ರಾಜ್ಯ

ಕನ್ನಡದ ಬಾವುಟದ ಸ್ಟಿಕ್ಕರ್ ಇದ್ದ ಕಾರಿಗೆ ತಿರುಪತಿಯಲ್ಲಿ ಪ್ರವೇಶಾವಕಾಶ ನಿರ್ಬಂಧ!

ಆಂಧ್ರದ ತಿರುಮಲ ದೇವಸ್ಧಾನಕ್ಕೆ ತೆರಳುವ ಮುಖ್ಯದ್ವಾರದಲ್ಲಿ ಕನ್ನಡ ಬಾವುಟಕ್ಕೆ ಕರ್ನಾಟಕದ ವಾಹನಗಳಿಗೆ ಪದೇ ಪದೇ ಅವಮಾನ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾಋ ಆದಷ್ಟು ಬೇಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ,
ತಿರುಪತಿಯಲ್ಲಿ ಕನ್ನಡ ಧ್ವಜ ಹಾಕುವಂತಿಲ್ಲ, ಅದರೆ ಇದೀಗ ಕನ್ನಡ ಧ್ವಜದ ಬಣ್ಣದಲ್ಲಿ ಅಕ್ಷರ ಕೂಡ ಕಾರಿನ ಮೇಲೆ ಇರುವಂತಿಲ್ಲ, ಒಂದು ವೇಳೆ ಈ ರೀತಿಯಲ್ಲಿ ಏನಾದರೂ ಇದ್ದಾರೆ, ತಿರುಪತಿಗೆ ಹೋಗುವ ಮಧ್ಯದಲ್ಲೇ ನಿಮ್ಮ ಕಾರಿನಲ್ಲಿ ಇಂಥ ಸ್ಟಿಕ್ಕರ್ ಇದ್ರೆ ಕಿತ್ತು ಹಾಕ್ತಾರೆ,
ತಿರುಮಲ ಗೇಟ್ ನಲ್ಲಿ ಕನ್ನಡಿಗರು ಅತ್ಯಂತ ಕೆಟ್ಟ ಅನುಭವ ಎದುರಿಸಿದ್ದಾರೆ, ಸಿಬ್ಬಂದಿ ಕರ್ನಾಟಕದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ಮಾಡುತ್ತಾರೆ, ಕಾರಿನಲ್ಲಿ ಕನ್ನಡಪರ ಸ್ಟಿಕ್ಕರ್ ಇದ್ರೆ ಕಿತ್ತುಹಾಕ್ತಾರೆ, ಕರ್ನಾಟಕ ಧ್ವಜ, ಕನ್ನಡ ಬಾವುಟ ಸ್ಟಿಕ್ಕರ್ ಇದ್ರೆ ಮುಲಾಜಿಲ್ಲದೆ ಕಿತ್ತು ಹಾಕುತ್ತಾರೆ, ಯಾಕೆ ಕಿತ್ತು ಹಾಕ್ತೀರಾ ಅಂದ್ರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ,
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಡಾ.ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಕಾರಿನ ಹಿಂದೆ ಹಾಕಿದ್ದಕ್ಕೆ ಅದನ್ನು ತೆಗೆದಿದ್ದರು, ಇದೀಗ ಕನ್ನಡ ಬಾವುಟದ ಬಣ್ಣದಲ್ಲಿ ದೇವರ ಹೆಸರು ಬರೆದಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಮುಂದಕ್ಕೆ ಹೋಗದಂತೆ ತಡೆದಿದ್ದಾರೆ,
ಸ್ಟಿಕಕ್ಕರ್ ಗಳನ್ನು ತೆಗೆಯಲು ನಿರಾಕರಿಸಿದರೆ ವಾಪಾಸ್ ಹೋಗುವಂತೆ ಗೂಂಡಾಗಿರಿ ತೋರಿಸುತ್ತಿದ್ದಾರೆ, ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಸೋಶಿಯಲ್ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದಷ್ಟು ಬೇಗ ರಾಜ್ಯ ಸರ್ಕಾರ ಈ ಕಡೆ ಗಮನ ಹರಿಸುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version