Connect with us

ದೇಶ

ವಾರ ಭವಿಷ್ಯ: ಈ ರಾಶಿಯಲ್ಲಿ ಜನಿಸಿದವರಿಗೆ ಬಹಳಷ್ಟು ಒಳಿತು – Weekly Horoscope

Published

on

ಮೇಷ : ವಾರದ ಆರಂಭದಲ್ಲಿ ಹೆಚ್ಚನ ಹಣ ವೆಚ್ಚವಾಗಲಿದೆ, ಆದರೆ ವಾರಾಂತ್ಯದವರೆಗೆ ಪ್ರಯಾಣ ನಿಮಗೆ ಸಂತೋಷ ಉಂಟುಮಾಡಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ಕೊಂಚ ಬೇಸರ ಮೂಡಲಿದೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದು ನಿಮ್ಮಲ್ಲಿ ಸಂತೋಷ ಮತ್ತು ಹೊಸ ಹುಮ್ಮಸ್ಸು ಮೂಡಿಸಲಿದೆ. ಯಾವುದೇ ತೀರ್ಥಯಾತ್ರೆ ನಿಮಗೆ, ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಈ ಸಮಯದಲ್ಲಿ ಒಳಿತನ್ನು ಉಂಟುಮಾಡಲಿದೆ. ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಹೂಡಿಕೆಗಳನ್ನು ಮಾಡಬಹುದು ಹಾಗೂ ಬಂಡವಳಿಗರು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿಕೊಂಡು ಹೋಗುವುದು ಉತ್ತಮ. ಕುಟುಂಬದೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದೀರಿ. ಪರೀಕ್ಷೆ ಎದುರಿಸಲು ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರ ಆಸಕ್ತಿ ಕಡಿಮೆಯಾಗಿ, ಓದಿನ ಕಡೆ ಗಮನ ಕೇಂದ್ರೀಕರಿಸಲು ಕಷ್ಟವೆನಿಸಬಹುದು. ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ, ಮಕ್ಕಳು ತಮ್ಮ ದೈಹಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ ಹಾಗೂ ಎಚ್ಚರಿಕೆಯಿಂದ ಇರಬೇಕಿದೆ. ದೈಹಿಕ ಕಸರತ್ತನ್ನು ದಿನಚರಿಯ ಭಾಗವಾಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ವೃಷಭ : ಈ ವಾರವು ವೃಷಭ ರಾಶಿಯವರಿಗೆ ಸಾಕಷ್ಟು ಅನುಕೂಲಗಳನ್ನು ತಂದುಕೊಡಲಿದೆ. ಜ್ಞಾನ ಮತ್ತು ಮನೋಬಲ ಹೆಚ್ಚಳವಾಗಲಿದೆ. ಪ್ರೀತಿ ಹಾಗೂ ಬೌದ್ಧಿಕ ಸಂಬಂಧಗಳ ಕಡೆಗಿನ ಒಲವು ಹೆಚ್ಚಲಿದೆ. ಒಂದು ತಂಡವಾಗಿ ಕೆಲಸ ಮಾಡುವಿಕೆ ಹಾಗೂ ಪರಸ್ಪರ ಸಹಕಾರದಂತಹ ಅನುಕೂಲಗಳು ನಿಮ್ಮದಾಗಲಿವೆ. ಕೌಟುಂಬಿಕ ಜೀವನ ಹೆಚ್ಚು ಸಂತಸದಾಯಕ ಹಾಗೂ ಶಾಂತಿಯುತವಾಗಿರಲಿದ್ದು, ಕುಟುಂಬದ ಸದಸ್ಯರಲ್ಲಿ ಪರಸ್ಪರ ಸಹಕಾರ ಹೆಚ್ಚಲಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಲು ಕುಟುಂಬದ ಸದಸ್ಯರು ಪರಸ್ಪರರನ್ನು ಮಾರ್ಗದರ್ಶಕರಾಗಿ ಕಾಣಲಿದ್ದಾರೆ. ಭವಿಷ್ಯದ ಬಗೆಗಿನ ಕಳವಳ ನಿಮ್ಮಲ್ಲಿ ಆಧ್ಯಾತ್ಮಿಕ ಆಸಕ್ತಿಯನ್ನು ಜಾಗೃತಗೊಳಿಸಲಿದೆ. ಭಕ್ತಿಗೆ ಸಂಬಂಧಿಸಿದ ಕಾರ್ಯಗಳು ಹಾಗೂ ಸತ್ಸಂಗದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸ್ತ್ರೀಯರಿಂದ ಬೆಂಬಲ ಹಾಗೂ ಲಕ್ಷ್ಮಿಯ ಆಶೀರ್ವಾದ ದೊರೆಯಲಿದೆ. ಹೊಸ ಅವಕಾಶಗಳು ದೊರೆಯಲಿವೆ. ವ್ಯಕ್ತಿಗತ ಅಭಿವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಹೊಸತನ್ನು ನಿರೀಕ್ಷಿಸುತ್ತಿರುವವರಿಗೆ ಈ ವಾರ ಶುಭವಾಲಿದೆ.

ಮಿಥುನ : ಈ ವಾರ ನಿಮಗೆ ಖಂಡಿತವಾಗಿ ಹೊಸ ಸಂತೋಷ ತಂದುಕೊಡಲಿದೆ ಹಾಗೂ ಬಾಕಿ ಉಳಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಾಯಕವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಅಂತರ ಕಡಿಮೆಯಾಗಿ ಪ್ರೀತಿ ವೃದ್ಧಿಸಲಿದೆ. ವಾರಾಂತ್ಯದ ವೇಳೆಗೆ, ಕಲಿಕೆ ಹಾಗೂ ಪ್ರೇರಣೆಯ ಬಗೆಗಿನ ನಿಮ್ಮ ಪ್ರೀತಿ ಹೆಚ್ಚಲಿದೆ. ವಿವಾಹಿತರಿಗೆ ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದ್ದು, ಆಸೆಗಳು ಈಡೇರಲಿವೆ. ಜ್ಞಾನ ಪಡೆದುಕೊಳ್ಳಲು ಹಣ ಹೂಡಬೇಕಾಗಿ ಬರಬಹುದು, ಹಾಗಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಉನ್ನತ ವ್ಯಾಸಂಗ ಮಾಡುತ್ತಿರುವವರು ತಮ್ಮ ಇಷ್ಟದ ವಿಷಯದ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಈ ವಾರ ಸಹಾಯಕವಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲಿದ್ದೀರಿ. ಅಧ್ಯಾಪಕರು ನಿಮಗೆ ಸಹಾಯ ಮತ್ತು ಮಾರ್ಗದರ್ಶನ ಒದಗಿಸಲಿದ್ದಾರೆ. ಪ್ರವಾಸಕ್ಕೆ ತೆರಳಲು ಅವಕಾಶ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ಕಾಣಲಿದ್ದು, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಪ್ರಯಾಣದಿಂದ ಅನುಕೂಲ ಉಂಟಾಗಲಿದೆ.

ಕರ್ಕಾಟಕ : ಈ ವಾರದಲ್ಲಿ ಕುಟುಂಬದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯವಿದೆ. ಸಂಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂತಸ ಹಾಗೂ ಶಾಂತಿ ಕಾಣಬಹುದಾಗಿದೆ. ವಿವಾಹಿತರಿಗೆ ಈ ವಾರವಿಡೀ ಭಕ್ತಿ ಹಾಗೂ ಪ್ರೀತಿಗಾಗಿ ಮೀಸಲಿದ್ದು, ಸಂತೋಷ ಹಾಗೂ ಪ್ರಗತಿ ಹೊಂದಲಿದ್ದೀರಿ. ಪರಿವಾರಗಳು ಪ್ರಮುಖವಾದ ಉಡುಗೊರೆಗಳನ್ನು ಪಡೆಯಬಹುದು. ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸಾಕಷ್ಟು ಗಟ್ಟಿಯಾಗಿರಲಿವೆ. ಕೊಟ್ಟ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಿ ಮುಗಿಸುವ ಕಡೆ ನೌಕರರು ಗಮನ ಹರಿಸಬೇಕು. ವಹಿವಾಟುದಾರರು ಹೊಸ ಉಪಕರಣಗಳು ಹಾಗೂ ಶಿಕ್ಷಣದಲ್ಲಿ ಹಣ ಹೂಡಿಕೆ ಮಾಡುವುದು ಒಳಿತು. ಸಮರ್ಥವಾದ ಕಲಿಕೆ ಸಾಧ್ಯವಿರುವುದರಿಂದ, ಈ ವಾರ ಕಲಿಕೆ ಉತ್ತಮವಾಗಿ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಆದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಹೊರಗಿನ ಆಹಾರ ಪದಾರ್ಥಗಳ ಸೇವನೆ ಕಡಿಮೆಗೊಳಿಸಿ, ನಿಯಮಿತ ಆಹಾರಪದ್ಧತಿ ಹಾಗೂ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ.

ಸಿಂಹ : ಈ ವಾರ ಕೆಲವು ಸವಾಲುಗಳನ್ನು ಒಡ್ಡಲಿದೆ. ಬೇಸರ ಕಾಣಿಸಿಕೊಳ್ಳಬಹುದು ಹಾಗೂ ಕೆಲಸಗಳು ಪೂರ್ಣಗೊಳ್ಳಲು ಮಾಮೂಲಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಅಹಿತವಾದ ವಾತಾವರಣ ಕಾಣಿಸಿಕೊಳ್ಳಬಹುದು, ಆದರೆ ಕಷ್ಟಕಾಲದಲ್ಲಿ ನಿಮ್ಮ ಪ್ರೀತಿಪಾತ್ರರ ಸಹಕಾರ ಇರಲಿದೆ. ಸ್ವಲ್ಪ ಕಾಲ ನೀವು ಹಿಂದುಳಿಯಬಹುದು, ವ್ಯವಹಾರದಲ್ಲಿ ಇತರರೊಂದಿಗೆ ಸೇರಿ ಕೆಲಸ ಮಾಡುವುದರಿಂದ ಹೊಸ ಹೊಸ ದಾರಿಗಳು ನಿಮ್ಮ ಎದುರು ತೆರೆದುಕೊಳ್ಳಬಹುದು. ಇಂದಿನ ಹೂಡಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ಒಳಿತಾಗುವ ಆಶಾಭಾವನೆ ಇರಿಸಿಕೊಳ್ಳಬಹುದು, ಜೊತೆಗೆ ಆದಾಯವೂ ಹೆಚ್ಚಬಹುದು. ಕೆಲವು ಅನಿರೀಕ್ಷಿತ ಸಂತೋಷಗಳು ಸಹ ನಿಮ್ಮದಾಗಬಹುದು. ಹೊಸ ಶಿಕ್ಷಣ ಪಡೆಯುವ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸುವ ಜೊತೆಜೊತೆಗೆ, ಈಗ ಪಡೆಯುತ್ತಿರುವ ಶಿಕ್ಷಣವನ್ನು ಕಡೆಗಣಿಸದೆ ಇರುವುದು ಸಹ ಮುಖ್ಯವಾಗಿದೆ. ಅತಿಯಾದ ಕೆಲಸ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳದೇ ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಹಾಗೂ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯದ ಪರಿಣಾಮವಾಗಿ ನೀವು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇದೆ.

ಕನ್ಯಾ : ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಸಧ್ಯಕ್ಕೆ ಆರೋಗ್ಯ ಸಂಬಂಧಿತ ತೊಂದರೆಗಳು ಕಾಣಿಸಿಕೊಂಡರೂ, ನಂತರದ ದಿನಗಳಲ್ಲಿ ಕ್ರಮೇಣ ಅವೆಲ್ಲವೂ ಬಗೆಹರಿಯಲಿವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ ಹಾಗೂ ವಿವಾಹಿತರು ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹಳೆಯ ಸ್ನೇಹಿತರಿಂದ ಸಹಾಯ ಪಡೆದುಕೊಳ್ಳಬಹುದು. ಹಳೆಯ ಬಿಕ್ಕಟ್ಟುಗಳು ಬಗೆಹರಿದು, ಪರಿಹಾರ ನಿಮ್ಮ ಪರವಾಗಿ ಇರಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಸರ್ಕಾರಿ ಯೋಜನೆಗಳ ಸವಲತ್ತು ದೊರೆಯಲಿದೆ. ಸರ್ಕಾರಿ ಕೆಲಸದ ಹುಡುಕಾಟದಲ್ಲಿ ಇರುವವರಿಗೆ ಸಿಹಿಸುದ್ದಿ ಸಿಗಲಿದೆ. ಪ್ರೇಮಸಂಬಂಧಗಳು ಎಂದಿನಂತೆ ಇರಲಿದ್ದು, ಹಳೆಯ ಸ್ನೇಹಿತರಿಂದ ಹೆಚ್ಚಿನ ಆತ್ಮೀಯತೆ ಅನುಭವಿಸಲಿದ್ದೀರಿ. ರಾಜಕೀಯವಾಗಿ ಯಶಸ್ಸು ಸಿಗಲಿದ್ದು, ಆರ್ಥಿಕ ಅನುಕೂಲ ಉಂಟಾಗಲಿದೆ. ನಿಮ್ಮ ಕೌಶಲ್ಯ ಹಾಗೂ ಪ್ರಶಾಂತತೆಯ ಕಾರಣದಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಎತ್ತರಕ್ಕೆ ಏರಲಿದೆ. ಪೋಷಕರ ಬಗ್ಗೆ ಗಮನ ವಹಿಸುವುದು ಮುಖ್ಯ. ಮದುವೆಗಾಗಿ ಹುಡುಕಾಟದಲ್ಲಿರುವ ಹುಡುಗಿಯರಿಗೆ ಈ ವಾರ ಸೂಕ್ತ ಸಂಗಾತಿ ದೊರೆಯಲಿದ್ದಾರೆ. ದಂಪತಿಗಳ ನಡುವಿನ ಆಳವಾದ ಪ್ರೇಮ ಇನ್ನಷ್ಟು ಹೆಚ್ಚಾಗಲಿದೆ. ಹೊಸ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಭವಿಷ್ಯ ರೂಪುಗೊಳ್ಳಲಿದೆ.

ತುಲಾ : ಈ ವಾರ ನಿಮಗೆ ಉಜ್ವಲ ಹಾಗೂ ರಚನಾತ್ಮಕವಾಗಿ ಇರಲಿದೆ. ಉದ್ಯೋಗಸ್ಥರು ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಸಂದರ್ಭ ಎದುರಾಗಲಿದೆ. ಇದಕ್ಕಾಗಿ ನೀವು ಹೆಚ್ಚಿನ ಶ್ರಮ ಮತ್ತು ಬುದ್ಧಿಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಅಲ್ಲದೆ, ಇದರಿಂದ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವ್ಯವಹಾರಸ್ಥರು ತಮ್ಮ ಇತರ ವೃತ್ತಿಬಾಂಧವರೊಂದಿಗೆ ಸ್ಪರ್ಧಿಸಿ ತಮ್ಮ ಬೆಲೆಯನ್ನು ನಿರೂಪಿಸಬೇಕಿದೆ. ಕೌಟುಂಬಿಕ ಬಿಕ್ಕಟ್ಟು ಎದುರಿಸುತ್ತಿರುವ ದಂಪತಿಗಳು ಸ್ನೇಹಿತರ ಸಹಾಯದೊಂದಿಗೆ ಸಮಸ್ಯೆಯನ್ನು ಅಂತ್ಯಗೊಳಿಸಬಹುದು. ನಿಮ್ಮ ಸಂಗಾತಿಯೆಡೆಗಿನ ಪ್ರೇಮ ವೃದ್ಧಿಸಲಿದ್ದು, ಒಟ್ಟಾಗಿ ಸುಂದರ ಕ್ಷಣಗಳನ್ನು ಜೀವಿಸಲಿದ್ದೀರಿ. ಮನೆಯಲ್ಲಿ ಸಂತೋಷ ಹಾಗೂ ಸಂತೃಪ್ತಿ ನೆಲೆಸಲಿದ್ದು, ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿದ್ದೀರಿ.

ವೃಶ್ಚಿಕ : ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರ ಬಹಳಷ್ಟು ಒಳಿತನ್ನು ಮಾಡಲಿದೆ. ವೈಯಕ್ತಿಕ ಜೀವನದಲ್ಲಿ ಎಷ್ಟೋ ಕಾಲದಿಂದ ಪೂರ್ಣಗೊಳಿಸದೆ ಉಳಿದ ಕೆಲಸಗಳು ಈಗ ಸುಲಲಿತವಾಗಿ ನಡೆದು, ಉತ್ತಮ ಫಲಿತಾಂಶ ದೊರೆಯಲಿದೆ. ಬಹಳ ಕಾಲದಿಂದ ಇತ್ಯರ್ಥವಾಗದೆ ಉಳಿದ ಭಿನ್ನಾಭಿಪ್ರಾಯಗಳು ಹಾಗೂ ಕಾನೂನು ಹೋರಾಟಗಳು ಈ ವಾರ ಬಗೆಹರಿಯಲಿವೆ. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿನ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ನಿಮ್ಮ ಸಾಧನೆಯನ್ನು ಇತರರು ಗುರುತಿಸಲಿದ್ದಾರೆ. ಔದ್ಯೋಗಿಕ ಅವಕಾಶಗಳು ನಿಮ್ಮ ಆರ್ಥಿಕ ಬೆಳವಣಿಗೆಗೆ ಹೊಸ ದಾರಿ ಮಾಡಿಕೊಡಲಿದ್ದು, ನಿಮ್ಮ ಸಂಪತ್ತು ವೃದ್ಧಿಸಲಿದೆ. ವೃತ್ತಿಯಲ್ಲಿ ನೀವು ನಡೆಸುವ ಪ್ರಯತ್ನಗಳು ಹಾಗೂ ನಿಮ್ಮ ಆರ್ಥಿಕ ಸಾಧನೆಗಳು ನಿಮ್ಮಲ್ಲಿ ಹೊಸ ಉತ್ಸಾಹ ಹಾಗೂ ಚೈತನ್ಯ ಮೂಡಿಸಲಿವೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಸಂಪಾದನೆಯನ್ನು ಹೆಚ್ಚಿಸಿಕೊಳ್ಳಲು ಇದು ಸಕಾಲ. ಪ್ರಮುಖ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನಿಮ್ಮ ವಹಿವಾಟು ಬೆಳೆಯಲಿದೆ ಹಾಗೂ ವೃತ್ತಿಯಲ್ಲಿ ನೀವು ಎತ್ತರಕ್ಕೆ ಬೆಳೆಯಲು ಸಹಾಯವಾಗಲಿದೆ. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿಮ್ಮ ಮನಸ್ಸಲ್ಲಿ ತುಂಬಿರಲಿವೆ.

ಧನು : ಈ ವಾರ ಅದೃಷ್ಟ ನಿಮ್ಮ ಕಡೆಗೆ ಇರಲಿದ್ದು, ಅದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕಾದಲ್ಲಿ ನೀವು ಆಲಸ್ಯ ಮತ್ತು ದುರಹಂಕಾರಗಳಂತಹ ಗುಣಗಳನ್ನು ಬಿಡಬೇಕಿದೆ. ಕಾಲ ನಿರಂತರ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ನೀವು ತೆಗೆದುಕೊಳ್ಳುವ ಯಾವುದೇ ವಿರಾಮ ನಿಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಭವ ಇದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಲ್ಲಿ, ಅದನ್ನು ಪರಿಣಾಮಕಾರಿಯಾಗಿ ಪೂರೈಸುವ ಕಡೆ ನಿಮ್ಮ ಗುರಿ ಇರಲಿ. ಅಲ್ಲದೆ, ವೈರಿಗಳ ಕುರಿತು ಸಹ ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವ್ಯಾಪಾರ-ವಹಿವಾಟಿನ ವಿಷಯದಲ್ಲಿ ಈ ವಾರ ಬಹಳ ಅದೃಷ್ಟದಾಯಕವಾಗಿದ್ದು, ನಿಮ್ಮ ಆರ್ಥಿಕ ಗುರಿ ತಲುಪಲಿದ್ದೀರಿ. ನಿಮ್ಮ ಬಾಳಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದು, ವೈವಾಹಿಕ ಜೀವನ ಸಂತೃಪ್ತಿಯಿಂದ ಕೂಡಿರಲಿದೆ. ವಿದ್ಯಾರ್ಥಿಗಳ ಸಾಧನೆಗೆ ಇದು ಸರಿಯಾದ ಕಾಲ, ಆದರೆ ಅತಿಯಾದ ವಿಶ್ವಾಸವು ನಿಮ್ಮ ಗಮನ ಬೇರೆಡೆಗೆ ಹರಿಯುವಂತೆ ಮಾಡಿ ಶೈಕ್ಷಣಿಕ ಸಾಧನೆಯಿಂದ ನಿಮ್ಮನ್ನು ದೂರಗೊಳಿಸಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಾಧಾನ್ಯತೆ ನೀಡಬೇಕಿದ್ದು, ಈ ವಾರ ನೆಮ್ಮದಿಯಿಂದ ಕಳೆಯಲಿದ್ದೀರಿ.

ಮಕರ : ಎಲ್ಲವೂ ಸರಿಯಾಗಿದ್ದರೂ ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವಾರದ ಆರಂಭದಲ್ಲಿ, ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಲು ಸಾಧ್ಯವಾಗದಂತಹ ಅಡ್ಡಿಗಳು ಎದುರಾಗಬಹುದು. ಆಯಾ ಋತುವಿನಲ್ಲಿ ಕಾಣಿಸಿಕೊಳ್ಳುವಂತಹ ಅಥವಾ ಇತರ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ತಲೆದೋರಬಹುದು. ಕೆಲಸದೊತ್ತಡದ ಕಾರಣದಿಂದಾಗಿ ಹೆಚ್ಚಿನ ಸಮಯ ಕೆಲಸದಲ್ಲೇ ಕಳೆಯಬೇಕಿರುವುದರಿಂದ ಸಂಗಾತಿಯೊಡನೆ ಸಂಬಂಧ ಕೆಡದಂತೆ ಎಚ್ಚರ ವಹಿಸಬೇಕಿದೆ. ವ್ಯಾಪಾರಸ್ಥರು ಕೆಲವು ಏರುಪೇರುಗಳನ್ನು ಕಾಣಲಿದ್ದೀರಿ. ಸಣ್ಣಪುಟ್ಟ ಪ್ರಮಾದಗಳು ಸಹ ದೊಡ್ಡ ನಷ್ಟ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಯಾವುದೇ ಹೊಸ ಕೆಲಸದಲ್ಲಿ ಹಣ ಹೂಡುವ ಸಿದ್ಧತೆಯಲ್ಲಿರುವವರು ಅತಿ ಎಚ್ಚರ ವಹಿಸಬೇಕಿದೆ. ಸಂಗಾತಿಯ ಹಿನ್ನೆಲೆ ಹಾಗೂ ಅವರು ಇರುವ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಹಾಗೂ ನಿಮ್ಮ ಬಾಳಸಂಗಾತಿಯ ಕಾಳಜಿ ವಹಿಸುವುದರಿಂದ ನಿಮ್ಮ ವೈವಾಹಿಕ ಸಂಬಂಧ ಕೆಡದಂತೆ ನೋಡಿಕೊಳ್ಳಬಹುದು.

ಕುಂಭ : ನಿಮ್ಮ ಸಮಸ್ಯೆಗಳು ಈ ವಾರ ಕಡಿಮೆಯಾಗಲಿವೆ ಹಾಗೂ ಬಹಳ ಕಾಲದಿಂದ ಮುಗಿಸಲಾಗದೆ ಉಳಿಸಿದ ಕೆಲಸಗಳು ಈ ವಾರ ಪೂರ್ಣಗೊಳ್ಳಲಿವೆ. ವೃತ್ತಿಗೆ ಸಂಬಂಧಿಸಿದಂತೆ ಹೊಸ ದಾರಿ ಹುಡುಕಿಕೊಳ್ಳಲು ನಿಮ್ಮ ಕುಟುಂಬ ನಿಮ್ಮ ಸಹಾಯಕ್ಕೆ ನಿಲ್ಲಲಿದೆ. ವಾರದ ಮಧ್ಯದ ವೇಳೆಗೆ ನೀವು ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದು, ಅದರಲ್ಲಿ ಭೇಟಿಯಾಗುವ ಹೊಸ ಜನರಲ್ಲಿ ಆತ್ಮೀಯ ಸ್ನೇಹಿತರು ದೊರೆಯಲಿದ್ದಾರೆ. ಮನೆಯ ದುರಸ್ತಿ ಹಾಗೂ ಅಲಂಕಾರಕ್ಕಾಗಿ ಹಣ ಖರ್ಚು ಮಾಡಬೇಕಾದ ಸಾಧ್ಯತೆ ಇದೆ. ಹಣ ಸಂಪಾದಿಸುವ ಹೊಸ ದಾರಿಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ ಹಾಗೂ ಹಣದ ಸುರಿಮಳೆಯಾಗಲಿದೆ. ವಾರಾಂತ್ಯದ ವೇಳೆಗೆ ಬಿಡುವಿಲ್ಲದಷ್ಟು ಕೆಲಸಗಳು ಎದುರಾಗಲಿದ್ದು, ಕೆಲವು ಕಾರ್ಯಕ್ರಮಗಳನ್ನು ಸದ್ಯದ ಮಟ್ಟಿಗೆ ಮುಂದೂಡಬೇಕಾಗಲಿದೆ.

ಮೀನ : ನಿಮ್ಮ ಕೌಶಲ್ಯಗಳನ್ನು ಚೆನ್ನಾಗಿ ತೋರಿಸಿಕೊಳ್ಳಲು ಹಾಗೂ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಇದು ಅನುಕೂಲಕರವಾದ ವಾರ. ವಾರದ ಆರಂಭದಲ್ಲಿ, ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಸಿಹಿಸುದ್ದಿ ಕೇಳಲಿದ್ದು, ಇದರಿಂದ ವೃತ್ತಿಯಲ್ಲಿ ಮುಂದುವರೆಯಲು ಸಹಾಯವಾಗಲಿದೆ. ಉದ್ಯೋಗದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಂತೆ ಮನೆಯವರು ಹಾಗೂ ಸಹೋದ್ಯೋಗಿಗಳಲ್ಲಿ ನಿಮ್ಮ ಬಗೆಗಿನ ಗೌರವ ಹಾಗೂ ಅಭಿಮಾನ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಇದು ಒಳ್ಳೆಯ ಸಮಯ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ದೊರೆಯಲಿದೆ. ವಾರದ ಮಧ್ಯದ ವೇಳೆಗೆ, ಧಾರ್ಮಿಕವಾದ ಅಥವಾ ನಿಮಗೆ ಅದೃಷ್ಟ ತಂದುಕೊಡುವಂತಹ ಘಟನೆ ನಡೆಯುವ ಸಂದರ್ಭ ಬರಲಿದೆ. ಅವಿವಾಹಿತರಿಗೆ ಸಂಗಾತಿ ಸಿಗಬಹುದು. ವಿವಾಹಿತರಿಗೆ ನಿಮ್ಮ ಕುಟುಂಬ ವಿಸ್ತಾರಗೊಳ್ಳುವ ಸೂಚನೆ ದೊರೆಯಲಿದೆ. ಪ್ರೇಮಸಂಬಂಧಗಳು ಸಹ ಈ ವಾರ ಚೆನ್ನಾಗಿ ಅಭಿವೃದ್ಧಿಗೊಳ್ಳಲಿವೆ.

ದೇಶ

Amarnath Yatra 2026: ಬಾಬಾ ಬರ್ಫಾನಿ ದರ್ಶನಕ್ಕೆ ಸಜ್ಜಾಗಿ: ಅಮರನಾಥ ಯಾತ್ರೆ ಸಂಪೂರ್ಣ ಮಾಹಿತಿ

Published

on

By

ಬೆಂಗಳೂರು: ದಕ್ಷಿಣ ಕಾಶ್ಮೀರದಲ್ಲಿರುವ ಪ್ರಸಿದ್ಧ ಪವಿತ್ರ ತಾಣವಾದ Amarnath Temple ಗೆ ನಡೆಯುವ Amarnath Yatra 2026 ಯ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ವರ್ಷ ಯಾತ್ರೆ ಜುಲೈ 3ರಂದು ಆರಂಭವಾಗಿ ಆಗಸ್ಟ್ 28ರವರೆಗೆ, ಒಟ್ಟು 57 ದಿನಗಳ ಕಾಲ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ Manoj Sinha ಅವರು ಏಪ್ರಿಲ್ 12ರಂದು ಯಾತ್ರೆಯ ಸಂಪೂರ್ಣ ವಿವರಗಳನ್ನು ಪ್ರಕಟಿಸಿದ್ದಾರೆ. ಭಕ್ತರು ಏಪ್ರಿಲ್ 15ರಿಂದ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ದೇಶಾದ್ಯಂತ State Bank of India, Punjab National Bank, Yes Bank ಹಾಗೂ Axis Bank ಶಾಖೆಗಳಲ್ಲಿ ಮುಂಗಡ ನೋಂದಣಿ ಸೌಲಭ್ಯ ಲಭ್ಯವಿದೆ.

ಯಾತ್ರೆ ಪ್ರಾರಂಭಕ್ಕೂ ಮುನ್ನ ಜೂನ್ 19ರಂದು ಜೇಷ್ಠ ಪೌರ್ಣಮಿಯಂದು ಮೊದಲ ಪೂಜೆ ನೆರವೇರಿಸಲಾಗುತ್ತದೆ. ಭಕ್ತರು ಎರಡು ಮಾರ್ಗಗಳಲ್ಲಿ ಯಾತ್ರೆ ಕೈಗೊಳ್ಳಬಹುದು – ಅನಂತನಾಗ್ ಜಿಲ್ಲೆಯ ನುನ್ವಾನ್-ಪಹಲ್ಗಾಮ್ (48 ಕಿ.ಮೀ) ಸಾಂಪ್ರದಾಯಿಕ ಮಾರ್ಗ ಮತ್ತು ಗಂಡೇರ್ಬಾಲ್ ಜಿಲ್ಲೆಯ ಕಡಿದಾದ ಬಾಲ್ಟಾಲ್ (14 ಕಿ.ಮೀ) ಮಾರ್ಗ.

ಯಾತ್ರೆಗೆ ವಯೋಮಿತಿ ನಿಗದಿ ಮಾಡಲಾಗಿದ್ದು, 13ರಿಂದ 70 ವರ್ಷಗಳೊಳಗಿನವರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಹಿಮಾಲಯದ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಈ ಗುಹೆಯಲ್ಲಿ ಪ್ರಕೃತಿಯಿಂದ ರೂಪುಗೊಳ್ಳುವ ಹಿಮಲಿಂಗವು ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಭಕ್ತರು “ಬಾಬಾ ಬರ್ಫಾನಿ” ದರ್ಶನಕ್ಕಾಗಿ ಕಠಿಣ ಹಾದಿಯನ್ನು ಕ್ರಮಿಸುತ್ತಾರೆ. ಈ ಯಾತ್ರೆ ಧಾರ್ಮಿಕ ನಂಬಿಕೆಯ ಜೊತೆಗೆ ಭಾರತೀಯರ ಅಚಲ ಭಕ್ತಿಯ ಪ್ರತೀಕವಾಗಿದೆ.

Continue Reading

ದೇಶ

ಡಿಕೆ ಶಿವಕುಮಾರ್ ದೊಡ್ಡ ನಿರ್ಧಾರ: ಸಮಿತಿ ಡಿಸ್ಮಿಸ್!

Published

on

By

ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿದ್ದ Abdul Jabbar ಅವರ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ D. K. Shivakumar ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ.

ಜಬ್ಬಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದಲೇ ವಿಸರ್ಜಿಸಲಾಗಿದೆ ಎಂದು ಶಿವಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಸ ಸಮಿತಿಯನ್ನು ಶೀಘ್ರದಲ್ಲೇ ರಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ತೀವ್ರಗೊಂಡಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆ ಆರಂಭವಾದ ಅಸಮಾಧಾನ, ಚುನಾವಣೆಯ ನಂತರವೂ ಮುಂದುವರಿದಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಬಂಡಾಯ ಹೆಚ್ಚಾಗಿದ್ದು, ಅಲ್ಪಸಂಖ್ಯಾತ ಘಟಕದ ಮೇಲೂ ಪರಿಣಾಮ ಬೀರಿದೆ.

ಶನಿವಾರವೇ ಅಬ್ದುಲ್ ಜಬ್ಬಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ ಇನ್ನಷ್ಟೇ ಬಾಕಿ ಇದ್ದರೂ, ಕಾಂಗ್ರೆಸ್‌ನಲ್ಲಿ ಉಂಟಾದ ಒಳಜಗಳ ಪಕ್ಷಕ್ಕೆ ತಲೆನೋವಾಗುವ ಸಾಧ್ಯತೆ ಇದೆ. ಹೊಸ ಸಮಿತಿಯ ರಚನೆ ಮೂಲಕ ಅಸಮಾಧಾನ ಶಮನಗೊಳಿಸಲು ನಾಯಕತ್ವ ಮುಂದಾಗಿದೆ.

Continue Reading

ಚುನಾವಣೆ

ದಾವಣಗೆರೆ ಟಿಕೆಟ್ ವಿವಾದ: ಮುಸ್ಲಿಂ ಸಮುದಾಯಕ್ಕೆ ಅನ್ಯಾಯವೇ?

Published

on

By

ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಒಳಜಗಳ ಮತ್ತೆ ಭುಗಿಲೆದ್ದಿದೆ. ಈ ನಡುವೆ Rizwan Arshad ನೀಡಿದ ಹೇಳಿಕೆ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ವಾಸ್ತವದಲ್ಲಿ ಕೆಲ ನಾಯಕರು ಕೇವಲ ಒಬ್ಬ ಅಭ್ಯರ್ಥಿಯ ಪರ ಮಾತ್ರ ಒತ್ತಾಯ ಮಾಡಿದ ಕಾರಣದಿಂದ ಟಿಕೆಟ್ ಕೈತಪ್ಪಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ Abdul Jabbar ಅವರ ಹೆಸರನ್ನೇ ಮುಂದಿಟ್ಟು, ಪರ್ಯಾಯ ಹೆಸರುಗಳನ್ನು ಸೂಚಿಸದಿರುವುದೇ ಪ್ರಮುಖ ಕಾರಣ ಎಂದರು.

“ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳಿದಾಗ ಮೂರ್ನಾಲ್ಕು ಹೆಸರುಗಳನ್ನು ನೀಡಬೇಕಿತ್ತು. ಆದರೆ, ಒಂದೇ ಹೆಸರಿಗಾಗಿ ಹಠ ಹಿಡಿದ ಪರಿಣಾಮ ಅವಕಾಶ ಕಳೆದುಕೊಂಡೆವು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ನಡುವೆ ಸಚಿವ Zameer Ahmed Khan ಅವರ ನಡೆಗೂ ಪರೋಕ್ಷವಾಗಿ ಟೀಕೆ ವ್ಯಕ್ತಪಡಿಸಿದ ರಿಜ್ವಾನ್ ಅರ್ಷದ್, ಸಮುದಾಯದ ಹಿತಕ್ಕಾಗಿ ಅಲ್ಲ, ವ್ಯಕ್ತಿಗಾಗಿಯೇ ಕೆಲವರು ರಾಜಕೀಯ ನಡೆಸಿದ್ದಾರೆ ಎಂದು ಆರೋಪಿಸಿದರು.

ಇನ್ನೂ, ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆಯಾದ ಬಳಿಕ, ಬೆಂಬಲ ನೀಡಿದವರನ್ನು ‘ಸಮುದಾಯ ದ್ರೋಹಿಗಳು’ ಎಂದು ಕರೆಯುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಯಾಸಿರ್ ಪಠಾಣ್ ಸೇರಿದಂತೆ ಕೆಲವರು ಪರ್ಯಾಯ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರೂ ಅದಕ್ಕೆ ಮಹತ್ವ ನೀಡಲಾಗಿಲ್ಲ ಎಂದು ಹೇಳಿದರು.

ಒಟ್ಟಿನಲ್ಲಿ, ಕಾಂಗ್ರೆಸ್ ಪಕ್ಷದ ಒಳಜಗಳವೇ ದಾವಣಗೆರೆ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೈತಪ್ಪಲು ಕಾರಣವಾಗಿದೆ ಎಂಬುದು ಈ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

Trending