ದೇಶ
ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಬುನ್ಯಾನ್ ಅಲ್ ಮರ್ಸೂಸ್ ಘೋಷಿಸಿದ ಪಾಕಿಸ್ತಾನ- ಏನು ಹಾಗೆಂದರೆ?

ಪಾಕಿಸ್ತಾನ: ಭಾರತವು ಆಪರೇಷನ್ ಸಿಂಧೂರ ಹೆಸರಿನಲ್ಲಿ ಕೈಗೊಂಡಿರುವ ಉಗ್ರ ದಮನ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಶನಿವಾರ ಬುನ್ಯಾನ್ ಅಲ್ ಮರ್ಸೂಸ್ ಕಾರ್ಯಾಚರಣೆ ಘೋಷಿಸಿದೆ, ತನ್ನ ವಾಯುನೆಲೆಗಳನ್ನು ಗುರಿಯಾಗಿರಿಸಿಕೊಂಡು ಭಾರತ ನಡೆಸುತ್ತಿರುವ ದಾಳಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ಬುನ್ಯಾನ್ ಅಲ್ ಮರ್ಸೂಸ್ ಕಾರ್ಯಾಚರಣೆ ಕೈಗೊಂಡಿರುವುದಾಗಿ ಪಾಕಿಸ್ತಾನ ತಿಳಿಸಿದೆ,
ಬುನ್ಯಾನ್ ಅಲ್ ಮರ್ಸೂಸ್ ಎಂದರೆ ಸರಳವಾಗಿ ಅಥವಾ ಮಾರ್ಗದರ್ಶನದ ಗೋಡೆ ಎಂದು ಭಾಷಾಂತರಿಸಬಹುದಾಗಿದೆ, ಈ ವಾಕ್ಯವನ್ನು ಕುರಾನ್ ನಿಂದ ಆರಿಸಲಾಗಿದೆ,
ಕುರಾನ್ ನ ವಾಣಿಯಂತೆ ಯುದ್ಧದಲ್ಲಿ ಭಾಗವಹಿಸುವವರನ್ನು ಪ್ರೀತಿಸುತ್ತಾನೆ, ಅವರನ್ನು ಗೋಡೆಯಂತೆ ರಕ್ಷಿಸುತ್ತಾನೆ ಎಂಬರ್ಥವರುವ ಸೂಕ್ತಿ ಕುರಾನ್ ನಲ್ಲಿದೆ, ಇದನ್ನೇ ಬುನ್ಯಾನ್ ಅಲ್ ಮರ್ಸೂಸ್ ಎಂದು ಕರೆಯಲಾಗುತ್ತದೆ.
ತನ್ನ ಸ್ವಂತ ಸೇನಾಬಲ ಅಥವಾ ಬಲದ ಕೊರತೆಯಿಂದ ಪಾಕಿಸ್ತಾನ ನರಳುತ್ತಿದೆ, ಜೊತೆಗೆ ಅಲ್ಲಿನ ಯೋಧರೂ ಸಹ ಆತ್ಮವಿಶ್ವಾಸ ಮತ್ತು ನಾಯಕತ್ವದ ಕೊರತೆ ಎದುರಿಸುತ್ತಿದ್ದಾರೆ, ಎಂದಿನಂತೆ ದೇವರ ಹೆಸರಿನಲ್ಲಿ ಮುಗ್ದ ಜೀವಗಳನ್ನು ಬಲಿಕೊಡಲು ಹಾಗೂ ಅನೈತಿಕ ಮಾರ್ಗ ತುಳಿದಾದರೂ ಸೈನಿಕರನ್ನು ಉತ್ತೇಜಿಸಲು ಪಾಕಿಸ್ತಾನ ಕುರಾನ್ ನ ಈ ವಾಣಿಯನ್ನು ಬಳಸಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ,