ದೇಶ
ಹೆಸರು ಹೇಳೋಕೆ ಕಷ್ಟಪಡಬೇಕಾದ ಜಗತ್ತಿನ 5 ಅಪರೂಪದ ಸ್ಕಾಚ್ಸ್!
ಸ್ಕಾಚ್ ವಿಸ್ಕಿ ಅಂದರೆ ಕುಡುಕರ ತಲೆ ಧಿಮ್ ಎನ್ನುತ್ತದೆ. ಆದರೆ, ಪ್ರಪಂಚದಲ್ಲಿ ಕೆಲವೊಂದು ಸ್ಕಾಚ್ ವಿಸ್ಕಿಗಳಿದ್ದು, ಅವುಗಳ ಹೆಸರನ್ನು ಉಚ್ಛಾರಣೆ ಮಾಡೋದೆ ಕಷ್ಟ. ಈ ಲೇಖನದಲ್ಲಿ ಪ್ರಪಂಚದ ಐದು ಸ್ಕಾಚ್ ವಿಸ್ಕಿಗಳು ಸುವಾಸನೆಯ ಕಾರಣಕ್ಕಾಗಿ ಮಾತ್ರವಲ್ಲ ತನ್ನ ಹೆಸರಿನಲ್ಲೂ ಹೊಸ ಸಾಹಸ ಮಾಡುತ್ತಿದೆ. ಇವುಗಳು ಸ್ಕಾಟ್ಲೆಂಡ್ನ ವಿಸ್ಕಿ ಪರಂಪರೆಯನ್ನು ಮಾತ್ರವಲ್ಲದೆ, ಅಲ್ಲಿನ ಶ್ರೀಮಂತ ಭಾಷಾ ಪರಂಪರೆಯನ್ನೂ ನೋಡಬಹುದಾಗಿದೆ.
Bruichladdich
ಬ್ರೂಚ್ಲಾಡಿಚ್ (Bruichladdich) ಅಂತಾ ನೀವು ಇದನ್ನು ಓದಬಹುದಾದರೂ ಇದರ ಉಚ್ಚಾರಣೆ ಬ್ರೂಕ್ಲಾಡೀ (bru-kla-dee). ಇಸ್ಲೇಯ ಲೊಚ್ ಇಂಡಾಲ್ನ ಪಶ್ಚಿಮ ತೀರದಲ್ಲಿ ರೆಮಿ ಕೊಯಿಂಟ್ರೂ-ಮಾಲೀಕತ್ವದ ಡಿಸ್ಟಿಲರಿಯ ಸ್ಕಾಚ್ ವಿಸ್ಕಿ ಇದು. 1881ರಲ್ಲಿ ಆರಂಭವಾದ ಈ ಡಿಸ್ಟಲರಿಯ ಬ್ರೂಕ್ಲಾಡೀ ಸೌಮ್ಯವಾದ, ಹೂವಿನ ಮತ್ತು ಜೇನುತುಪ್ಪದ ವಿಸ್ಕಿಗಳಿಗೆ ಹೆಸರುವಾಸಿಯಾಗಿದೆ. ಇದರ ಒಂದು ಬಾಟಲ್ನ ಬೆಲೆ 40 ಸಾವಿರ ರೂಪಾಯಿ. ಫೆಬ್ರವರಿ 2024 ರಲ್ಲಿ ಹೊಸ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಪ್ರಾರಂಭಿಸುವುದರೊಂದಿಗೆ ಬ್ರೂಕ್ಲಾಡೀ 21 ವರ್ಷದ ಹಳೆಯ ಬಾಟಲ್ಅನ್ನು ನವೀಕರಿಸಿದ್ದಾರೆ. ಬ್ರೂಕ್ಲಾಡೀ ಥರ್ಟಿ ಅನ್ನು ಸಹ ಅನಾವರಣಗೊಳಿಸಲಾಯಿತು.
Bunnahabhain
ಬುನ್ನಾಹ್ಬೈನ್ ಎಂದು ನಾವಿದನ್ನು ಓದಬಹುದಾದರೂ, ಇದರ ಉಚ್ಛಾರಣೆ, ಬುನಾಹವ್ಎನ್ (Bu-Nah-Hav-En). ಒಂದು ಬಾಟಲ್ನ ಬೆಲೆ 2.60 ಲಕ್ಷ ರೂಪಾಯಿ. ಇಸ್ಲೇ ಡಿಸ್ಟಿಲರಿ ದ್ವೀಪದ ಈಶಾನ್ಯ ಕರಾವಳಿಯಲ್ಲಿದೆ. ಬ್ರೂಕ್ಲಾಡೀನಂತೆ, ಇದನ್ನು 1881 ರಲ್ಲಿ ವಿಕ್ಟೋರಿಯನ್ ವಿಸ್ಕಿಯ ಕ್ರಾಂತಿಯ ಮಧ್ಯೆ ಸ್ಥಾಪಿಸಲಾಯಿತು. ಡಿಸ್ಟಿಲರಿಯು ಈ ಹಿಂದೆ ಪೀಟೆಡ್ ಸಿಂಗಲ್ ಮಾಲ್ಟ್ಗಳನ್ನು ಉತ್ಪಾದನೆ ಮಾಡುತ್ತಿತ್ತು. 1960 ರ ದಶಕದಿಂದ ಬುನಾಹವ್ಎನ್ ಪ್ರಧಾನವಾಗಿ ಶೆರ್ರಿ ಪೀಪಾಯಿಗಳಲ್ಲಿ ಏಜಡ್ ಪೀಟ್ ಮಾಡದ ವಿಸ್ಕಿಯನ್ನು ಉತ್ಪಾದಿಸುತ್ತಿದೆ. ಇಲ್ಲಿಯವರೆಗೂ ಕೇವಲ 594 ಬಾಟಲ್ಗಳನ್ನು ಮಾತ್ರವೇ ಮಾರಾಟ ಮಾಡಲಾಗಿದೆ.
Glen Garioch
ಗ್ಲೆನ್ ಗ್ಯಾರಿಯೋಚ್ ಎಂದು ನಾವು ಹೇಳಬಹುದಾದರೂ, ಇದರ ಸರಿಯಾದ ಉಚ್ಛಾರಣೆ ಗ್ಲೆನ್ ಗೀರೇ (Glen-Geery). ಡಿಸ್ಟಿಲರಿಯು ತನ್ನ ಹೆಸರನ್ನು ಗೀರೇಯ ಹತ್ತಿರದ ಕಣಿವೆಯಿಂದ ಪಡೆದುಕೊಂಡಿದೆ, ಇದು ಸ್ಕಾಟ್ಲೆಂಡ್ನ ಅತ್ಯುತ್ತಮ ಬಾರ್ಲಿ-ಬೆಳೆಯುವ ಪ್ರದೇಶಗಳಲ್ಲಿ ಒಂದಾಗಿದೆ. ಸ್ಕಾಟ್ಲೆಂಡ್ನ ಅನೇಕ ಡಿಸ್ಟಿಲರಿಗಳು ‘ಗ್ಲೆನ್’ ಪೂರ್ವಪ್ರತ್ಯಯವನ್ನು ಹೊಂದಿರುತ್ತವೆ. ಸ್ಕಾಟ್ಸ್ ಗೇಲಿಕ್ನಲ್ಲಿ ‘ಗ್ಲೆನ್’ ಎಂದರೆ ‘ಕಣಿವೆ’ ಎಂದರ್ಥವಾಗಿದೆ. ಸ್ಕಾಟಿಷ್ ಹೈಲ್ಯಾಂಡ್ಸ್ನ ಓಲ್ಡ್ಮೆಲ್ಡ್ರಮ್ನಲ್ಲಿರುವ ಗ್ಲೆನ್ ಗೀರೇ ಅನ್ನು 1797 ರಲ್ಲಿ ಥಾಮಸ್ ಸಿಂಪ್ಸನ್ ಸ್ಥಾಪಿಸಿದರು. ಸ್ಕಾಟ್ಲೆಂಡ್ನ ಅತ್ಯಂತ ಹಳೆಯ ಕಾರ್ಯಾಚರಣೆಯ ಡಿಸ್ಟಿಲರಿಗಳಲ್ಲಿ ಒಂದಾಗಿದೆ. ಇದರ ಒಂದು ಸಿಂಗಲ್ ಬಾಟಲ್ನ ಬೆಲೆ 2.87 ಲಕ್ಷ ರೂಪಾಯಿ.
Auchentoshan
ಔಚೆಂಟೋಶನ್ ಎಂದು ನಾವಿದನ್ನು ಕರೆಯಬಹುದಾದರೂ ಇದರ ಉಚ್ಛಾರಣೆ ‘ಔಕುಂತೋಷ್ಉನ್'(Ock-Un-Tosh-Un). ಇದು ಲೋಲ್ಯಾಂಡ್ ಡಿಸ್ಟಿಲರಿಯಾಗಿದ್ದು, ಇದು ಗ್ಲ್ಯಾಸ್ಗೋದ ಉತ್ತರಕ್ಕೆ ಕ್ಲೈಡ್ ನದಿಯ ಮುಖಭಾಗದಲ್ಲಿದೆ. ‘ಉಚ್ಛಾರ ಮಾಡೋಕೆ ಕಷ್ಟ, ಕುಡಿಯಲು ಸುಲಭ..’ ಸಂತಾ ಸ್ವತಃ ಈ ಕಂಪನಿಯೇ ಹೇಳಿಕೊಳ್ಳುತ್ತದೆ. ಡಿಸ್ಟಿಲರಿಯು ಸ್ಕಾಟಿಷ್ ಗೇಲಿಕ್ ನುಡಿಗಟ್ಟು ‘ಅಚಾದ್ ಆನ್ ಓಸಿನ್’ ಅಂದರೆ ಇಂಗ್ಲಿಷ್ನಲ್ಲಿ ‘ಸ್ಥಳದ ಮೂಲೆ’ಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.1817 ರಲ್ಲಿ ಜಾನ್ ಬುಲೋಚ್ ಸ್ಥಾಪಿಸಿದ ಔಕುಂತೋಷ್ಉನ್, ಸ್ಕಾಟ್ಲೆಂಡ್ನಲ್ಲಿ ಟ್ರಿಪಲ್ ಡಿಸ್ಟಿಲೇಷನ್ ಅನ್ನು ಪ್ರತ್ಯೇಕವಾಗಿ ಬಳಸುವ ಏಕೈಕ ವಿಸ್ಕಿ ಡಿಸ್ಟಿಲರಿ ಎಂದು ಪ್ರಸಿದ್ಧವಾಗಿದೆ. ಎಲ್ಲಾ ಉತ್ಪಾದನೆಯನ್ನು ಸಿಂಗಲ್ ಮಾಲ್ಟ್ಗಳಿಗೆ ಬಳಸಲಾಗುತ್ತದೆ. ಇದರ ಒಂದು ಸಿಂಗಲ್ ಬಾಟಲ್ನ ಬೆಲೆ 55 ಸಾವಿರ ರೂಪಾಯಿ.
Caol Ila
ಕಾಲ್ ಇಲಾ ಎಂದು ನೀವಿದನ್ನೂ ಉಚ್ಛಾರ ಮಾಡಿದರೂ, ಇದರ ಸರಿಯಾದ ಉಚ್ಛಾರಣೆ ಕುಲ್ ಇಲಾಹ್ (Cull-Ee-Lah). ಇದರ ಒಂದು ಸಿಂಗಲ್ ಬಾಟಲ್ನ ಬೆಲೆ 59 ಸಾವಿರ ರೂಪಾಯಿ. ಕುಲ್ ಇಲಾಹ್ ಎಂಬುದು ಸೌಂಡ್ ಆಫ್ ಇಸ್ಲೇಗೆ ಸ್ಕಾಟಿಷ್ ಗೇಲಿಕ್ ಹೆಸರಾಗಿದೆ. ಐಲ್ ಆಫ್ ಜುರಾದಿಂದ ಇಸ್ಲೇಯನ್ನು ಪ್ರತ್ಯೇಕಿಸುವ ನೀರಿನ ಭಾಗ ಇದು. ಈ ಡಿಸ್ಟಿಲರಿ ಬುನಾಹವ್ಎನ್ ದಕ್ಷಿಣಕ್ಕೆ ಪೋರ್ಟ್ ಅಸ್ಕೈಗ್ನ ಉತ್ತರದಲ್ಲಿದೆ.
ದೇಶ
Raksha Bandhan 2026: ದೇಶವಾಸಿಗಳಿಗೆ PM Modi ಶುಭಾಶಯ; ಸಹೋದರ-ಸಹೋದರಿಯರ ಬಾಂಧವ್ಯಕ್ಕೆ ವಿಶೇಷ ಸಂದೇಶ
ನವದೆಹಲಿ: ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯದ ಸಂಕೇತವಾಗಿರುವ ರಕ್ಷಾಬಂಧನ (Raksha Bandhan) ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ರಕ್ಷಾಬಂಧನದ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಸುಖ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ನಂಬಿಕೆಯ ಬಾಂಧವ್ಯ ಸದಾ ಗಟ್ಟಿಯಾಗಿ ಉಳಿಯಲಿ ಎಂದು ಅವರು ಆಶಿಸಿದ್ದಾರೆ.
ಮೋದಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು
ರಕ್ಷಾಬಂಧನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲೂ ವಿಶೇಷ ಸಂಭ್ರಮ ಕಂಡುಬಂದಿದೆ. ಶಾಲಾ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಇದೇ ವೇಳೆ ದೇಶದ ಗಡಿ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ಯೋಧರಿಗೂ ದೇಶದ ವಿವಿಧ ಭಾಗಗಳ ಮಹಿಳೆಯರು ಹಾಗೂ ಮಕ್ಕಳು ರಾಖಿ ಕಳುಹಿಸಿ ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿದ್ದಾರೆ.
ಮಹಿಳಾ ಶಕ್ತಿ, ಗೌರವಕ್ಕೆ ಒತ್ತು
ರಕ್ಷಾಬಂಧನ ಕೇವಲ ಸಹೋದರ-ಸಹೋದರಿಯರ ಹಬ್ಬವಲ್ಲದೆ, ಮಹಿಳೆಯರ ಗೌರವ, ಸುರಕ್ಷತೆ ಮತ್ತು ಸಬಲೀಕರಣದ ಸಂದೇಶವನ್ನು ಸಾರುವ ಸಂದರ್ಭವೂ ಆಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಂಸ್ಕೃತ ದಿನಕ್ಕೂ ಮೋದಿ ಶುಭಾಶಯ
ರಕ್ಷಾಬಂಧನದ ಜೊತೆಗೆ ವಿಶ್ವ ಸಂಸ್ಕೃತ ದಿನದ ಅಂಗವಾಗಿಯೂ ಪ್ರಧಾನಿ ಮೋದಿ ಅವರು ದೇಶ-ವಿದೇಶಗಳ ಸಂಸ್ಕೃತ ಪ್ರೇಮಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ವಿಶೇಷವೆಂದರೆ, ಅವರು ಸಂಸ್ಕೃತ ಭಾಷೆಯಲ್ಲೇ ಶುಭಾಶಯ ಸಂದೇಶ ಹಂಚಿಕೊಂಡಿದ್ದಾರೆ.
ಸಂಸ್ಕೃತವು ಭಾರತದ ಪ್ರಾಚೀನ ಜ್ಞಾನ ಪರಂಪರೆಯ ಪ್ರಮುಖ ಭಾಗವಾಗಿದ್ದು, ಅಪಾರ ಜ್ಞಾನ ಸಂಪತ್ತನ್ನು ಒಳಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಹಾಭಾರತದ ಶ್ಲೋಕವೊಂದನ್ನು ಹಂಚಿಕೊಂಡು ಸಂಸ್ಕೃತ ಭಾಷೆಯ ಮಹತ್ವವನ್ನು ಸ್ಮರಿಸಿದ್ದಾರೆ.
ಪ್ರಾಚೀನ ಗುರುಕುಲ ಪರಂಪರೆಯಲ್ಲಿ ಶ್ರಾವಣ ಪೂರ್ಣಿಮೆಯಂದು ಹೊಸ ಶಿಕ್ಷಣ ವರ್ಷ ಆರಂಭವಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಕಲಿಕೆ, ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಎಲ್ಲರ ಪ್ರಯತ್ನವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ದೇಶ
LPG e-KYC Deadline: ಗ್ಯಾಸ್ ಗ್ರಾಹಕರೇ ಗಮನಿಸಿ, ಆಗಸ್ಟ್ 31 ಕೊನೆಯ ಗಡುವು! ಮಾಡದಿದ್ದರೆ ಏನಾಗುತ್ತೆ?
ಬೆಂಗಳೂರು: ದೇಶದ LPG ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದ್ದು, ನಕಲಿ ಹಾಗೂ ವಂಚನೆಯ ಗ್ಯಾಸ್ ಸಂಪರ್ಕಗಳನ್ನು ಗುರುತಿಸುವ ಉದ್ದೇಶದಿಂದ LPG e-KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಆರಂಭದಲ್ಲಿ ಆಗಸ್ಟ್ 23ರವರೆಗೆ ಗಡುವು ನೀಡಲಾಗಿತ್ತು. ಇದೀಗ ಈ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.
ಇಂಡಿಯನ್ ಆಯಿಲ್, ಎಚ್ಪಿಸಿಎಲ್ ಮತ್ತು ಬಿಪಿಸಿಎಲ್ ಸೇರಿದಂತೆ ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳ ದೇಶೀಯ ಎಲ್ಪಿಜಿ ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ನಕಲಿ ದಾಖಲೆಗಳು ಅಥವಾ ಇತರರ ಹೆಸರಿನಲ್ಲಿ ಪಡೆದಿರುವ ಸಂಪರ್ಕಗಳನ್ನು ಪತ್ತೆಹಚ್ಚುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ.
LPG e-KYC ಮಾಡದಿದ್ದರೆ ಏನಾಗಬಹುದು?
ಗ್ರಾಹಕರು ನಿಗದಿತ ಅವಧಿಯಲ್ಲಿ ಇ-ಕೆವೈಸಿ ಪೂರ್ಣಗೊಳಿಸದಿದ್ದರೂ ತಕ್ಷಣವೇ ಗ್ಯಾಸ್ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಹೇಳಲಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಸಿಲಿಂಡರ್ ಬುಕ್ಕಿಂಗ್, ವಿತರಣೆ ಅಥವಾ ಇತರ ಸೇವೆಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಕೆಲವು ಸಂದರ್ಭಗಳಲ್ಲಿ ಎಲ್ಪಿಜಿ ಸಬ್ಸಿಡಿ ಸೇವೆಯ ಮೇಲೂ ಪರಿಣಾಮ ಉಂಟಾಗಬಹುದು.
ಇ-ಕೆವೈಸಿ ಪೂರ್ಣಗೊಂಡ ಬಳಿಕ ಬಾಕಿ ಉಳಿದಿರುವ ಸೇವೆಗಳು ಮರುಪ್ರಾರಂಭವಾಗುವ ಸಾಧ್ಯತೆಯಿದೆ. ಹೀಗಾಗಿ ಗ್ರಾಹಕರು ಕೊನೆಯ ದಿನದವರೆಗೆ ಕಾಯದೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ.
ಮೊಬೈಲ್ನಲ್ಲೇ ಉಚಿತವಾಗಿ e-KYC ಮಾಡುವುದು ಹೇಗೆ?
ಎಲ್ಪಿಜಿ ಗ್ರಾಹಕರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಕ್ಕಾಗಿ ಮೊದಲು ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ನಂತರ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಮೂಲಕ ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡು ಲಾಗಿನ್ ಆಗಬೇಕು. ಅಗತ್ಯವಿದ್ದರೆ 16 ಅಥವಾ 17 ಅಂಕಿಗಳ LPG ID ನಮೂದಿಸಬೇಕು.
ಮುಂದೆ ಆ್ಯಪ್ನ ಪ್ರೊಫೈಲ್ ಅಥವಾ ಮೆನು ವಿಭಾಗದಲ್ಲಿ ಕಾಣಿಸುವ LPG e-KYC / Re-KYC ಆಯ್ಕೆಯನ್ನು ಆರಿಸಬೇಕು. ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಂಡ ನಂತರ ಮುಖದ ದೃಢೀಕರಣಕ್ಕಾಗಿ ಸೂಚನೆಗಳನ್ನು ಅನುಸರಿಸಬೇಕು.
ಇದಕ್ಕಾಗಿ Aadhaar Face RD ಆ್ಯಪ್ ಅಗತ್ಯವಿರಬಹುದು. ಮುಖದ ದೃಢೀಕರಣ ಯಶಸ್ವಿಯಾದ ಬಳಿಕ ಗ್ರಾಹಕರ ವಿವರಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ವಿವರಗಳನ್ನು ಪರಿಶೀಲಿಸಿ ಕೊನೆಯಲ್ಲಿ Submit ಆಯ್ಕೆಯನ್ನು ಒತ್ತಿದರೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಹೀಗಾಗಿ ಇಂಡೇನ್, ಎಚ್ಪಿಸಿಎಲ್ ಅಥವಾ ಭಾರತ್ ಗ್ಯಾಸ್ ಬಳಸುತ್ತಿರುವ ಗ್ರಾಹಕರು ಆಗಸ್ಟ್ 31ರೊಳಗೆ LPG e-KYC ಪೂರ್ಣಗೊಳಿಸುವುದು ಉತ್ತಮ.
ರಾಜಕೀಯ
B Nagendra ರಾಜೀನಾಮೆ: ಕಾಂಗ್ರೆಸ್ನಲ್ಲಿ ಬಿಗ್ ಟ್ವಿಸ್ಟ್, ಹೈಕಮಾಂಡ್ ಮುಂದಿದೆ ಮಹತ್ವದ ನಿರ್ಧಾರ!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಸಚಿವ B Nagendra ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರವೇ ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಆದರೆ ರಾಜೀನಾಮೆಯನ್ನು ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಿ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬೇಕೇ ಎಂಬ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕತ್ವದ ನಡುವೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ಅಂಗೀಕಾರದ ಬಗ್ಗೆ ಕುತೂಹಲ
ನಾಗೇಂದ್ರ ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ನಾಯಕತ್ವದ ಮುಂದಿಟ್ಟಿದ್ದು, ಸರ್ಕಾರಕ್ಕೆ ಮತ್ತಷ್ಟು ಮುಜುಗರವಾಗದಂತೆ ರಾಜಕೀಯವಾಗಿ ಮುನ್ನೆಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರ ವಿರುದ್ಧ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ನಿರಂತರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಇದೀಗ ನಾಗೇಂದ್ರ ಅವರ ರಾಜೀನಾಮೆ ಸಲ್ಲಿಕೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಆದರೆ ರಾಜೀನಾಮೆ ಸಲ್ಲಿಸಿರುವುದು ಮಾತ್ರ ಖಚಿತವಾಗಿದ್ದು, ಅದನ್ನು ಅಂಗೀಕರಿಸುವ ಕುರಿತು ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲ ಎನ್ನಲಾಗಿದೆ.
ಬಳ್ಳಾರಿ ಚಲೋಗೂ ಮುನ್ನವೇ ಬಿಗ್ ಟ್ವಿಸ್ಟ್
ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸೆಪ್ಟೆಂಬರ್ 1ರಿಂದ 10 ದಿನಗಳ ‘ಬಳ್ಳಾರಿ ಚಲೋ ಪಾದಯಾತ್ರೆ’ ನಡೆಸಲು ಘೋಷಿಸಿದೆ. ವಾಲ್ಮೀಕಿ ನಿಗಮದ ಹಗರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗಿದೆ.
ಆದರೆ ಬಿಜೆಪಿ ಪಾದಯಾತ್ರೆ ಆರಂಭಕ್ಕೂ ಮುನ್ನವೇ ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಈ ಬೆಳವಣಿಗೆಯ ನಂತರ ಬಿಜೆಪಿ ತನ್ನ ಹೋರಾಟದ ಮುಂದಿನ ಕಾರ್ಯತಂತ್ರವನ್ನು ಹೇಗೆ ರೂಪಿಸಲಿದೆ ಎಂಬುದೂ ಗಮನ ಸೆಳೆದಿದೆ.
ಸಿಎಂ ಡಿಕೆಶಿ ಮತ್ತು ಹೈಕಮಾಂಡ್ ನಿರ್ಧಾರವೇನು?
ನಾಗೇಂದ್ರ ಅವರ ರಾಜೀನಾಮೆ ಪತ್ರ ಇದೀಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಂದಿದ್ದು, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.
ರಾಜೀನಾಮೆಯನ್ನು ಅಂಗೀಕರಿಸಿದರೆ, ಹಗರಣದ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮವೆಂದು ಕಾಂಗ್ರೆಸ್ ಇದನ್ನು ಬಿಂಬಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ರಾಜೀನಾಮೆಯನ್ನು ತಿರಸ್ಕರಿಸಿ ನಾಗೇಂದ್ರ ಅವರನ್ನು ಮುಂದುವರಿಸುವ ನಿರ್ಧಾರ ಕೈಗೊಂಡರೆ ಪ್ರತಿಪಕ್ಷಗಳಿಂದ ಮತ್ತಷ್ಟು ರಾಜಕೀಯ ಒತ್ತಡ ಎದುರಾಗುವ ಸಾಧ್ಯತೆಯಿದೆ.
ಹೀಗಾಗಿ ಬಿ. ನಾಗೇಂದ್ರ ಅವರ ರಾಜೀನಾಮೆ ಅಂಗೀಕಾರವಾಗುತ್ತದೆಯೇ ಅಥವಾ ಅವರು ಸಚಿವರಾಗಿ ಮುಂದುವರಿಯುತ್ತಾರೆಯೇ ಎಂಬುದು ಇದೀಗ ರಾಜ್ಯ ರಾಜಕೀಯದ ಪ್ರಮುಖ ಪ್ರಶ್ನೆಯಾಗಿದೆ.
-
ಬೆಂಗಳೂರು22 ಗಂಟೆಗಳು agoBengaluru ನಲ್ಲಿ ಖಾಲಿ ಸೈಟ್ ಮಾಲೀಕರಿಗೆ ಬಿಗ್ ಶಾಕ್: ಕಸ ತೆರವು ಮಾಡದಿದ್ದರೆ ₹38,400 ದಂಡ, ದೊಡ್ಡ ಸೈಟ್ಗೆ ಲಕ್ಷಕ್ಕೂ ಹೆಚ್ಚು!
-
ದೇಶ23 ಗಂಟೆಗಳು agoNepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್
-
ರಾಜ್ಯ23 ಗಂಟೆಗಳು agoMysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ
-
ಬೆಂಗಳೂರು24 ಗಂಟೆಗಳು agoBengaluru ಪಾರ್ಕ್ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ
-
ಬೆಂಗಳೂರು20 ಗಂಟೆಗಳು agoLiver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ
-
ದೇಶ2 ಗಂಟೆಗಳು agoPM Narendra Modi Foreign Visit: ಮೋದಿ 4 ದಿನಗಳ ವಿದೇಶ ಪ್ರವಾಸ, ಎಸ್ಸಿಒ ಶೃಂಗಸಭೆಯಲ್ಲಿ ಭಾಗಿ
-
ದೇಶ3 ಗಂಟೆಗಳು agoNepal ಭೀಕರ ಪ್ರವಾಹ: ಸಾವಿನ ಸಂಖ್ಯೆ 469ಕ್ಕೆ ಏರಿಕೆ, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ!
-
ದೇಶ2 ಗಂಟೆಗಳು agoKashmir ದಲ್ಲಿ ಭದ್ರತಾ ಪಡೆಗಳ ಭರ್ಜರಿ ಬೇಟೆ: 5 ಹೈಬ್ರಿಡ್ ಉಗ್ರರು ಸೇರಿ 13 ಮಂದಿ ಅರೆಸ್ಟ್
