ಬೆಂಗಳೂರು

ಕುತೂಹಲ ಮೂಡಿಸಿದ ಡಿಕೆಶಿ-ರೇಣುಕಾಚಾರ್ಯ ಭೇಟಿ!

ಬೆಂಗಳೂರು: ಮಾಜಿ ಸಚಿವ ರೇಣುಕಾಚಾರ್ಯ ಶುಕ್ರವಾರ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ, ಸಿಎಂ ಬದಲಾವಣೆ ಚರ್ಚೆ ಹಾಗೂ ಬಿಜೆಪಿ ಭಿನ್ನಮತ ವಿವಾದಗಳು ಎದುರಿಗಿರುವಂತೆಯೇ ನಡೆದಿರುವ ಈ ಭೇಟ ರಾಜಕೀಯವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ,
ಬಿಜೆಪಿಯಲ್ಲಿ ಯಡಿಯೂರಪ್ಪ ಪರವಾಗಿ ರೇಣುಕಾಚಾರ್ಯ ಸಮವೇಶ ನಡೆಸಲು ಮುಂದಾಗಿದ್ದರು, ಆದರೆ ಈ ಸಮಾವೇಶಕ್ಕೆ ಯಡಿಯೂರಪ್ಪ ಬಣದಿಂದ ಸಮ್ಮತಿ ದೊರೆತಿರಲಿಲ್ಲ, ಆದರೂ ಸಹ ಯಡಿಯೂರಪ್ಪ ಬಣಕ್ಕೆ ಸೆಡೆದು ಹೊಡೆದಿರುವ ರೇಣುಕಾಚಾರ್ಯ ದಾವಣೆಗೆರೆಯಲ್ಲಿ ಲಿಂಗಾಯತ ಸಮುದಾಯವನ್ನು ಸೇರಿಸಿ ಬಿ ಎಸ್ ಯಡಿಯೂರಪ್ಪ ಪರವಾಗಿ ಸಮಾವೇಶ ಮಾಡಿಯೆ ಮಾಡುತ್ತೇನೆಂದು ಹೇಳಿದ್ದಾರೆ, ಈ ಹೇಳಿಕೆ ವಿಜಯೇಂದ್ರ ಮತ್ತಿರರಲ್ಲಿ ಅಸಮಾಧಾನ ಮೂಡಿಸಿದೆ,
ಕಳೆದೆರೆಡು ದಿನಗಳಿಂದ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಸೌಮ್ಯವಾದ ಹೇಳಿಕೆಗಳನ್ನು ನೀಡಲು ಶುರುಮಾಡಿರುವ ರೇಣುಕಾಚಾರ್ಯ ಇಂದು ಧಿಡೀರನೆ ಡಿಕೆಶಿ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ,

Leave a Reply

Your email address will not be published. Required fields are marked *

Trending

Exit mobile version