ದೇಶ

ದೇಶದ ನಾಯಕರು ಅವಕಾಶ ನೀಡದೆ ಇರುವುದನ್ನು ದೇಶದ ಜನತೆ ಕ್ಷಮಿಸುವುದಿಲ್ಲ – ಶಾಸಕ ಎಸ್ ಟಿ ಸೋಮಶೇಖರ್

ಬೆಂಗಳೂರು: ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ಹುಟ್ಟಡಗಿಸಲು ದೇಶದ ಸೇನೆ ಸನ್ನದ್ಧವಾ ಗಿದ್ದರೂ ದೇಶದ ನಾಯಕರು ಅವಕಾಶ ನೀಡದೆ ಇರುವುದನ್ನು ದೇಶದ ಜನತೆ ಕ್ಷಮಿಸುವುದಿಲ್ಲ ಎಂದು ಶಾಸಕ ಎಸ್ ಟಿ ಸೋಮಶೇಖರ್ ಕೇಂದ್ರದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯನ್ನು ಬೆಂಬಲಿಸಿ ಕೆಂಗೇರಿ ಉಪನಗರದ ಅಂಬೇಡ್ಕರ್ ವೃತ್ತದಿಂದ ಗಣೇಶ ಆಟದ ಮೈದಾನದವರೆಗೆ ಹಮ್ಮಿಕೊಂಡಿದ್ದ ತಿರಂಗ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಾಕಿಸ್ತಾನದವರ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲು ಸೈನಿಕರು ಉತ್ಸುಕರಾಗಿ ಉಗ್ರಗಾಮಿಗಳ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ದೃಢ ಸಂಕಲ್ಪ ಮಾಡಿದ್ದ ಸೈನಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಸೂಚನೆ ಮೇರೆಗೆ ಯುದ್ಧವನ್ನು ನಿಲ್ಲಿಸಿದ್ದು ಘೋರ ಅಪರಾಧವಾಗಿದೆ ಎಂದರು. ದೇಶದ ರಕ್ಷಣೆಗಾಗಿ ಹುತಾತ್ಮರಾಗಿರುವ ಸೈನಿಕರ ಆದರ್ಶ,ದೇಶಪ್ರೇಮ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು. ಪಾಕಿಸ್ತಾನ ಬೆಂಬಲಿತ ಉಗ್ರರು ಪೆಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ನಿರ್ದಯವಾಗಿ ಕೊಂದ ಹೇಯ ಕೃತ್ಯವನ್ನು ದೇಶದ ಎಲ್ಲ ನಾಗರಿಕರು ಒಕ್ಕೋರಲಿನಿಂದ ಖಂಡಿಸುವ ಮೂಲಕ ದೇಶದ ಒಗ್ಗಟ್ಟು,ಐಕ್ಯತೆಯನ್ನು ಕಾಪಾಡಿದ್ದಾರೆ ಎಂದರು. ಕುಂಬಳಗೋಡು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್ ದೇವರಾಜ್ ಮಾತನಾಡಿ ಚಳಿ, ಗಾಳಿ, ಮಳೆಯನ್ನ ಲೆಕ್ಕಿಸದೆ ದೇಶದ ರಕ್ಷಣೆಗಾಗಿ ಜೀವವನ್ನು ಮುಡುಪಾಗಿಟ್ಟು ಸೇವೆ ಗಯ್ಯುತ್ತಿರುವ ಸೈನಿಕರ ದೇಶಪ್ರೇಮಕ್ಕೆ ಬೆಲೆ ಕಟ್ಟಲಾಗದು ಎಂದರು. ಅವರ ಹಿತ ರಕ್ಷಣೆಗಾಗಿ ಗ್ರಾಮ ಪಂಚಾಯಿತಿ ವತಿಯಿಂದ 10 ಲಕ್ಷ ರೂಗಳನ್ನು ಸೈನಿಕರ ನಿಧಿಗೆ ನೀಡಲಾಗುವುದು ಎಂದು ಘೋಷಿಸಿದರು. ಕರ್ನಾಟಕ ರಾಜ್ಯದ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ಶಿವಣ್ಣ ಹಾಗೂ ನಿವೃತ್ತ ಯೋಧರು ,ಮುಖಂಡರಾದ ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಮೈಲಸಂದ್ರ ನಾಗರಾಜು, ಶಿವಮಾದಯ್ಯ, ಲಕ್ಕಣ್ಣ, ಅರುಣ್ ಕುಮಾರ್, ಚಿಕ್ಕ ರಾಜು , ರೇವಣಸಿದ್ದಯ್ಯ, ಟಿ ಪ್ರಭಾಕರ್, ಸುಮಾ ಜನಾರ್ಧನ್, ಡಾ. ಅನುಪಮಾ ಪಂಚಾಕ್ಷರಿ, ಲಕ್ಷ್ಮಿ ಪ್ರಭುರಾಜ್‍ಕರ್ನಾಟಕ ರಾಜ್ಯದ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ಶಿವಣ್ಣ ಹಾಗೂ ನಿವೃತ್ತ ಯೋಧರು ,ಮುಖಂಡರಾದ ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಮೈಲಸಂದ್ರ ನಾಗರಾಜು, ಶಿವಮಾದಯ್ಯ, ಲಕ್ಕಣ್ಣ, ಅರುಣ್ ಕುಮಾರ್, ಚಿಕ್ಕ ರಾಜು , ರೇವಣಸಿದ್ದಯ್ಯ, ಟಿ ಪ್ರಭಾಕರ್, ಸುಮಾ ಜನಾರ್ಧನ್, ಡಾ. ಅನುಪಮಾ ಪಂಚಾಕ್ಷರಿ, ಲಕ್ಷ್ಮಿ ಪ್ರಭುರಾಜ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರದ ಜನತೆ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದೇ ವೇಳೆ ಅಗರ ಗ್ರಾಮ ಪಂಚಾಯತಿ ಅಧ್ಯಕ್ಷೆ. ಲತಾ ಮಂಜುನಾಥ್ ರೂ 5 ಲಕ್ಷ ಹಾಗೂ ಲಕ್ಷ್ಮಿ ಪ್ರಭುರಾಜ್ ಅವರು 50,000ಗಳನ್ನು ಸೈನಿಕರ ನಿಧಿಗೆ ಹಣ ನೀಡಲು ಘೋಷಿಸಿದರು.

Leave a Reply

Your email address will not be published. Required fields are marked *

Trending

Exit mobile version