karnataka
ಉದಯಗಿರಿ ಗಲಭೆಯಲ್ಲಿ ಪೊಲೀಸರಿಂದ ಲೋಪವಾಗಿಲ್ಲ-ರಾಜಣ್ಣ ಹೇಳಿಕೆಗೆ ಡಿಕೆಶಿ ಟಾಂಗ್!

ಮೈಸೂರು: ಮೈಸೂರು ಉದಯಗಿರಿ ಪೊಲೀಸ್ ಠಾಣೆ ಕೇಸ್ ಬಗ್ಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ, ಮೈಸೂರಲ್ಲಿ ಮಾತನಾಡಿದ ಡಿಸಿಎಂ ತಪ್ಪಿಸ್ಧರ ಮೇಲೆ ಖಂಡಿತ ಕ್ರಮ ಆಗುತ್ತೆ, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದಿದ್ದಾರೆ,
ಪೊಲೀಸರ ಮೇಲಿನ ಹಲ್ಲೆ ಸಹಿಸಲ್ಲ, ಗಲಾಟೆ ವೇಳೆ ಪೊಲೀಸರು ಪರಿಸ್ಧಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ, ಉದಯಗಿರಿ ಪೊಲೀಸರು ಸಮಯಪ್ರಜ್ಞೆ ಮೆರೆದಿದ್ದಾರೆ ಎಂದು ಡಿಕೆಶಿ ತಿಳಿಸಿದರು,
ಸಚಿವ ಕೆ ಎನ್ ರಾಜಣ್ಣ ಬಗ್ಗೆ ಮಾತಾಡಲ್ಲ, ಅವರು ತುಂಬಾ ದೊಡ್ಡವರು, ಅವರ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳುತ್ತಾರೆ, ರಾಜಣ್ಣ ಹಿರಿಯ ನಾಯಕರು, ನಾನು ಪಕ್ಷದ ಸಣ್ಣ ಕಾರ್ಯಕರ್ತ ಎಂದು ಡಿಸಿಎಂ ಡಿಕೆಶಿ ಪರೋಕ್ಷವಾಗಿ ರಾಜಣ್ಣಗೆ ಟಾಂಗ್ ನೀಡಿದರು,