Connect with us

ದೇಶ

ರಾಜಮನೆತನಕ್ಕೂ ಚಾಮುಂಡಿ ದೇವಾಲಯಕ್ಕೂ ಇರೋ ಸಂಬಂಧವೇನು? ದಾಖಲೆಗಳು ಏನು ಹೇಳ್ತಿವೆ?

Published

on

ಬೆಟ್ಟದ ಮೇಲೆ ಕುಳಿತಿರುವ ಚಾಮುಂಡೇಶ್ವರಿ ದೇವಿ ಮೈಸೂರು ರಾಜಮನೆತನದ ಪ್ರಧಾನ ದೇವತೆ. ಇಂದು ಸಹ ಅವರ ಮನೆತನದ ಹೆಸರಲ್ಲಿ ಸಂಕಲ್ಪ ಮಾಡಿ ಪೂಜೆ ಮಾಡಲಾಗುತ್ತದೆ. ಅನೇಕ ಹಳೆ ಸಂಪ್ರದಾಯ ಮತ್ತು ಪದ್ದತಿ ಆಚರಣೆಗಳನ್ನು ಮಾಡಲಾಗುತ್ತ್ತದೆ.

ದೇವಾಲಯದಲ್ಲಿ ಗೋಡೆಗಳು, ಅಡುಗೆ ಮನೆ, ಅಥಿತಿ ಗೃಹಗಳು ಸೇರಿ ಅನೇಕ ಅಭಿವೃದ್ದಿ ಕೆಲಸಗಳನ್ನು ಒಡೆಯರ್ ಮಾಡಿದ್ದಾರೆ. ಜೊತೆಗೆ ದೇವಾಲಯಕ್ಕೆ ಅನೇಕ ಚಿನ್ನಾಭರಣಗಳನ್ನು ನೀಡಿದ್ದಾರೆ. ದೇವಾಲಯದ ಪೂಜೆ ಖರ್ಚಿಗಾಗಿ ಭೂಮಿಯನ್ನ ಬಿಟ್ಟಿದ್ದಾರೆ. ಅದಕ್ಕಾಗಿ ನೂರಾರು ವರ್ಷಗಳಿಂದ ಸಂಕಲ್ಪ ಪೂಜೆ ನಡೆಯತ್ತಾ ಬಂದಿದೆ. ರಾಜಮನೆತದ ಹೆಸರಿನಲ್ಲಿಯೇ ಸಂಕಲ್ಪ ಮಾಡಿ ಪೂಜೆ ಆರಂಭ ಮಾಡಲಾಗುತ್ತದೆ. ಆದರಂತೆ ಚಾಮುಂಡಿ ಬೆಟ್ಟದಲ್ಲಿ ಅನೇಕ ಕಾರ್ಯಕ್ರಮ ಆಗುತ್ತವೆ. ದೇವಾಲಯವು ಇಂದು ಸಹ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ.

ದಾಖಲೆಗಳು ಏನು ಹೇಳುತ್ತವೆ?

1831 ರಲ್ಲಿ ಬ್ರಿಟಿಷ್ ಸರ್ಕಾರ ಮೈಸೂರು ಆಡಳಿತ ವಹಿಸಿಕೊಂಡಿತ್ತು. ಆಗ ಮುಜರಾಯಿ ಕಮಿಷನ್​ಗೆ ಆಡಳಿತದ ವರ್ಗಾವಣೆ ಮಾಡಿತ್ತು. ಆನಂತರ ಅರಮನೆ ಮುಜರಾಯಿ ಸಂಸ್ಥೆಗಳು ಅಂತಾ ಬದಲಾವಣೆ ಮಾಡಲಾಯಿತು. ಆದರೆ ಅದು ಮಹಾರಾಜರ ಬಳಿಯೇ ಅಂದಿನಿಂದಲೂ ಉಳಿದುಕೊಂಡಿದೆ.

ಹೆಚ್ ಪಿ ಶಶಿಧರಮೂರ್ತಿಯವರ ಬುಕ್​ನಲ್ಲಿ ಈ ಬಗ್ಗೆ ಉಲ್ಲೇಖ ಇದೆ. ಕರ್ನಾಟಕ ಸ್ಟೇಟ್ ಆರ್ಚಿವ್ ಡಿಪಾರ್ಟ್​ಮೆಂಟ್ ಮುಜರಾಯಿ ಬುಕ್​ನಲ್ಲಿ ಈ ಕುರಿತಾಗಿ ಮಾಹಿತಿ ಇದೆ. ಚಾಮುಂಡಿ ಬೆಟ್ಟದ ಕಾರ್ಯಗಳು 1970 – 71ರಿಂದ ರಾಜಮನೆತನದ ಒಡೆತನದಲ್ಲಿ ನಡೆಯುತ್ತಿದ್ದವು. 1986 ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಸಾವನ್ನಪ್ಪುತ್ತಾರೆ. ಆಗ ಸರ್ಕಾರದ ಸುಪರ್ದಿಗೆ ನೀಡಲಾಗಿತ್ತು.

ಅಕ್ಟೋಬರ್​​ 20, 1908 ರಲ್ಲಿ ಮಹಾರಾಜರಿಂದ ಆದೇಶವನ್ನು ಮಾಡಿದ್ದರು. ಚಾಮುಂಡಿ ದೇವಾಲಯದ ಸೇರಿ 12 ದೇವಾಲಯಗಳ ಬಗ್ಗೆ ಆದೇಶ ಹೊರಡಿಸಿದ್ದರು. ದೇವಾಲಯಗಳನ್ನ ಅರಮನೆ ಇಲಾಖೆಗೆ ವರ್ಗಾಯಿಸಿ ಆದೇಶ ನೀಡಿದ್ದರು. ಅಷ್ಟು ದೇವಾಲಯಗಳನ್ನು ಓರ್ವ ಅಧಿಕಾರಿ ನೋಡಿಕೊಳ್ಳಲು ನೇಮಕಗೊಳಿಸಲು ಆದೇಶ ನೀಡಿದ್ದರು.

ಜನವರಿ 20, 1909ರಲ್ಲಿ ಡಿಸಿ ಮೈಸೂರನ್ನು ಮ್ಯಾನೇಜ್ ಮಾಡಲು ಆದೇಶ ಹೊರಡಿಸುತ್ತಾರೆ. ಅದರಂತೆಯೇ ಏಪ್ರಿಲ್​ 14, 1920ರ ವೇಳೆ ಅರಮನೆಗೆ ಇಲಾಖೆ ಆಡಳಿತ ಮಂಡಳಿ ಆದೇಶ ನೀಡುತ್ತದೆ. ಅದರಲ್ಲಿ 29 ದೇವಾಲಯಗಳು ಮಹಾರಾಜರ ಆಡಳಿತದಲ್ಲಿದ್ದವು. ಜನವರಿ 23, 1950 ರಲ್ಲಿ ಭಾರತ ಸರ್ಕಾರ ಮತ್ತು ಮಹಾರಾಜರ ನಡುವೆ ಒಪ್ಪಂದ ನಡೆಯಿತು.

ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರುವಾಗ ಮೊದಲ ಒಪ್ಪಂದ ನಡೆಯಿತು. ಚಾಮುಂಡಿ ದೇವಾಲಯ ಸೇರಿ ಮಹಾರಾಜರ ಖಾಸಗಿ ಆಸ್ತಿಗಳ ಬಗ್ಗೆ ಮತ್ತು 29 ದೇವಾಲಯಗಳ ಮೇಲೆ ರಾಜಮನೆತದ ಪೂರ್ತಿ ಮಾಲಕತ್ವವಿದೆ ಎಂದು ಹೇಳಿತು.

ಆಗಸ್ಟ್​ 15, 47ರ ತನಕ ಇದ್ದ ಆಸ್ತಿಗಳ ಮೇಲೆ ಹಕ್ಕು ಹೊಂದಿರುವ ಒಪ್ಪಂದ ಮಾಡಲಾಯಿತು. ಇದಕ್ಕೆ ಮಹಾರಾಜ ಮತ್ತು ಸಿಎಸ್ ಆಫ್ ಭಾರತ ಸರ್ಕಾರದ ಸಹಿ ಇದೆ. ಫೆಬ್ರವರಿ 6, 1951ರ ಮೈಸೂರು ಸರ್ಕಾರದ ಆದೇಶದಲ್ಲಿಯೂ ಉಲ್ಲೇಖವಿದೆ. ಅರಮನೆ ಮುಜರಾಯಿ ಆಸ್ತಿಗಳು ಮಹಾರಾಜರಿಗೆ ಸೇರಿವೆ ಎಂದು ಆದೇಶವಿದೆ.

ದೇಶ

ಕಾಶ್ಮೀರ ನಕ್ಷೆ ತಪ್ಪಾಗಿ ಪ್ರದರ್ಶನ; ಬಾಂಗ್ಲಾದೇಶದಲ್ಲೇ ಭಾರತದ ಅಧಿಕಾರಿ ಖಡಕ್ ಆಕ್ಷೇಪ

Published

on

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ತಪ್ಪಾಗಿ ಬಿಂಬಿಸುವ ಭಾರತದ ನಕ್ಷೆ ಪ್ರದರ್ಶಿಸಲ್ಪಟ್ಟ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ವೇಳೆ ಢಾಕಾದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಕುಮಾರಿ ಝಾ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿ, “ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಅಂಗ” ಎಂದು ವೇದಿಕೆಯಲ್ಲೇ ಸ್ಪಷ್ಟಪಡಿಸಿದರು.

ಬಾಂಗ್ಲಾದೇಶ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಅಂಡ್ ಸ್ಟ್ರಾಟೆಜಿಕ್ ಸ್ಟಡೀಸ್ (BIISS) ಆಯೋಜಿಸಿದ್ದ ‘ಸಾರ್ಕ್ ಪುನಶ್ಚೇತನ: ಪ್ರಾದೇಶಿಕ ಸಮಗ್ರತೆ ಮತ್ತು ನಂಬಿಕೆ ಮರುಸ್ಥಾಪನೆ’ ವಿಷಯದ ವಿಚಾರಸಂಕಿರಣದಲ್ಲಿ ಈ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಭಾರತದಲ್ಲಿನ ಮಾಜಿ ಬಾಂಗ್ಲಾದೇಶ ಹೈಕಮಿಷನರ್ ಅಹಮದ್ ತಾರಿಕ್ ಕರೀಮ್ ತಮ್ಮ ಪ್ರಸ್ತುತಿಯಲ್ಲಿ ಭಾರತದ ಜಮ್ಮು-ಕಾಶ್ಮೀರ ಭಾಗವನ್ನು ತಪ್ಪಾಗಿ ತೋರಿಸುವ ನಕ್ಷೆಯನ್ನು ಬಳಸಿದ್ದರು. ಇದನ್ನು ಗಮನಿಸಿದ ಪೂಜಾ ಕುಮಾರಿ ಝಾ, ಸಭೆಯಲ್ಲೇ ನಕ್ಷೆಯ ದೋಷವನ್ನು ಸೂಚಿಸಿ ಭಾರತದ ಅಧಿಕೃತ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾರಿಕ್ ಕರೀಮ್, “ಈ ನಕ್ಷೆಯನ್ನು ಕೇವಲ ಪ್ರಸ್ತುತಿಗಾಗಿ ಬಳಸಲಾಗಿದೆ. ಇದು ನೈಜ ಗಡಿಗಳನ್ನು ಪ್ರತಿನಿಧಿಸುವುದಿಲ್ಲ” ಎಂದು ಸಮಜಾಯಿಷಿ ನೀಡಿದರು. ಆದರೆ ಅದಕ್ಕೆ ಉತ್ತರಿಸಿದ ಪೂಜಾ ಕುಮಾರಿ, “ನಿಮ್ಮ ವಿವರಣೆ ಅರ್ಥವಾಗಿದೆ. ಆದರೆ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಅದನ್ನು ತಪ್ಪಾಗಿ ಚಿತ್ರಿಸಲಾಗಿದೆ. ಅದನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸಿದೆ” ಎಂದು ಹೇಳಿದರು.

ಪೂಜಾ ಕುಮಾರಿ ಭಾರತೀಯ ಹೈಕಮಿಷನ್ ಅಧಿಕಾರಿಯಾಗಿರುವುದು ತಿಳಿದ ಬಳಿಕ, ಕರೀಮ್ “ನಿಮ್ಮ ಆಕ್ಷೇಪ ದಾಖಲಿಸಲಾಗಿದೆ” ಎಂದು ಹೇಳಿ ತಮ್ಮ ಭಾಷಣ ಮುಂದುವರಿಸಿದರು.

ಈ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಓಬೇದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ಭಾಷಣದಲ್ಲಿ ತಾರಿಕ್ ಕರೀಮ್, ದಕ್ಷಿಣ ಏಷ್ಯಾದ ದೇಶಗಳು ವಸಾಹತುಶಾಹಿ ಕಾಲದ ಗಡಿ ವಿಭಜನೆಯ ಪರಿಣಾಮವಾಗಿ ಪ್ರಾದೇಶಿಕ ಭದ್ರತೆ ಹಾಗೂ ಗಡಿ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

Continue Reading

ದೇಶ

ವಿಜಯಪುರದ ಮಗುವಿನ ಅಪರೂಪದ ಸಾಧನೆ; ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ

Published

on

ವಿಜಯಪುರ: ಸಾಧನೆ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ವಿಜಯಪುರ ಜಿಲ್ಲೆಯ ಕೇವಲ 10 ತಿಂಗಳ ಪುಟ್ಟ ಬಾಲಕ ರಿಯಾನ್ಸ್ ಪಟ್ಟಣಶೆಟ್ಟಿ ಸಾಬೀತುಪಡಿಸಿದ್ದಾನೆ. ತನ್ನ ಅಸಾಧಾರಣ ಪ್ರತಿಭೆಯ ಮೂಲಕ **’ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’**ನಲ್ಲಿ ಸ್ಥಾನ ಪಡೆದಿರುವ ಈ ಪುಟ್ಟ ಬಾಲಕ ಇದೀಗ ರಾಜ್ಯದ ಗಮನ ಸೆಳೆದಿದ್ದಾನೆ.

ವಿಜಯಪುರ ನಗರದ ನಿವಾಸಿಗಳಾದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನಾ ದಂಪತಿಯ ಪುತ್ರನಾದ ರಿಯಾನ್ಸ್, 21 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡುಗಳಲ್ಲಿ ಹತ್ತುವ ಮೂಲಕ ಈ ಅಪರೂಪದ ಸಾಧನೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನ ಮಗು ಇಷ್ಟು ವೇಗವಾಗಿ ಮೆಟ್ಟಿಲು ಹತ್ತಿರುವುದು ಅಪರೂಪದ ಸಾಧನೆಯಾಗಿ ದಾಖಲಾಗಿದೆ.

ರಿಯಾನ್ಸ್ ಮನೆಯೊಳಗಿನ ಮೆಟ್ಟಿಲುಗಳನ್ನು ಸುಲಭವಾಗಿ ಹಾಗೂ ವೇಗವಾಗಿ ಹತ್ತುತ್ತಿರುವುದನ್ನು ಗಮನಿಸಿದ ತಾಯಿ ಸಿಂಚನಾ, ಆತನ ಸಾಮರ್ಥ್ಯವನ್ನು ಮತ್ತಷ್ಟು ಪರೀಕ್ಷಿಸಲು ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತುವಂತೆ ಪ್ರೋತ್ಸಾಹಿಸಿದರು. ಯಾವುದೇ ಭಯವಿಲ್ಲದೆ ಅವನ್ನೂ ಯಶಸ್ವಿಯಾಗಿ ಹತ್ತಿದ ಮಗುವಿನ ಪ್ರತಿಭೆಯನ್ನು ಕಂಡ ಪೋಷಕರು ಅದನ್ನು ವಿಶ್ವಕ್ಕೆ ಪರಿಚಯಿಸುವ ನಿರ್ಧಾರ ಕೈಗೊಂಡರು.

ರಿಯಾನ್ಸ್ ಮೆಟ್ಟಿಲು ಹತ್ತುವ ಸಂಪೂರ್ಣ ವಿಡಿಯೋ ಹಾಗೂ ಅಗತ್ಯ ದಾಖಲೆಗಳನ್ನು ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಲಾಯಿತು. ಸಂಸ್ಥೆಯ ಅಧಿಕಾರಿಗಳು ವಿಡಿಯೋ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಸಾಧನೆಯನ್ನು ಅಧಿಕೃತವಾಗಿ ವಿಶ್ವದಾಖಲೆಯಾಗಿ ಮಾನ್ಯ ಮಾಡಿ ಪ್ರಮಾಣಪತ್ರ ನೀಡಿದರು.

ರಿಯಾನ್ಸ್‌ನ ಈ ಸಾಧನೆ ಪಟ್ಟಣಶೆಟ್ಟಿ ಕುಟುಂಬದಲ್ಲಿ ಸಂತಸ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಪುಟ್ಟ ಬಾಲಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿಶ್ವದಾಖಲೆ ನಿರ್ಮಿಸಿರುವ ರಿಯಾನ್ಸ್ ಭವಿಷ್ಯದಲ್ಲೂ ಇನ್ನಷ್ಟು ಸಾಧನೆ ಮಾಡಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Continue Reading

ದೇಶ

ಭಾರತಕ್ಕೆ ಅಮೆರಿಕದ 500% ಸುಂಕದ ಶಾಕ್? ರಷ್ಯಾ ತೈಲ ಖರೀದಿಗೆ ಹೊಸ ಮಸೂದೆ

Published

on

ವಾಷಿಂಗ್ಟನ್: ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ ಹಾಗೂ ಇತರ ಇಂಧನ ಉತ್ಪನ್ನಗಳನ್ನು ಖರೀದಿಸುವ ರಾಷ್ಟ್ರಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳುವ ಮಹತ್ವದ ಮಸೂದೆಗೆ ಅಮೆರಿಕದಲ್ಲಿ ವೇಗ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಒಪ್ಪಂದದ ಬಳಿಕ ನಾಲ್ವರು ಅಮೆರಿಕದ ಸೆನೆಟರ್‌ಗಳು ಈ ವಿಚಾರವನ್ನು ಘೋಷಿಸಿದ್ದು, ಮಸೂದೆ ಜಾರಿಯಾದರೆ ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಮಸೂದೆಯ ಪ್ರಕಾರ, ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು ಅಥವಾ ಯುರೇನಿಯಂ ಖರೀದಿಸುವ ದೇಶಗಳಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕು ಹಾಗೂ ಸೇವೆಗಳ ಮೇಲೆ ಶೇ 500ರವರೆಗೆ ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ಸಿಗಲಿದೆ. ಉಕ್ರೇನ್ ಯುದ್ಧಕ್ಕೆ ರಷ್ಯಾಗೆ ಹಣಕಾಸಿನ ಹರಿವು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಮಸೂದೆಗೆ ಅಮೆರಿಕ ಸೆನೆಟ್‌ನಲ್ಲಿ ಈಗಾಗಲೇ 84 ಸೆನೆಟರ್‌ಗಳ ಬೆಂಬಲ ದೊರೆತಿದೆ. ಟ್ರಂಪ್ ಕೂಡ ಮಸೂದೆಗೆ ಬೆಂಬಲ ಸೂಚಿಸಿರುವುದಾಗಿ ಸೆನೆಟರ್ ಲಿಂಡ್ಸೆ ಗ್ರಹಾಂ ತಿಳಿಸಿದ್ದಾರೆ. ಆದರೆ, ಇದು ಇನ್ನೂ ಮತದಾನ ಮತ್ತು ಅಂತಿಮ ಅಂಗೀಕಾರದ ಹಂತದಲ್ಲಿದೆ.

ವಿಶ್ವದಲ್ಲೇ ರಷ್ಯಾದ ಕಚ್ಚಾ ತೈಲವನ್ನು ಅತಿ ಹೆಚ್ಚು ಖರೀದಿಸುವ ರಾಷ್ಟ್ರಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇ 40ರಿಂದ 53ರಷ್ಟು ಇದ್ದು, ಈ ಮಸೂದೆ ಜಾರಿಯಾದರೆ ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಆದಾಗ್ಯೂ, ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ದೇಶಕ್ಕೆ 180 ದಿನಗಳವರೆಗೆ ವಿನಾಯಿತಿ ನೀಡುವ ವಿಶೇಷಾಧಿಕಾರ ಅಮೆರಿಕ ಅಧ್ಯಕ್ಷರಿಗೆ ಮಸೂದೆಯಲ್ಲಿ ಕಲ್ಪಿಸಲಾಗಿದೆ. ಹೀಗಾಗಿ, ಭಾರತದಂತಹ ಮಿತ್ರ ರಾಷ್ಟ್ರಗಳಿಗೆ ವಿನಾಯಿತಿ ದೊರೆಯುತ್ತದೆಯೇ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.

ಪ್ರಸ್ತುತ ಮಸೂದೆ ಸೆನೆಟ್‌ನಲ್ಲಿ ಚರ್ಚೆಯ ಹಂತದಲ್ಲಿದ್ದು, ಅಂಗೀಕಾರವಾದರೆ ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ.

Continue Reading

Trending