ಬೆಂಗಳೂರು
ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ, ಡಿಸಿಎಂ ಡಿಕೆಶಿ ಕೌಂಟರ್

ಬೆಂಗಳೂರು: ಬಿಜೆಪಿಯವರು ಕೇಳಿದ ತಕ್ಷಣ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು,
ಸಚಿನ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಅವರ ಕಿರುಕುಳಕ್ಕೆ ಹೆದರಿ ಬೀದರ್ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಪ್ರಕರಣದ ವಿಚಾರವಾಗಿ ಬಿಜೆಪಿಯವರು ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ,
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಯಾವ ಪಾತ್ರವೂ ಇಲ್ಲ, ಡೆತ್ ನೋಟ್ನಲ್ಲಿ ಅವರ ಹೆಸರು ಯಾರೂ ಬರೆದಿಲ್ಲ,ಯಾರೊ ಹೆಸರು ಬರೆದ ತಕ್ಷಣ ತಪ್ಪು ಅಂತಲೂ ಅಲ್ಲ, ಪ್ರಿಯಾಂಕ್ ಖರ್ಗೆ ಅವರ ಇಂಟಿಗ್ರಿಟಿ ಬಗ್ಗೆ ನನಗೆ ಗೊತ್ತಿದೆ, ಯಾರೂ ಬರೆದಿಲ್ಲ, ರಾಜೀನಾಮೆ ಪ್ರಶ್ನೆಯೇ ಉದ್ಭವಿಸಲ್ಲ ಎಂದರು,
ಪ್ರಕರಣ ಸಂಬಂಧ ಕಾನೂನು ಪ್ರಕಾರ ತನಿಖೆಯಾಗಲಿದೆ, ಪ್ರಿಯಾಂಕ್ ಖರ್ಗೆ ಅವರೊಂದಿಗೆ ಆರೋಪಿ ರಾಜು ಕಪನೂರ್ ಫೋಟೋದಲ್ಲಿ ಗುರುತಿಸಿಕೊಂಡಿದ್ದಾನೆ ಎಂಬ ಚರ್ಚೆ ಜೋರಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ನನ್ನ ಜೊತೆನೂ ಬಿಜೆಪಿಯವರು ಜೊತೆಗೂ ಯಾರು ಯಾರೂ ಫೋಟೋಗಳು ಇವೆ ಅಂತಾ ಬಿಡುಗಡೆ ಮಾಡಬೇಕಾ? ಮದುವೆಗೋ,ಇಲ್ಲ ಯಾವೊದೋ ಖಾಸಗಿ ಸಮಾರಂಭಕ್ಕೋ ಹೋದಾಗ ತೆಗೆಸಿಕೊಳ್ಳುತ್ತಾರೆ, ಅಧಿಕೃತವಾಗಿ ಏನಾದರೂ ವ್ಯವಹಾರ ನಡೆದಿದೆಯಾ ಎಂದು ಡಿಕೆಶಿ ಟಾಂಗ್ ನೀಡಿದರು, ಇನ್ನು ಸಿಬಿಐ ಕೊಡದಿದ್ದರೆ ಬಿಜೆಪಿಯವರು ಪ್ರಿಯಾಂಕ್ ಖಾರ್ಗೆ ಅವರ ಮನೆ ಮುತ್ತಿಗೆ ಹಾಕುತ್ತೇವೆ ಎನ್ನುತ್ತಿದ್ದು, ಹಾಕಲಿ ಬಿಡಿ ಎಂದು ತಿರುಗೇಟು ನೀಡಿದರು,
ಬಿಜೆಪಿ ಸರ್ಕಾರದಲ್ಲಿ ನನ್ನ ವಿಚಾರವಾಗಿ ಮಾತ್ರ ಪ್ರಕರಣವೊಂದನ್ನು ಸಿಬಿಐಗೆ ನೀಡಿದ್ದರು, ಪ್ರಿಯಾಂಕ್ ಖರ್ಗೆ ಅವರು ದಲಿತ ನಾಯಕ ಅಂತಾ ಅವರ ಬೆಳವಣಿಗೆಯನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ, ಐಟಿ-ಬಿಟಿ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು,