ದೇಶ
ಪಾಪಿ ಪಾಕಿಸ್ತಾನದ ಮೀಟರ್ ಆಫ್

ನವದೆಹಲಿ: ಭಾರತೀಯ ಸೇನಾಪಡೆಯ ರುದ್ರನರ್ತನಕ್ಕೆ ಪಾಕಿಸ್ತಾನದ ಮೀಟರ್ ಆಫ್ ಆಗಿದ್ದು, ಶತ್ರುರಾಷ್ಟ್ರ ದಿಕ್ಕು ತೋಚದೆ ಕಂಗಾಲಾಗಿದೆ,
ಸರಣಿ ಯಡವಟ್ಟು ನಿರ್ಧಾರದಿಂದ ಪಾಕ್ ತನ್ನ ಹಳ್ಳ ತಾನೇ ತೋಡಿಕೊಳ್ತಿದ್ದು, ಸೇನಾ ಮುಖ್ಯಸ್ಧ ಅಸಿಮ್ ಮುನೀರ್ ವಿರುದ್ಧ ಪಾಕಿಸ್ತಾನದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ, ಅಸಿಮ್ ಮುನೀರ್ ನಿಂದ ಪಾಕಿಸ್ತಾನ ನಾಶವಾಗುತ್ತಿದೆ ಎಂದು ಪಾಕ್ ಜನರು ಸಿಟ್ಟು ಹೊರಹಾಕಿದ್ದಾರೆ,
ಭಾರತ ತನ್ನ ಮೇಲೆ ದಾಳಿ ನಡೆಸಲು ಮುನೀರ್ ನಿರ್ಧಾರವೇ ಕಾರಣ ಎಂದು ಜನ ಪೋಸ್ಟ್ ಮಾಡುತ್ತಿದ್ದಾರೆ, ಒಂದು ವೇಳೆ ಇಮ್ರಾನ್ ಖಾನ್ ಈ ಸಂದರ್ಭದಲ್ಲಿ ಇದ್ದಿದ್ದರೆ ಎರಡು ದೇಶಗಳ ಮಧ್ಯೆ ಉತ್ತಮ ಸಂಬಂಧ ಇರುತ್ತಿತ್ತು, ಮುನೀರ್ ತನ್ನ ವೈಯುಕ್ತಿಕ ಲಾಭಕ್ಕಾಗಿ ಭಾರತದ ವಿರುದ್ಧ ದಾಳಿ ನಡೆಸುತ್ತಿದ್ದಾನೆ, ಕೂಡಲೇ ಬಂಧನದಲ್ಲಿರುವ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ,
ಮುನೀರ್ ಹಾಗೂ ಆಡಳಿತರೂಢ ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದಿದ್ದು, ಭಾರತದ ಶಕ್ತಿಪ್ರದರ್ಶನದ ಮುಂದೆ ಪಾಕ್ ನಿಲ್ಲಲಾಗುತ್ತಿಲ್ಲ, ಇದಕ್ಕೆ ದೇಶದಲ್ಲಿನ ಅವ್ಯವಸ್ಧೆಯೇ ಕಾರಣದ ಎಂದು ಜನರೇ ತಿರುಗಿಬಿದ್ದಿದ್ದಾರೆ,