ರಾಜಕೀಯ

ಬೆಳಗಾವಿಯಲ್ಲಿ ರೈತರ ರಸ್ತೆ ತಡೆ.. ಬಸ್ ಡ್ರೆöÊವರ್ ಕೈ ಕಟ್ಟಿಹಾಕಿ ಅನ್ನದಾತರ ಆಕ್ರೋಶ..!

ಬೆಳಗಾಮಿ: ಬೆಳಗಾವಿ ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ ಸರಣಿ ಪ್ರತಿಭಟನೆಗಳು ಕೂಡ ಶುರುವಾಗಿದೆ, ಅನ್ನದಾತರು ರೊಚ್ಚಿಗೆದ್ದು ಬೀದಿಗಿಳಿದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟಿಸಿದ್ದಾರೆ,
ಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟಿçÃಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ಅನ್ನದಾತರು ತೀವ್ರ ಪ್ರತಿಭಟನೆ ನಡೆಸಿದರು, ಈ ವೇಳೆ ಎರಡು ಸರ್ಕಾರಿ ಬಸ್ಸುಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಬಂದವು, ಓಡಿ ಬಂದಿ ಅಡ್ಡಗಟ್ಟಿದ ರೈತರು ಹಸಿರು ಟವಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೇರಿಂಗಿಗೆ ಕಟ್ಟಿ ಹಾಕಿ ಗಮನ ಸೆಳೆದಿದ್ದಾರೆ,
ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ ನಿಗದಿ, ರೈತ ವಿರೋಧಿ ಕಾಯ್ದೆಗಳ ಹಿಂಪಡೆಯುವುದು, ಕಳಸಾ-ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆ ಆರಂಭಿಸಿದ್ದರು, ಈ ವೇಳೆ ಘಟನೆ ನಡೆದಿದೆ,
ಪೊಲೀಸರು ಹಾಗೂ ರೈತರ ನಡುವೆ ತೀವ್ರ ವಾಗ್ವಾದ ನಡೆದಿದೆ,
ರಸ್ತೆ ತಡೆಯ ಮಧ್ಯೆ ಬಸ್ಸುಗಳನ್ನು ಚಾಲಕರು ಪಕ್ಕದಲ್ಲಿ ದಾಟಿಸಿಕೊಂಡು ಮುಂದೆ ಸಾಗಿದರು, ಬೆನ್ನಟ್ಟ ಬಂದ ರೈತರು ಬಸ್ ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ..

Leave a Reply

Your email address will not be published. Required fields are marked *

Trending

Exit mobile version