ಸುತ್ತ ಮುತ್ತ
ಈ ದೇಶದಲ್ಲಿ ಮಗು ಹುಟ್ಟಿದ್ರೆ ಸಿಗುತ್ತೆ 50 ಲಕ್ಷ… ಕಾರಣ ಜನಸಂಖ್ಯೆ!

Switzerland ತನ್ನ ಪ್ರಕೃತಿ ಸೌಂದರ್ಯಕ್ಕೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಸುಂದರವಾದ ದೇಶವಾಗಿದೆ. ಈ ದೇಶದ ಪರ್ವತಗಳಲ್ಲಿರುವ ಅಲ್ಬಿನೆನ್ ಎಂಬ ಹಳ್ಳಿಯು ಸುಂದರವಾದ ಕಣಿವೆಗಳಿಗೂ ಹೆಸರುವಾಸಿಯಾಗಿದೆ.
ಈ ಗ್ರಾಮವು ಸಮುದ್ರ ಮಟ್ಟದಿಂದ ಸುಮಾರು 4,265 ಅಡಿ ಎತ್ತರದಲ್ಲಿದೆ. ಹಿಮದಿಂದ ಆವೃತವಾದ ಪರ್ವತಗಳ ನಡುವೆ ಇರುವ ಈ ಹಳ್ಳಿಯು ನಿಮ್ಮ ಹೃದಯವನ್ನು ಗೆಲ್ಲುವುದಂತೂ ಖಚಿತ. ಅಷ್ಟೊಂದು ಸುಂದರವಾಗಿದೆ ಈ ಗ್ರಾಮ.
ಈಗ ವಿಷಯ ಏನಂದ್ರೆ ಈ ಹಳ್ಳಿಯ ಜನಸಂಖ್ಯೆಯು ನಿರಂತರವಾಗಿ ಕಡಿಮೆಯಾಗುತ್ತಿದೆ, ಇದನ್ನು ತಡೆಯಲು ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದು ವರದಿಯ ಪ್ರಕಾರ, ಈ ಗ್ರಾಮದಲ್ಲಿ ಕೇವಲ 240 ರಿಂದ 245 ಜನರು ಮಾತ್ರ ಉಳಿದಿದ್ದಾರೆ.
ಈ ಹಳ್ಳಿಯ ಆರ್ಥಿಕತೆ ಕುಸಿಯದಂತೆ ಉಳಿಸಲು, ಸ್ವಿಸ್ ಸರ್ಕಾರ ಇಲ್ಲಿ ಜನರನ್ನು ನೆಲೆಸುವಂತೆ ಮಾಡಲು ಒಂದು ಕೊಡುಗೆಯನ್ನು ಪ್ರಾರಂಭಿಸಿದೆ. ಈ ಕೊಡುಗೆಯಲ್ಲಿ, ಸರ್ಕಾರವು ಈ ಗ್ರಾಮದಲ್ಲಿ ನೆಲೆಸಲು 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ.
ನಿಮ್ಮ ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ, ಪ್ರತಿಯೊಬ್ಬ ವಯಸ್ಕ ಸದಸ್ಯರಿಗೆ ಸುಮಾರು 22,500 ಪೌಂಡ್ಗಳು ಅಂದರೆ 22 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀಡಲಾಗುವುದು. ಇಷ್ಟು ಮಾತ್ರವಲ್ಲದೆ, ಪ್ರತಿ ಮಗುವಿಗೆ ಸುಮಾರು 9,000 ಪೌಂಡ್ಗಳು ಅಂದರೆ 8 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ನೀಡಲಾಗುವುದು.
ಇದರೊಂದಿಗೆ, ಸರ್ಕಾರವು ಈ ಕೊಡುಗೆಯಲ್ಲಿ ಕೆಲವು ಷರತ್ತುಗಳನ್ನು ಸಹ ಇರಿಸಿದೆ. ಈ ಗ್ರಾಮದಲ್ಲಿ ನೆಲೆಸಲು ಪರವಾನಗಿ ತೆಗೆದುಕೊಳ್ಳುವವರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಅನ್ನೋದು ಮುಖ್ಯವಾದ ಕಂಡೀಶನ್ ಆಗಿದೆ.
ಸುತ್ತ ಮುತ್ತ
ನಾಗರ ಪಂಚಮಿ ವಿಶೇಷ: ಕುಕ್ಕೆ ಸುಬ್ರಹ್ಮಣ್ಯದಿಂದ ಕಾಶ್ಮೀರದ ಶೇಷನಾಗ ದೇಗುಲವರೆಗೆ ಭಾರತದ ಪ್ರಸಿದ್ಧ ನಾಗ ದೇವಾಲಯಗಳು!
ಶ್ರಾವಣ ಮಾಸದ ಶುಕ್ಲಪಕ್ಷದ 5ನೇ ತಿಥಿಯಲ್ಲಿ ಆಚರಿಸುವ ನಾಗರ ಪಂಚಮಿ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ನಾಗದೇವರಿಗೆ ಹಾಲೆರೆಯುವುದು, ಪೂಜೆ ಸಲ್ಲಿಸುವುದು, ಮತ್ತು ನಾಗ ಕಲ್ಲುಗಳ ಆರಾಧನೆಯ ಮೂಲಕ ಅನಂತರಸ್ನೇಹ, ಮಕ್ಕಳ ಕರುಣೆ ಹಾಗೂ ಸರ್ಪದೋಷ ನಿವಾರಣೆ ಎಂಬ ನಂಬಿಕೆಗಳಿಂದ ಆಚರಣೆ ಮಾಡಲಾಗುತ್ತದೆ.
🛕 ಕರ್ನಾಟಕದ ಪ್ರಮುಖ ನಾಗ ದೇವಾಲಯಗಳು
1. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (Kukke Subramanya Temple)
- ಸ್ಥಳ: ದಕ್ಷಿಣ ಕನ್ನಡ, ಸುಳ್ಯ
- ವೈಶಿಷ್ಟ್ಯ: ಶೇಷ ಹಾಗೂ ವಾಸುಕಿ ನಾಗದೇವರ ಪೂಜೆ, ಸರ್ಪಸಂಸ್ಕಾರ ಮತ್ತು ನಾಗಪ್ರತಿಷ್ಠೆ ಸೇವೆ
- ಯಾಕೆ ಪ್ರಸಿದ್ಧ: ಸರ್ಪದೋಷ ನಿವಾರಣೆಗೆ ಭಾರತದ ಪ್ರಮುಖ ಕ್ಷೇತ್ರ
- 2. ಮುಕ್ತಿನಾಗ ಕ್ಷೇತ್ರ, ರಾಮೋಹಳ್ಳಿ
- ಸ್ಥಳ: ಬೆಂಗಳೂರು ಹತ್ತಿರ, ಕೆಂಗೇರಿ ಬಳಿಯಲ್ಲಿ
- ವೈಶಿಷ್ಟ್ಯ: 16 ಅಡಿ ಎತ್ತರದ ಏಳು ತಲೆಯ ನಾಗದೇವರ ಮೂರ್ತಿ
- ಹೆಸರು ಹೇಗೆ: “ಮುಕ್ತಿನಾಗ” ಎಂಬ ಹೆಸರೇ ಸರ್ಪದೋಷಗಳಿಂದ ಮುಕ್ತಿಯ ಸಂಕೇತ
- 3. ಘಾಟಿ ಸುಬ್ರಹ್ಮಣ್ಯ & ನಾಗಲಮಡಿಕೆ
- ಕರ್ನಾಟಕದ ಮತ್ತೊಂದು ಪ್ರಮುಖ ತ್ರಿಕೋನ ದೇವಾಲಯಗಳು
- ಪ್ರಾಚೀನ ಕಾಲದಿಂದ ನಾಗಪೂಜೆಗೆ ಪ್ರಸಿದ್ಧ.
- ಕಾಶ್ಮೀರದ ಶೇಷನಾಗ ದೇವಾಲಯ (Sheshnag Temple)
ಸ್ಥಳ: ಮನ್ಸಾರ್ ಸರೋವರದ ಬಳಿ, ಜಮ್ಮು ಮತ್ತು ಕಾಶ್ಮೀರ
ವೈಶಿಷ್ಟ್ಯ: 6 ತಲೆಗಳ ಶೇಷನಾಗನ ಪಾತಾಳದ ದೇವಾಲಯ
ಇತಿಹಾಸ: ಶೇಷನಾಗನಿಂದ ನಿರ್ಮಿತ ಮನ್ಸಾರ್ ಸರೋವರ, 14ನೇ ಶತಮಾನದ ದೇವಾಲಯ
ನಂಬಿಕೆ: ನವವಿವಾಹಿತರು ಇಲ್ಲಿ ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಸಿಗುತ್ತದೆ
🙏 ಪೌರಾಣಿಕ ಮಹತ್ವ
ನಾಗರ ಪಂಚಮಿಯ ಆಚರಣೆಗೆ ಹಿಂದಿರುವ ಕಥೆ ಮಹಾಭಾರತದ ಕಾಲಕ್ಕೆ ಹೋಗುತ್ತದೆ. ನಾಗರಾಜ ತಕ್ಷಕನಿಂದ ರಾಜ ಪರೀಕ್ಷಿತನ ಸಾವಿಗೆ ಪ್ರತಿಕಾರವಾಗಿ ಯಾಗ ನಡೆಸಿದ ಜನಮೇಜಯನ ಕಥೆ, ಮತ್ತು ಆ ಯಾಗವನ್ನು ತಡೆದ ಋಷಿ ಆಸ್ತಿಕನ ನಾಯಕತ್ವ ಈ ಹಬ್ಬದ ಮೂಲವಾಗಿದೆ. ಈ ಹಿನ್ನೆಲೆಯಿಂದಾಗಿ ನಾಗರ ಪಂಚಮಿಯ ದಿನ ಆಸ್ತಿಕನ ಜಯ, ನಾಗಕುಲ ರಕ್ಷಣೆ, ಮತ್ತು ದೋಷ ಪರಿಹಾರದ ದಿನವೆಂದು ಪರಿಗಣಿಸಲಾಗಿದೆ. - ನಾಗರ ಪಂಚಮಿಯು ನಂಬಿಕೆ, ಭಕ್ತಿ ಮತ್ತು ಪುರಾತನ ಪರಂಪರೆಯ ಮಿಳಿತವಾಗಿದೆ. ಈ ಸಂದರ್ಭದಲ್ಲಿ ಭಾರತದ ಪ್ರಸಿದ್ಧ ನಾಗ ದೇವಾಲಯಗಳಿಗೆ ಭೇಟಿ ನೀಡುವುದು, ಅಥವಾ ಮನೆ ಮಠದಲ್ಲಿ ನಾಗಪೂಜೆ ನಡೆಸುವುದು, ಪೂಜಾ ವಿಧಿಗಳನ್ನು ಪಾಲಿಸುವುದು ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ಹೊಂದಿದೆ.
ರಾಜ್ಯ
ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಜನವೋ ಜನ..!
ಮೈಸೂರು: ರಾಜ್ಯದಲ್ಲಿ ಸದ್ಯ ಹೃದಯಾಘಾತ ಪ್ರಕರಣಗಳು ಬೆಳಕಿಗೆ ಬರುತ್ತಿದೆ, ಮಕ್ಕಳು, ಯುವಕ-ಯುವಕಿಯರ ಈ ದಿಢೀರ್ ಸಾವು ಜನರನ್ನು ಆತಂಕಕ್ಕೀಡು ಮಾಡಿದೆ, ಈ ಹಿನ್ನೆಲೆಯಲ್ಲಿ ಭಯಗೊಂಡಿರುವ ಜನ ಇದೀಗ ಆಸ್ಪತ್ರೆಗಳಿಗೆ ಭೇಟಿ ನೀಡಿ ಚೆಕಪ್ ಮಾಡಿಸಿಕೊಳ್ಳುತ್ತಿದ್ದಾರೆ, ಅದರಂತೆ ಇಂದು ಮೈಸೂರಿನ ಆಸ್ಪತ್ರೆಯ ಮುಂದೆ ಕೂಡ ಸಾರ್ವಜನಿಕರು ಜಮಾಯಿಸಿದ್ದಾರೆ,
ಮೈಸೂರಿನ ಜಯದೇವ ಆಸ್ಪತ್ರೆ ಬಳಿ ಜನಜಂಗುಳಿ ನೆರೆದಿತ್ತು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಇಂದು ಆಸ್ಪತ್ರೆಗೆ ಬಂದಿದ್ದಾರೆ, ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆಗೆ ಹೊರ ರೋಗಿಗಳು ಬಂದಿದ್ದಾರೆ ,ಬೆಳ್ಳಂಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಜನ ತಪಾಸಣೆ ಮಾಡಿಸುತ್ತಿದ್ದಾರೆ,
ಇನ್ನು ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ದಿನೇ ದಿನ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ,
ಬೆಂಗಳೂರು
ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು: ಮೊಬೈಲ್ ವಿಕಿರಣದಿಂದ ಹೃದಯಕ್ಕೆ ಆಪತ್ತು?
ಬೆಂಗಳೂರು: ರಾಜ್ಯದಲ್ಲಿ ಹೃದಯಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ತಜ್ಞರ ಇತ್ತೀಚಿನ ತನಿಖೆಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ನಿತ್ಯ ಜೀವನದಲ್ಲಿ ಅನಿವಾರ್ಯ ಭಾಗವಾಗಿರುವ ಮೊಬೈಲ್ ಬಳಕೆಯೂ (Mobile Addiction) ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ತಜ್ಞರ ವರದಿಯ ಮುಖ್ಯ ಅಂಶವಾಗಿದೆ.
ಕೊವಿಡ್-19 ಸಾಂಕ್ರಾಮಿಕದ ನಂತರ ಜನರಲ್ಲಿ ಮೊಬೈಲ್ ಬಳಕೆಯ ಗೀಳು ಗಣನೀಯವಾಗಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಾದ ರೀಲ್ಸ್, ವ್ಲಾಗ್ಗಳು ಮತ್ತು ಇತರ ಡಿಜಿಟಲ್ ವಿಷಯಗಳ ವೀಕ್ಷಣೆಯು ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಆದರೆ, ಈ ಚಟುವಟಿಕೆಯಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ, ಹೃದಯದ ಕಾರ್ಯಕ್ಷಮತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ತಜ್ಞರ ಪ್ರಕಾರ, ದೀರ್ಘಕಾಲ ಮೊಬೈಲ್ಗೆ ಅಂಟಿಕೊಂಡಿರುವುದರಿಂದ ಹೃದಯದ ಸ್ಪಂದನ ದರದಲ್ಲಿ (Heart Rate Variability) ಏರಿಳಿತವಾಗುತ್ತಿದ್ದು, ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಜನರು ದಿನನಿತ್ಯದ ಬೇಸರದಿಂದ ತಪ್ಪಿಸಿಕೊಳ್ಳಲು ಮೊಬೈಲ್ನಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದಾರೆ. ಇದರಿಂದ ಊಟ, ನಿದ್ರೆ ಮತ್ತು ದೈಹಿಕ ಚಟುವಟಿಕೆಗಳಿಗೆ ಸಮಯವಿಲ್ಲದಂತಾಗಿ, ಒತ್ತಡದ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ತಲೆನೋವು, ಸುಸ್ತು, ಮತ್ತು ಹೃದಯದಲ್ಲಿ ಭಾರದ ಭಾವನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಮೊಬೈಲ್ನಿಂದ ಹೊರಸೂಸುವ ವಿಕಿರಣವು (Radiation) ಹೃದಯದ ಮೇಲೆ ದೀರ್ಘಕಾಲಿಕ ಒತ್ತಡವನ್ನುಂಟುಮಾಡಿ, ಹೃದಯಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯು ಎಚ್ಚರಿಸಿದೆ.
ತಜ್ಞರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಮೊಬೈಲ್ ಬಳಕೆಯನ್ನು ಸೀಮಿತಗೊಳಿಸುವಂತೆ ಸೂಚಿಸಿದ್ದಾರೆ. ರಾತ್ರಿಯ ವೇಳೆಯಲ್ಲಿ ಮೊಬೈಲ್ನಿಂದ ದೂರವಿರುವುದು, ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವುದು, ಮತ್ತು ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಇದಕ್ಕೆ ಪರಿಹಾರವಾಗಿದೆ. ಸಾಮಾಜಿಕ ಜಾಲತಾಣದ ರೀಲ್ಸ್ಗೆ ಒಡ್ಡಿಕೊಂಡು ಹೃದಯದ ಆರೋಗ್ಯವನ್ನು ಕಳೆದುಕೊಳ್ಳಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ಕ್ರೀಡೆ2 months ago
ಇಂದು ಐಪಿಎಲ್ ಫೈನಲ್- ಆರ್ಸಿಬಿಗೆ ಶುಭಕೋರಿದ ಎಸ್ಟಿಎಸ್!