ರಾಜಕೀಯ

ಬಿಜೆಪಿ ನನಗೂ ಆಫರ್ ನೀಡಿತ್ತು- ಕೈ ಶಾಸಕನ ಅಚ್ಚರಿ ಹೇಳಿಕೆ

ರಾಜ್ಯ ಸರ್ಕಾರ ಅತಂತ್ರಗೊಳಿಸಲು ಬಿಜೆಪಿ ಕಾಂಗ್ರೆಸ್ ಸಚಿವರಿಗೆ ಆಫರ್ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಶಾಸಕ ಎನ್ ಎನ್ ಸುಬ್ಬರೆಡ್ಡಿ ಹೊಸ ಬಾಂಬ್ ಸಿಡಿಸಿದ್ದು, ನನಗೂ ಆಫರ್ ನೀಡಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ,
ಈ ಬಗ್ಗೆ ಮಾತನಾಡಿದ ಅವರು ಈ ಹಿಂದೆ ಬಿಜೆಪಿ ನನಗೆ ಸಚಿವ ಸ್ಧಾನಕ್ಕೆ ಆಫರ್ ನೀಡಿದ್ದರು ಕೂಡ ಅದನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದ್ದೇವೆ ಹಾಗಾಗಿ ನನಗೆ ಸಂಪುಟ ಪುಣ ರಚನೆಯ ಸಂದರ್ಭದಲ್ಲಿ ಸಚಿವ ಸ್ಧಾನ ಬೇಕು ಎಂದರು,
ಚಿಕ್ಕಬಳ್ಳಾಪುರ ಜೆಲ್ಲೆಯ ಬಾಗೇಪಲ್ಲಿ ಕಾಂಗ್ರೆಸ್ ಶಾಸಕರಾಗಿರುವ ಅವರು ಈಗಾಗಲೇ ಸಿಎಂ ಹಾಗೂ ಡಿಸಿಎಂ ಅವರು ನನಗೆ ಸಚಿವ ಸ್ಧಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ, ಅಲ್ಲದೇ ಇದಕ್ಕಾಗಿ ಎರಡು ಬಾರಿ ನಿಗಮ ಮಂಡಳಿ ಸ್ಧಾನ ತಿರಸ್ಕಾರ ಮಾಡಿದ್ದೇನೆ ಎಂದು ಸುಬ್ಬಾರೆಡ್ಡಿ ಹೇಳಿದರು,
ಇಲ್ಲಿಯ ವರೆಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟಮ ಗೌರಿಬಿದನೂರು ವಿಧಾನದಸಭಾ ಕ್ಷೇತ್ರ ಚಿಂತಾಮಣಿ ಕ್ಷೇತ್ರದ ಶಾಸಕರು ಸಚಿವರಾಗಿದ್ದಾರೆ, ಬಾಗೇಪಲ್ಲಿ ಕ್ಷೇತ್ರದಿಂದ ಇದುವರೆಗೂ ಯಾರು ಕೂಡ ಸಚಿವರಾಗಿಲ್ಲ ಇದಕ್ಕಾದರು ನನಗೆ ಸಚಿವ ಸ್ಧಾನ ನೀಡಬೇಕು ಎಂದು ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version