Connect with us

ದೇಶ

ವಾರ ಭವಿಷ್ಯ: ಈ ರಾಶಿಯಲ್ಲಿ ಜನಿಸಿದವರಿಗೆ ಬಹಳಷ್ಟು ಒಳಿತು – Weekly Horoscope

ಮೇಷ : ವಾರದ ಆರಂಭದಲ್ಲಿ ಹೆಚ್ಚನ ಹಣ ವೆಚ್ಚವಾಗಲಿದೆ, ಆದರೆ ವಾರಾಂತ್ಯದವರೆಗೆ ಪ್ರಯಾಣ ನಿಮಗೆ ಸಂತೋಷ ಉಂಟುಮಾಡಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ಕೊಂಚ ಬೇಸರ ಮೂಡಲಿದೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದು ನಿಮ್ಮಲ್ಲಿ ಸಂತೋಷ ಮತ್ತು ಹೊಸ ಹುಮ್ಮಸ್ಸು ಮೂಡಿಸಲಿದೆ. ಯಾವುದೇ ತೀರ್ಥಯಾತ್ರೆ ನಿಮಗೆ, ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಈ ಸಮಯದಲ್ಲಿ ಒಳಿತನ್ನು ಉಂಟುಮಾಡಲಿದೆ. ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಹೂಡಿಕೆಗಳನ್ನು ಮಾಡಬಹುದು ಹಾಗೂ ಬಂಡವಳಿಗರು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿಕೊಂಡು ಹೋಗುವುದು ಉತ್ತಮ. ಕುಟುಂಬದೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದೀರಿ. ಪರೀಕ್ಷೆ ಎದುರಿಸಲು ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರ ಆಸಕ್ತಿ ಕಡಿಮೆಯಾಗಿ, ಓದಿನ ಕಡೆ ಗಮನ ಕೇಂದ್ರೀಕರಿಸಲು ಕಷ್ಟವೆನಿಸಬಹುದು. ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ, ಮಕ್ಕಳು ತಮ್ಮ ದೈಹಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ ಹಾಗೂ ಎಚ್ಚರಿಕೆಯಿಂದ ಇರಬೇಕಿದೆ. ದೈಹಿಕ ಕಸರತ್ತನ್ನು ದಿನಚರಿಯ ಭಾಗವಾಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ವೃಷಭ : ಈ ವಾರವು ವೃಷಭ ರಾಶಿಯವರಿಗೆ ಸಾಕಷ್ಟು ಅನುಕೂಲಗಳನ್ನು ತಂದುಕೊಡಲಿದೆ. ಜ್ಞಾನ ಮತ್ತು ಮನೋಬಲ ಹೆಚ್ಚಳವಾಗಲಿದೆ. ಪ್ರೀತಿ ಹಾಗೂ ಬೌದ್ಧಿಕ ಸಂಬಂಧಗಳ ಕಡೆಗಿನ ಒಲವು ಹೆಚ್ಚಲಿದೆ. ಒಂದು ತಂಡವಾಗಿ ಕೆಲಸ ಮಾಡುವಿಕೆ ಹಾಗೂ ಪರಸ್ಪರ ಸಹಕಾರದಂತಹ ಅನುಕೂಲಗಳು ನಿಮ್ಮದಾಗಲಿವೆ. ಕೌಟುಂಬಿಕ ಜೀವನ ಹೆಚ್ಚು ಸಂತಸದಾಯಕ ಹಾಗೂ ಶಾಂತಿಯುತವಾಗಿರಲಿದ್ದು, ಕುಟುಂಬದ ಸದಸ್ಯರಲ್ಲಿ ಪರಸ್ಪರ ಸಹಕಾರ ಹೆಚ್ಚಲಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಲು ಕುಟುಂಬದ ಸದಸ್ಯರು ಪರಸ್ಪರರನ್ನು ಮಾರ್ಗದರ್ಶಕರಾಗಿ ಕಾಣಲಿದ್ದಾರೆ. ಭವಿಷ್ಯದ ಬಗೆಗಿನ ಕಳವಳ ನಿಮ್ಮಲ್ಲಿ ಆಧ್ಯಾತ್ಮಿಕ ಆಸಕ್ತಿಯನ್ನು ಜಾಗೃತಗೊಳಿಸಲಿದೆ. ಭಕ್ತಿಗೆ ಸಂಬಂಧಿಸಿದ ಕಾರ್ಯಗಳು ಹಾಗೂ ಸತ್ಸಂಗದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸ್ತ್ರೀಯರಿಂದ ಬೆಂಬಲ ಹಾಗೂ ಲಕ್ಷ್ಮಿಯ ಆಶೀರ್ವಾದ ದೊರೆಯಲಿದೆ. ಹೊಸ ಅವಕಾಶಗಳು ದೊರೆಯಲಿವೆ. ವ್ಯಕ್ತಿಗತ ಅಭಿವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಹೊಸತನ್ನು ನಿರೀಕ್ಷಿಸುತ್ತಿರುವವರಿಗೆ ಈ ವಾರ ಶುಭವಾಲಿದೆ.

ಮಿಥುನ : ಈ ವಾರ ನಿಮಗೆ ಖಂಡಿತವಾಗಿ ಹೊಸ ಸಂತೋಷ ತಂದುಕೊಡಲಿದೆ ಹಾಗೂ ಬಾಕಿ ಉಳಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಾಯಕವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಅಂತರ ಕಡಿಮೆಯಾಗಿ ಪ್ರೀತಿ ವೃದ್ಧಿಸಲಿದೆ. ವಾರಾಂತ್ಯದ ವೇಳೆಗೆ, ಕಲಿಕೆ ಹಾಗೂ ಪ್ರೇರಣೆಯ ಬಗೆಗಿನ ನಿಮ್ಮ ಪ್ರೀತಿ ಹೆಚ್ಚಲಿದೆ. ವಿವಾಹಿತರಿಗೆ ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದ್ದು, ಆಸೆಗಳು ಈಡೇರಲಿವೆ. ಜ್ಞಾನ ಪಡೆದುಕೊಳ್ಳಲು ಹಣ ಹೂಡಬೇಕಾಗಿ ಬರಬಹುದು, ಹಾಗಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಉನ್ನತ ವ್ಯಾಸಂಗ ಮಾಡುತ್ತಿರುವವರು ತಮ್ಮ ಇಷ್ಟದ ವಿಷಯದ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಈ ವಾರ ಸಹಾಯಕವಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲಿದ್ದೀರಿ. ಅಧ್ಯಾಪಕರು ನಿಮಗೆ ಸಹಾಯ ಮತ್ತು ಮಾರ್ಗದರ್ಶನ ಒದಗಿಸಲಿದ್ದಾರೆ. ಪ್ರವಾಸಕ್ಕೆ ತೆರಳಲು ಅವಕಾಶ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ಕಾಣಲಿದ್ದು, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಪ್ರಯಾಣದಿಂದ ಅನುಕೂಲ ಉಂಟಾಗಲಿದೆ.

ಕರ್ಕಾಟಕ : ಈ ವಾರದಲ್ಲಿ ಕುಟುಂಬದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯವಿದೆ. ಸಂಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂತಸ ಹಾಗೂ ಶಾಂತಿ ಕಾಣಬಹುದಾಗಿದೆ. ವಿವಾಹಿತರಿಗೆ ಈ ವಾರವಿಡೀ ಭಕ್ತಿ ಹಾಗೂ ಪ್ರೀತಿಗಾಗಿ ಮೀಸಲಿದ್ದು, ಸಂತೋಷ ಹಾಗೂ ಪ್ರಗತಿ ಹೊಂದಲಿದ್ದೀರಿ. ಪರಿವಾರಗಳು ಪ್ರಮುಖವಾದ ಉಡುಗೊರೆಗಳನ್ನು ಪಡೆಯಬಹುದು. ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸಾಕಷ್ಟು ಗಟ್ಟಿಯಾಗಿರಲಿವೆ. ಕೊಟ್ಟ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಿ ಮುಗಿಸುವ ಕಡೆ ನೌಕರರು ಗಮನ ಹರಿಸಬೇಕು. ವಹಿವಾಟುದಾರರು ಹೊಸ ಉಪಕರಣಗಳು ಹಾಗೂ ಶಿಕ್ಷಣದಲ್ಲಿ ಹಣ ಹೂಡಿಕೆ ಮಾಡುವುದು ಒಳಿತು. ಸಮರ್ಥವಾದ ಕಲಿಕೆ ಸಾಧ್ಯವಿರುವುದರಿಂದ, ಈ ವಾರ ಕಲಿಕೆ ಉತ್ತಮವಾಗಿ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಆದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಹೊರಗಿನ ಆಹಾರ ಪದಾರ್ಥಗಳ ಸೇವನೆ ಕಡಿಮೆಗೊಳಿಸಿ, ನಿಯಮಿತ ಆಹಾರಪದ್ಧತಿ ಹಾಗೂ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ.

ಸಿಂಹ : ಈ ವಾರ ಕೆಲವು ಸವಾಲುಗಳನ್ನು ಒಡ್ಡಲಿದೆ. ಬೇಸರ ಕಾಣಿಸಿಕೊಳ್ಳಬಹುದು ಹಾಗೂ ಕೆಲಸಗಳು ಪೂರ್ಣಗೊಳ್ಳಲು ಮಾಮೂಲಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಅಹಿತವಾದ ವಾತಾವರಣ ಕಾಣಿಸಿಕೊಳ್ಳಬಹುದು, ಆದರೆ ಕಷ್ಟಕಾಲದಲ್ಲಿ ನಿಮ್ಮ ಪ್ರೀತಿಪಾತ್ರರ ಸಹಕಾರ ಇರಲಿದೆ. ಸ್ವಲ್ಪ ಕಾಲ ನೀವು ಹಿಂದುಳಿಯಬಹುದು, ವ್ಯವಹಾರದಲ್ಲಿ ಇತರರೊಂದಿಗೆ ಸೇರಿ ಕೆಲಸ ಮಾಡುವುದರಿಂದ ಹೊಸ ಹೊಸ ದಾರಿಗಳು ನಿಮ್ಮ ಎದುರು ತೆರೆದುಕೊಳ್ಳಬಹುದು. ಇಂದಿನ ಹೂಡಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ಒಳಿತಾಗುವ ಆಶಾಭಾವನೆ ಇರಿಸಿಕೊಳ್ಳಬಹುದು, ಜೊತೆಗೆ ಆದಾಯವೂ ಹೆಚ್ಚಬಹುದು. ಕೆಲವು ಅನಿರೀಕ್ಷಿತ ಸಂತೋಷಗಳು ಸಹ ನಿಮ್ಮದಾಗಬಹುದು. ಹೊಸ ಶಿಕ್ಷಣ ಪಡೆಯುವ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸುವ ಜೊತೆಜೊತೆಗೆ, ಈಗ ಪಡೆಯುತ್ತಿರುವ ಶಿಕ್ಷಣವನ್ನು ಕಡೆಗಣಿಸದೆ ಇರುವುದು ಸಹ ಮುಖ್ಯವಾಗಿದೆ. ಅತಿಯಾದ ಕೆಲಸ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳದೇ ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಹಾಗೂ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯದ ಪರಿಣಾಮವಾಗಿ ನೀವು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇದೆ.

ಕನ್ಯಾ : ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಸಧ್ಯಕ್ಕೆ ಆರೋಗ್ಯ ಸಂಬಂಧಿತ ತೊಂದರೆಗಳು ಕಾಣಿಸಿಕೊಂಡರೂ, ನಂತರದ ದಿನಗಳಲ್ಲಿ ಕ್ರಮೇಣ ಅವೆಲ್ಲವೂ ಬಗೆಹರಿಯಲಿವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ ಹಾಗೂ ವಿವಾಹಿತರು ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹಳೆಯ ಸ್ನೇಹಿತರಿಂದ ಸಹಾಯ ಪಡೆದುಕೊಳ್ಳಬಹುದು. ಹಳೆಯ ಬಿಕ್ಕಟ್ಟುಗಳು ಬಗೆಹರಿದು, ಪರಿಹಾರ ನಿಮ್ಮ ಪರವಾಗಿ ಇರಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಸರ್ಕಾರಿ ಯೋಜನೆಗಳ ಸವಲತ್ತು ದೊರೆಯಲಿದೆ. ಸರ್ಕಾರಿ ಕೆಲಸದ ಹುಡುಕಾಟದಲ್ಲಿ ಇರುವವರಿಗೆ ಸಿಹಿಸುದ್ದಿ ಸಿಗಲಿದೆ. ಪ್ರೇಮಸಂಬಂಧಗಳು ಎಂದಿನಂತೆ ಇರಲಿದ್ದು, ಹಳೆಯ ಸ್ನೇಹಿತರಿಂದ ಹೆಚ್ಚಿನ ಆತ್ಮೀಯತೆ ಅನುಭವಿಸಲಿದ್ದೀರಿ. ರಾಜಕೀಯವಾಗಿ ಯಶಸ್ಸು ಸಿಗಲಿದ್ದು, ಆರ್ಥಿಕ ಅನುಕೂಲ ಉಂಟಾಗಲಿದೆ. ನಿಮ್ಮ ಕೌಶಲ್ಯ ಹಾಗೂ ಪ್ರಶಾಂತತೆಯ ಕಾರಣದಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಎತ್ತರಕ್ಕೆ ಏರಲಿದೆ. ಪೋಷಕರ ಬಗ್ಗೆ ಗಮನ ವಹಿಸುವುದು ಮುಖ್ಯ. ಮದುವೆಗಾಗಿ ಹುಡುಕಾಟದಲ್ಲಿರುವ ಹುಡುಗಿಯರಿಗೆ ಈ ವಾರ ಸೂಕ್ತ ಸಂಗಾತಿ ದೊರೆಯಲಿದ್ದಾರೆ. ದಂಪತಿಗಳ ನಡುವಿನ ಆಳವಾದ ಪ್ರೇಮ ಇನ್ನಷ್ಟು ಹೆಚ್ಚಾಗಲಿದೆ. ಹೊಸ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಭವಿಷ್ಯ ರೂಪುಗೊಳ್ಳಲಿದೆ.

ತುಲಾ : ಈ ವಾರ ನಿಮಗೆ ಉಜ್ವಲ ಹಾಗೂ ರಚನಾತ್ಮಕವಾಗಿ ಇರಲಿದೆ. ಉದ್ಯೋಗಸ್ಥರು ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಸಂದರ್ಭ ಎದುರಾಗಲಿದೆ. ಇದಕ್ಕಾಗಿ ನೀವು ಹೆಚ್ಚಿನ ಶ್ರಮ ಮತ್ತು ಬುದ್ಧಿಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಅಲ್ಲದೆ, ಇದರಿಂದ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವ್ಯವಹಾರಸ್ಥರು ತಮ್ಮ ಇತರ ವೃತ್ತಿಬಾಂಧವರೊಂದಿಗೆ ಸ್ಪರ್ಧಿಸಿ ತಮ್ಮ ಬೆಲೆಯನ್ನು ನಿರೂಪಿಸಬೇಕಿದೆ. ಕೌಟುಂಬಿಕ ಬಿಕ್ಕಟ್ಟು ಎದುರಿಸುತ್ತಿರುವ ದಂಪತಿಗಳು ಸ್ನೇಹಿತರ ಸಹಾಯದೊಂದಿಗೆ ಸಮಸ್ಯೆಯನ್ನು ಅಂತ್ಯಗೊಳಿಸಬಹುದು. ನಿಮ್ಮ ಸಂಗಾತಿಯೆಡೆಗಿನ ಪ್ರೇಮ ವೃದ್ಧಿಸಲಿದ್ದು, ಒಟ್ಟಾಗಿ ಸುಂದರ ಕ್ಷಣಗಳನ್ನು ಜೀವಿಸಲಿದ್ದೀರಿ. ಮನೆಯಲ್ಲಿ ಸಂತೋಷ ಹಾಗೂ ಸಂತೃಪ್ತಿ ನೆಲೆಸಲಿದ್ದು, ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿದ್ದೀರಿ.

ವೃಶ್ಚಿಕ : ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರ ಬಹಳಷ್ಟು ಒಳಿತನ್ನು ಮಾಡಲಿದೆ. ವೈಯಕ್ತಿಕ ಜೀವನದಲ್ಲಿ ಎಷ್ಟೋ ಕಾಲದಿಂದ ಪೂರ್ಣಗೊಳಿಸದೆ ಉಳಿದ ಕೆಲಸಗಳು ಈಗ ಸುಲಲಿತವಾಗಿ ನಡೆದು, ಉತ್ತಮ ಫಲಿತಾಂಶ ದೊರೆಯಲಿದೆ. ಬಹಳ ಕಾಲದಿಂದ ಇತ್ಯರ್ಥವಾಗದೆ ಉಳಿದ ಭಿನ್ನಾಭಿಪ್ರಾಯಗಳು ಹಾಗೂ ಕಾನೂನು ಹೋರಾಟಗಳು ಈ ವಾರ ಬಗೆಹರಿಯಲಿವೆ. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿನ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ನಿಮ್ಮ ಸಾಧನೆಯನ್ನು ಇತರರು ಗುರುತಿಸಲಿದ್ದಾರೆ. ಔದ್ಯೋಗಿಕ ಅವಕಾಶಗಳು ನಿಮ್ಮ ಆರ್ಥಿಕ ಬೆಳವಣಿಗೆಗೆ ಹೊಸ ದಾರಿ ಮಾಡಿಕೊಡಲಿದ್ದು, ನಿಮ್ಮ ಸಂಪತ್ತು ವೃದ್ಧಿಸಲಿದೆ. ವೃತ್ತಿಯಲ್ಲಿ ನೀವು ನಡೆಸುವ ಪ್ರಯತ್ನಗಳು ಹಾಗೂ ನಿಮ್ಮ ಆರ್ಥಿಕ ಸಾಧನೆಗಳು ನಿಮ್ಮಲ್ಲಿ ಹೊಸ ಉತ್ಸಾಹ ಹಾಗೂ ಚೈತನ್ಯ ಮೂಡಿಸಲಿವೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಸಂಪಾದನೆಯನ್ನು ಹೆಚ್ಚಿಸಿಕೊಳ್ಳಲು ಇದು ಸಕಾಲ. ಪ್ರಮುಖ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನಿಮ್ಮ ವಹಿವಾಟು ಬೆಳೆಯಲಿದೆ ಹಾಗೂ ವೃತ್ತಿಯಲ್ಲಿ ನೀವು ಎತ್ತರಕ್ಕೆ ಬೆಳೆಯಲು ಸಹಾಯವಾಗಲಿದೆ. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿಮ್ಮ ಮನಸ್ಸಲ್ಲಿ ತುಂಬಿರಲಿವೆ.

ಧನು : ಈ ವಾರ ಅದೃಷ್ಟ ನಿಮ್ಮ ಕಡೆಗೆ ಇರಲಿದ್ದು, ಅದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕಾದಲ್ಲಿ ನೀವು ಆಲಸ್ಯ ಮತ್ತು ದುರಹಂಕಾರಗಳಂತಹ ಗುಣಗಳನ್ನು ಬಿಡಬೇಕಿದೆ. ಕಾಲ ನಿರಂತರ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ನೀವು ತೆಗೆದುಕೊಳ್ಳುವ ಯಾವುದೇ ವಿರಾಮ ನಿಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಭವ ಇದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಲ್ಲಿ, ಅದನ್ನು ಪರಿಣಾಮಕಾರಿಯಾಗಿ ಪೂರೈಸುವ ಕಡೆ ನಿಮ್ಮ ಗುರಿ ಇರಲಿ. ಅಲ್ಲದೆ, ವೈರಿಗಳ ಕುರಿತು ಸಹ ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವ್ಯಾಪಾರ-ವಹಿವಾಟಿನ ವಿಷಯದಲ್ಲಿ ಈ ವಾರ ಬಹಳ ಅದೃಷ್ಟದಾಯಕವಾಗಿದ್ದು, ನಿಮ್ಮ ಆರ್ಥಿಕ ಗುರಿ ತಲುಪಲಿದ್ದೀರಿ. ನಿಮ್ಮ ಬಾಳಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದು, ವೈವಾಹಿಕ ಜೀವನ ಸಂತೃಪ್ತಿಯಿಂದ ಕೂಡಿರಲಿದೆ. ವಿದ್ಯಾರ್ಥಿಗಳ ಸಾಧನೆಗೆ ಇದು ಸರಿಯಾದ ಕಾಲ, ಆದರೆ ಅತಿಯಾದ ವಿಶ್ವಾಸವು ನಿಮ್ಮ ಗಮನ ಬೇರೆಡೆಗೆ ಹರಿಯುವಂತೆ ಮಾಡಿ ಶೈಕ್ಷಣಿಕ ಸಾಧನೆಯಿಂದ ನಿಮ್ಮನ್ನು ದೂರಗೊಳಿಸಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಾಧಾನ್ಯತೆ ನೀಡಬೇಕಿದ್ದು, ಈ ವಾರ ನೆಮ್ಮದಿಯಿಂದ ಕಳೆಯಲಿದ್ದೀರಿ.

ಮಕರ : ಎಲ್ಲವೂ ಸರಿಯಾಗಿದ್ದರೂ ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವಾರದ ಆರಂಭದಲ್ಲಿ, ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಲು ಸಾಧ್ಯವಾಗದಂತಹ ಅಡ್ಡಿಗಳು ಎದುರಾಗಬಹುದು. ಆಯಾ ಋತುವಿನಲ್ಲಿ ಕಾಣಿಸಿಕೊಳ್ಳುವಂತಹ ಅಥವಾ ಇತರ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ತಲೆದೋರಬಹುದು. ಕೆಲಸದೊತ್ತಡದ ಕಾರಣದಿಂದಾಗಿ ಹೆಚ್ಚಿನ ಸಮಯ ಕೆಲಸದಲ್ಲೇ ಕಳೆಯಬೇಕಿರುವುದರಿಂದ ಸಂಗಾತಿಯೊಡನೆ ಸಂಬಂಧ ಕೆಡದಂತೆ ಎಚ್ಚರ ವಹಿಸಬೇಕಿದೆ. ವ್ಯಾಪಾರಸ್ಥರು ಕೆಲವು ಏರುಪೇರುಗಳನ್ನು ಕಾಣಲಿದ್ದೀರಿ. ಸಣ್ಣಪುಟ್ಟ ಪ್ರಮಾದಗಳು ಸಹ ದೊಡ್ಡ ನಷ್ಟ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಯಾವುದೇ ಹೊಸ ಕೆಲಸದಲ್ಲಿ ಹಣ ಹೂಡುವ ಸಿದ್ಧತೆಯಲ್ಲಿರುವವರು ಅತಿ ಎಚ್ಚರ ವಹಿಸಬೇಕಿದೆ. ಸಂಗಾತಿಯ ಹಿನ್ನೆಲೆ ಹಾಗೂ ಅವರು ಇರುವ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಹಾಗೂ ನಿಮ್ಮ ಬಾಳಸಂಗಾತಿಯ ಕಾಳಜಿ ವಹಿಸುವುದರಿಂದ ನಿಮ್ಮ ವೈವಾಹಿಕ ಸಂಬಂಧ ಕೆಡದಂತೆ ನೋಡಿಕೊಳ್ಳಬಹುದು.

ಕುಂಭ : ನಿಮ್ಮ ಸಮಸ್ಯೆಗಳು ಈ ವಾರ ಕಡಿಮೆಯಾಗಲಿವೆ ಹಾಗೂ ಬಹಳ ಕಾಲದಿಂದ ಮುಗಿಸಲಾಗದೆ ಉಳಿಸಿದ ಕೆಲಸಗಳು ಈ ವಾರ ಪೂರ್ಣಗೊಳ್ಳಲಿವೆ. ವೃತ್ತಿಗೆ ಸಂಬಂಧಿಸಿದಂತೆ ಹೊಸ ದಾರಿ ಹುಡುಕಿಕೊಳ್ಳಲು ನಿಮ್ಮ ಕುಟುಂಬ ನಿಮ್ಮ ಸಹಾಯಕ್ಕೆ ನಿಲ್ಲಲಿದೆ. ವಾರದ ಮಧ್ಯದ ವೇಳೆಗೆ ನೀವು ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದು, ಅದರಲ್ಲಿ ಭೇಟಿಯಾಗುವ ಹೊಸ ಜನರಲ್ಲಿ ಆತ್ಮೀಯ ಸ್ನೇಹಿತರು ದೊರೆಯಲಿದ್ದಾರೆ. ಮನೆಯ ದುರಸ್ತಿ ಹಾಗೂ ಅಲಂಕಾರಕ್ಕಾಗಿ ಹಣ ಖರ್ಚು ಮಾಡಬೇಕಾದ ಸಾಧ್ಯತೆ ಇದೆ. ಹಣ ಸಂಪಾದಿಸುವ ಹೊಸ ದಾರಿಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ ಹಾಗೂ ಹಣದ ಸುರಿಮಳೆಯಾಗಲಿದೆ. ವಾರಾಂತ್ಯದ ವೇಳೆಗೆ ಬಿಡುವಿಲ್ಲದಷ್ಟು ಕೆಲಸಗಳು ಎದುರಾಗಲಿದ್ದು, ಕೆಲವು ಕಾರ್ಯಕ್ರಮಗಳನ್ನು ಸದ್ಯದ ಮಟ್ಟಿಗೆ ಮುಂದೂಡಬೇಕಾಗಲಿದೆ.

ಮೀನ : ನಿಮ್ಮ ಕೌಶಲ್ಯಗಳನ್ನು ಚೆನ್ನಾಗಿ ತೋರಿಸಿಕೊಳ್ಳಲು ಹಾಗೂ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಇದು ಅನುಕೂಲಕರವಾದ ವಾರ. ವಾರದ ಆರಂಭದಲ್ಲಿ, ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಸಿಹಿಸುದ್ದಿ ಕೇಳಲಿದ್ದು, ಇದರಿಂದ ವೃತ್ತಿಯಲ್ಲಿ ಮುಂದುವರೆಯಲು ಸಹಾಯವಾಗಲಿದೆ. ಉದ್ಯೋಗದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಂತೆ ಮನೆಯವರು ಹಾಗೂ ಸಹೋದ್ಯೋಗಿಗಳಲ್ಲಿ ನಿಮ್ಮ ಬಗೆಗಿನ ಗೌರವ ಹಾಗೂ ಅಭಿಮಾನ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಇದು ಒಳ್ಳೆಯ ಸಮಯ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ದೊರೆಯಲಿದೆ. ವಾರದ ಮಧ್ಯದ ವೇಳೆಗೆ, ಧಾರ್ಮಿಕವಾದ ಅಥವಾ ನಿಮಗೆ ಅದೃಷ್ಟ ತಂದುಕೊಡುವಂತಹ ಘಟನೆ ನಡೆಯುವ ಸಂದರ್ಭ ಬರಲಿದೆ. ಅವಿವಾಹಿತರಿಗೆ ಸಂಗಾತಿ ಸಿಗಬಹುದು. ವಿವಾಹಿತರಿಗೆ ನಿಮ್ಮ ಕುಟುಂಬ ವಿಸ್ತಾರಗೊಳ್ಳುವ ಸೂಚನೆ ದೊರೆಯಲಿದೆ. ಪ್ರೇಮಸಂಬಂಧಗಳು ಸಹ ಈ ವಾರ ಚೆನ್ನಾಗಿ ಅಭಿವೃದ್ಧಿಗೊಳ್ಳಲಿವೆ.

ದೇಶ

ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ಕಾಂಗ್ರೆಸ್ ಶಾಸಕ ವಿನಯ್!

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದೆ, ಅದ್ದರಿಂದ ಕೋರ್ಟ್ ಆದೇಶದಂತೆ ಇಂದು ವಿನಯ್ ಕುಲಕರ್ಣಿಯವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೋಟ್ ವಿಚಾರಣೆ ಮುಗಿದ ಬಳಿಕ ಶಾಸಕ ವಿನಯ್ ಕುಲಕರ್ಣಿಯವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುವುದು, ಇತ್ತೀಚಿಗೆ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಯ ಜಾಮೀನನ್ನು ರದ್ದುಪಡಿಸಿತು, ಒಂದು ವಾರದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು,
ಇವರ ಬೆಂಬಲಿಗರು ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಮಾಯಿಸಿದ್ರು, ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಕರೆದೊಯ್ದಿದ್ದಾರೆ, ಈ ವೇಳೆ ತಮ್ಮ ನಾಯಕ ಜೈಲು ಸೇರುತ್ತಿರೋದನ್ನು ಕಂಡು ಕೋರ್ಟ್ ಮುಂಭಾಗ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ,

ಏನಿದು ಪ್ರಕರಣ?
9 ವರ್ಷಗಳ ಹಿಂದೆ ಅಂದರೆ 2016 ರ ಜೂನ್ 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು, ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಆರೋಪವಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ 2020 ನವೆಂಬರ್ 5 ರಂದು ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು,

Continue Reading

ದೇಶ

ವಿಮಾನ ದುರಂತಗಳಲ್ಲಿ ಬ್ಲ್ಯಾಕ್​ ಬಾಕ್ಸ್​ ಹುಡುಕುವುದೇಕೆ? ಇದರ ಉಪಯೋಗವೇನು?

Black Box: ನಿನ್ನೆ ಮಧ್ಯಾಹ್ನ ಗುಜರಾತ್​ನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಏರ್ ಇಂಡಿಯಾ ವಿಮಾನ AI171 (ಬೋಯಿಂಗ್ 787 ಡ್ರೀಮ್‌ಲೈನರ್) ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:30 ಕ್ಕೆ ಟೇಕಾಫ್​ ಆಗಿ ಕೆಲವೇ ನಿಮಿಷಗಳು ಅಂದ್ರೆ..1:38 ಕ್ಕೆ ವಿಮಾನವು ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಮೇಘನಾನಿಗರ್‌ನ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

ಈ ವಿಮಾನದಲ್ಲಿ ಒಟ್ಟು 242 ಜನರಿದ್ದರು. ಈ ವಿಮಾನವು ಮೇಘನಾನಿಗರ್‌ನಲ್ಲಿರುವ ವೈದ್ಯಕೀಯ ಹಾಸ್ಟೆಲ್ ಮೇಲೆ ಬಿದ್ದಿದ್ದು, ಇದರಿಂದಾಗಿ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ವಿಮಾನ ಅಪಘಾತವನ್ನು ಭಾರತ ಮತ್ತು ವಿಶ್ವದ ಅತ್ಯಂತ ಮಾರಕ ವಿಮಾನ ಅಪಘಾತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ವಿಮಾನ ಅಪಘಾತಕ್ಕೆ ಸಂಬಂಧಿಸಿದ ತಾಂತ್ರಿಕ ಪದಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಅಂದ್ರೆ.. ಇದರಲ್ಲಿ ಬ್ಲ್ಯಾಕ್​ ಬಾಕ್ಸ್​ (ಕಪ್ಪು ಪೆಟ್ಟಿಗೆ) ಸೇರಿದಂತೆ ಅನೇಕ ತಾಂತ್ರಿಕ ವಿಷಯಗಳನ್ನು ಚರ್ಚಿಸಲಾಗುವುದು.

ಬ್ಲ್ಯಾಕ್​ ಬಾಕ್ಸ್​ ಎಂದರೇನು?: ಬ್ಲ್ಯಾಕ್​ ಬಾಕ್ಸ್​ ಅನ್ನು ಔಪಚಾರಿಕವಾಗಿ ಫ್ಲೈಟ್ ರೆಕಾರ್ಡರ್ ಎಂದು ಕರೆಯಲಾಗುತ್ತದೆ. ಇದು ವಿಮಾನವು ಹಾರಾಟದ ಸಮಯದಲ್ಲಿ ಸಂಭವಿಸುವ ಅನೇಕ ಪ್ರಮುಖ ಮಾಹಿತಿಯನ್ನು ದಾಖಲಿಸುವ ಅತ್ಯಂತ ಬಲವಾದ ಸಾಧನವಾಗಿದೆ. ಇದನ್ನು ಬ್ಲ್ಯಾಕ್​ ಬಾಕ್ಸ್ ಎಂದು ಕರೆದರೂ ಸಹ ಇದರ ಕಲರ್​ ಬ್ಲ್ಯಾಕ್​ ಆಗಿರುವುದಿಲ್ಲ. ಆದರೆ ಪ್ರಕಾಶಮಾನವಾದ ಕಿತ್ತಳೆ ಬಣ್ಣದ್ದಾಗಿದೆ.

ಬ್ಲ್ಯಾಕ್​ ಬಾಕ್ಸ್​ ಎರಡು ಭಾಗಗಳನ್ನು ಹೊಂದಿದೆ. ಇದರ ಮೊದಲ ಭಾಗವನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಎಂದು ಹೆಸರಿಸಲಾಗಿದೆ ಮತ್ತು ಎರಡನೇ ಭಾಗವನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದು ಹೆಸರಿಸಲಾಗಿದೆ. ಹಾರಾಟದಲ್ಲಿ ಅಪಘಾತವನ್ನು ತನಿಖೆ ಮಾಡುವ ತಜ್ಞರು ಬ್ಲ್ಯಾಕ್​ ಬಾಕ್ಸ್​ನಲ್ಲಿರುವ ಈ ಎರಡು ಭಾಗಗಳ ಮೂಲಕ ವಿಮಾನ ಅಪಘಾತದ ಕಾರಣಗಳನ್ನು ಕಂಡುಹಿಡಿಯುವಲ್ಲಿ ಸಹಾಯ ಪಡೆಯುತ್ತಾರೆ.

ಬ್ಲ್ಯಾಕ್​ ಬಾಕ್ಸ್​ ಯುಗಾರಂಭ: 1930 ರ ದಶಕದಲ್ಲಿ ಫ್ರೆಂಚ್ ಎಂಜಿನಿಯರ್ ಫ್ರಾಂಕೋಯಿಸ್ ಹುಸ್ಸೆನೋಟ್ ಫೋಟೋಗ್ರಾಫಿ ಫಿಲಂ ಹಾರಾಟದ ಮಾಹಿತಿಯನ್ನು ದಾಖಲಿಸುವ ಡೇಟಾ ರೆಕಾರ್ಡರ್ ಅನ್ನು ರಚಿಸಿದರು. 1950 ರ ದಶಕದಲ್ಲಿ ಆಸ್ಟ್ರೇಲಿಯಾದ ಡಾ. ಡೇವಿಡ್ ವಾರೆನ್ ವಿಮಾನದ ಡಾಟಾವನ್ನು ಹಾಗೂ ಕಾಕ್‌ಪಿಟ್‌ನ ಶಬ್ದಗಳನ್ನು (ಪೈಲಟ್‌ಗಳು ಕುಳಿತು ವಿಮಾನವನ್ನು ಹಾರಿಸುವ ಭಾಗ) ದಾಖಲಿಸಬಹುದಾದ ಸಾಧನವನ್ನು ರಚಿಸಲು ಸಲಹೆ ನೀಡಿದರು. ಡಾ. ಡೇವಿಡ್ ವಾರೆನ್ ಅವರ ಈ ಮೂಲಮಾದರಿಗೆ ಅವರ ಸ್ವಂತ ದೇಶವಾದ ಆಸ್ಟ್ರೇಲಿಯಾದಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ, ಆದರೆ ಪ್ರಪಂಚದ ಇತರ ದೇಶಗಳು ಅವರ ಸಲಹೆಯನ್ನು ಮೆಚ್ಚಿದವು.

ಅದರ ನಂತರ ಅವರ ಸಲಹೆಯನ್ನು ಸಹ ಕಾರ್ಯಗತಗೊಳಿಸಲಾಯಿತು ಮತ್ತು ಇಂದು ಎಲ್ಲಾ ದೊಡ್ಡ ವಿಮಾನಗಳಲ್ಲಿ ಬ್ಲ್ಯಾಕ್ಸ್​ ಬಾಕ್ಸ್​ ಹೊಂದಿರುವುದು ಕಡ್ಡಾಯವಾಗಿದೆ. ವಿಮಾನ ಸುರಕ್ಷತೆಗಾಗಿ ಮತ್ತು ಯಾವುದೇ ವಿಮಾನ ಅಪಘಾತದ ನಂತರ ಕಾರಣಗಳನ್ನು ಕಂಡುಹಿಡಿಯಲು ಬ್ಲ್ಯಾಕ್​ ಬಾಕ್ಸ್​ ಬಹಳ ಮುಖ್ಯವಾಗಿದೆ. ಈ ಬ್ಲ್ಯಾಕ್​ ಬಾಕ್ಸ್​ನಿಂದಾಗಿ ಭವಿಷ್ಯದ ವಿಮಾನಗಳನ್ನು ಸುರಕ್ಷಿತಗೊಳಿಸಲಾಗುತ್ತದೆ.

  • FDR ಹಾರಾಟದ ಸಮಯದಲ್ಲಿ ವಿಮಾನದ ಕಾರ್ಯಗಳು ಮತ್ತು ಸ್ಥಾನವನ್ನು ದಾಖಲಿಸುತ್ತದೆ.
  • ಇದು ಗಾಳಿಯ ವೇಗ, ಎತ್ತರ, ದಿಕ್ಕು, ಲಂಬ ವೇಗವರ್ಧನೆ ಮತ್ತು ವಿಮಾನದ ಸ್ಥಾನದಂತಹ ಅನೇಕ ಪ್ರಮುಖ ಮಾಹಿತಿಗಳನ್ನು ಕಲೆಹಾಕುತ್ತದೆ. , ಇದು ಯಾವುದೇ ಅಪಘಾತದ ನಂತರ ತನಿಖೆಗೆ ಬಹಳ ಮುಖ್ಯವಾಗಿದೆ.
  • ಹೊಸ ವಿಮಾನಗಳಲ್ಲಿ, ಕನಿಷ್ಠ 88 ನಿಯತಾಂಕಗಳನ್ನು ದಾಖಲಿಸುವುದು ಅವಶ್ಯಕ ಮತ್ತು ಫ್ಲಾಪ್ ಪೊಸಿಷನ್, ಆಟೋಪೈಲಟ್ ಸೆಟ್ಟಿಂಗ್ ಅಥವಾ ಹೊಗೆ ಪತ್ತೆಕಾರಕದಂತಹ ವಿಷಯಗಳನ್ನು ಒಳಗೊಂಡಂತೆ 1000 ಕ್ಕೂ ಹೆಚ್ಚು ವಿಷಯಗಳನ್ನು ಟ್ರ್ಯಾಕ್ ಮಾಡುವ ಕೆಲವು ಫ್ಲೈಟ್ ಡೇಟಾ ರೆಕಾರ್ಡರ್‌ಗಳು (FDR) ಇವೆ.
  • FDR ನ ವಿಶೇಷವೆಂದರೆ ಅದು 6,000 ಮೀಟರ್‌ಗಳಿಗಿಂತ ಹೆಚ್ಚು ಆಳದ ನೀರಿನ ಅಡಿಯಲ್ಲಿಯೂ ಸಹ ಸಂಕೇತಗಳನ್ನು ಕಳುಹಿಸಬಹುದು.
  • FDR ನಿಂದ ಪಡೆದ ಡೇಟಾದೊಂದಿಗೆ, ತನಿಖಾ ಸಂಸ್ಥೆಗಳು ಮತ್ತು ಜನರು ಕಂಪ್ಯೂಟರ್-ರಚಿತ ವಿಡಿಯೋಗಳನ್ನು ಮಾಡುವ ಮೂಲಕ ವಿಮಾನ ಅಪಘಾತದ ಸಮಯದಲ್ಲಿ ಅಂದರೆ ಕೊನೆಯ ಕ್ಷಣಗಳಲ್ಲಿ ಏನಾಗಿರಬಹುದು ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಈ ಡೇಟಾದ ಸಹಾಯದಿಂದ ಮಾಡಿದ ವಿಡಿಯೋವನ್ನು ಹಾರಾಟದ ಕೊನೆಯ ಕ್ಷಣಗಳನ್ನು ನೋಡಲು ಬಳಸಬಹುದು. ಇದು ವಿಮಾನದ ಸ್ಥಿತಿ, ಉಪಕರಣದ ವಾಚನಗೋಷ್ಠಿಗಳು ಮತ್ತು ಇತರ ವಿವರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ವಿವಶೇಷತೆಗಳು!:
  • ಬ್ಲ್ಯಾಕ್​ ಬಾಕ್ಸ್​ನ ಎರಡನೇ ಭಾಗವನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅಂದರೆ CVR ಎಂದು ಕರೆಯಲಾಗುತ್ತದೆ. ಕಾಕ್‌ಪಿಟ್‌ನಲ್ಲಿ ಕುಳಿತಿರುವ ಪೈಲಟ್‌ಗಳ ಸಂಭಾಷಣೆ ಮತ್ತು ಎಂಜಿನ್‌ನ ಶಬ್ದ​, ಸ್ಟಾಲ್ ಅಲರ್ಟ್, ಲ್ಯಾಂಡಿಂಗ್ ಗೇರ್ ಚಟುವಟಿಕೆಗಳು ಮತ್ತು ಇತರ ಹಲವು ಶಬ್ದಗಳನ್ನು ರೆಕಾರ್ಡ್ ಮಾಡುವುದು ಇದರ ಕೆಲಸವಾಗಿದೆ.
  • ಈ ಶಬ್ದಗಳಿಂದ ಎಂಜಿನ್‌ನ ವೇಗ, ವಿಮಾನದ ವ್ಯವಸ್ಥೆಗಳಲ್ಲಿನ ಅಸಮರ್ಪಕ ಕಾರ್ಯ ಸೇರಿದಂತೆ ಘಟನೆಯ ಸಮಯದಲ್ಲಿ ನಡೆದ ಅನೇಕ ವಿಷಯಗಳನ್ನು ಪತ್ತೆಹಚ್ಚಬಹುದು.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಸಾಮಾನ್ಯವಾಗಿ ವಿಮಾನದ ಬಲ ವಿಭಾಗದಲ್ಲಿ ಇರಿಸಲಾಗುತ್ತದೆ. ಈ ಕಾರಣದಿಂದಾಗಿ ಅಪಘಾತದಲ್ಲಿ ಇದು ಕನಿಷ್ಠ ಪರಿಣಾಮ ಬೀರುತ್ತದೆ.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಬಹಳ ರಹಸ್ಯವಾಗಿಡಲಾಗುತ್ತದೆ. ಅಮೆರಿಕ ಕಾನೂನಿನ ಪ್ರಕಾರ, ಸಿವಿಆರ್‌ನ ಆಡಿಯೊ ರೆಕಾರ್ಡಿಂಗ್ ಅನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಮತ್ತು ಅದರ ಲಿಖಿತ ಪ್ರತಿಲಿಪಿಯನ್ನು ತನಿಖೆ ಅಥವಾ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದೆ.
  • ಬ್ಲ್ಯಾಕ್​ ಬಾಕ್ಸ್​ ಏಕೆ ಅಗತ್ಯ?: ಯಾವುದೇ ವಿಮಾನ ಅಪಘಾತದ ನಂತರ ಆ ಅಪಘಾತವನ್ನು ತನಿಖೆ ಮಾಡಲು ಬ್ಲ್ಯಾಕ್​ ಬಾಕ್ಸ್​ ಬಹಳ ಮುಖ್ಯ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಇದು ಸಹಾಯ ಮಾಡುತ್ತದೆ. ಏಕೆಂದರೆ ಇದು ಹಾರಾಟದ ಪ್ರತಿ ಕ್ಷಣದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಅಪಘಾತದ ಮೊದಲು ನಡೆದ ಘಟನೆಗಳನ್ನು ಅರ್ಥಮಾಡಿಕೊಳ್ಳಲು ತನಿಖಾ ಅಧಿಕಾರಿಗಳಿಗೆ ಬ್ಲ್ಯಾಕ್​ ಬಾಕ್ಸ್​ ಸಹಾಯ ಮಾಡುತ್ತದೆ.
  • ಉದಾಹರಣೆಗೆ.. ಅಪಘಾತದ ಸಮಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇದೆಯೋ ಇಲ್ಲವೋ, ಎಂಜಿನ್‌ನಲ್ಲಿ ಯಾವುದೇ ಸಮಸ್ಯೆ ಇದೆಯೋ ಇಲ್ಲವೋ, ಹಕ್ಕಿ ಡಿಕ್ಕಿ ಹೊಡೆದಿದೆಯೋ ಇಲ್ಲವೋ, ಗಾಳಿಯಲ್ಲಿ ಸ್ಫೋಟವಾಗಿದೆಯೋ ಇಲ್ಲವೋ, ಯಾವುದೇ ಮಾನವ ತಪ್ಪಿನಿಂದ ಅಪಘಾತ ಸಂಭವಿಸಿದೆಯೋ ಇಲ್ಲವೋ ಸೇರಿದಂತೆ ಇತರೆ ಎಲ್ಲಾ ಅಂಶಗಳನ್ನು ಕಂಡುಹಿಡಿಯುವಲ್ಲಿ ಬ್ಲ್ಯಾಕ್​ ಬಾಕ್ಸ್​ ದೊಡ್ಡ ಪಾತ್ರವನ್ನು ವಹಿಸುತ್ತದೆ.
  • ಅಪಘಾತದ ನಂತರ ಏನಾಗುತ್ತದೆ?: ವಿಮಾನ ಅಪಘಾತದ ನಂತರ ಮೊದಲು ಹುಡುಕುವುದೇ ಬ್ಲ್ಯಾಕ್​ ಬಾಕ್ಸ್​. ಈ ಬ್ಲ್ಯಾಕ್​ ಬಾಕ್ಸ್​ ಅನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅಥವಾ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅದರ ಆಳವಾದ ತನಿಖೆ ಪ್ರಾರಂಭವಾಗುತ್ತದೆ.
  • ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಬ್ಲ್ಯಾಕ್​ ಬಾಕ್ಸ್​ ಮೆಮೊರಿ ಮಾಡ್ಯೂಲ್‌ನಿಂದ ಡೇಟಾವನ್ನು ಹೊರತೆಗೆಯುತ್ತಾರೆ. ಅದರ ನಂತರ ಅವರು ಅದರಲ್ಲಿ ರೆಕಾರ್ಡ್ ಮಾಡಿದ ಧ್ವನಿಗಳು ಮತ್ತು ಹಾರಾಟದ ಡೇಟಾವನ್ನು ಸೇರಿಸುತ್ತಾರೆ. ಈ ಡೇಟಾವನ್ನು ಸಿಂಕ್ ಮಾಡಲಾಗುತ್ತದೆ. ಬಳಿಕ ರಾಡಾರ್ ಮತ್ತು ATC ಡೇಟಾದಲ್ಲಿ ದಾಖಲಾದ ಡೇಟಾದೊಂದಿಗೆ ಹೊಂದಿಸಲಾಗುತ್ತದೆ.
  • ಈ ಸಂಪೂರ್ಣ ಪ್ರಕ್ರಿಯೆಯು ಕೆಲವು ದಿನಗಳಿಂದ ಹಲವಾರು ವಾರಗಳವರೆಗೆ ತೆಗೆದುಕೊಳ್ಳಬಹುದು. ಅಪಘಾತದ ಸಮಯದಲ್ಲಿ ಬ್ಲ್ಯಾಕ್​ ಬಾಕ್ಸ್​ ಹೆಚ್ಚಿನ ಹಾನಿಯಾಗಿಲ್ಲದಿದ್ದರೆ ತನಿಖೆಯನ್ನು ತ್ವರಿತವಾಗಿ ಮಾಡಲಾಗುತ್ತದೆ. ಒಂದು ವೇಳೆ ಬ್ಲ್ಯಾಕ್​ ಬಾಕ್ಸ್​ ಹೆಚ್ಚು ಹಾನಿಗೊಳಗಾಗಿದ್ದರೆ ತನಿಖೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.
Continue Reading

ದೇಶ

ವಿಮಾನ ದುರಂತ: ಅಹಮದಾಬಾದ್‌ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

ನವದೆಹಲಿ: ಏರ್​ ಇಂಡಿಯಾ ವಿಮಾನ ಅಪಘಾತ ದುರಂತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಹಮದಾಬಾದ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅಪಘಾತ ಸ್ಥಳ ಹಾಗೂ ಸಿವಿಲ್ ಆಸ್ಪತ್ರೆಗೆ ತೆರಳಿ ಅವರು ಪರಿಶೀಲನೆ ನಡೆಸುವ ಸಾಧ್ಯತೆಯಿದೆ.

ಈ ಬಗ್ಗೆ ಎನ್​ಎನ್​ಐ ವರದಿ ಮಾಡಿದ್ದು, ಪ್ರಧಾನಿ ಅವರು ಅಪಘಾತದಲ್ಲಿ ಮೃತಪಟ್ಟ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ಅಂತಿಮ ನಮನ ಸಲ್ಲಿಸುವ ನಿರೀಕ್ಷೆಯಿದೆ. ಬಳಿಕ ಅವರು ಕೇಂದ್ರ ಮತ್ತು ರಾಜ್ಯ ನಾಯಕರು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವ ನಿರೀಕ್ಷೆಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಸಚಿವರಾದ ಮಿನ್ ರಾಮ್ ನಾಯಕ್, ಸಿ ಆರ್ ಪಾಟೀಲ್ ಅವರು ಪ್ರಧಾನಿ ಅವರೊಂದಿಗೆ ಆಗಮಿಸುವ ನಿರೀಕ್ಷೆಯಿದೆ.

ಗುರುವಾರ ಸಂಜೆ ವಿಮಾನ ಪತನಗೊಂಡ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಳಿಕ ನೇರವಾಗಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ, ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಸಭೆ ನಡೆಸಿ ಇಡೀ ಘಟನೆಯ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ. ದುರಂತದಲ್ಲಿ ಎಷ್ಟು ಮಂದಿ ಮೃತಪಟ್ಟರು ಎಂಬುದನ್ನು ಡಿಎನ್ಎ ಪರೀಕ್ಷೆ ನಡೆಸಿದ ನಂತರ ಘೋಷಿಸಲಾಗುವುದು. ವಿಮಾನದಲ್ಲಿ ಸುಮಾರು 1,25,000 ಲೀಟರ್ ಇಂಧನ ಇತ್ತು. ಪತನದ ಸಂದರ್ಭದಲ್ಲಿ ಇಂಧನ ಹೊತ್ತಿ ಉರಿಯುತ್ತಿದ್ದುದರಿಂದ ಸ್ಥಳದಲ್ಲಿ ಭಾರೀ ಪ್ರಮಾಣದ ತಾಪಮಾನವಿತ್ತು. ಹಾಗಾಗಿ, ಅಲ್ಲಿ ಯಾರನ್ನೂ ಉಳಿಸಲು ಅವಕಾಶವಿರಲಿಲ್ಲ ಎಂದು ಅವರು ತಿಳಿಸಿದ್ದರು.

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಗುರುವಾರ ದೃಢಪಡಿಸಿದ್ದಾರೆ.

ಗುರುವಾರ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಇಲ್ಲಿನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅವಘಡ ಸಂಭವಿಸಿದ್ದು, ಒಟ್ಟಾರೆ 265 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ವಾಯು ದುರಂತ ಇದಾಗಿದೆ.

Continue Reading

Trending