ಬೆಂಗಳೂರು
ಸಿನಿಮಾ ರಂಗದವರು ಟೀಕೆ ಮಾಡಲಿ ಎಂದೇ ನಟ್ಟು ಬೋಲ್ಟು ಪದ ಬಳಕೆ ಮಾಡಿದ್ದು:ಡಿಕೆಶಿ

ಬೆಂಗಳೂರು: ಸಿನಿಮಾ ರಂಗದವರು ಟೀಕೆ ಮಾಡಲಿ ಎಂದೇ ನಾನು ನಟ್ಟು ಬೋಲ್ಟು ಅಂತ ಪದ ಬಳಕೆ ಮಾಡಿದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ,
ವಿಧಾನಸಭೆಯ ಅವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚಿತ್ರರಂಗಕ್ಕೆ ಒಳ್ಳೆಯದಾಗಲಿ ಅಂತ ಸರ್ಕಾರ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸುತ್ತದೆ, ಅವರೇ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದರೆ ಹೇಗೆ? ಸಿನಿಮಾದವರಿಗೆ ನಾನು ಸಾಕಷ್ಟು ಸಹಾಯ ಮಾಡಿದ್ದೇನೆ, ಸಹಾಯ ಪಡೆದವರಿಗೆ ಅದು ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು,
ಆಯೋಜನೆಯಲ್ಲಿ ಒಂದಷ್ಟು ತಪ್ಪುಗಳಾಗಿರಬಹುದು, ನಿರ್ದೇಶಕ ನಾಗಾಭರಣ ಹೇಳಿರುವುದನ್ನು ಅಪಾರ್ಥ ಭಾವಿಸಲ್ಲ, ಅದು ಅವರ ಕಾರ್ಯಕ್ರಮ, ಅವರು ಟೀಕೆ ಮಾಡಿರೋದರಲ್ಲಿ ನನಗೆ ಯಾವುದೇ ಬೇಸರ ಇಲ್ಲ ಎಂದರು,