ಅಪರಾಧ
ಕೋರ್ಟ್ವರೆಗೂ ಉಪ್ಪಿನ ಕಾಯಿ ಗಲಾಟೆ: ‘ಏನೇ ಮರೆತ್ರೂ, ಊಟದ ಜೊತೆ ಉಪ್ಪಿನಕಾಯಿ ಮರೀಬಾರ್ದು’: ಇಲ್ಲಾಂದ್ರೆ ಹೀಗಾಗುತ್ತೆ! – Missing Pickle case
ವಿಲ್ಲುಪುರಂ (ತಮಿಳುನಾಡು): ಚಿಕ್ಕ ತಪ್ಪನ್ನು ದೊಡ್ಡದೆಂದು ಭಾವಿಸಿ ರಂಪ ಮಾಡುವುದೇಕೆ ಎಂದು ನಾವು ಕೆಲವು ಘಟನೆಗಳನ್ನು ಹಗುರವಾಗಿ ಪರಿಗಣಿಸುತ್ತೇವೆ. ಆದರೆ, ಕೆಲವರು ಮಾತ್ರ ಅದೆಷ್ಟೇ ಚಿಕ್ಕದಾಗಿರಲಿ ಆದ ತಪ್ಪನ್ನು ಸರಿಪಡಿಸುವವರೆಗೂ ಬಿಡುವುದಿಲ್ಲ. ಅದನ್ನು ಕೋರ್ಟ್ ಕಟಕಟೆಗೂ ತಂದು ನ್ಯಾಯ ಧಕ್ಕಿಸಿಕೊಳ್ಳುತ್ತಾರೆ. ಅಂಥದ್ದೇ ಒಂದು ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ.
ಹೋಟೆಲ್ವೊಂದು ಆರ್ಡರ್ ಮಾಡಿದ ಊಟದಲ್ಲಿ ಉಪ್ಪಿನಕಾಯಿ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಅದರ ವಿರುದ್ಧ ಕೇಸ್ ಜಡಿದಿದ್ದಾನೆ. ಗ್ರಾಹಕರ ವ್ಯಾಜ್ಯ ಪರಿಹಾರ ಕೇಂದ್ರದಿಂದ ತನಗೆ ಸಿಗಬೇಕಾದ ನ್ಯಾಯವನ್ನು ಪಟ್ಟುಬಿಡದೇ ಪಡೆದುಕೊಂಡಿದ್ದಾನೆ. ವ್ಯಕ್ತಿಯನ್ನು ತಾತ್ಸಾರವಾಗಿ ಕಂಡಿದ್ದ ಹೋಟೆಲ್ ಮಾಲೀಕ ದಂಡಕ್ಕೆ ಗುರಿಯಾಗಿ ಪೇಚು ಮೋರೆ ಹಾಕುವಂತಾಗಿದೆ.
ಪ್ರಕರಣವೇನು?: ವಿಲ್ಲುಪುರಂ ಜಿಲ್ಲೆಯ ವಲುದರೆಡ್ಡಿ ನಿವಾಸಿಯಾದ ಆರೋಗ್ಯಸ್ವಾಮಿ ಎಂಬುವವರು 2022 ರಲ್ಲಿ ದತ್ತಿ ಕಾರ್ಯಕ್ರಮ ನಡೆಸಿದ್ದರು. ಅದರಲ್ಲಿ 25 ವೃದ್ಧರಿಗೆ ಊಟ ಕೊಡಿಸಿದ್ದರು. ಊಟಕ್ಕಾಗಿ ಸಮೀಪದ ಹೋಟೆಲ್ನಲ್ಲಿ 25 ಪೊಟ್ಟಣಗಳ ಆಹಾರವನ್ನು ಆರ್ಡರ್ ಮಾಡಿದ್ದರು. ಹೋಟೆಲ್ ಊಟವೊಂದಕ್ಕೆ 70 ರೂಪಾಯಿ, 10 ರೂಪಾಯಿ ಪಾರ್ಸೆಲ್ ಶುಲ್ಕ ವಿಧಿಸಿತ್ತು. ಅದರಂತೆ ಆರೋಗ್ಯಸ್ವಾಮಿ ಅವರು 25 ಪೊಟ್ಟಣಗಳಿಗೆ 2 ಸಾವಿರ ರೂಪಾಯಿ ಪಾವತಿ ಮಾಡಿದ್ದರು. ಆದರೆ, ಇದಕ್ಕೆ ಬಿಲ್ ನೀಡದೇ, ಕೈಬರಹದಲ್ಲಿ ಬರೆದ ಚೀಟಿಯನ್ನು ಕೊಡಲಾಗಿತ್ತು.
ಕಾರ್ಯಕ್ರಮದಂದು 25 ಆಹಾರ ಪೊಟ್ಟಣಗಳನ್ನು ಹೋಟೆಲ್ನವರು ಪೂರೈಕೆ ಮಾಡಿದ್ದರು. ಪಾರ್ಸೆಲ್ಗಳಲ್ಲಿ ಊಟದ ಜೊತೆಗೆ ನೀಡುವುದಾಗಿ ತಿಳಿಸಿದ್ದ ಉಪ್ಪಿನಕಾಯಿ ಇರಲಿಲ್ಲ. ಈ ಬಗ್ಗೆ ಹೋಟೆಲ್ಗೆ ದೂರು ನೀಡಲಾಗಿದೆ. ಆರೋಗ್ಯಸ್ವಾಮಿ ಅವರು ರೆಸ್ಟೋರೆಂಟ್ ಮಾಲೀಕರು, ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಉಪ್ಪಿನಕಾಯಿಯನ್ನು ನೀಡಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ನೀಡದ ಉಪ್ಪಿನಕಾಯಿ ಒಂದು ಪ್ಯಾಕೆಟ್ಗೆ 1 ರೂಪಾಯಿ ದರದಲ್ಲಿ 25 ರೂಪಾಯಿ ಮರಳಿಸುವಂತೆ ಆರೋಗ್ಯಸ್ವಾಮಿ ಕೋರಿದ್ದರು. ಆದರೆ, ರೆಸ್ಟೋರೆಂಟ್ ಮಾಲೀಕರು ಇದನ್ನು ನಿರಾಕರಿಸಿದ್ದರು.
ಇದನ್ನು ಪ್ರಶ್ನಿಸಿ ಆರೋಗ್ಯಸ್ವಾಮಿ ಅವರು, ವಿಲ್ಲುಪುರಂ ಜಿಲ್ಲಾ ಗ್ರಾಹಕರ ಕುಂದುಕೊರತೆ ಕೇಂದ್ರಕ್ಕೆ ದೂರು ನೀಡಿದ್ದಾರೆ. ತಮಗಾದ ಅನ್ಯಾಯವನ್ನು ಸಮಿತಿಯ ಮುಂದೆ ಮಂಡಿಸಿಡಿದ್ದಾರೆ. ವಿಚಾರಣೆ ನಡೆಸಿದ ಸಮಿತಿಯು, ಎರಡೂ ಕಡೆಯ ವಾದವನ್ನು ಆಲಿಸಿ ಆರೋಗ್ಯಸ್ವಾಮಿ ಪರವಾಗಿ ತೀರ್ಪು ನೀಡಿದೆ.
ತೀರ್ಪು ಏನು?: ಊಟದ ಜೊತೆಗೆ ಉಪ್ಪಿನಕಾಯಿ ನೀಡುವುದಾಗಿ ಒಪ್ಪಿಕೊಂಡಿದ್ದ ಹೋಟೆಲ್, ಅದನ್ನು ನೀಡುವಲ್ಲಿ ವಿಫಲವಾದ ಕಾರಣ ಸೇವೆಯಲ್ಲಿ ಕೊರತೆಯಾಗಿದೆ. ಆರೋಗ್ಯಸ್ವಾಮಿ ಅವರಿಗೆ ಉಂಟಾದ ಅಡಚಣೆಗಾಗಿ ಹೋಟೆಲ್ ಮಾಲೀಕರು 30 ಸಾವಿರ ದಂಡ, ವ್ಯಾಜ್ಯದ ವೆಚ್ಚವಾಗಿ 5 ಸಾವಿರ ಮತ್ತು ಉಪ್ಪಿನಕಾಯಿ ಪ್ಯಾಕೆಟ್ಗೆ 25 ರೂಪಾಯಿಯನ್ನು ಪಾವತಿಸಬೇಕು. ಖರೀದಿಗೆ ಮೂಲ ರಸೀದಿ ನೀಡುವಂತೆ ಆದೇಶಿಸಿದೆ. ದಂಡದ ಮೊತ್ತವನ್ನು ರೆಸ್ಟೋರೆಂಟ್ ಮಾಲೀಕರು 45 ದಿನಗಳ ಒಳಗೆ ಪಾವತಿಸಬೇಕು. ಇಲ್ಲವಾದಲ್ಲಿ ತಿಂಗಳಿಗೆ ಶೇಕಡಾ 9 ರಷ್ಟು ಬಡ್ಡಿ ದರದೊಂದಿಗೆ ಹೆಚ್ಚುವರಿ ದಂಡವಾಗಿ ನೀಡಬೇಕು ಎಂದು ಸೂಚಿಸಿದೆ.
ಅಪರಾಧ
ಶಕ್ತಿ ಯೋಜನೆ ಹೆಸರಿನಲ್ಲಿ ಲೂಟಿ: BMTC ಸಿಬ್ಬಂದಿ ವಿರುದ್ಧ ಕಠಿಣ ಕ್ರಮ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುತ್ತಿದ್ದರೆ, Bangalore Metropolitan Transport Corporation ನಲ್ಲಿ ಕೆಲವು ನೌಕರರು ಇದನ್ನು ದುರುಪಯೋಗ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆಲವು ನಿರ್ವಾಹಕರು ಪುರುಷ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದರೆಂಬ ಆಘಾತಕಾರಿ ವಿಚಾರ ಪತ್ತೆಯಾಗಿದೆ. ಕನ್ನಡದಲ್ಲಿ ಮಾತ್ರ ಮುದ್ರಿತವಾಗಿರುವ ಟಿಕೆಟ್ ಮಾಹಿತಿಯನ್ನು ಬಳಸಿಕೊಂಡು, ಕನ್ನಡ ಓದಲು ಬಾರದ ಹೊರರಾಜ್ಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು.
ಇನ್ನಷ್ಟು ಗಂಭೀರವಾಗಿ, ಅಧಿಕೃತ ಯುಪಿಐ ಕ್ಯೂಆರ್ ಕೋಡ್ಗಳನ್ನು ತೆಗೆದುಹಾಕಿ, ತಮ್ಮ ವೈಯಕ್ತಿಕ ಖಾತೆಗಳ ಕ್ಯೂಆರ್ ಕೋಡ್ ಮೂಲಕ ಹಣವನ್ನು ನೇರವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಲಾಗುತ್ತಿತ್ತು. ಈ ಮೂಲಕ ಸಾರಿಗೆ ನಿಗಮದ ಆದಾಯಕ್ಕೂ ನಷ್ಟ ಉಂಟಾಗಿದೆ.
ದೂರುಗಳ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಇದರಲ್ಲಿ ನಾಲ್ವರು ಪ್ರಮುಖ ನಿರ್ವಾಹಕರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಅವರ ಖಾತೆಗಳಲ್ಲಿ ಸಾವಿರಾರು ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ನಡೆದಿರುವುದು ದೃಢಪಟ್ಟಿದೆ.
ಈ ಘಟನೆ ಹಿನ್ನೆಲೆ, ಬಿಎಂಟಿಸಿ ಅಧಿಕಾರಿಗಳು ಉಳಿದ ಸಿಬ್ಬಂದಿಗಳ ಮೇಲೂ ನಿಗಾ ವಹಿಸಿದ್ದು, ಇಂತಹ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಘಟನೆಗಳು ಸಾರಿಗೆ ವ್ಯವಸ್ಥೆಯ ಮೇಲ್ವಿಚಾರಣೆ ಬಲಪಡಿಸುವ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಅಪರಾಧ
ಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!
ಬೆಂಗಳೂರು, ಏಪ್ರಿಲ್ 04: ನಗರದಲ್ಲಿ IPL 2026 ಟಿಕೆಟ್ ಕ್ರೇಜ್ ಜೋರಾಗಿರುವ ನಡುವೆ ಆನ್ಲೈನ್ ಮೋಸದ ಪ್ರಕರಣವೂ ಬೆಳಕಿಗೆ ಬಂದಿದೆ. ಅನಧಿಕೃತ ಪ್ಲಾಟ್ಫಾರ್ಮ್ ಮೂಲಕ ಟಿಕೆಟ್ ಖರೀದಿಸಲು ಯತ್ನಿಸಿದ ಟೆಕ್ಕಿ ಒಬ್ಬರು ₹1.46 ಲಕ್ಷ ಕಳೆದುಕೊಂಡಿರುವ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
Bengaluruನ ಬಿ. ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ, Instagramನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದಾರೆ. ಆತ ತನ್ನನ್ನು M. Chinnaswamy Stadium ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡು ನಂಬಿಕೆ ಮೂಡಿಸಿದ್ದಾನೆ.
ಮೊದಲಿಗೆ ಎರಡು ಟಿಕೆಟ್ಗಳಿಗೆ ₹3,700 ಕೇಳಿದ ಆರೋಪಿಯು, ಬಳಿಕ ಭದ್ರತಾ ಠೇವಣಿ, ಐಡಿ ಕಾರ್ಡ್ ಮತ್ತು ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದಾನೆ.
ಆತನ ಮಾತು ನಂಬಿದ ಟೆಕ್ಕಿ, ತನ್ನ ಹಾಗೂ ತಾಯಿಯ ಖಾತೆಯಿಂದ ಯುಪಿಐ ಮೂಲಕ ಒಟ್ಟು ₹1.46 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ಬಳಿಕ ಆರೋಪಿಯು ಟಿಕೆಟ್ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾನೆ.
ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಐಪಿಎಲ್ ಟಿಕೆಟ್ ಖರೀದಿಸುವಾಗ ಅಧಿಕೃತ ವೆಬ್ಸೈಟ್ ಅಥವಾ ಮಾನ್ಯ ಮಾರಾಟಗಾರರ ಮೂಲಕವೇ ಖರೀದಿಸಲು ಸಲಹೆ ನೀಡಿದ್ದಾರೆ. ಅನಧಿಕೃತ ಲಿಂಕ್ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಹಾರ ಮಾಡುವುದರಿಂದ ಇಂತಹ ಮೋಸಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಅಪರಾಧ
ಶಿಡ್ಲಘಟ್ಟದಲ್ಲಿ ರೌಡಿ ಶೀಟರ್ಗಳಿಗೆ ಕಟ್ಟೆಚ್ಚರ: ಗೈರುಹಾಜರಾದರೆ ಕಠಿಣ ಕ್ರಮ
ಶಿಡ್ಲಘಟ್ಟ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ರೌಡಿ ಶೀಟರ್ಗಳ ಮೇಲೆ ನಿಗಾವಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
ರೌಡಿ ಶೀಟರ್ಗಳ ಪರೇಡ್
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಶುಕ್ರವಾರ ರೌಡಿ ಶೀಟರ್ಗಳ ಪರೇಡ್ ನಡೆಯಿತು. ಠಾಣಾ ವ್ಯಾಪ್ತಿಯ ಎಲ್ಲಾ ರೌಡಿ ಶೀಟರ್ಗಳನ್ನು ಕಡ್ಡಾಯವಾಗಿ ಹಾಜರುಪಡಿಸಿ ಪರಿಶೀಲನೆ ನಡೆಸಲಾಯಿತು.
ಗೈರುಹಾಜರಾದರೆ ಕಾನೂನು ಕ್ರಮ
ಪರೇಡ್ಗೆ ಗೈರುಹಾಜರಾಗುವ ರೌಡಿ ಶೀಟರ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಮುರಳಿಧರ್ ಎಚ್ಚರಿಕೆ ನೀಡಿದ್ದಾರೆ.
ಅಪರಾಧ ನಿಯಂತ್ರಣಕ್ಕೆ ಕ್ರಮ
ಶಿಡ್ಲಘಟ್ಟ ನಗರ, ಗ್ರಾಮಾಂತರ ಹಾಗೂ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯುವುದು ಪ್ರಮುಖ ಗುರಿಯಾಗಿದೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ಭದ್ರತೆ
ಇಂತಹ ನಿಯಮಿತ ಪರೇಡ್ಗಳ ಮೂಲಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವುದು ಪೊಲೀಸರ ಉದ್ದೇಶವಾಗಿದೆ.
ಅಧಿಕಾರಿಗಳ ಉಪಸ್ಥಿತಿ
ಈ ಸಂದರ್ಭದಲ್ಲಿ ಸಿಪಿಐ ಆನಂದ್, ಪಿಎಸ್ಐ ವೇಣುಗೋಪಾಲ್, ಸುನಿಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
-
ದೇಶ22 hours agoಡಿಕೆ ಶಿವಕುಮಾರ್ ದೊಡ್ಡ ನಿರ್ಧಾರ: ಸಮಿತಿ ಡಿಸ್ಮಿಸ್!
-
ದೇಶ22 hours agoಸೌದಿ ರಕ್ಷಣೆಗೆ ಪಾಕ್ ಸೇನೆ: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹೆಚ್ಚಳ
-
ದೇಶ22 hours agoAmarnath Yatra 2026: ಬಾಬಾ ಬರ್ಫಾನಿ ದರ್ಶನಕ್ಕೆ ಸಜ್ಜಾಗಿ: ಅಮರನಾಥ ಯಾತ್ರೆ ಸಂಪೂರ್ಣ ಮಾಹಿತಿ
-
ಚುನಾವಣೆ22 hours agoದಾವಣಗೆರೆ ಟಿಕೆಟ್ ವಿವಾದ: ಮುಸ್ಲಿಂ ಸಮುದಾಯಕ್ಕೆ ಅನ್ಯಾಯವೇ?
-
ದೇಶ5 hours agoಅಲದಾಳ ಸಭೆ: ದಡ್ಡಿ ಗ್ರಾಮದ ಸಮಸ್ಯೆ ಫೋಕಸ್ನಲ್ಲಿ
-
ಚುನಾವಣೆ4 hours agoಸೈಕಲ್ ರೈಡ್ ವೇಳೆ ಶಾಕ್: ಬಾಂಬ್ ಅನ್ನಿಸಿ ಓಡಿದ ದಳಪತಿ ವಿಜಯ್
-
ದೇಶ22 hours ago8 ದಶಕಗಳ ಗಾನಯಾನ ಅಂತ್ಯ: ಆಶಾ ಭೋಸ್ಲೆ ಇನ್ನು ಇಲ್ಲ
-
ದೇಶ5 hours agoಬೆಂಗಳೂರು ಬಿಸಿ ಏರಿಕೆ: 38 ಡಿಗ್ರಿ ತಲುಪುವ ಸಾಧ್ಯತೆ
