karnataka
ಕನ್ನಡ ಬರೆಯಲು ಬರಲ್ಲ ಎಂದವರಿಗೆ ವಾರ್ನಿಂಗ್ ಕೊಟ್ಟ ಸಚಿವ ತಂಗಡಗಿ!

ಕೊಪ್ಪಳ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಇತ್ತೀಚಿಗೆ ತಪ್ಪಾಗಿ ಕನ್ನಡ ಬರೆದ ಬಗ್ಗೆ ದೊಡ್ಡ ಕೋಲಾಹಲ ಸೃಷ್ಟಿಯಾಗಿತ್ತು, ಶಿವರಾಜ್ ತಂಗಡಗಿ ಅವರ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ, ಇಂತಹ ಸಂದರ್ಭದಲ್ಲೇ ಸಚಿವ ಶಿವರಾಜ್ ತಂಗಡಗಿ ಅವರು ಸ್ಪಷ್ಟನೆ ನೀಡಿ ತಮ್ಮ ಬಗ್ಗೆ ಮಾತನಾಡಿದ್ದವರಿಗೆ ಉತ್ತರ ಕೊಟ್ಟಿದ್ದಾರೆ,
ಕೊಪ್ಪಳ ಜಿಲ್ಲೆಯಲ್ಲಿ ಮಾತನಾಡಿದ ಅವರು ನಾನು ಬೇರೆ ಏನೋ ಬರೆಯಲು ಹೋದಾಗಲೇ ಅಲ್ಲಿದ್ದವರು ಶುಭವಾಗಲಿ ಎಂದು ಬರೆಯಲು ಹೇಳಿದರು, ಆದರೆ ಆಗ ಭ ಅಕ್ಷರದಲ್ಲಿ ಸಣ್ಣದಾಗಿ ತಪ್ಪಾಗಿತ್ತು, ನನಗೂ ಬರೆಯಲು ಬರುತ್ತೆ, ಅಕ್ಷರ ಬರೆಯಲಾರದ ಸ್ಧಿತಿಯಲ್ಲಿ ನಾನು ಇಲ್ಲ, ನಾನು ಬಿಎಸ್ಸಿ ಪದವೀಧರ, ಕನ್ನಡ ಬರೆಯಲು ಬಾರದಷ್ಟು ದಡ್ಡನಲ್ಲ, ಸಂಪೂರ್ಣ ಬರೆಯುವ ತನಕ ಕಾಯುವ ತಾಳ್ಮೆ ಇಲ್ಲದವರು ಈ ರೀತಿ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ,
ನನ್ನ ಬಗ್ಗೆ ಮಾತನಾಡುವವರು ತಾಳ್ಮೆಯ ಪರೀಕ್ಷೆ ಮಾಡಬೇಡಿ ಎಂದಿದ್ದಾರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ