ಬೆಂಗಳೂರು
ರಾಥಾಮೋಹನ್ ದಾಸ್ ನೇತೃತ್ವದಲ್ಲಿ ಬಿಜೆಪಿ ಸಭೆ ಕುತೂಹಲ ಮೂಡಿಸಿದ ಬಿವೈವಿ ನಡೆ

ರಾಜ್ಯ ಬಿಜೆಪಿಯಲ್ಲಿ ಯಾಕೋ ಎರಡು ಬಣಗಳ ನಡುವಿನ ರಾಜಕೀಯ ಕೆಸರೆರಚಾಟ ನಿಲ್ಲುವಂತೆ ಕಾಣಿಸುತ್ತಿಲ್ಲ ಇದರ ನಡುವೆ ಇಂದು ಬಿಜೆಪಿ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಸಭೆ ನಡೆಯಲಿದೆ,
ರಾಜ್ಯಾಧ್ಯಕ್ಷರ ಸ್ಧಾನ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲ ವಿಚಾರದ ಬಗ್ಗೆ ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಅಗರ್ವಾವಾಲ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಿಜೆಪಿಯ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ,
ಸಭೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿಗಳು, ಶಾಸಕರು, ಸಂಸದರು, ಪರಿಷತ್ ಸದಸ್ಯರು, ಮಾಜಿ ಸಚಿವರಿಗೆ ಅಹ್ವಾನ ನೀಡಲಾಗಿದೆ, ಇದಕ್ಕೂ ಮುನ್ನ ಮತ್ತೊಂದು ಸಭೆಗೆ ಮುಂದಾದ ಬಿವೈವಿ ಬಣದ ಸದಸ್ಯರು ಮುಂದಾಗಿದ್ದಾರೆ,
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಮಾಜಿ ಶಾಸಕರು ಸೇರಿದಂತೆ ವಿಜಯೇಂದ್ರ ಬೆಂಬಿಲಿಗರೆಲ್ಲ ಸೇರಿ ಸಭೆ ನಡೆಸಲಿದ್ದು, ಬಿನ್ನರ ಬಣದ ನಡೆ ಕುರಿತು ವರಿಷ್ಠರ ಗಮನಕ್ಕೆ ತರಲು ವಿಜಯೇಂದ್ರ ಬಣ ನಿರ್ಧರಿಸಿದೆ,