಡದ ಪರವಾಗಿ ಮಾತನಾಡಿದರು.
ಪಂದ್ಯದಲ್ಲಿ ಆಡದಿದ್ದರೂ ತಂಡದ ಆಂತರಿಕ ತಂತ್ರಗಳು ಮತ್ತು ನಿರ್ಧಾರಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಫಿಲಿಪ್ಸ್ ಸ್ವಲ್ಪ ತಡಕಾಡಿದಂತೂ ಕಂಡುಬಂದಿತು. “ನಾವು ಈವರೆಗೆ ಉತ್ತಮ ಕ್ರಿಕೆಟ್ ಆಡಿದ್ದೇವೆ. ಮುಂದಿನ ಪಂದ್ಯಕ್ಕೆ ತಂಡ ಸಿದ್ಧವಾಗಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ” ಎಂದರು.
ಇದೇ ವೇಳೆ Rajat Patidar ಅವರ ಬ್ಯಾಟಿಂಗ್ನ್ನು ಫಿಲಿಪ್ಸ್ ಮುಕ್ತಕಂಠದಿಂದ ಶ್ಲಾಘಿಸಿದರು. “ಪಾಟೀದಾರ್ ಯಾವುದೇ ಭಯವಿಲ್ಲದೆ ಆಡುವ ಅದ್ಭುತ ಬ್ಯಾಟರ್. ಪಂದ್ಯದ ಪರಿಸ್ಥಿತಿ ಏನೇ ಇದ್ದರೂ ತಮ್ಮ ನೈಸರ್ಗಿಕ ಆಕ್ರಮಣಕಾರಿ ಶೈಲಿಗೆ ಬದ್ಧರಾಗಿರುತ್ತಾರೆ” ಎಂದು ಹೇಳಿದರು.
ಕ್ವಾಲಿಫೈಯರ್-1ರಲ್ಲಿ ಸೋತಿದ್ದರೂ ಗುಜರಾತ್ ಟೈಟಾನ್ಸ್ಗೆ ಇನ್ನೂ ಫೈನಲ್ ಪ್ರವೇಶಿಸುವ ಅವಕಾಶ ಉಳಿದಿದೆ. ಈಗ ಕ್ವಾಲಿಫೈಯರ್-2ರಲ್ಲಿ Sunrisers Hyderabad ಮತ್ತು Rajasthan Royals ನಡುವಿನ ಪಂದ್ಯದ ವಿಜೇತ ತಂಡವನ್ನು ಜಿಟಿ ಎದುರಿಸಲಿದೆ.
-
ದೇಶ5 hours agoಕರ್ನಾಟಕಕ್ಕೆ ಹೊಸ ಸಿಎಂ? ಡಿಕೆ ಶಿವಕುಮಾರ್ ಪಾಲಿಗೆ ‘ಶುಭ ಶುಕ್ರವಾರ’ ಫಿಕ್ಸ್!
-
ದೇಶ9 hours agoಬಸ್ ಕಂಡಕ್ಟರ್ನಿಂದ ಸೂಪರ್ ಸ್ಟಾರ್ ತನಕ: ರಜನಿಕಾಂತ್ ಅಪರೂಪದ ಫೋಟೋ ವೈರಲ್
-
ಬೆಂಗಳೂರು6 hours ago“ನಾಳೆ ಎಲ್ಲ ಹೇಳುತ್ತೇನೆ”: ರಾಜಕೀಯ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಸ್ಪೆನ್ಸ್ ಉತ್ತರ!
-
ಕ್ರೀಡೆ6 hours ago“That’s a silly question!”: ಆರ್ಸಿಬಿ ಸೋಲಿನ ಬಳಿಕ ಪತ್ರಕರ್ತರ ಮೇಲೆ ಫಿಲಿಪ್ಸ್ ಸಿಡಿತ
-
ಅಪರಾಧ9 hours agoಪಿಣರಾಯಿ ವಿಜಯನ್ ನಿವಾಸದ ಮೇಲೆ ಇಡಿ ದಾಳಿ: ಕೇರಳ ರಾಜಕೀಯದಲ್ಲಿ ಭಾರೀ ಸಂಚಲನ!
-
ದೇಶ8 hours agoಸಿಎಂ ಬದಲಾವಣೆಯ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಶಾಕ್?
-
ದೇಶ8 hours agoಅಯ್ಯನ ಕೆರೆ ಕಲುಷಿತಗೊಳಿಸಲು ಯತ್ನ: ಸಿಬ್ಬಂದಿಯ ದಿಟ್ಟ ಕ್ರಮಕ್ಕೆ ಭಾರಿ ಮೆಚ್ಚುಗೆ
-
ಕ್ರೀಡೆ8 hours ago‘ಈ ಸಲ ಕಪ್ ನಮ್ದೇ’ ಘೋಷಣೆ ಜೋರಾಗಿದೆ: ಆರ್ಸಿಬಿ ಫೈನಲ್ಗೆ ಎಂಟ್ರಿ
