ಅಪರಾಧ

ಕಾರ್ ಮೇಲೆ ಶ್ವಾನಗಳ ಮೆರವಣಿಗೆ: ಹುಚ್ಚಾಟ ಮೆರೆದವನ ಗತಿಯೇನಾಯ್ತು ನೋಡಿ!

ಬೆಂಗಳೂರು: ಕಾರಿನ ಟಾಪ್ ನಲ್ಲಿ ತನ್ನ ಮುದ್ದಿನ ಶ್ವಾನಗಳನ್ನು ಕೂರಿಸಿಕೊಂಡು ಶೋಕಿ ಮಾಡಿದ್ದು ಅಲ್ಲದೇ ಪ್ರಶ್ನಿಸಿದವರಿಗೆ ಅವ್ಯಚ್ಯ ಪದಗಳಿಂದ ನಿಂದಿಸಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ,
ಕಾರು ಹರೀಶ್ ಎಂಬಾತ ಯಾವುದೇ ಮುಂಜಾಗೃತ ಕ್ರಮವಿಲ್ಲದೆ ತನ್ನ ಮೂರು ನಾಯಿಗಳನ್ನು ಕಾರಿನ ಟಾಪ್ ನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹಾಕಿದ್ದಾನೆ, ಕಲ್ಯಾಣನಗರ ಸಮೀಪ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದಿದ್ದ ಇವನ ಹುಚ್ಚಾಟ ಗಮನಿಸಿದ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ನಾಯಿಯನ್ನು ಕೆಳಗಿಳಿಸುವಂತೆ ಒತ್ತಾಯಿಸಿದ್ದಾರೆ,
ಇದರಿಂದ ಸಿಟ್ಟಾದ ಆರೋಪಿ ಹರೀಶ್ ಪ್ರಶ್ನಿಸಿದವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ, ಅಲ್ಲದೇ ನಾನು ಇಳಿಸೊಲ್ಲ ಜಾಸ್ತಿ ಮಾತನಾಡಿದರೆ ಸುಮ್ಮನೆ ಬಿಡುವುದಿಲ್ಲ ಬೆದರಿಕೆ ಹಾಕಿದ್ದಾನೆ..

Leave a Reply

Your email address will not be published. Required fields are marked *

Trending

Exit mobile version