ಬೆಂಗಳೂರು

ಶ್ರದ್ಧಾ ಭಕ್ತಿಯ ಗಣೇಶ ಚತುರ್ಥಿ ಆಚರಣೆ

ಶ್ರದ್ಧಾ ಭಕ್ತಿಯ ಗಣೇಶ ಚತುರ್ಥಿ ಆಚರಣೆ

ಬೆಂಗಳೂರು: ಯಶವಂತಪುರ ಕ್ಷೇತ್ರದ ಕುಂಬಳಗೋಡುನಲ್ಲಿ ಇರುವ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಗಣಪತಿ ಹಬ್ಬವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಜೃಂಭಣೆಯಿಂದ ಆಚರಿಸಿದರು, ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ರೋಹಿತ್ ಕೆ ಸಿ ಅವರು ಮಾತನಾಡುತ್ತ ಗಣೇಶ ಚುತುರ್ಥಿ ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ನಮ್ಮ ಮೂಷಿಕ ವಾಹನನ ಜನನವನ್ನು ಸಾರುವ ಹಬ್ಬ, ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಇಲ್ಲವೇ ಚೌತಿ ಎಂದು ಸಹ ಕರೆಯುತ್ತಾರೆ, ಇದನ್ನು ಹಿಂದೂಗಳೆಲ್ಲರು ಭಕ್ತಿಗಳಿಂದ ಆಚರಿಸುತ್ತಾರೆ, ಈ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಯಲ್ಲ ಒಂದಾಗಿ ಸೇರುತ್ತಾರೆ ಹಾಗಯೇ ನಮ್ಮ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಸೇರಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ, ನಮ್ಮ ಕಾಲೇಜಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರು ಎಲ್ಲರೂ ಒಂದೇ ಕುಟುಂಬ ಎಂದರು, ಜಗತ್ತಿನಲ್ಲಿ ತಂದೆ ತಾಯಿಗಿಂತ ಬೇರೆ ದೇವರಿಲ್ಲ ಎಂದು ತನ್ನ ತಂದೆ ತಾಯಿಯ ಸುತ್ತ ಪ್ರದಕ್ಷಿಣೆ ಮಾಡಿ, ಬಿದ್ದಿವಂತಿಕೆಯಿಂದ ತಂದೆ ತಾಯಿಯ ಪ್ರೀತಿಗೆ ಪಾತರನಾದವನ್ನು ವಿಘ್ನೇಶ್ವರ ಎಂದರು, ಕಾರ್ಯಕ್ರಮದಲ್ಲಿ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಸ್ಧರಾದ ಕೆ ಪಿ ಮುತ್ತಯಯ್ಯ, ಉಪಾನ್ಯಾಸಕ ವೃಂದ ವಿದ್ಯಾರ್ಥಿಗಳೆಲ್ಲ ಪಾಲ್ಗೊಂಡಿದ್ದರು,

Trending

Exit mobile version