ದೇಶ
ವಾರ ಭವಿಷ್ಯ: ಈ ರಾಶಿಯಲ್ಲಿ ಜನಿಸಿದವರಿಗೆ ಬಹಳಷ್ಟು ಒಳಿತು – Weekly Horoscope
ಮೇಷ : ವಾರದ ಆರಂಭದಲ್ಲಿ ಹೆಚ್ಚನ ಹಣ ವೆಚ್ಚವಾಗಲಿದೆ, ಆದರೆ ವಾರಾಂತ್ಯದವರೆಗೆ ಪ್ರಯಾಣ ನಿಮಗೆ ಸಂತೋಷ ಉಂಟುಮಾಡಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ಕೊಂಚ ಬೇಸರ ಮೂಡಲಿದೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದು ನಿಮ್ಮಲ್ಲಿ ಸಂತೋಷ ಮತ್ತು ಹೊಸ ಹುಮ್ಮಸ್ಸು ಮೂಡಿಸಲಿದೆ. ಯಾವುದೇ ತೀರ್ಥಯಾತ್ರೆ ನಿಮಗೆ, ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಈ ಸಮಯದಲ್ಲಿ ಒಳಿತನ್ನು ಉಂಟುಮಾಡಲಿದೆ. ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಹೂಡಿಕೆಗಳನ್ನು ಮಾಡಬಹುದು ಹಾಗೂ ಬಂಡವಳಿಗರು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿಕೊಂಡು ಹೋಗುವುದು ಉತ್ತಮ. ಕುಟುಂಬದೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದೀರಿ. ಪರೀಕ್ಷೆ ಎದುರಿಸಲು ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರ ಆಸಕ್ತಿ ಕಡಿಮೆಯಾಗಿ, ಓದಿನ ಕಡೆ ಗಮನ ಕೇಂದ್ರೀಕರಿಸಲು ಕಷ್ಟವೆನಿಸಬಹುದು. ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ, ಮಕ್ಕಳು ತಮ್ಮ ದೈಹಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ ಹಾಗೂ ಎಚ್ಚರಿಕೆಯಿಂದ ಇರಬೇಕಿದೆ. ದೈಹಿಕ ಕಸರತ್ತನ್ನು ದಿನಚರಿಯ ಭಾಗವಾಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ವೃಷಭ : ಈ ವಾರವು ವೃಷಭ ರಾಶಿಯವರಿಗೆ ಸಾಕಷ್ಟು ಅನುಕೂಲಗಳನ್ನು ತಂದುಕೊಡಲಿದೆ. ಜ್ಞಾನ ಮತ್ತು ಮನೋಬಲ ಹೆಚ್ಚಳವಾಗಲಿದೆ. ಪ್ರೀತಿ ಹಾಗೂ ಬೌದ್ಧಿಕ ಸಂಬಂಧಗಳ ಕಡೆಗಿನ ಒಲವು ಹೆಚ್ಚಲಿದೆ. ಒಂದು ತಂಡವಾಗಿ ಕೆಲಸ ಮಾಡುವಿಕೆ ಹಾಗೂ ಪರಸ್ಪರ ಸಹಕಾರದಂತಹ ಅನುಕೂಲಗಳು ನಿಮ್ಮದಾಗಲಿವೆ. ಕೌಟುಂಬಿಕ ಜೀವನ ಹೆಚ್ಚು ಸಂತಸದಾಯಕ ಹಾಗೂ ಶಾಂತಿಯುತವಾಗಿರಲಿದ್ದು, ಕುಟುಂಬದ ಸದಸ್ಯರಲ್ಲಿ ಪರಸ್ಪರ ಸಹಕಾರ ಹೆಚ್ಚಲಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಲು ಕುಟುಂಬದ ಸದಸ್ಯರು ಪರಸ್ಪರರನ್ನು ಮಾರ್ಗದರ್ಶಕರಾಗಿ ಕಾಣಲಿದ್ದಾರೆ. ಭವಿಷ್ಯದ ಬಗೆಗಿನ ಕಳವಳ ನಿಮ್ಮಲ್ಲಿ ಆಧ್ಯಾತ್ಮಿಕ ಆಸಕ್ತಿಯನ್ನು ಜಾಗೃತಗೊಳಿಸಲಿದೆ. ಭಕ್ತಿಗೆ ಸಂಬಂಧಿಸಿದ ಕಾರ್ಯಗಳು ಹಾಗೂ ಸತ್ಸಂಗದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸ್ತ್ರೀಯರಿಂದ ಬೆಂಬಲ ಹಾಗೂ ಲಕ್ಷ್ಮಿಯ ಆಶೀರ್ವಾದ ದೊರೆಯಲಿದೆ. ಹೊಸ ಅವಕಾಶಗಳು ದೊರೆಯಲಿವೆ. ವ್ಯಕ್ತಿಗತ ಅಭಿವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಹೊಸತನ್ನು ನಿರೀಕ್ಷಿಸುತ್ತಿರುವವರಿಗೆ ಈ ವಾರ ಶುಭವಾಲಿದೆ.
ಮಿಥುನ : ಈ ವಾರ ನಿಮಗೆ ಖಂಡಿತವಾಗಿ ಹೊಸ ಸಂತೋಷ ತಂದುಕೊಡಲಿದೆ ಹಾಗೂ ಬಾಕಿ ಉಳಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಾಯಕವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಅಂತರ ಕಡಿಮೆಯಾಗಿ ಪ್ರೀತಿ ವೃದ್ಧಿಸಲಿದೆ. ವಾರಾಂತ್ಯದ ವೇಳೆಗೆ, ಕಲಿಕೆ ಹಾಗೂ ಪ್ರೇರಣೆಯ ಬಗೆಗಿನ ನಿಮ್ಮ ಪ್ರೀತಿ ಹೆಚ್ಚಲಿದೆ. ವಿವಾಹಿತರಿಗೆ ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದ್ದು, ಆಸೆಗಳು ಈಡೇರಲಿವೆ. ಜ್ಞಾನ ಪಡೆದುಕೊಳ್ಳಲು ಹಣ ಹೂಡಬೇಕಾಗಿ ಬರಬಹುದು, ಹಾಗಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಉನ್ನತ ವ್ಯಾಸಂಗ ಮಾಡುತ್ತಿರುವವರು ತಮ್ಮ ಇಷ್ಟದ ವಿಷಯದ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಈ ವಾರ ಸಹಾಯಕವಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲಿದ್ದೀರಿ. ಅಧ್ಯಾಪಕರು ನಿಮಗೆ ಸಹಾಯ ಮತ್ತು ಮಾರ್ಗದರ್ಶನ ಒದಗಿಸಲಿದ್ದಾರೆ. ಪ್ರವಾಸಕ್ಕೆ ತೆರಳಲು ಅವಕಾಶ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ಕಾಣಲಿದ್ದು, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಪ್ರಯಾಣದಿಂದ ಅನುಕೂಲ ಉಂಟಾಗಲಿದೆ.
ಕರ್ಕಾಟಕ : ಈ ವಾರದಲ್ಲಿ ಕುಟುಂಬದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯವಿದೆ. ಸಂಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂತಸ ಹಾಗೂ ಶಾಂತಿ ಕಾಣಬಹುದಾಗಿದೆ. ವಿವಾಹಿತರಿಗೆ ಈ ವಾರವಿಡೀ ಭಕ್ತಿ ಹಾಗೂ ಪ್ರೀತಿಗಾಗಿ ಮೀಸಲಿದ್ದು, ಸಂತೋಷ ಹಾಗೂ ಪ್ರಗತಿ ಹೊಂದಲಿದ್ದೀರಿ. ಪರಿವಾರಗಳು ಪ್ರಮುಖವಾದ ಉಡುಗೊರೆಗಳನ್ನು ಪಡೆಯಬಹುದು. ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸಾಕಷ್ಟು ಗಟ್ಟಿಯಾಗಿರಲಿವೆ. ಕೊಟ್ಟ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಿ ಮುಗಿಸುವ ಕಡೆ ನೌಕರರು ಗಮನ ಹರಿಸಬೇಕು. ವಹಿವಾಟುದಾರರು ಹೊಸ ಉಪಕರಣಗಳು ಹಾಗೂ ಶಿಕ್ಷಣದಲ್ಲಿ ಹಣ ಹೂಡಿಕೆ ಮಾಡುವುದು ಒಳಿತು. ಸಮರ್ಥವಾದ ಕಲಿಕೆ ಸಾಧ್ಯವಿರುವುದರಿಂದ, ಈ ವಾರ ಕಲಿಕೆ ಉತ್ತಮವಾಗಿ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಆದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಹೊರಗಿನ ಆಹಾರ ಪದಾರ್ಥಗಳ ಸೇವನೆ ಕಡಿಮೆಗೊಳಿಸಿ, ನಿಯಮಿತ ಆಹಾರಪದ್ಧತಿ ಹಾಗೂ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ.
ಸಿಂಹ : ಈ ವಾರ ಕೆಲವು ಸವಾಲುಗಳನ್ನು ಒಡ್ಡಲಿದೆ. ಬೇಸರ ಕಾಣಿಸಿಕೊಳ್ಳಬಹುದು ಹಾಗೂ ಕೆಲಸಗಳು ಪೂರ್ಣಗೊಳ್ಳಲು ಮಾಮೂಲಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಅಹಿತವಾದ ವಾತಾವರಣ ಕಾಣಿಸಿಕೊಳ್ಳಬಹುದು, ಆದರೆ ಕಷ್ಟಕಾಲದಲ್ಲಿ ನಿಮ್ಮ ಪ್ರೀತಿಪಾತ್ರರ ಸಹಕಾರ ಇರಲಿದೆ. ಸ್ವಲ್ಪ ಕಾಲ ನೀವು ಹಿಂದುಳಿಯಬಹುದು, ವ್ಯವಹಾರದಲ್ಲಿ ಇತರರೊಂದಿಗೆ ಸೇರಿ ಕೆಲಸ ಮಾಡುವುದರಿಂದ ಹೊಸ ಹೊಸ ದಾರಿಗಳು ನಿಮ್ಮ ಎದುರು ತೆರೆದುಕೊಳ್ಳಬಹುದು. ಇಂದಿನ ಹೂಡಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ಒಳಿತಾಗುವ ಆಶಾಭಾವನೆ ಇರಿಸಿಕೊಳ್ಳಬಹುದು, ಜೊತೆಗೆ ಆದಾಯವೂ ಹೆಚ್ಚಬಹುದು. ಕೆಲವು ಅನಿರೀಕ್ಷಿತ ಸಂತೋಷಗಳು ಸಹ ನಿಮ್ಮದಾಗಬಹುದು. ಹೊಸ ಶಿಕ್ಷಣ ಪಡೆಯುವ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸುವ ಜೊತೆಜೊತೆಗೆ, ಈಗ ಪಡೆಯುತ್ತಿರುವ ಶಿಕ್ಷಣವನ್ನು ಕಡೆಗಣಿಸದೆ ಇರುವುದು ಸಹ ಮುಖ್ಯವಾಗಿದೆ. ಅತಿಯಾದ ಕೆಲಸ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳದೇ ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಹಾಗೂ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯದ ಪರಿಣಾಮವಾಗಿ ನೀವು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇದೆ.
ಕನ್ಯಾ : ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಸಧ್ಯಕ್ಕೆ ಆರೋಗ್ಯ ಸಂಬಂಧಿತ ತೊಂದರೆಗಳು ಕಾಣಿಸಿಕೊಂಡರೂ, ನಂತರದ ದಿನಗಳಲ್ಲಿ ಕ್ರಮೇಣ ಅವೆಲ್ಲವೂ ಬಗೆಹರಿಯಲಿವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ ಹಾಗೂ ವಿವಾಹಿತರು ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹಳೆಯ ಸ್ನೇಹಿತರಿಂದ ಸಹಾಯ ಪಡೆದುಕೊಳ್ಳಬಹುದು. ಹಳೆಯ ಬಿಕ್ಕಟ್ಟುಗಳು ಬಗೆಹರಿದು, ಪರಿಹಾರ ನಿಮ್ಮ ಪರವಾಗಿ ಇರಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಸರ್ಕಾರಿ ಯೋಜನೆಗಳ ಸವಲತ್ತು ದೊರೆಯಲಿದೆ. ಸರ್ಕಾರಿ ಕೆಲಸದ ಹುಡುಕಾಟದಲ್ಲಿ ಇರುವವರಿಗೆ ಸಿಹಿಸುದ್ದಿ ಸಿಗಲಿದೆ. ಪ್ರೇಮಸಂಬಂಧಗಳು ಎಂದಿನಂತೆ ಇರಲಿದ್ದು, ಹಳೆಯ ಸ್ನೇಹಿತರಿಂದ ಹೆಚ್ಚಿನ ಆತ್ಮೀಯತೆ ಅನುಭವಿಸಲಿದ್ದೀರಿ. ರಾಜಕೀಯವಾಗಿ ಯಶಸ್ಸು ಸಿಗಲಿದ್ದು, ಆರ್ಥಿಕ ಅನುಕೂಲ ಉಂಟಾಗಲಿದೆ. ನಿಮ್ಮ ಕೌಶಲ್ಯ ಹಾಗೂ ಪ್ರಶಾಂತತೆಯ ಕಾರಣದಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಎತ್ತರಕ್ಕೆ ಏರಲಿದೆ. ಪೋಷಕರ ಬಗ್ಗೆ ಗಮನ ವಹಿಸುವುದು ಮುಖ್ಯ. ಮದುವೆಗಾಗಿ ಹುಡುಕಾಟದಲ್ಲಿರುವ ಹುಡುಗಿಯರಿಗೆ ಈ ವಾರ ಸೂಕ್ತ ಸಂಗಾತಿ ದೊರೆಯಲಿದ್ದಾರೆ. ದಂಪತಿಗಳ ನಡುವಿನ ಆಳವಾದ ಪ್ರೇಮ ಇನ್ನಷ್ಟು ಹೆಚ್ಚಾಗಲಿದೆ. ಹೊಸ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಭವಿಷ್ಯ ರೂಪುಗೊಳ್ಳಲಿದೆ.
ತುಲಾ : ಈ ವಾರ ನಿಮಗೆ ಉಜ್ವಲ ಹಾಗೂ ರಚನಾತ್ಮಕವಾಗಿ ಇರಲಿದೆ. ಉದ್ಯೋಗಸ್ಥರು ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಸಂದರ್ಭ ಎದುರಾಗಲಿದೆ. ಇದಕ್ಕಾಗಿ ನೀವು ಹೆಚ್ಚಿನ ಶ್ರಮ ಮತ್ತು ಬುದ್ಧಿಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಅಲ್ಲದೆ, ಇದರಿಂದ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವ್ಯವಹಾರಸ್ಥರು ತಮ್ಮ ಇತರ ವೃತ್ತಿಬಾಂಧವರೊಂದಿಗೆ ಸ್ಪರ್ಧಿಸಿ ತಮ್ಮ ಬೆಲೆಯನ್ನು ನಿರೂಪಿಸಬೇಕಿದೆ. ಕೌಟುಂಬಿಕ ಬಿಕ್ಕಟ್ಟು ಎದುರಿಸುತ್ತಿರುವ ದಂಪತಿಗಳು ಸ್ನೇಹಿತರ ಸಹಾಯದೊಂದಿಗೆ ಸಮಸ್ಯೆಯನ್ನು ಅಂತ್ಯಗೊಳಿಸಬಹುದು. ನಿಮ್ಮ ಸಂಗಾತಿಯೆಡೆಗಿನ ಪ್ರೇಮ ವೃದ್ಧಿಸಲಿದ್ದು, ಒಟ್ಟಾಗಿ ಸುಂದರ ಕ್ಷಣಗಳನ್ನು ಜೀವಿಸಲಿದ್ದೀರಿ. ಮನೆಯಲ್ಲಿ ಸಂತೋಷ ಹಾಗೂ ಸಂತೃಪ್ತಿ ನೆಲೆಸಲಿದ್ದು, ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿದ್ದೀರಿ.
ವೃಶ್ಚಿಕ : ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರ ಬಹಳಷ್ಟು ಒಳಿತನ್ನು ಮಾಡಲಿದೆ. ವೈಯಕ್ತಿಕ ಜೀವನದಲ್ಲಿ ಎಷ್ಟೋ ಕಾಲದಿಂದ ಪೂರ್ಣಗೊಳಿಸದೆ ಉಳಿದ ಕೆಲಸಗಳು ಈಗ ಸುಲಲಿತವಾಗಿ ನಡೆದು, ಉತ್ತಮ ಫಲಿತಾಂಶ ದೊರೆಯಲಿದೆ. ಬಹಳ ಕಾಲದಿಂದ ಇತ್ಯರ್ಥವಾಗದೆ ಉಳಿದ ಭಿನ್ನಾಭಿಪ್ರಾಯಗಳು ಹಾಗೂ ಕಾನೂನು ಹೋರಾಟಗಳು ಈ ವಾರ ಬಗೆಹರಿಯಲಿವೆ. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿನ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ನಿಮ್ಮ ಸಾಧನೆಯನ್ನು ಇತರರು ಗುರುತಿಸಲಿದ್ದಾರೆ. ಔದ್ಯೋಗಿಕ ಅವಕಾಶಗಳು ನಿಮ್ಮ ಆರ್ಥಿಕ ಬೆಳವಣಿಗೆಗೆ ಹೊಸ ದಾರಿ ಮಾಡಿಕೊಡಲಿದ್ದು, ನಿಮ್ಮ ಸಂಪತ್ತು ವೃದ್ಧಿಸಲಿದೆ. ವೃತ್ತಿಯಲ್ಲಿ ನೀವು ನಡೆಸುವ ಪ್ರಯತ್ನಗಳು ಹಾಗೂ ನಿಮ್ಮ ಆರ್ಥಿಕ ಸಾಧನೆಗಳು ನಿಮ್ಮಲ್ಲಿ ಹೊಸ ಉತ್ಸಾಹ ಹಾಗೂ ಚೈತನ್ಯ ಮೂಡಿಸಲಿವೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಸಂಪಾದನೆಯನ್ನು ಹೆಚ್ಚಿಸಿಕೊಳ್ಳಲು ಇದು ಸಕಾಲ. ಪ್ರಮುಖ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನಿಮ್ಮ ವಹಿವಾಟು ಬೆಳೆಯಲಿದೆ ಹಾಗೂ ವೃತ್ತಿಯಲ್ಲಿ ನೀವು ಎತ್ತರಕ್ಕೆ ಬೆಳೆಯಲು ಸಹಾಯವಾಗಲಿದೆ. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿಮ್ಮ ಮನಸ್ಸಲ್ಲಿ ತುಂಬಿರಲಿವೆ.
ಧನು : ಈ ವಾರ ಅದೃಷ್ಟ ನಿಮ್ಮ ಕಡೆಗೆ ಇರಲಿದ್ದು, ಅದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕಾದಲ್ಲಿ ನೀವು ಆಲಸ್ಯ ಮತ್ತು ದುರಹಂಕಾರಗಳಂತಹ ಗುಣಗಳನ್ನು ಬಿಡಬೇಕಿದೆ. ಕಾಲ ನಿರಂತರ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ನೀವು ತೆಗೆದುಕೊಳ್ಳುವ ಯಾವುದೇ ವಿರಾಮ ನಿಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಭವ ಇದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಲ್ಲಿ, ಅದನ್ನು ಪರಿಣಾಮಕಾರಿಯಾಗಿ ಪೂರೈಸುವ ಕಡೆ ನಿಮ್ಮ ಗುರಿ ಇರಲಿ. ಅಲ್ಲದೆ, ವೈರಿಗಳ ಕುರಿತು ಸಹ ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವ್ಯಾಪಾರ-ವಹಿವಾಟಿನ ವಿಷಯದಲ್ಲಿ ಈ ವಾರ ಬಹಳ ಅದೃಷ್ಟದಾಯಕವಾಗಿದ್ದು, ನಿಮ್ಮ ಆರ್ಥಿಕ ಗುರಿ ತಲುಪಲಿದ್ದೀರಿ. ನಿಮ್ಮ ಬಾಳಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದು, ವೈವಾಹಿಕ ಜೀವನ ಸಂತೃಪ್ತಿಯಿಂದ ಕೂಡಿರಲಿದೆ. ವಿದ್ಯಾರ್ಥಿಗಳ ಸಾಧನೆಗೆ ಇದು ಸರಿಯಾದ ಕಾಲ, ಆದರೆ ಅತಿಯಾದ ವಿಶ್ವಾಸವು ನಿಮ್ಮ ಗಮನ ಬೇರೆಡೆಗೆ ಹರಿಯುವಂತೆ ಮಾಡಿ ಶೈಕ್ಷಣಿಕ ಸಾಧನೆಯಿಂದ ನಿಮ್ಮನ್ನು ದೂರಗೊಳಿಸಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಾಧಾನ್ಯತೆ ನೀಡಬೇಕಿದ್ದು, ಈ ವಾರ ನೆಮ್ಮದಿಯಿಂದ ಕಳೆಯಲಿದ್ದೀರಿ.
ಮಕರ : ಎಲ್ಲವೂ ಸರಿಯಾಗಿದ್ದರೂ ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವಾರದ ಆರಂಭದಲ್ಲಿ, ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಲು ಸಾಧ್ಯವಾಗದಂತಹ ಅಡ್ಡಿಗಳು ಎದುರಾಗಬಹುದು. ಆಯಾ ಋತುವಿನಲ್ಲಿ ಕಾಣಿಸಿಕೊಳ್ಳುವಂತಹ ಅಥವಾ ಇತರ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ತಲೆದೋರಬಹುದು. ಕೆಲಸದೊತ್ತಡದ ಕಾರಣದಿಂದಾಗಿ ಹೆಚ್ಚಿನ ಸಮಯ ಕೆಲಸದಲ್ಲೇ ಕಳೆಯಬೇಕಿರುವುದರಿಂದ ಸಂಗಾತಿಯೊಡನೆ ಸಂಬಂಧ ಕೆಡದಂತೆ ಎಚ್ಚರ ವಹಿಸಬೇಕಿದೆ. ವ್ಯಾಪಾರಸ್ಥರು ಕೆಲವು ಏರುಪೇರುಗಳನ್ನು ಕಾಣಲಿದ್ದೀರಿ. ಸಣ್ಣಪುಟ್ಟ ಪ್ರಮಾದಗಳು ಸಹ ದೊಡ್ಡ ನಷ್ಟ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಯಾವುದೇ ಹೊಸ ಕೆಲಸದಲ್ಲಿ ಹಣ ಹೂಡುವ ಸಿದ್ಧತೆಯಲ್ಲಿರುವವರು ಅತಿ ಎಚ್ಚರ ವಹಿಸಬೇಕಿದೆ. ಸಂಗಾತಿಯ ಹಿನ್ನೆಲೆ ಹಾಗೂ ಅವರು ಇರುವ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಹಾಗೂ ನಿಮ್ಮ ಬಾಳಸಂಗಾತಿಯ ಕಾಳಜಿ ವಹಿಸುವುದರಿಂದ ನಿಮ್ಮ ವೈವಾಹಿಕ ಸಂಬಂಧ ಕೆಡದಂತೆ ನೋಡಿಕೊಳ್ಳಬಹುದು.
ಕುಂಭ : ನಿಮ್ಮ ಸಮಸ್ಯೆಗಳು ಈ ವಾರ ಕಡಿಮೆಯಾಗಲಿವೆ ಹಾಗೂ ಬಹಳ ಕಾಲದಿಂದ ಮುಗಿಸಲಾಗದೆ ಉಳಿಸಿದ ಕೆಲಸಗಳು ಈ ವಾರ ಪೂರ್ಣಗೊಳ್ಳಲಿವೆ. ವೃತ್ತಿಗೆ ಸಂಬಂಧಿಸಿದಂತೆ ಹೊಸ ದಾರಿ ಹುಡುಕಿಕೊಳ್ಳಲು ನಿಮ್ಮ ಕುಟುಂಬ ನಿಮ್ಮ ಸಹಾಯಕ್ಕೆ ನಿಲ್ಲಲಿದೆ. ವಾರದ ಮಧ್ಯದ ವೇಳೆಗೆ ನೀವು ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದು, ಅದರಲ್ಲಿ ಭೇಟಿಯಾಗುವ ಹೊಸ ಜನರಲ್ಲಿ ಆತ್ಮೀಯ ಸ್ನೇಹಿತರು ದೊರೆಯಲಿದ್ದಾರೆ. ಮನೆಯ ದುರಸ್ತಿ ಹಾಗೂ ಅಲಂಕಾರಕ್ಕಾಗಿ ಹಣ ಖರ್ಚು ಮಾಡಬೇಕಾದ ಸಾಧ್ಯತೆ ಇದೆ. ಹಣ ಸಂಪಾದಿಸುವ ಹೊಸ ದಾರಿಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ ಹಾಗೂ ಹಣದ ಸುರಿಮಳೆಯಾಗಲಿದೆ. ವಾರಾಂತ್ಯದ ವೇಳೆಗೆ ಬಿಡುವಿಲ್ಲದಷ್ಟು ಕೆಲಸಗಳು ಎದುರಾಗಲಿದ್ದು, ಕೆಲವು ಕಾರ್ಯಕ್ರಮಗಳನ್ನು ಸದ್ಯದ ಮಟ್ಟಿಗೆ ಮುಂದೂಡಬೇಕಾಗಲಿದೆ.
ಮೀನ : ನಿಮ್ಮ ಕೌಶಲ್ಯಗಳನ್ನು ಚೆನ್ನಾಗಿ ತೋರಿಸಿಕೊಳ್ಳಲು ಹಾಗೂ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಇದು ಅನುಕೂಲಕರವಾದ ವಾರ. ವಾರದ ಆರಂಭದಲ್ಲಿ, ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಸಿಹಿಸುದ್ದಿ ಕೇಳಲಿದ್ದು, ಇದರಿಂದ ವೃತ್ತಿಯಲ್ಲಿ ಮುಂದುವರೆಯಲು ಸಹಾಯವಾಗಲಿದೆ. ಉದ್ಯೋಗದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಂತೆ ಮನೆಯವರು ಹಾಗೂ ಸಹೋದ್ಯೋಗಿಗಳಲ್ಲಿ ನಿಮ್ಮ ಬಗೆಗಿನ ಗೌರವ ಹಾಗೂ ಅಭಿಮಾನ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಇದು ಒಳ್ಳೆಯ ಸಮಯ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ದೊರೆಯಲಿದೆ. ವಾರದ ಮಧ್ಯದ ವೇಳೆಗೆ, ಧಾರ್ಮಿಕವಾದ ಅಥವಾ ನಿಮಗೆ ಅದೃಷ್ಟ ತಂದುಕೊಡುವಂತಹ ಘಟನೆ ನಡೆಯುವ ಸಂದರ್ಭ ಬರಲಿದೆ. ಅವಿವಾಹಿತರಿಗೆ ಸಂಗಾತಿ ಸಿಗಬಹುದು. ವಿವಾಹಿತರಿಗೆ ನಿಮ್ಮ ಕುಟುಂಬ ವಿಸ್ತಾರಗೊಳ್ಳುವ ಸೂಚನೆ ದೊರೆಯಲಿದೆ. ಪ್ರೇಮಸಂಬಂಧಗಳು ಸಹ ಈ ವಾರ ಚೆನ್ನಾಗಿ ಅಭಿವೃದ್ಧಿಗೊಳ್ಳಲಿವೆ.
ದೇಶ
BJP ಶಾಸಕರ ಖಾಸಗಿ ಕಾರು ತೊಳೆಯಲು ಅಗ್ನಿಶಾಮಕ ವಾಹನ ಬಳಕೆ? ವಿಡಿಯೋ ವೈರಲ್, ಭಾರೀ ಆಕ್ರೋಶ
ಮಧ್ಯಪ್ರದೇಶ: BJP ಶಾಸಕರೊಬ್ಬರ ಖಾಸಗಿ ಕಾರನ್ನು ತೊಳೆಯಲು ಸರ್ಕಾರಿ ಅಗ್ನಿಶಾಮಕ ದಳದ ವಾಹನವನ್ನು ಬಳಸಲಾಗಿದೆ ಎಂಬ ಆರೋಪ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಬಿಜೆಪಿ ಶಾಸಕ Ram Niwas Shah ಅವರ ನಿವಾಸದ ಹೊರಗೆ ಅಗ್ನಿಶಾಮಕ ವಾಹನದ ಪೈಪ್ ಮೂಲಕ ಅವರ ಇನೋವಾ ಕಾರಿಗೆ ನೀರು ಸಿಂಪಡಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬಿಲೋಂಜಿಯಲ್ಲಿರುವ ಶಾಸಕರ ಅಧಿಕೃತ ನಿವಾಸದ ಹೊರಗೆ ಮುನ್ಸಿಪಲ್ ಕಾರ್ಪೊರೇಷನ್ನ ಮೂವರು ಸಿಬ್ಬಂದಿ ಅಗ್ನಿಶಾಮಕ ವಾಹನದ ಪೈಪ್ ಬಳಸಿ ಕಾರಿನ ಮೇಲೆ ನೀರು ಸಿಂಪಡಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಸರ್ಕಾರಿ ಸಂಪನ್ಮೂಲಗಳ ಬಳಕೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.
‘ನಾನು ಕಾರು ತೊಳೆಯೋಕಾಗತ್ತಾ?’
ವಿಡಿಯೋ ಕುರಿತು ಸ್ಥಳೀಯ ಮಾಧ್ಯಮಗಳು ಶಾಸಕ ರಾಮ್ ನಿವಾಸ್ ಶಾ ಅವರನ್ನು ಪ್ರಶ್ನಿಸಿದಾಗ, ತಾವು ಕೂಡ ಆ ವಿಡಿಯೋವನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಆದರೆ, “ಶಾಸಕ ತನ್ನ ಕಾರನ್ನು ತೊಳೆಯಲು ಸಾಧ್ಯವೇ?” ಎಂದು ಅವರು ಪ್ರಶ್ನಿಸಿದ್ದಾರೆ. ತಮ್ಮ ಕಾರನ್ನು ತೊಳೆಯಲು ಅಗ್ನಿಶಾಮಕ ವಾಹನವನ್ನು ಬಳಸಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಗ್ನಿಶಾಮಕ ವಾಹನ ಮೇಯರ್ ಅವರ ಮನೆಗೆ ತೆರಳಿತ್ತು. ಅದು ಆಕಸ್ಮಿಕವಾಗಿ ತಮ್ಮ ನಿವಾಸದ ಮುಂದೆ ನಿಂತಿತ್ತು. ಈ ಸಂದರ್ಭದಲ್ಲಿ ಕಾರಿನ ಮೇಲೆ ಸ್ವಲ್ಪ ನೀರು ಸಿಂಪಡಿಸಲಾಗಿದೆ ಎಂದು ಶಾಸಕ ಹೇಳಿದ್ದಾರೆ.
‘ಚಾಲಕನಿಗೆ ಹಾಗೆ ಮಾಡಬೇಡಿ ಎಂದು ಹೇಳಿದ್ದೇನೆ’
ಘಟನೆಯನ್ನು ದೊಡ್ಡ ತಪ್ಪಾಗಿ ಬಿಂಬಿಸಬಾರದು ಎಂದು ರಾಮ್ ನಿವಾಸ್ ಶಾ ಹೇಳಿದ್ದಾರೆ. ಅಲ್ಲದೆ, ಇಂತಹ ಕೆಲಸ ಮಾಡಬೇಡಿ ಎಂದು ಅಗ್ನಿಶಾಮಕ ವಾಹನದ ಚಾಲಕನಿಗೆ ತಾವು ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ.
ತಮ್ಮ ನಿವಾಸವು ಅಗ್ನಿಶಾಮಕ ವಾಹನ ನಿಂತಿದ್ದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ ಎಂದು ಅವರು ಹೇಳಿದ್ದಾರೆ. ತಾವು ವಾಹನದಿಂದ ಇಳಿದು ಮನೆಗೆ ತೆರಳಿದ ಬಳಿಕ ಅಗ್ನಿಶಾಮಕ ವಾಹನವು ನೀರು ಸರಬರಾಜು ಮಾಡಲು ಅಲ್ಲೇ ನಿಂತಿತ್ತು. ಈ ವೇಳೆ ಚಾಲಕ ಅಥವಾ ಸಿಬ್ಬಂದಿ ಕಾರಿನ ಮೇಲೆ ನೀರು ಸಿಂಪಡಿಸಿರಬಹುದು ಎಂದು ಶಾಸಕ ವಿವರಿಸಿದ್ದಾರೆ.
ಚಾಲಕರು ಪರಸ್ಪರ ಸ್ನೇಹಿತರಾಗಿರುವುದರಿಂದ ಈ ಘಟನೆಯನ್ನು ದೊಡ್ಡ ವಿಚಾರವನ್ನಾಗಿ ಮಾಡಬಾರದು ಎಂಬ ರೀತಿಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ವಿಪಕ್ಷ ನಾಯಕನಿಂದ ತೀವ್ರ ಟೀಕೆ
ಈ ಘಟನೆಗೆ ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ದಳದ ವಾಹನಗಳನ್ನು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಬಳಸಬೇಕು. ಆದರೆ ಬಿಜೆಪಿ ಶಾಸಕರು ಸರ್ಕಾರಿ ಅಗ್ನಿಶಾಮಕ ವಾಹನವನ್ನು ಕಾರು ತೊಳೆಯುವ ವಾಹನದಂತೆ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಶಾಸಕರ ಖಾಸಗಿ ವಾಹನಕ್ಕಾಗಿ ಸರ್ಕಾರಿ ಸಂಪನ್ಮೂಲವನ್ನು ಬಳಸುವುದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರಿಂದಲೂ ಭಾರೀ ಆಕ್ರೋಶ
ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಿಸಲಾಗುವ ಸರ್ಕಾರಿ ತುರ್ತು ಸೇವೆಯ ವಾಹನವನ್ನು ಖಾಸಗಿ ಉದ್ದೇಶಕ್ಕೆ ಬಳಸುವುದು ಎಷ್ಟು ಸರಿ? ಎಂದು ಹಲವರು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ಅಗ್ನಿಶಾಮಕ ದಳದ ವಾಹನಗಳಿಗೆ ಪ್ರತಿದಿನ ಬೆಂಕಿ ಅವಘಡಗಳು ಎದುರಾಗುವುದಿಲ್ಲ. ಹೀಗಾಗಿ ಬಿಡುವಿನ ವೇಳೆಯಲ್ಲಿ ಕಾರು ತೊಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮತ್ತೊಬ್ಬರು, ಸಾಮಾನ್ಯ ಜನರ ಮನೆಗೆ ಬೆಂಕಿ ಬಿದ್ದಾಗ ತುರ್ತಾಗಿ ಬಳಸಬೇಕಾದ ಅಗ್ನಿಶಾಮಕ ವಾಹನವನ್ನು ಖಾಸಗಿ ಕಾರಿಗೆ ನೀರು ಸಿಂಪಡಿಸಲು ಬಳಸಿರುವುದು ಸಾರ್ವಜನಿಕ ಸಂಪನ್ಮೂಲಗಳ ದುರ್ಬಳಕೆಯ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಸಂಪನ್ಮೂಲ ದುರ್ಬಳಕೆ ಬಗ್ಗೆ ಚರ್ಚೆ
ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸರ್ಕಾರಿ ಸಂಪನ್ಮೂಲಗಳನ್ನು ರಾಜಕಾರಣಿಗಳು ಅಥವಾ ಸಾರ್ವಜನಿಕ ಪ್ರತಿನಿಧಿಗಳು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಳ್ಳಬಹುದೇ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಅಧಿಕೃತ ಕ್ರಮ ಕೈಗೊಂಡಿದ್ದಾರೆಯೇ ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಅಗ್ನಿಶಾಮಕ ವಾಹನದ ಸಿಬ್ಬಂದಿ ಯಾವ ಕಾರಣಕ್ಕಾಗಿ ಖಾಸಗಿ ಕಾರಿನ ಮೇಲೆ ನೀರು ಸಿಂಪಡಿಸಿದರು ಎಂಬುದರ ಕುರಿತು ಸ್ಪಷ್ಟನೆ ಹೊರಬರಬೇಕಿದೆ.
ಸದ್ಯ ಬಿಜೆಪಿ ಶಾಸಕನ ಕಾರಿಗೆ ಅಗ್ನಿಶಾಮಕ ವಾಹನದಿಂದ ನೀರು ಸಿಂಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು
Vande Mataram ಸಂಪೂರ್ಣ ಹಾಡುವ ವಿಚಾರಕ್ಕೆ ರಾಜಕೀಯ ರಂಪಾಟ; CM ಡಿಕೆಶಿ ಹೇಳಿದ್ದೇನು?
ಬೆಂಗಳೂರು: ‘Vande Mataram’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬ ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ಕರ್ನಾಟಕ ಸರ್ಕಾರ ಬದ್ಧವಾಗಿರಲಿದೆ ಎಂದು ಮುಖ್ಯಮಂತ್ರಿ D.K.Shivkumar ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡಲಾಗಿದ್ದರೂ, ಅದು ತಮ್ಮ ಗಮನಕ್ಕೆ ಬಾರದೆ ನಡೆದ ಘಟನೆ ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಕೈಗೊಂಡಿರುವ ನಿರ್ಧಾರದಂತೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
‘ಪಕ್ಷದ ನಿರ್ಧಾರಕ್ಕೆ ನಾನು ಬದ್ಧ’
ಇಂಡಿಯಾ ಟುಡೇ ಆಯೋಜಿಸಿದ್ದ ರೌಂಡ್ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ತಾವು ಪಕ್ಷದ ಸಿದ್ಧಾಂತವನ್ನು ನಂಬುವ ವ್ಯಕ್ತಿಯಾಗಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯಂದು ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಹಾಡಿದ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಅವರು ತಿಳಿಸಿದರು. ಅದು ತಮ್ಮ ಗಮನಕ್ಕೆ ಬಾರದೆ ನಡೆದಿರಬಹುದು ಅಥವಾ ರಾಜಭವನದಲ್ಲಿ ನಡೆದಿರಬಹುದು ಎಂದು ಹೇಳಿದ ಅವರು, ಮುಂದೆ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲೂ ಹಿಂದಿನ ನಿರ್ಧಾರದಂತೆ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತವಾಗುವುದಾಗಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಿರ್ಧಾರವೇನು?
ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತನ್ನ ಹಿಂದಿನ ನಿಲುವನ್ನು ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 1937ರಲ್ಲಿ ಕೈಗೊಂಡ ನಿರ್ಣಯವನ್ನು ಇತ್ತೀಚೆಗೆ ಮತ್ತೊಮ್ಮೆ ಉಲ್ಲೇಖಿಸಿದ್ದು, ಸಾರ್ವಜನಿಕ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ.
ಈ ನಿರ್ಧಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡಬೇಕೆಂಬ ಅಭಿಪ್ರಾಯ ಒಂದು ಕಡೆ ಇದ್ದರೆ, ಕಾಂಗ್ರೆಸ್ ತನ್ನ ಹಿಂದಿನ ಪದ್ಧತಿಯಂತೆ ಮೊದಲ ಎರಡು ಚರಣಗಳನ್ನಷ್ಟೇ ಹಾಡುವ ನಿಲುವನ್ನು ಮುಂದುವರಿಸಿದೆ.
ವಂದೇ ಮಾತರಂ ವಿವಾದಕ್ಕೆ ಕಾರಣವೇನು?
ಬಂಕಿಮ್ ಚಂದ್ರ ಚಟರ್ಜಿ ರಚಿಸಿರುವ ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅತ್ಯಂತ ಪ್ರಮುಖ ರಾಷ್ಟ್ರಭಕ್ತಿ ಗೀತೆಯಾಗಿ ಹೊರಹೊಮ್ಮಿತ್ತು. ಸ್ವಾತಂತ್ರ್ಯ ಚಳವಳಿಯಲ್ಲಿ ಇದು ಜನರಲ್ಲಿ ರಾಷ್ಟ್ರೀಯ ಭಾವನೆ ಮೂಡಿಸುವ ಪ್ರಮುಖ ಸಂಕೇತವಾಗಿತ್ತು.
ಇದೀಗ ಗೀತೆಯ ಸಂಪೂರ್ಣ ಆವೃತ್ತಿಯನ್ನು ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡಬೇಕೇ ಅಥವಾ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತವಾಗಬೇಕೇ ಎಂಬ ವಿಚಾರ ರಾಜಕೀಯ ಚರ್ಚೆಯ ಕೇಂದ್ರವಾಗಿದೆ.
ಸಂಪೂರ್ಣ ವಂದೇ ಮಾತರಂ ಹಾಡುವುದನ್ನು ಬೆಂಬಲಿಸುವವರು ಗೀತೆಗೆ ಅದರ ಪೂರ್ಣ ರೂಪದಲ್ಲೇ ಗೌರವ ಸಲ್ಲಿಸಬೇಕು ಎಂದು ವಾದಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ತನ್ನ ಐತಿಹಾಸಿಕ ನಿಲುವಿನಂತೆ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
‘ತುಷ್ಟಿಕರಣ ರಾಜಕೀಯ’ದ ಆರೋಪಕ್ಕೂ ಡಿಕೆಶಿ ತಿರುಗೇಟು
ಇದೇ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ತುಷ್ಟಿಕರಣ ರಾಜಕೀಯದ ಆರೋಪಗಳ ಬಗ್ಗೆಯೂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಪಕ್ಷವು ದೇಶದ ವೈವಿಧ್ಯತೆಯನ್ನು ನಂಬುತ್ತದೆ ಎಂದು ಅವರು ಹೇಳಿದರು.
ಭಾರತ ವಿವಿಧ ಸಮುದಾಯಗಳು, ಸಂಸ್ಕೃತಿಗಳು ಮತ್ತು ನಂಬಿಕೆಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿದ್ದು, ಸಮಾಜದ ಪ್ರತಿಯೊಂದು ವರ್ಗವನ್ನೂ ಒಟ್ಟಿಗೆ ಕರೆದೊಯ್ಯುವುದು ಕಾಂಗ್ರೆಸ್ನ ಸಿದ್ಧಾಂತವಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಕಾಂಗ್ರೆಸ್ ವಿರುದ್ಧ ತುಷ್ಟಿಕರಣ ರಾಜಕೀಯದ ಆರೋಪ ಮಾಡುತ್ತಿದೆ. ಆದರೆ ವಾಸ್ತವವಾಗಿ ಬಿಜೆಪಿಯೇ ತುಷ್ಟಿಕರಣದ ರಾಜಕೀಯ ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಮುಂದಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಏನಾಗಲಿದೆ?
ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಗಾಯನದ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.
ಮುಂದಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ನ ನಿರ್ಧಾರದಂತೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನಷ್ಟೇ ಹಾಡುವ ಸಾಧ್ಯತೆ ಇದೆ. ಈ ವಿಚಾರ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿರುವುದರಿಂದ, ಮುಂದಿನ ದಿನಗಳಲ್ಲಿ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ರಾಜಕೀಯ
Valmiki Corporation Scam: ‘ನಾಗೇಂದ್ರ ನಿರಪರಾಧಿ ಎಂದು ಸಾಬೀತಾದರೆ ಸಿಎಂ ಮಾಡಿಕೊಳ್ಳಿ’ ಎಂದ ವಿಜಯೇಂದ್ರ
ಬೆಂಗಳೂರು: Valmiki Corporation Scam ಹಣ ದುರ್ಬಳಕೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಕಾವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ತನಿಖೆಯಲ್ಲಿ ನಾಗೇಂದ್ರ ನಿರಪರಾಧಿ ಎಂದು ಸಾಬೀತಾದರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಚಾರ್ಜ್ಶೀಟ್ನಲ್ಲೂ ನಾಗೇಂದ್ರ ಅವರ ಹೆಸರು ಉಲ್ಲೇಖವಾಗಿದೆ ಎಂದು ಆರೋಪಿಸಿದರು.
‘ನಾಗೇಂದ್ರ ಹೆಸರು ಚಾರ್ಜ್ಶೀಟ್ನಲ್ಲಿದೆ’
ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾದ ಪ್ರಕರಣದ ತನಿಖೆಯಲ್ಲಿ ಹಲವು ಗಂಭೀರ ಅಂಶಗಳು ಹೊರಬಂದಿವೆ ಎಂದು ವಿಜಯೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಪ್ರಾಮಾಣಿಕ ಅಧಿಕಾರಿ ಹಾಗೂ ಬೋವಿ ಸಮಾಜದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಡೆತ್ನೋಟ್ನಲ್ಲಿ ಅಂದಿನ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಹಣವನ್ನು ತೆಲಂಗಾಣಕ್ಕೆ ವರ್ಗಾಯಿಸಲಾಗಿತ್ತು ಎಂದು ಉಲ್ಲೇಖಿಸಿರುವುದಾಗಿ ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
‘ದಲಿತರ ಹಣವನ್ನು ಲೂಟಿ ಮಾಡಲಾಗಿದೆ’
ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ದುರ್ಬಳಕೆಯಾಗಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪವಾಗಿದೆ. ₹187 ಕೋಟಿ ಹಣ ಲೂಟಿಯಾಗಿದೆ ಎಂದು ವಿಜಯೇಂದ್ರ ಆರೋಪಿಸಿದ್ದು, ಆ ಹಣವನ್ನು ವಾಪಸ್ ಪಡೆದು ದಲಿತ ಸಮುದಾಯದ ಅಭಿವೃದ್ಧಿಗೆ ಬಳಸಬೇಕು ಎಂದು ಒತ್ತಾಯಿಸಿದರು.
“ಬಿಜೆಪಿ ಎತ್ತಿರುವ ಪ್ರಶ್ನೆ ಗಂಭೀರವಾಗಿದೆ. ಯಾವುದೇ ಕಾರಣಕ್ಕೂ ಇಂತಹ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಮುಂದುವರಿಸಬಾರದು” ಎಂಬ ಸಂದೇಶವನ್ನು ಅವರು ಸರ್ಕಾರಕ್ಕೆ ನೀಡಿದ್ದಾರೆ.
ಅಧಿವೇಶನ ಆರಂಭಕ್ಕೂ ಮುನ್ನವೇ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿತ್ತು ಎಂದು ವಿಜಯೇಂದ್ರ ಹೇಳಿದರು. ಉತ್ತರ ಕರ್ನಾಟಕದ ಸಮಸ್ಯೆಗಳು, ಬರಗಾಲ, ನೀರಾವರಿ ಯೋಜನೆಗಳು ಹಾಗೂ ಕೆಪಿಎಸ್ಸಿ ಹಗರಣ ಸೇರಿದಂತೆ ಹಲವು ವಿಚಾರಗಳು ಅಧಿವೇಶನದಲ್ಲಿ ಚರ್ಚೆಯಾಗಬೇಕಿವೆ ಎಂದರು.
‘ನಮ್ಮ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ’
ವಾಲ್ಮೀಕಿ ನಿಗಮದ ಪ್ರಕರಣದ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಹೋರಾಟವನ್ನು ಸರ್ಕಾರ ಹಗುರವಾಗಿ ಪರಿಗಣಿಸಬಾರದು ಎಂದು ವಿಜಯೇಂದ್ರ ಎಚ್ಚರಿಸಿದರು.
ಸದನದಲ್ಲಿ ದಲಿತರ ಪರವಾಗಿ ಧ್ವನಿ ಎತ್ತುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಗೂಂಡಾಗಳು ಎಂದು ಕರೆಯಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಮುದಾಯಕ್ಕೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
‘ನಾಗೇಂದ್ರ ಸಣ್ಣ ಮೀನು, ದೊಡ್ಡ ಮೀನುಗಳು ಇನ್ನೂ ಇವೆ’
ಪ್ರಕರಣದ ಹಿಂದೆ ಇನ್ನಷ್ಟು ದೊಡ್ಡ ವ್ಯಕ್ತಿಗಳು ಮತ್ತು ಶಕ್ತಿಗಳು ಇರಬಹುದು ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
“ಸಚಿವ ನಾಗೇಂದ್ರ ಬಹಳ ಸಣ್ಣ ಮೀನು ಮಾತ್ರ. ಇದರ ಹಿಂದೆ ದೊಡ್ಡ ಮೀನುಗಳು, ತಿಮಿಂಗಿಲಗಳು ಇವೆ” ಎಂದು ಹೇಳಿದ ಅವರು, ಪ್ರಕರಣದ ಸಂಪೂರ್ಣ ಸತ್ಯವನ್ನು ಹೊರಗೆ ತರುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ನಾಗೇಂದ್ರ ಅವರ ವೈಯಕ್ತಿಕ ತೇಜೋವಧೆ ಮಾಡುವುದು ಬಿಜೆಪಿಯ ಉದ್ದೇಶವಲ್ಲ. ದಲಿತ ಸಮುದಾಯಕ್ಕೆ ನ್ಯಾಯ ಕೊಡಿಸುವುದೇ ಪಕ್ಷದ ಉದ್ದೇಶ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ರಾಜೀನಾಮೆ ಪಡೆಯುವವರೆಗೂ ಹೋರಾಟ
ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ಘೋಷಿಸಿದರು. ವಾಲ್ಮೀಕಿ ನಿಗಮದ ಹಣವನ್ನು ಸಂಪೂರ್ಣವಾಗಿ ವಾಪಸ್ ಪಡೆದು, ಅದನ್ನು ಸಂಬಂಧಪಟ್ಟ ಸಮುದಾಯದ ಅಭಿವೃದ್ಧಿಗೆ ಬಳಸಬೇಕು ಎಂಬುದು ಬಿಜೆಪಿಯ ಪ್ರಮುಖ ಬೇಡಿಕೆಯಾಗಿದೆ.
ಈ ವಿಚಾರ ಮುಂದಿನ ವಿಧಾನಸಭಾ ಅಧಿವೇಶನದಲ್ಲೂ ಪ್ರತಿಧ್ವನಿಸುವ ಸಾಧ್ಯತೆ ಇದೆ.
ವಿಧಾನಪರಿಷತ್ ಚುನಾವಣೆಗೂ ಬಿಜೆಪಿ ತಂತ್ರ
ಇದೇ ವೇಳೆ ಮುಂಬರುವ ವಿಧಾನಪರಿಷತ್ ಚುನಾವಣೆಗಳ ಬಗ್ಗೆಯೂ ವಿಜಯೇಂದ್ರ ಮಾಹಿತಿ ನೀಡಿದರು. ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಕುರಿತು ಬಿಜೆಪಿ ಶಾಸಕರ ವಿಶೇಷ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದರು.
ಈ ಮೂರು ಕ್ಷೇತ್ರಗಳಲ್ಲೂ ಪ್ರಸ್ತುತ ಬಿಜೆಪಿ ಅಭ್ಯರ್ಥಿಗಳು ಹಾಗೂ ಸಂಘಟನೆ ಬಲಪಡಿಸುವ ಕುರಿತು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಅಭ್ಯರ್ಥಿಗಳು ಮತ್ತು ಪಕ್ಷದ ಸಂಘಟನೆಯನ್ನು ಸಮನ್ವಯಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿಜಯೇಂದ್ರ ತಿಳಿಸಿದರು
-
ರಾಜಕೀಯ3 ಗಂಟೆಗಳು agoValmiki ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು?
-
ರಾಜ್ಯ7 ಗಂಟೆಗಳು agoಸಚಿವ B Nagendra ರಾಜೀನಾಮೆ ನೀಡ್ತಾರಾ?CM D.K.Shiv Kumar ಗೆ ಕರೆ, ‘ಸರ್ಕಾರಕ್ಕೆ ಮುಜುಗರ ಬೇಡ’ ಎಂದ ಸಚಿವ!
-
ದೇಶ4 ಗಂಟೆಗಳು agoONAM ಸದ್ಯ ಸವಿಯಲು ಸಾಲಿನಲ್ಲಿ ಕುಳಿತ ಕೋತಿಗಳು! 53 ವರ್ಷಗಳ ಅಪರೂಪದ ಸಂಪ್ರದಾಯ
-
ರಾಜ್ಯ3 ಗಂಟೆಗಳು agoOnline ತರಕಾರಿಗಳಿಗೆ ಕೆಮಿಕಲ್ ಸ್ಪ್ರೇ? ಸಚಿವ ಖಾದರ್ ಸ್ಫೋಟಕ ಹೇಳಿಕೆ, ಶೀಘ್ರದಲ್ಲೇ ಕ್ರಮ
-
ರಾಜ್ಯ6 ಗಂಟೆಗಳು agoB Nagendra Resignation: ರಾಜೀನಾಮೆ ವದಂತಿಗೆ ನಾಗೇಂದ್ರ ಫುಲ್ಸ್ಟಾಪ್; ಕಾಂಗ್ರೆಸ್ನಿಂದಲೂ ಅಧಿಕೃತ ಹೇಳಿಕೆ ಇಲ್ಲ
-
ರಾಜಕೀಯ3 ಗಂಟೆಗಳು agoValmiki Corporation Scam: ‘ನಾಗೇಂದ್ರ ನಿರಪರಾಧಿ ಎಂದು ಸಾಬೀತಾದರೆ ಸಿಎಂ ಮಾಡಿಕೊಳ್ಳಿ’ ಎಂದ ವಿಜಯೇಂದ್ರ
-
ಸಿನಿಮಾ7 ಗಂಟೆಗಳು agoYash ‘Toxic’ ನೋಡಿ ಪ್ರೇಕ್ಷಕರಿಂದ ಸೀಟಿ-ಚಪ್ಪಾಳೆ; ಗೀತು ಮೋಹನ್ದಾಸ್ ನಿರ್ದೇಶನಕ್ಕೆ ಭಾರೀ ಮೆಚ್ಚುಗೆ
-
ಕ್ರೀಡೆ7 ಗಂಟೆಗಳು agoBCCI Election 2026: ಸೆಪ್ಟೆಂಬರ್ 18ಕ್ಕೆ ಬಿಸಿಸಿಐ ಚುನಾವಣೆ; AGMನಲ್ಲಿ ಮಹತ್ವದ ನಿರ್ಧಾರಗಳು!
