ಅಪರಾಧ
ಉಗ್ರರ ಪರ 12 ವರ್ಷದಿಂದ ಬೇಹುಗಾರಿಕೆ- ರಾಜಸ್ಧಾನದ ವ್ಯ÷ಕ್ತಿ ಅರೆಸ್ಟ್!

ಜೈಪುರು: ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಪರ ಬೇಹುಗಾಗಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಧಾನ ಜೈಸಲ್ಮೇರ್ ನಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ,
ಐಎಸ್ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಜೈಸಲ್ಮೇರ್ ನಿವಾಸಿ ಪಠಾಣ್ ಖಾನ್ ನನ್ನು ರಾಜಸ್ಧಾನ ಗುಪ್ತಚರ ಇಲಾಖೆ ಬಂಧಿಸಿದೆ, ಆತನ ವಿರುದ್ಧ 1923 ರ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ, ಆ ವ್ಯಕ್ತಿಯನ್ನು ಒಂದು ತಿಂಗಳ ಹಿಂದೆ ಬಂಧಿಸಲಾಗಿತ್ತು ಮತ್ತು ಅಂದಿನಿAದ ವಿಚಾರಣೆ ನಡೆಸಲಾಗುತ್ತದೆ, ಮೇ 1 ರಂದು ಆತನನ್ನು ಔಪಚಾರಿಕವಾಗಿ ಬಂಧಿಸಲಾಗಿದೆ, 2013 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಧೆಯ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದ, ಪಾಕಿಸ್ತಾನ ಆತನಿಗೆ ಹಣದ ಆಮಿಷ ಒಡ್ಡಿ ಬೇಹುಗಾರಿಕೆ ತರಬೇತಿ ನೀಡಲಾಗಿತ್ತು ಎಂದು ಪ್ರಕಟನೆಯಲ್ಲಿ ತಿಳಿಸಲಗಿದೆ,
ಜೈಸಲ್ಮೇರ್ ಅಂತಾರಾಷ್ಟಿçÃಯ ಗಡಿಗೆ ಸಂಬAಧಿಸಿದ ಸೂಕ್ಷö್ಮ ಮತ್ತು ಗೌಪ್ಯ ಮಾಹಿತಿಯನ್ನು ಪಾಕಿಸ್ತಾನ ನಿರ್ವಾಹಕರೊಂದಿಗೆ ಹಂಚಿಕೊಳ್ಳುತ್ತಲೇ ಇದ್ದ ಎಂದು ತಿಳಿದು ಬಂದಿದೆ,