Connect with us

ಕ್ರೀಡೆ

ಇಂದಿನ ಗೂಗಲ್ ಡೂಡಲ್ ನೋಡಿದ್ರಾ? ಜಸ್ಟ್ ಕ್ಲಿಕ್‌ ಮಾಡಿ, 20 ಕ್ರೀಡೆಗಳನ್ನು ಹುಡುಕಿ, ನೀವೂ ಒಲಿಂಪಿಕ್ಸ್​ ವಿಜೇತರಾಗಿ! – Playground Paris Google Doodle

ಪ್ರೇಮದ ನಗರಿ, ಬೆಳಕಿನ ನಗರಿ ಎಂಬ ಜನಪ್ರಿಯತೆಯ ಫ್ರಾನ್ಸ್ ರಾಜಧಾನಿ ಪ್ಯಾರಿಸ್​ನಲ್ಲಿ 2024ರ ಒಲಿಂಪಿಕ್ಸ್​ ಕ್ರೀಡಾಕೂಟ ನಡೆಯುತ್ತಿದೆ. 200ಕ್ಕೂ ವಿವಿಧ ದೇಶಗಳ ಸಾವಿರಾರು ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಪದಕಗಳಿಗಾಗಿ ಜಿದ್ದಾಜಿದ್ದಿನಿಂದ ಸ್ಪರ್ಧಿಸುತ್ತಿದ್ದಾರೆ. ಆಯಾಯ ದೇಶಗಳ ಕೋಟ್ಯಂತರ ಜನರು ಟಿವಿ, ಮೊಬೈಲ್​ನಲ್ಲಿ ಕ್ರೀಡಾಕೂಟ ವೀಕ್ಷಿಸಿ​ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಆದರೆ ನಿಮಗಿದು ಗೊತ್ತಾ? ನಾವೂ ಕೂಡ ಒಲಿಂಪಿಕ್ಸ್​​ ಗೇಮ್ಸ್​ ಆಡಬಹುದು!. ಹೌದು. ಗೂಗಲ್​ ನಮಗಾಗಿ ಈ ಅವಕಾಶ ನೀಡಿದೆ. ಹಾಗಂತ ಪ್ಯಾರಿಸ್​ಗೆ ಹೋಗಬೇಕಿಲ್ಲ, ಮೊಬೈಲ್​, ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅಥವಾ ಲ್ಯಾಪ್​ಟಾಪ್​ ಇದ್ದರೆ ಸಾಕು.

ಗೂಗಲ್​ ಈ ಬಾರಿಯ ಒಲಿಂಪಿಕ್ಸ್​ ಆರಂಭವಾದಾಗಿನಿಂದ ಪ್ರತೀ ದಿನ ವಿಶೇಷ ಡೂಡಲ್ ಅ​ನ್ನು ತನ್ನ ಹೋಮ್​ಪೇಜ್​ನಲ್ಲಿ ಪ್ರಕಟಿಸುತ್ತಿದೆ. ಇಂದು ಅನಿಮೇಟೆಡ್ ಡೂಡಲ್ ‘ಪ್ಲೇಗ್ರೌಂಡ್ ಪ್ಯಾರಿಸ್ 2024’ ಎಂಬ ಪಿಕ್ಚರ್ ಪಝಲ್ ಗೇಮ್ ನೀಡಿದೆ. ಇದನ್ನು ಯಾರು ಬೇಕಾದರೂ ಆಡಬಹುದು.

ಹೀಗೆ ಆಡಿ: ಮೊದಲು ಗೂಗಲ್​ ಪುಟ ತೆರೆಯಿರಿ. ಅಲ್ಲಿ ಮೂರು ಅನಿಮೇಟೆಡ್​ ಚಿತ್ರಗಳೊಂದಿಗೆ ಗೂಗಲ್ ಎಂದು ಬರೆದಿದೆ. ಅದನ್ನು ಕ್ಲಿಕ್​ ಮಾಡಿ. ನಿಮಗೆ ಇಂದಿನ ‘ಪ್ಲೇಗ್ರೌಂಡ್ ಪ್ಯಾರಿಸ್ 2024’ ಪೇಜ್​ ತೆರೆದುಕೊಳ್ಳುತ್ತದೆ. ಅಲ್ಲಿ How to Play ಮತ್ತು Let’s Play ಎಂಬ ಆಯ್ಕೆಗಳಿವೆ. ಗೇಮ್​ ಬಗ್ಗೆ ಮಾಹಿತಿ ಬೇಕಾದಲ್ಲಿ ಸಹಾಯ ತೆಗೆದುಕೊಂಡು ಆಡಬಹುದು. ಇಡೀ ಪೇಜ್​ನಲ್ಲಿ ನಿಮಗೆ ಅನಿಮೇಟೆಡ್​ ಪ್ಯಾರಿಸ್ ನಗರದ ಚಿತ್ರದೊಂದಿಗೆ ನೂರಾರು ಜನರು, ಒಲಿಂಪಿಕ್ಸ್​ ಕ್ರೀಡಾಪಟುಗಳು ಕಾಣಿಸುತ್ತವೆ. ಇಲ್ಲಿ ನಿಮಗೆ ಜೂಮ್​ ಇನ್​, ಜೂಮ್​ ಔಟ್​ ಅವಕಾಶವೂ ಇದೆ.

ಒಲಿಂಪಿಕ್ಸ್ ಕ್ರೀಡೆಗೆ ಸಂಬಂಧಿಸಿದ 20 ಕ್ರೀಡೆಗಳ ಸ್ಫರ್ಧಿಗಳನ್ನು ನೀವು ಇಲ್ಲಿ ಹುಡುಕಬೇಕು. ಪರದೆಯ ಬಲಭಾಗದಲ್ಲಿ ವಿವಿಧ ಚಿತ್ರಗಳಿವೆ. ಅದರಲ್ಲಿ ಒಂದನ್ನು ಟ್ಯಾಪ್​ ಮಾಡಿ. ಬಳಿಕ ಆ ಚಿತ್ರ​ ​ಪ್ಯಾರಿಸ್​ನ ಪ್ಲೇಗ್ರೌಂಡ್​ನಲ್ಲಿ ಎಲ್ಲಿದೆ ಎಂಬುದನ್ನು ಹುಡುಕಿ ಕ್ಲಿಕ್ಕಿಸಿ. ಹೀಗೆ ಒಂದೊಂದನ್ನೇ ಹುಡುಕುತ್ತಾ 20 ಚಿತ್ರವನ್ನು ಕಂಡುಹಿಡಿದರೆ ‘ಪ್ಲೇಗ್ರೌಂಡ್ ಪ್ಯಾರಿಸ್ 2024’ನಲ್ಲಿ ನೀವು ಚಿನ್ನದ ಪದಕ ಗೆದ್ದಂತೆ!.

ಈ ‘ಪ್ಲೇಗ್ರೌಂಡ್ ಪ್ಯಾರಿಸ್​ನ ಅನಿಮೇಟೆಡ್​ ಚಿತ್ರದಲ್ಲಿ 20 ಕ್ರೀಡೆಗಳಲ್ಲದೇ, ಫ್ರೆಂಚ್ ಐಕಾನ್‌ಗಳು, ಪ್ರವಾಸಿ ತಾಣಗಳು, ಪ್ರಸಿದ್ಧ ಕಟ್ಟಡಗಳನ್ನೂ ನೀವು ನೋಡಬಹುದು.

ಕ್ರೀಡೆ

ಒಂದೇ ತಿಂಗಳಲ್ಲಿ 6 ಕ್ರಿಕೆಟಿಗರು ನಿವೃತ್ತಿ-ಲಿಸ್ಟ್ ನಲ್ಲಿದ್ದಾರೆ ಭಾರತದ ದಿಗ್ಗಜರು!

ನವದೆಹಲಿ: ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯೊಂದಿಗೆ ಶುರುವಾದ ಸ್ಟಾರ್ ಆಟಗಾರರ ಗುಡ್ ಬೈ ಪರ್ವ ಮುಂದುವರೆದಿದೆ, ಅದರಲ್ಲೂ ಮೇ ಮತ್ತು ಜೂನ್ ತಿಂಗಳ ನಡುವೆ ಒಟ್ಟು 6 ಆಟಗಾರರು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ,
ರೋಹಿತ್ ಶರ್ಮಾ: ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಹಿಟ್ ಮ್ಯಾನ್ ಇನ್ಮುಂದೆ ಏಕದಿನದಲ್ಲಿ ಮಾತ್ರ ಟೀಮ್ ಇಂಡಿಯಾ ಪ್ರತಿನಿಧಿಸಲಿದ್ದಾರೆ,
ವಿರಾಟ್ ಕೊಹ್ಲಿ: ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿನ ಕೂಡ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ, ಮೇ 12 ರಂದು ಟೆಸ್ಟ್ ಗೆ ನಿವೃತ್ತಿ ಪ್ರಕಟಿಸಿದ್ರು, ಕಿಂಗ್ ಕೊಹ್ಲಿ ಇನ್ನು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ಏಂಜೆಲೊ ಮ್ಯಾಥ್ಯೂಸ್: ಶ್ರೀಲಂಕಾ ತಂಡದ ಸ್ಟಾರ್ ಆಲ್‍ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ, ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ,
ಆದರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ,
ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಕೇವಲ 33 ವರ್ಷದ ಕ್ಲಾಸೆನ್, ಮುಂಬರುವ ದಿನಗಳಲ್ಲಿ ಟಿ20 ಲೀಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಅದು ಕೂಡ 29 ನೇ ವಯಸ್ಸಿನಲ್ಲಿ ಎಂಬುದು ಅಚ್ಚರಿ.

Continue Reading

ಕ್ರೀಡೆ

ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಹೇಗೆ ರೂಪಿಸುತ್ತದೆ ನಾನು ನೇರವಾಗಿ ಅನುಭವಿಸಿದ್ದೇನೆ ದೀಪಿಕಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಲೆಜೆಂಡ್​​ ಪ್ರಕಾಶ್ ಪಡುಕೋಣೆ ಅವರ 70ನೇ ಹುಟ್ಟುಹಬ್ಬವನ್ನಿಂದು ಬಹಳ ವಿಶೇಷವಾಗಿ ಆಚರಿಸಿದರು.

‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ (ಪಿಎಸ್​ಬಿ) ಬೆಂಗಳೂರು, ಎನ್​​ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹ್ರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ ಮತ್ತು ಸೂರತ್ ಸೇರಿದಂತೆ 18 ನಗರಗಳಲ್ಲಿ 75ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಇನ್​​​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ಮಾಧ್ಯಮ ಪ್ರಕಟಣೆ ಮೂಲಕ ಹೇಳಿದ್ದಾರೆ.

“ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದು ನಮ್ಮ ಆಶಯ” ಎಂದೂ ಸಹ ದೀಪಿಕಾ ತಿಳಿಸಿದ್ದಾರೆ. ಈ ಮೂಲಕ ಕೇಂದ್ರಗಳ ಸಂಖ್ಯೆ ವಿಸ್ತರಿಸುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​​ನಲ್ಲಿ, “ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ, ಈ ಕ್ರೀಡೆಯು ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದನ್ನು ನಾನು ನೇರವಾಗಿ ಅನುಭವಿಸಿದ್ದೇನೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಮೂಲಕ, ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಹಂತದ ಜನರಿಗೆ ತಲುಪಿಸಲು ಮತ್ತು ಆರೋಗ್ಯಕರ, ಫೋಕಸ್ಡ್​​ ಮತ್ತು ಕ್ರೀಡೆಯಿಂದ ಪ್ರೇರಿತವಾದ ಪೀಳಿಗೆಯನ್ನು ನಿರ್ಮಿಸಲು ನಾವು ಆಶಿಸುತ್ತೇವೆ. ಅಪ್ಪಾ, ನಿಮ್ಮನ್ನು ಚೆನ್ನಾಗಿ ತಿಳಿದಿರುವವರಿಗೆ ಈ ಕ್ರೀಡೆಯ ಬಗ್ಗೆ ನಿಮ್ಮ ಉತ್ಸಾಹವೂ ತಿಳಿದಿದೆ. 70ನೇ ವಯಸ್ಸಿನಲ್ಲಿಯೂ ನೀವು ಬ್ಯಾಡ್ಮಿಂಟನ್​ಗೆ ನಿಮ್ಮನ್ನು ಸಮರ್ಪಿಸಿದ್ದೀರಿ. ನಿಮ್ಮ ಉತ್ಸಾಹವನ್ನು ನಿಜವಾಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗಾಗಿ ಬ್ಯಾಡ್ಮಿಂಟನ್! 70ನೇ ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ!” ಎಂದು ಬರೆದುಕೊಂಡಿದ್ದಾರೆ.

ನಟಿ ಶೇರ್ ಮಾಡಿದ ಪ್ರಕಟಣೆಯಲ್ಲಿ, ಪಿಎಸ್‌ಬಿಯ ಮಾರ್ಗದರ್ಶಕ ಮತ್ತು ಸಲಹೆಗಾರ ಪ್ರಕಾಶ್ ಪಡುಕೋಣೆ ತಮ್ಮ ಮನದಾಳವನ್ನೂ ಹಂಚಿಕೊಂಡರು. “ಕ್ರೀಡೆಯು ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ. ಇದು ಶಿಸ್ತು, ಸ್ಥಿತಿಸ್ಥಾಪಕತ್ವ ಮತ್ತು ಗೆಲುವಿನ ಮನಸ್ಥಿತಿಯನ್ನು ಹುಟ್ಟಿಸುತ್ತದೆ. ಪಿಎಸ್‌ಬಿಯೊಂದಿಗೆ, ಗುಣಮಟ್ಟದ ತರಬೇತಿಯನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವುದು, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದು ಮತ್ತು ಭಾರತೀಯ ಬ್ಯಾಡ್ಮಿಂಟನ್‌ನ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುವುದು ನಮ್ಮ ಗುರಿ” ಎಂದು ಹೇಳಿದರು.

ಭಾರತದ 18 ನಗರಗಳಲ್ಲಿ 75 ಕೇಂದ್ರಗಳು ಆರಂಭಗೊಂಡಿದ್ದು, ಈ ವರ್ಷದ ಕೊನೆಗೆ 100 ಕೇಂದ್ರಗಳು ಮತ್ತು 2027ರ ಹೊತ್ತಿಗೆ 250 ಕೇಂದ್ರಗಳಿಗೆ ವಿಸ್ತರಿಸುವ ಗುರಿಯನ್ನು ‘ಪಡುಕೋಣೆ ಸ್ಕೂಲ್​ ಆಫ್​​ ಬ್ಯಾಡ್ಮಿಂಟನ್’ ಹೊಂದಿದೆ. ದೀಪಿಕಾ ಪಡುಕೋಣೆ ಇದರ ಸಂಸ್ಥಾಪಕಿಯಾದರೆ, ಪ್ರಕಾಶ್​ ಪಡುಕೋಣೆ ಮಾರ್ಗದರ್ಶಕರಾಗಿ ಪಿಎಸ್​ಬಿಯ ಭಾಗವಾಗಿದ್ದಾರೆ

Continue Reading

ಕ್ರೀಡೆ

ಕುಮಾರಸ್ವಾಮಿ ಸಿಡಿಸಿದ ಬಾಂಬ್‌ಗೆ ಗೋವಿಂದರಾಜ್ ತಲೆದಂಡ!

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಸಿಡಿಸಿದ ಬಾಂಬ್‌ಗೆ ಗೋವಿಂದರಾಜ್ (Govindraj) ತಲೆದಂಡವಾಗಿದೆ. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ (Chinnaswamy Stadium Stampede Case) ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜ್ ಅವರನ್ನು ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಆದೇಶ ಹೊರಡಿಸಿದ್ದಾರೆ.

ಗೋವಿಂದರಾಜ್ ಅವರು ಜೂನ್‌ 1, 2023 ರಿಂದ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆರ್‌ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಸನ್ಮಾನ ಮಾಡುವಂತೆ ಸಿದ್ದರಾಮಯ್ಯನವರಿಗೆ ಒತ್ತಡ ಹೇರಿದ್ದೇ ಗೋವಿಂದರಾಜ್‌ ಎಂಬ ಆರೋಪ ಈಗ ಕೇಳಿ ಬಂದಿದೆ.

ಕುಮಾರಸ್ವಾಮಿ ಹೇಳಿದ್ದೇನು?
ಜೂನ್‌ 4ರ ಬೆಳಗ್ಗೆ ಸಿಎಂ (CM Siddaramaiah) ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌ ಅವರು ಪೊಲೀಸ್‌ ಆಯುಕ್ತರಿಗೆ ಕರೆ ಮಾಡಿ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಬೇಕು ಎಂದು ಒತ್ತಡ ಹಾಕುತ್ತಾರೆ. ಇದಕ್ಕೆ ಆಯುಕ್ತರು, ಬೆಳಗ್ಗೆಯವರೆಗೆ ಪೊಲೀಸರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಎರಡು ಮೂರು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಕಷ್ಟವಾಗುತ್ತದೆ. ಒಂದು ಕಡೆ ಕಾರ್ಯಕ್ರಮ ಮಾಡಿದರೆ ಬಂದೋಬಸ್ತ್‌ ಕಲ್ಪಿಸಲು ಸಾಧ್ಯವಾಗುತ್ತದೆ. ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಆಯುಕ್ತರ ಪ್ರತಿಕ್ರಿಯೆ ಬಳಿಕ ಗೋವಿಂದರಾಜ್‌ ಅವರು ಸಿಎಂ ಬಳಿಗೆ ಹೋಗುತ್ತಾರೆ. ಸಿಎಂ ಅವರು ಆಯುಕ್ತರನ್ನು ಕರೆಸಿ, ನಾನು ಈ ರಾಜ್ಯದ ಸಿಎಂ. ಆದೇಶ ಮಾಡುತ್ತಿದ್ದೇನೆ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ಕೊಡಿ ಎಂದು ಸೂಚಿಸುತ್ತಾರೆ. ಅನಿವಾರ್ಯವಾಗಿ ಪೊಲೀಸ್ ಕಮಿಷನರ್ ವಿಧಾನಸೌಧಕ್ಕೆ ಬಿಗಿ ಭದ್ರತೆ ಹಾಕುತ್ತಾರೆ. ಆದರೆ ಯಾರಿಗೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸೂಚನೆ ಕೊಟ್ಟಿರುವುದಿಲ್ಲ. ಕಾಟಾಚಾರಕ್ಕೆ ಮೂರ್ನಾಲ್ಕು ತುಕಡಿ ಭದ್ರತೆ ಹಾಕಿರುತ್ತಾರೆ. ವಿಧಾನಸೌಧದಲ್ಲೇ ಕಾರ್ಯಕ್ರಮ ಮಾಡಬೇಕು, ನಾನು ಚಿನ್ನಸ್ವಾಮಿಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದ್ದರಿಂದ ಹೆಚ್ಚಿನ ಸಂಖ್ಯೆ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ಗಂಭೀರವಾದ ಆರೋಪ ಮಾಡಿದ್ದರು.

Continue Reading
Advertisement

Trending