Connect with us

ಅಪರಾಧ

ವಿಷದ ಚುಚ್ಚುಮದ್ದು, ಗುಂಡಿನ ದಾಳಿ: ಗಲ್ಲು ಶಿಕ್ಷೆಗೆ ಪ್ರಭಾವಕಾರಿ ಪರ್ಯಾಯ

Published

on

ನವದೆಹಲಿ: ಭಾರತದಲ್ಲಿ ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಅಪಹರಣ ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಮರಣದಂಡನೆ ವಿಧಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಲ್ಲು ಶಿಕ್ಷೆ ಮೂಲಕ ಈ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತಿದ್ದು, ಕೆಲವೊಮ್ಮೆ ಅಪರಾಧಿಗೆ 40 ನಿಮಿಷಗಳವರೆಗೂ ನೋವು ಅನುಭವಿಸಬೇಕಾಗುತ್ತದೆ.

ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಗಲ್ಲು ಶಿಕ್ಷೆಯ ಪರ್ಯಾಯ ವಿಧಾನಗಳಾದ ವಿಷದ ಚುಚ್ಚುಮದ್ದು, ಗುಂಡಿನ ದಾಳಿ, ವಿಷ ಅನಿಲ ಅಥವಾ ವಿದ್ಯುತ್ ಆಘಾತವನ್ನು ಪರಿಗಣಿಸುವಂತೆ ಸಲಹೆ ನೀಡಿದೆ. ಈ ವಿಧಾನಗಳಲ್ಲಿ ಅಪರಾಧಿಯನ್ನು ನೋವುರಹಿತವಾಗಿ, ಕೆಲವು ನಿಮಿಷಗಳಲ್ಲಿ ಶಿಕ್ಷೆ ಜಾರಿಗೊಳಿಸಲಾಗುತ್ತದೆ.

ಗಲ್ಲು ಶಿಕ್ಷೆಯಲ್ಲಿ ಹಗ್ಗದ ಎತ್ತರ ಮತ್ತು ತೂಕದ ಪ್ರಮಾಣವು ಎಲ್ಲರಿಗೂ ಒಂದೇ ರೀತಿಯಾಗಿದೆ, ದೇಹದ ಗಾತ್ರದ ವ್ಯತ್ಯಾಸವನ್ನು ಗಮನಿಸದಿರುವುದರಿಂದ ಯಾತನೆ ಹೆಚ್ಚುತ್ತದೆ. ಪರ್ಯಾಯ ವಿಧಾನಗಳು, ವಿಶೇಷವಾಗಿ ವಿಷದ ಚುಚ್ಚುಮದ್ದು, ಅಪರಾಧಿಯ ಅರಿವು ಕಡಿಮೆ ಮಾಡಿಕೋರುತ್ತದೆ ಮತ್ತು ಹೃದಯ ಬಡಿತ ನಿಲ್ಲಿಸುವ ಮೂಲಕ ಶಿಕ್ಷೆಯನ್ನು ತ್ವರಿತವಾಗಿ ಜಾರಿಗೊಳಿಸುತ್ತದೆ.

ಸ್ವಾತಂತ್ರ್ಯದ ನಂತರ 2023ರ ವರೆಗೆ ಭಾರತದಲ್ಲಿ 561 ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ವಿಶ್ವದಲ್ಲಿ 95 ದೇಶಗಳು ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದು, 58 ದೇಶಗಳಲ್ಲಿ ಇನ್ನೂ ಗಲ್ಲು ಶಿಕ್ಷೆಯನ್ನು ಮುಂದುವರೆಸಲಾಗಿದೆ. ಇತರ ದೇಶಗಳಲ್ಲಿ ವಿವಿಧ ವಿಧಾನಗಳ ಮೂಲಕ ಮರಣದಂಡನೆ ಜಾರಿಗೊಳ್ಳುತ್ತಿದೆ, ಉದಾಹರಣೆಗೆ ಇರಾನ್, ಸೌದಿ ಅರೇಬಿಯಾ, ಚೀನಾ, ಅಮೆರಿಕಾ ಮತ್ತು ಇಂಡೋನೇಷಿಯಾ.

J S Vasudev is a journalist and writer with 15 years of experience in writing and journalism. He founded Hosasuddi.in in 2023 with a vision to deliver credible and timely Kannada news. With a strong passion for journalism, he focuses on presenting news in a clear, simple and reader-friendly manner. His work covers current affairs, Karnataka news, national developments, business, technology and social issues. He believes in independent journalism and responsible reporting that puts readers first. His guiding motto is “Write on Your Own,” reflecting his commitment to original and independent content. Through Hosasuddi.in, he continues to contribute to Kannada digital journalism with dedication and integrity.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಅಪರಾಧ

Darshan ಅರ್ಜಿ ಭಾಗಶಃ ಪುರಸ್ಕರಿಸಿದ ಹೈಕೋರ್ಟ್; ಪ್ರದೋಶ್ ಅಪ್ರೂವರ್ ಆಗುವುದಕ್ಕೆ ಏನಾಯ್ತು?

Published

on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ 14ನೇ ಆರೋಪಿ ಹಾಗೂ ದರ್ಶನ್‌ಗೆ ಆಪ್ತರಾಗಿದ್ದ ಪ್ರದೋಶ್ ಅವರು ಮಾಫಿ ಸಾಕ್ಷಿ (ಅಪ್ರೂವರ್) ಆಗಲು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಪ್ರದೋಶ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಿತ್ತು. ಇದನ್ನು ವಿರೋಧಿಸಿ ಪ್ರಕರಣದ ಎರಡನೇ ಆರೋಪಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ನ್ಯಾಯಾಲಯ ತನ್ನ ಆದೇಶ ಪ್ರಕಟಿಸಿದೆ.

ದರ್ಶನ್ ಅರ್ಜಿ ಭಾಗಶಃ ಪುರಸ್ಕಾರ

ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಪುರಸ್ಕರಿಸಿದೆ. ಆದರೆ ಪ್ರದೋಶ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ನೇರವಾಗಿ ತಡೆ ನೀಡಿಲ್ಲ.

ಬದಲಾಗಿ, ಪ್ರದೋಶ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಹಿಂದಿನ ಆದೇಶವನ್ನು ರದ್ದುಪಡಿಸಿ, ಈ ವಿಚಾರದಲ್ಲಿ ಮರು ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.

ಒಂದು ವಾರದೊಳಗೆ ಮರು ಆದೇಶ ಹೊರಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ ಈ ವಿಚಾರದಲ್ಲಿ ಮತ್ತೆ ಸಂಪೂರ್ಣ ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಒಂದು ವಾರದಲ್ಲಿ ಮರು ಆದೇಶ

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ 59ನೇ ಸಿಸಿಹೆಚ್ ನ್ಯಾಯಾಲಯವು ಪ್ರದೋಶ್ ಅವರ ಮಾಫಿ ಸಾಕ್ಷಿ ಅರ್ಜಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಆದೇಶ ಹೊರಡಿಸಬೇಕಾಗಿದೆ.

ಹೀಗಾಗಿ ಸದ್ಯಕ್ಕೆ ಪ್ರದೋಶ್ ಅವರು ಅಪ್ರೂವರ್ ಆಗುವುದಕ್ಕೆ ಸಂಪೂರ್ಣವಾಗಿ ತಡೆ ಬಿದ್ದಿಲ್ಲ. ವಿಚಾರಣಾ ನ್ಯಾಯಾಲಯ ಮರು ಆದೇಶದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಪ್ರಕರಣದಲ್ಲಿ ಪ್ರಮುಖವಾಗಲಿದೆ.

ಮರು ಆದೇಶದಲ್ಲಿಯೂ ಪ್ರದೋಶ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಅನುಮತಿ ನೀಡಿದರೆ, ಅವರ ಹೇಳಿಕೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.

ಪ್ರದೋಶ್ ಯಾರು? ಏಕೆ ಮಹತ್ವ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಅವರನ್ನು 14ನೇ ಆರೋಪಿಯಾಗಿ ಬಂಧಿಸಲಾಗಿತ್ತು. ಪ್ರಕರಣದ ಆರಂಭಿಕ ಹಂತದಿಂದ ಅಂತ್ಯದವರೆಗೂ ದರ್ಶನ್ ಹಾಗೂ ಇತರ ಆರೋಪಿಗಳೊಂದಿಗೆ ಪ್ರದೋಶ್ ಸಂಪರ್ಕದಲ್ಲಿದ್ದರು ಎಂಬುದು ತನಿಖಾ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಹಲವು ಪ್ರಮುಖ ಬೆಳವಣಿಗೆಗಳ ಬಗ್ಗೆ ಅವರಿಗೆ ಮಾಹಿತಿ ಇರಬಹುದು ಎಂಬ ಕಾರಣಕ್ಕೆ, ಅವರು ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಪ್ರದೋಶ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿ, ಅವರನ್ನು ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲು ಅನುಮತಿಸಿತ್ತು. ಇದನ್ನು ದರ್ಶನ್ ವಿರೋಧಿಸಿದ್ದರು.

ದರ್ಶನ್‌ಗೆ ಸಿಕ್ಕಿದ್ದು ಎಷ್ಟು ರಿಲೀಫ್?

ಹೈಕೋರ್ಟ್ 59ನೇ ಸಿಸಿಹೆಚ್ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಪಡಿಸಿರುವುದರಿಂದ ದರ್ಶನ್ ಅವರಿಗೆ ಸಣ್ಣ ಮಟ್ಟಿನ ಮುನ್ನಡೆ ಸಿಕ್ಕಿದೆ ಎನ್ನಬಹುದು.

ಆದರೆ ಇದು ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ಅಂತಿಮವಾಗಿ ತಡೆದ ಆದೇಶವಲ್ಲ. ವಿಚಾರಣಾ ನ್ಯಾಯಾಲಯ ಮರು ಆದೇಶದಲ್ಲಿ ಮತ್ತೊಮ್ಮೆ ಪ್ರದೋಶ್ ಅವರಿಗೆ ಅಪ್ರೂವರ್ ಸ್ಥಾನಮಾನ ನೀಡಿದರೆ, ಅವರ ಹೇಳಿಕೆ ಪ್ರಕರಣದಲ್ಲಿ ಪ್ರಮುಖ ಅಂಶವಾಗಬಹುದು.

ಹೀಗಾಗಿ ಇದೀಗ ಎಲ್ಲರ ಗಮನವೂ 59ನೇ ಸಿಸಿಹೆಚ್ ನ್ಯಾಯಾಲಯದ ಮುಂದಿನ ಆದೇಶದತ್ತ ನೆಟ್ಟಿದೆ. ಒಂದು ವಾರದೊಳಗೆ ಹೊರಬರಬೇಕಿರುವ ಈ ಆದೇಶವು ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮಹತ್ವದ ಪರಿಣಾಮ ಬೀರಬಹುದಾಗಿದೆ.

Continue Reading

ಬೆಂಗಳೂರು

Medahalli ಸರ್ವಿಸ್ ರಸ್ತೆಯಲ್ಲಿ ಅಕ್ರಮ ಚಟುವಟಿಕೆಗಳ ಅಟ್ಟಹಾಸ: ಸಾರ್ವಜನಿಕರ ಆತಂಕ

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗಕ್ಕೆ ಒಳಪಡುವ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಸರ್ವಿಸ್ ರಸ್ತೆ (Medahalli Service Road) ಈಗ ಅಕ್ರಮ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬ ಗಂಭೀರ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಐಟಿ ಸಂಪರ್ಕ ಕೊಂಡಿಯಾಗಿರುವ ವೈಟ್‌ಫೀಲ್ಡ್‌ನಂತಹ ಪ್ರತಿಷ್ಠಿತ ವಿಭಾಗದಲ್ಲೇ ಇಂತಹ ರೆಡ್ ಲೈಟ್ ಮಾದರಿಯ ಅಕ್ರಮ ದಂಧೆಗಳು ನಿರಂತರವಾಗಿ ನಡೆಯುತ್ತಿರುವುದು ಸ್ಥಳೀಯರು ಹಾಗೂ ದಾರಿಹೋಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ.

ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಸಕ್ರಿಯವಾಗುವ ತಂಡ

ಪ್ರತಿದಿನ ಸಂಜೆ ಕತ್ತಲಾಗುತ್ತಿದ್ದಂತೆ ಈ ಸರ್ವಿಸ್ ರಸ್ತೆಯಲ್ಲಿ ನಿರ್ದಿಷ್ಟ ಅಕ್ರಮ ಗುಂಪೊಂದು ಸಕ್ರಿಯವಾಗುತ್ತದೆ. ರಸ್ತೆ ಬದಿಯಲ್ಲಿ ನಿಂತುಕೊಂಡು, ಹೋಗಿ ಬರುವ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕೈ ಸನ್ನೆ ಮಾಡಿ ಕರೆಯುವುದು ಇವರ ದಿನಚರಿಯಾಗಿದೆ. ಈ ಗುಂಪಿನಲ್ಲಿ ಟ್ರಾನ್ಸ್‌ಜೆಂಡರ್‌ಗಳು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕರ ಬಳಿ ಬಹಿರಂಗವಾಗಿಯೇ ಹಣದ ಚೌಕಾಸಿ ನಡೆಸುವ ಈ ಗುಂಪು, ಐನೂರು ರೂಪಾಯಿ ಕೊಟ್ಟರೆ ಬರುತ್ತೇವೆ, ಮುನ್ನೂರು ರೂಪಾಯಿ ಕೊಟ್ಟರೆ ಬರುವುದಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತದೆ. ಯಾರಾದರೂ ಈ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದರೆ ಅಥವಾ ವಾಗ್ವಾದಕ್ಕೆ ಇಳಿದರೆ, “ನಾವೇ ಪೊಲೀಸರಿಗೆ ಕರೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಹೆದರಿಸುವುದು ಇಲ್ಲಿ ನಿತ್ಯದ ಸನ್ನಿವೇಶವಾಗಿದೆ.

ಕೂಲಿ ಕಾರ್ಮಿಕರು ಮತ್ತು ಉದ್ಯೋಗಿಗಳೇ ಮುಖ್ಯ ಗುರಿ

ಈ ಅಕ್ರಮ ಜಾಲದ ಮುಖ್ಯ ಗುರಿ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಕೂಲಿ ಕಾರ್ಮಿಕರು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು. ಕಾಮದ ಆಸೆ ತೋರಿಸಿ ಜನರನ್ನು ಕತ್ತಲ ಪ್ರದೇಶಗಳಿಗೆ ಕರೆದುಕೊಂಡು ಹೋಗಿ, ಅಸಭ್ಯವಾಗಿ ವರ್ತಿಸುತ್ತಾ ಅವರ ಬಳಿ ಇರುವ ಹಣ, ಮೊಬೈಲ್ ಹಾಗೂ ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗುವುದು ಇಲ್ಲಿ ಸಾಮಾನ್ಯವಾಗಿದೆ. ನಂಬಿ ಹೋದವರು ತಮ್ಮ ಜೇಬು ಖಾಲಿ ಮಾಡಿಕೊಂಡು, ಮಾನ ಮುಚ್ಚಿಕೊಳ್ಳಲು ಸುಮ್ಮನಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಟುಂಬಗಳು ಮತ್ತು ಹಿರಿಯ ನಾಗರಿಕರಿಗೆ ಸಂಚಾರ ಸವಾಲು

ಈ ಅಕ್ರಮ ದಂಧೆಯ ಪರಿಣಾಮವಾಗಿ ಸಭ್ಯ ನಾಗರಿಕರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ಸಂಚರಿಸುವ ಕುಟುಂಬಗಳಿಗೆ ಈ ರಸ್ತೆಯಲ್ಲಿ ಓಡಾಡುವುದೇ ಒಂದು ದೊಡ್ಡ ಸವಾಲಾಗಿದೆ. ಅಸಭ್ಯ ವರ್ತನೆಗಳು ಕಣ್ಣಿಗೆ ಬೀಳುವುದರಿಂದ ಸಾರ್ವಜನಿಕರು ತೀವ್ರ ಮುಜುಗರ ಮತ್ತು ಭಯದಿಂದ ಓಡಾಡುವಂತಾಗಿದೆ. ಯಾವುದೇ ಸಮಯದಲ್ಲೂ ಅನಾಹುತ ಸಂಭವಿಸಬಹುದು ಎಂಬ ಭೀತಿ ಸಂಚಾರ ಸವಾರರಲ್ಲಿ ಮನೆಮಾಡಿದೆ.

ವೈರಲ್ ಆದರೂ ಕ್ರಮ ಕೈಗೊಳ್ಳದ ಪೊಲೀಸರು?

ಈ ಅಶ್ಲೀಲ ದಂಧೆಯ ದೃಶ್ಯಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭಾರಿ ವೈರಲ್ ಆಗಿವೆ. ಆದಾಗ್ಯೂ, ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಅವಲಹಳ್ಳಿ ಠಾಣೆಯ ಸಿಬ್ಬಂದಿ ಈವರೆಗೆ ಯಾವುದೇ ಸೂಕ್ತ ಅಥವಾ ಗಂಭೀರ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುರ್ತು ನೆರವಿಗಾಗಿ ನಾಗರಿಕರು ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿದರೂ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಈ ಅಕ್ರಮ ಗುಂಪು ಅಲ್ಲಿಂದ ಕಾಲ್ಕಿತ್ತು ತಲೆಮರೆಸಿಕೊಳ್ಳುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಆದ್ದರಿಂದ, ಗೃಹ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸ್ ಹಿರಿಯ ಅಧಿಕಾರಿಗಳು ತಕ್ಷಣವೇ ಜಾಗೃತರಾಗಿ, ಮೇಡಹಳ್ಳಿ ಸರ್ವಿಸ್ ರಸ್ತೆಯಲ್ಲಿ ನಿರಂತರ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಈ ಅಕ್ರಮ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಬಲವಾದ ಆಗ್ರಹವಾಗಿದೆ.

Continue Reading

ಅಪರಾಧ

KPSC ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಆಸ್ತಿ ನೋಡಿ ಅಧಿಕಾರಿಗಳೇ ಶಾಕ್!

Published

on

ಬೀದರ್: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಸವರಾಜ ಕನ್ನಾಳೆ ಅವರ ಆಸ್ತಿ ಹಾಗೂ ಹೈನುಗಾರಿಕೆ ಘಟಕದ ಕುರಿತು ಹಲವು ಮಹತ್ವದ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಭಾಲ್ಕಿ ತಾಲೂಕಿನ ಖಾತಂಬ್ರಾ ಮುಖ್ಯರಸ್ತೆ ಸಮೀಪ ಕೋಟ್ಯಂತರ ರೂಪಾಯಿ ಮೌಲ್ಯದ ಕೃಷಿ ಭೂಮಿ ಖರೀದಿಸಿ, ಆಧುನಿಕ ಸೌಲಭ್ಯಗಳಿರುವ ಬೃಹತ್ ಡೇರಿ ಘಟಕ ಸ್ಥಾಪಿಸಿರುವುದು ತನಿಖೆಯ ಗಮನ ಸೆಳೆದಿದೆ.

ಬಸವರಾಜ ಕನ್ನಾಳೆ ಅವರು ಕೆಲವೇ ವರ್ಷಗಳ ಹಿಂದೆ ಸಾಮಾನ್ಯ ಸ್ಥಿತಿಯಲ್ಲಿದ್ದರೂ ಇದೀಗ ಭಾಲ್ಕಿ-ಖಾತಂಬ್ರಾ ರಸ್ತೆಯ ಬಳಿ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಎಂಟು ಎಕರೆಗೂ ಅಧಿಕ ಕೃಷಿ ಜಮೀನು ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮವಾಗಿ ಗಳಿಸಿದ ಹಣವನ್ನು ಹೂಡಿಕೆ ಮಾಡುವ ಅಥವಾ ಕಾನೂನುಬದ್ಧ ಆದಾಯದ ರೂಪಕ್ಕೆ ಪರಿವರ್ತಿಸುವ ಉದ್ದೇಶದಿಂದಲೇ ಈ ಆಸ್ತಿಗಳನ್ನು ನಿರ್ಮಿಸಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ.

‘ಭಗವತಿ ಹೈನುಗಾರಿಕೆ’ ಹೆಸರಿನಲ್ಲಿ ಬೃಹತ್ ಡೇರಿ

ಭಾಲ್ಕಿಯಲ್ಲಿ ಖರೀದಿಸಿರುವ ಜಮೀನಿನಲ್ಲೇ ‘ಭಗವತಿ ಹೈನುಗಾರಿಕೆ’ ಹೆಸರಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೃಹತ್ ಡೇರಿ ಘಟಕ ಸ್ಥಾಪಿಸಲಾಗಿದೆ. ನೆರೆಯ ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಮುರ್ರಾ ತಳಿಯ ಎಮ್ಮೆಗಳನ್ನು ತರಿಸಿ ಹೈನುಗಾರಿಕೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

2025ರ ಡಿಸೆಂಬರ್ 10ರಂದು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಡೇರಿ ಘಟಕವನ್ನು ಅದ್ಧೂರಿಯಾಗಿ ಉದ್ಘಾಟಿಸಲಾಗಿತ್ತು. ಸದ್ಯ ಡೇರಿಯಲ್ಲಿ 25ಕ್ಕೂ ಹೆಚ್ಚು ಮುರ್ರಾ ಎಮ್ಮೆಗಳು, ಒಂದು ಕೋಣ, ಎರಡು ದೇಸಿ ಹಸುಗಳು ಹಾಗೂ 10ಕ್ಕೂ ಹೆಚ್ಚು ಕರುಗಳಿವೆ ಎನ್ನಲಾಗಿದೆ.

ಇಲ್ಲಿ ಪ್ರತಿದಿನ 250 ಲೀಟರ್‌ಗೂ ಅಧಿಕ ಹಾಲು ಉತ್ಪಾದನೆ ಆಗುತ್ತಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರು ಡೇರಿಯಲ್ಲಿ ಕೆಲಸ ಮಾಡುತ್ತಿದ್ದು, ಜಮೀನಿನಲ್ಲೇ ಹಸಿರು ಮೇವು ಬೆಳೆಯಲಾಗುತ್ತಿದೆ. ಡೇರಿಯ ದೈನಂದಿನ ನಿರ್ವಹಣೆಯನ್ನು ಬಸವರಾಜ ಕನ್ನಾಳೆ ಅವರ ತಂದೆ ನಾಗನಾಥ ನೋಡಿಕೊಳ್ಳುತ್ತಿದ್ದಾರೆ.

ಯಾರು ಈ ಬಸವರಾಜ ಕನ್ನಾಳೆ?

ಭಾಲ್ಕಿ ತಾಲೂಕಿನ ಡೋಣಗಾಪುರ ಮೂಲದ ಬಸವರಾಜ ಕನ್ನಾಳೆ ಅವರ ತಂದೆ ನಾಗನಾಥ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರಾಗಿದ್ದರು. ಬಸವರಾಜ ಅವರು ಮನ್ನಾಖೇಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಔರಾದ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದಿದ್ದರು.

ಚಿಕ್ಕಂದಿನಿಂದಲೂ ಓದಿನಲ್ಲಿ ಉತ್ತಮವಾಗಿದ್ದ ಬಸವರಾಜ ಅವರು ಬೆಂಗಳೂರಿನಲ್ಲಿ ಕೆಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಪರೀಕ್ಷೆಯಲ್ಲಿ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ನವದೆಹಲಿಗೆ ತೆರಳಿ ಸುಮಾರು ಆರು ತಿಂಗಳ ಕಾಲ ಐಎಎಸ್ ತರಬೇತಿಯನ್ನೂ ಪಡೆದಿದ್ದರು ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ರಾಜಕೀಯ ಸಂಪರ್ಕ?

ಬಳಿಕ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ನಂತರ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದ ಬಸವರಾಜ, ಅಲ್ಲಿನ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.

ಈ ಅವಧಿಯಲ್ಲಿ ಅವರ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂಬ ಚರ್ಚೆಯೂ ಇದೀಗ ಮುನ್ನೆಲೆಗೆ ಬಂದಿದೆ. KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ನಂತರ ಅವರ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳ ಬಗ್ಗೆಯೂ ತನಿಖಾ ಸಂಸ್ಥೆಗಳ ಗಮನ ಹರಿದಿದೆ.

ಕುಟುಂಬಕ್ಕೆ ಅಕ್ರಮದ ಮಾಹಿತಿ ಇರಲಿಲ್ಲವೇ?

ಬಸವರಾಜ ಕನ್ನಾಳೆ ಅವರ ತಂದೆ ನಾಗನಾಥ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ಪ್ರಕಾರ, ತಮ್ಮ ಮಗನ ಅಕ್ರಮ ವ್ಯವಹಾರಗಳ ಕುರಿತು ಕುಟುಂಬದವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಮಾಧ್ಯಮಗಳು ಹಾಗೂ ದೂರದರ್ಶನದಲ್ಲಿ ಪ್ರಕರಣದ ಕುರಿತು ವರದಿಗಳು ಪ್ರಸಾರವಾದ ಬಳಿಕವೇ ಬಸವರಾಜ ಅವರ ವಿರುದ್ಧದ ಆರೋಪಗಳ ಬಗ್ಗೆ ಕುಟುಂಬಕ್ಕೆ ತಿಳಿಯಿತು ಎಂದು ಅವರು ತಿಳಿಸಿದ್ದಾರೆ.

ಇದೀಗ KPSC ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯ ಜೊತೆಗೆ ಬಸವರಾಜ ಕನ್ನಾಳೆ ಅವರ ಆಸ್ತಿ, ಕೃಷಿ ಜಮೀನು, ಡೇರಿ ಘಟಕ ಮತ್ತು ಹಣಕಾಸಿನ ವ್ಯವಹಾರಗಳ ಮೂಲದ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ. ಅಕ್ರಮ ಹಣದಿಂದ ಆಸ್ತಿ ಸಂಪಾದನೆ ಮಾಡಲಾಗಿದೆ ಎಂಬ ಆರೋಪಗಳು ಸಾಬೀತಾಗಬೇಕಾದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಯಲ್ಲಿ ಅದು ದೃಢಪಡಬೇಕಿದೆ.

Continue Reading

Trending