ದೇಶ
ವಂದೇ ಭಾರತ್ ಸ್ಪೀಪರ್ ರೈಲಿನ 8 ಕುತೂಹಲಕಾರಿ ಸಂಗಿತಿಗಳನ್ನು ತಿಳಿಯಿರಿ
ವಂದೇ ಭಾರತ್ ಸ್ಲೀಪರ್ ರೈಲು ಭಾರತದ ಪ್ರಮುಖ ರೈಲು ಪ್ರಯಾಣ ವ್ಯವಸ್ಥೆಯಲ್ಲಿ ಒಂದಾಗಿದೆ. ಇದರಿಂದಾಗಿ ದೀರ್ಘಾವಧಿಯ ರಾತ್ರಿಯ ರೈಲು ಪ್ರಯಾಣ ಸುಗಮವಾಗಿದೆ. ಈಗ ಭಾರತೀಯ ರೈಲ್ವೇಯು ಈ ಸ್ಲೀಪರ್ ರೈಲನ್ನು ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಪರಿಚಯಿಸಲು ಸಿದ್ಧವಾಗಿದೆ. ಇದು ಫೆಬ್ರವರಿ 2024 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದ,
ವಂದೇ ಭಾರತ್ ಸ್ಲೀಪರ್ ರೈಲು “ವಿಶ್ವ ದರ್ಜೆಯ”, ರೈಲು ಎಂದು ಭಾರತೀಯ ರೈಲ್ವೆ ಹೇಳಿದೆ. ಈ ರೈಲಿನಲ್ಲಿ ಉತ್ತಮ ಸೇವೆ ಇರಲಿದ್ದು, ಅಂತಿಮವಾಗಿ ರಾಜಧಾನಿ ಎಕ್ಸ್ಪ್ರೆಸ್ ರೈಲುಗಳನ್ನು ಬದಲಿಸಲು ನಿರ್ಧರಿಸಲಾಗಿದೆ. ಜನರಿಗೆ ಪ್ರಯಾಣದ ಅನುಭವವನ್ನೇ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈ ರೈಲುಗಳನ್ನು ಆರಂಭಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಯೋಜನೆಯ ಕುರಿತು ಕೆಲವು ಪ್ರಮುಖ, ಕುತೂಹಲಕಾರಿ ಸಂಗತಿಗಳು ಇಲ್ಲಿವೆ, ಮುಂದೆ ಓದಿ..
ವಂದೇ ಭಾರತ್ ಸ್ಲೀಪರ್ ರೈಲು ಉತ್ಪಾದನೆ ಈ ಪ್ರೀಮಿಯಂ ರೈಲಿನ ಉತ್ಪಾದನೆಯು ಅಕ್ಟೋಬರ್ನಲ್ಲಿ ಬಿಇಎಂಎಲ್ ಲಿಮಿಟೆಡ್ನ ಬೆಂಗಳೂರು ಸಂಕೀರ್ಣದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಭಾರತೀಯ ರೈಲ್ವೆಯ ಕೋಚ್ ಫ್ಯಾಕ್ಟರಿ ಐಸಿಎಫ್ ಸಹಯೋಗದೊಂದಿಗೆ ಬಿಇಎಂಎಲ್ ಈ ರೈಲನ್ನು ತಯಾರಿಸುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲು ಕಾಂಪೋಸಿಷನ್ ಶೀಘ್ರವೇ ಆರಂಭವಾಗಲಿರುವ ವಂದೇ ಭಾರತ್ ಸ್ಲೀಪರ್ ರೈಲು ಒಟ್ಟು 16 ಕೋಚ್ಗಳನ್ನು ಹೊಂದಿರಲಿದೆ. 11 ಎಸಿ 3-ಟೈರ್ ಕೋಚ್ಗಳು, 4 ಎಸಿ 2-ಟೈರ್ ಕೋಚ್ಗಳು ಮತ್ತು 1 ಎಸಿ 1 ನೇ ಕೋಚ್ ಇರಲಿದೆ. ಹೆಚ್ಚುವರಿಯಾಗಿ, ರೈಲು 823 ಬರ್ತ್ಗಳನ್ನು ಹೊಂದಿರುತ್ತದೆ.
ವಂದೇ ಭಾರತ್ ಸ್ಲೀಪರ್ ರೈಲಿನ ವೇಗ ವಂದೇ ಭಾರತ್ ಸ್ಲೀಪರ್ ರೈಲು ಕೂಡ ಎಸಿ ಚೇರ್ ಕಾರ್ ವರ್ಜನ್ನಂತೆಯೇ 160 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಸೆಮಿ- ಹೈ ಸ್ಪೀಡ್ ರೈಲು ಸೆಟ್ ಆಗಿದೆ. ಈ ರೈಲು ವೇಗವಾಗಿರುವ ಕಾರಣದಿಂದಾಗಿ ಪ್ರಯಾಣದ ಸಮಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ವಂದೇ ಭಾರತ್ ಸ್ಲೀಪರ್ ರೈಲಿನ ಹೊರಭಾಗ ಸ್ಲೀಪರ್ ರೈಲಿನ ಹೊರಭಾಗವು ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಹೋಲುತ್ತದೆ. ಇದು ಏರೋಡೈನಾಮಿಕ್ ಆಗಿರುತ್ತದೆ. ನೋಡುವಾಗ ಕೊಂಚ ಬುಲೆಟ್ ಟ್ರೈನ್ಗಳಂತೆಯೇ ಕಾಣುತ್ತದೆ. ಹಾಗೆಯೇ ಪ್ರತಿ ಕೊನೆಯಲ್ಲಿ ಡ್ರೈವಿಂಗ್ ಕ್ಯಾಬಿನ್ ಅನ್ನು ಹೊಂದಿರುತ್ತದೆ.
ವಂದೇ ಭಾರತ್ ಸ್ಲೀಪರ್ ರೈಲು ಒಳಾಂಗಣ ರೈಲಿನ ಒಳಭಾಗವನ್ನು ನೀವು ನೋಡಿದರೆ ವಾವ್ ಎಂದು ಹೇಳುವುದು ಖಂಡಿತವಾಗಿದೆ. ಬಿಇಎಂಎಲ್ ಪ್ರಕಾರ, ಹೊಸ ರೈಲು “ಅತ್ಯುತ್ತಮ ದರ್ಜೆಯ ಒಳಾಂಗಣಗಳನ್ನು” ಹೊಂದಿರುತ್ತದೆ. ವಿದೇಶಗಳಲ್ಲಿ ಓಡುವ ಸೂಪರ್ ರೈಲುಗಳಿಂದ ಸ್ಫೂರ್ತಿ ಪಡೆದ ರೈಲು ಇದಾಗಿರುವ ಕಾರಣ, ಹಿಂದೆಂದೂ ನೋಡಿರದ ಒಳಾಂಗಣವನ್ನು ನಿರೀಕ್ಷಿಸಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಸೌಕರ್ಯಗಳು ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಉತ್ತಮ ಪ್ರಯಾಣಿಕರ ಸೌಲಭ್ಯಗಳು, ಮಾಡ್ಯುಲರ್ ಪ್ಯಾಂಟ್ರಿ, ಉತ್ತಮವಾಗಿ ವಿನ್ಯಾಸಗೊಳಿಸಲಾದ ವಾಸನೆ-ಮುಕ್ತ ಶೌಚಾಲಯ ಸೌಲಭ್ಯಗಳು, ಸೆನ್ಸರ್ ಇರುವ ಇಂಟರ್ ಕಮ್ಯುನಿಕೇಶನ್ ಡೋರ್ಗಳು, ಸ್ವಯಂಚಾಲಿತವಾಗಿ ತೆರೆಯುವ ಪ್ರಯಾಣಿಕರ ಬಾಗಿಲುಗಳು, 1 ನೇ ಎಸಿ ಕ್ಯಾರೇಜ್ನಲ್ಲಿ ಬಿಸಿನೀರಿನ ಶವರ್ಗಳು, ಶಾಂತ ಆಂತರಿಕ ವಾತಾವರಣಕ್ಕಾಗಿ ಶಬ್ದ ನಿರೋಧನವನ್ನು ಅಳವಡಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ವಂದೇ ಭಾರತ್ ಸ್ಲೀಪರ್ ರೈಲುಗಳು ಸುಗಮ ಮತ್ತು ಅಡೆತಡೆಯಿಲ್ಲದ ಪ್ರಯಾಣವನ್ನು ಒದಗಿಸುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ರೈಲಿನ ಸುಧಾರಿತ ಬೋಗಿ ವಿನ್ಯಾಸವು ಒಟ್ಟಾರೆಯಾಗಿ ಪ್ರಯಾಣ ಸೌಕರ್ಯವನ್ನು ಅಧಿಕ ಮಾಡುತ್ತದೆ. ಯಾವುದೇ ಅಪಘಾತವನ್ನು ತಡೆಯಲು ಸುರಕ್ಷಿತ ಫೀಚರ್ಗಳನ್ನು ಕೂಡಾ ಅಳವಡಿಸಲಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲು ಸುರಕ್ಷತೆ ವಂದೇ ಭಾರತ್ ಸ್ಲೀಪರ್ ರೈಲು ದೇಶೀಯವಾಗಿ ರಚಿಸಲಾದ ಕವಚ್ ವ್ಯವಸ್ಥೆಯನ್ನು ಹೊಂದಿದೆ. ಇದು ರೈಲನ್ನು ಅಪಘಾತದಿಂದ ತಡೆಯುವ ವ್ಯವಸ್ಥೆಯಾಗಿದೆ. ಆರಂಭದಲ್ಲಿ, ಬಿಇಎಂಎಲ್ ಭಾರತೀಯ ರೈಲ್ವೆಗಾಗಿ 10 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಉತ್ಪಾದಿಸುತ್ತದೆ. ರೈಲಿನ ನಿರ್ಮಾಣದ ಜವಾಬ್ದಾರಿಯನ್ನು ಬಿಇಎಂಎಲ್ ಹೊಂದಿದ್ದರೂ, ಐಸಿಎಫ್ ಪ್ರೊಪಲ್ಷನ್ ಸಿಸ್ಟಮ್ಗಳನ್ನು ಒದಗಿಸುತ್ತಿದೆ.
ದೇಶ
ಭಾರತದ ಇಂಧನ ಭದ್ರತೆಗೆ ಮೆಗಾ ಪ್ಲಾನ್! ಹಾರ್ಮುಜ್ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರದ ರಹಸ್ಯ ತಂತ್ರ
ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ (Iran-America Tension) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ (Strait of Hormuz) ಭಾಗದಲ್ಲಿ ಹಡಗು ಸಂಚಾರ ಅಸ್ತವ್ಯಸ್ತಗೊಂಡ ಪರಿಣಾಮ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ನಡುವೆಯೇ ಭಾರತ ಸರ್ಕಾರ ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಮಹತ್ವದ ಕಾರ್ಯತಂತ್ರ ರೂಪಿಸಿರುವುದು ಬೆಳಕಿಗೆ ಬಂದಿದೆ.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಕೊರತೆ ಉಂಟಾಗದಂತೆ ತಡೆಯಲು ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ನೇತೃತ್ವದಲ್ಲಿ ವಿಶೇಷ ರಾಜತಾಂತ್ರಿಕ ಮತ್ತು ರಕ್ಷಣಾತ್ಮಕ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹಾರ್ಮುಜ್ ಜಲಸಂಧಿ ಯಾಕೆ ಪ್ರಮುಖ?
ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು 20% ಭಾಗ ಹಾರ್ಮುಜ್ ಜಲಸಂಧಿ ಮೂಲಕವೇ ಸಾಗುತ್ತದೆ. ಆದರೆ ಇರಾನ್-ಅಮೆರಿಕ ಸಂಘರ್ಷದಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಈ ಮಾರ್ಗದಲ್ಲಿ ಭಾರೀ ಅನಿಶ್ಚಿತತೆ ಉಂಟಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿದ್ದು, ಹಲವು ದೇಶಗಳಲ್ಲಿ ಇಂಧನ ದರ ಏರಿಕೆಯ ಆತಂಕ ಶುರುವಾಗಿದೆ.
ಭಾರತ ರೂಪಿಸಿರುವ ಹೊಸ ತಂತ್ರ ಏನು?
ಈ ಪರಿಸ್ಥಿತಿಯನ್ನು ಎದುರಿಸಲು ಭಾರತ ತನ್ನ ಸಾಂಪ್ರದಾಯಿಕ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ತೈಲ ಆಮದು ಮುಂದುವರಿಸಲು ನಿರ್ಧರಿಸಿದೆ. ಇದಕ್ಕಾಗಿ ಇಂಡಿಯನ್ ಶಿಪ್ಪಿಂಗ್ ಕಾರ್ಪೊರೇಷನ್ಗೆ ಸೇರಿದ ಬೃಹತ್ ತೈಲ ಟ್ಯಾಂಕರ್ಗಳನ್ನು ಹಾರ್ಮುಜ್ ಜಲಸಂಧಿ ಮೂಲಕ ಪರ್ಷಿಯನ್ ಕೊಲ್ಲಿಗೆ ಕಳುಹಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಈ ಟ್ಯಾಂಕರ್ಗಳಿಗೆ ಭಾರತೀಯ ನೌಕಾಪಡೆ ವಿಶೇಷ ಭದ್ರತೆ ಒದಗಿಸಲು ಮುಂದಾಗಿದೆ. ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ಯುದ್ಧನೌಕೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ನೌಕಾಪಡೆ ನಿರಂತರ ನಿಗಾ ವಹಿಸಿದೆ.
ಜೈಶಂಕರ್-ಇರಾನ್ ಮಾತುಕತೆ ಕುತೂಹಲ
ಇತ್ತೀಚೆಗೆ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಭೇಟಿಯಲ್ಲಿ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರ ಮತ್ತು ನಿರಂತರ ತೈಲ ಪೂರೈಕೆ ಕುರಿತ ಮಹತ್ವದ ಚರ್ಚೆ ನಡೆದಿರಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಇಂಧನ ಭದ್ರತೆಗೆ ಕೇಂದ್ರದ ಫುಲ್ ಅಲರ್ಟ್
ಭಾರತದ ಇಂಧನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಎಲ್ಲಾ ಆಯ್ಕೆಗಳನ್ನೂ ಪರಿಗಣಿಸುತ್ತಿದೆ. ತೈಲ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗದಂತೆ ಕೇಂದ್ರ ಬಂದರು ಮತ್ತು ಜಲಮಾರ್ಗ ಸಚಿವಾಲಯ, ನೌಕಾಪಡೆ ಹಾಗೂ ತೈಲ ಕಂಪನಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.
ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಇಂಧನ ಕೊರತೆ ಉಂಟಾಗದಂತೆ ತಡೆಯಲು ಭಾರತ ಸರ್ಕಾರ ತೆರೆಮರೆಯಲ್ಲಿ ದೊಡ್ಡ ಮಟ್ಟದ ಸಿದ್ಧತೆ ನಡೆಸುತ್ತಿರುವುದು ಇದೀಗ ಸ್ಪಷ್ಟವಾಗುತ್ತಿದೆ.
ಕ್ರೀಡೆ
ಟೆಸ್ಟ್ ನಾಯಕತ್ವ ಬಿಟ್ಟ ಬಳಿಕ ‘ಸಂಪೂರ್ಣ ಖಾಲಿಯಾಗಿದ್ದೆ’: ವಿರಾಟ್ ಕೊಹ್ಲಿ ಭಾವುಕ ಮಾತು
ನವದೆಹಲಿ: ಭಾರತೀಯ ಟೆಸ್ಟ್ ಕ್ರಿಕೆಟ್ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರ ಪೈಕಿ ವಿರಾಟ್ ಕೊಹ್ಲಿ (Virat Kohli) ಹೆಸರು ಸದಾ ಅಗ್ರಸ್ಥಾನದಲ್ಲಿರುತ್ತದೆ. ತಮ್ಮ ಆಕ್ರಮಣಕಾರಿ ನಾಯಕತ್ವ ಮತ್ತು ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ವಿಶ್ವದ ಬಲಿಷ್ಠ ತಂಡವನ್ನಾಗಿ ರೂಪಿಸಿದ್ದ ಕೊಹ್ಲಿ, 2022ರಲ್ಲಿ ಏಕಾಏಕಿ ಟೆಸ್ಟ್ ನಾಯಕತ್ವ ತೊರೆದಾಗ ಕ್ರಿಕೆಟ್ ಜಗತ್ತೇ ಅಚ್ಚರಿಗೆ ಒಳಗಾಗಿತ್ತು. ಇದೀಗ ಆ ನಿರ್ಧಾರದ ಹಿಂದಿನ ನಿಜವಾದ ಕಾರಣವನ್ನು ಕೊಹ್ಲಿ ಮೊದಲ ಬಾರಿಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ.
ಬೆಂಗಳೂರುದಲ್ಲಿ ನಡೆದ ಆರ್ಸಿಬಿ ಇನೋವೇಷನ್ ಲ್ಯಾಬ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, ನಾಯಕತ್ವ ಮತ್ತು ಬ್ಯಾಟಿಂಗ್ ಎಂಬ ಎರಡು ದೊಡ್ಡ ಜವಾಬ್ದಾರಿಗಳನ್ನು ಒಂದೇ ವೇಳೆ ನಿರ್ವಹಿಸುವುದು ತಮ್ಮ ಮೇಲೆ ಭಾರೀ ಮಾನಸಿಕ ಒತ್ತಡ ತಂದಿತ್ತು ಎಂದು ಒಪ್ಪಿಕೊಂಡರು.
“ನಾನು ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರನಾಗಿದ್ದೆ. ಜೊತೆಗೆ ನಾಯಕತ್ವದ ಜವಾಬ್ದಾರಿಯೂ ನನ್ನ ಮೇಲಾಗಿತ್ತು. ಈ ಎರಡೂ ಹೊಣೆಗಾರಿಕೆಗಳು ನನ್ನ ದಿನನಿತ್ಯದ ಜೀವನದ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತಿವೆ ಎಂಬುದನ್ನು ನಾನು ಆಗ ಅರಿತುಕೊಂಡಿರಲಿಲ್ಲ,” ಎಂದು ಕೊಹ್ಲಿ ಹೇಳಿದ್ದಾರೆ.
ಭಾರತ ತಂಡ ಯಾವಾಗಲೂ ವಿಶ್ವದ ಅಗ್ರ ಸ್ಥಾನದಲ್ಲಿರಬೇಕು ಎಂಬ ಬಲವಾದ ಬಯಕೆ ತಮ್ಮೊಳಗಿದ್ದ ಕಾರಣ, ಒತ್ತಡವನ್ನು ಕಡೆಗಣಿಸಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿದರು. ಆದರೆ, ಕಾಲಕ್ರಮೇಣ ಅದು ತಮ್ಮ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು ಎಂದು ಭಾವುಕರಾದರು.
“ನಾಯಕತ್ವ ತೊರೆದ ಸಮಯಕ್ಕೆ ನಾನು ಸಂಪೂರ್ಣವಾಗಿ ಖಾಲಿಯಾಗಿದ್ದೆ. ನನ್ನೊಳಗೆ ಯಾವುದೇ ಶಕ್ತಿ ಉಳಿದಿರಲಿಲ್ಲ. ಆ ಜವಾಬ್ದಾರಿಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಅದು ತುಂಬಾ ಕಠಿಣ ಅನುಭವವಾಗಿತ್ತು,” ಎಂದು ಕೊಹ್ಲಿ ಮನದಾಳದ ಮಾತು ಹಂಚಿಕೊಂಡರು.
ವಿರಾಟ್ ಕೊಹ್ಲಿ ಭಾರತ ತಂಡವನ್ನು ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಭಾರತ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ನಾಯಕ ಎಂಬ ದಾಖಲೆ ಕೂಡ ಅವರ ಹೆಸರಿನಲ್ಲಿದೆ.
ಆದರೆ ನಾಯಕತ್ವ ತೊರೆದ ಬಳಿಕ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಕುಸಿಯತೊಡಗಿತು. ಬಳಿಕ ಅವರು 2025ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 123 ಪಂದ್ಯಗಳಿಂದ 9,230 ರನ್ ಗಳಿಸಿರುವ ಕೊಹ್ಲಿ, 30 ಶತಕಗಳನ್ನು ಸಿಡಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
ದೇಶ
TVK ಸರ್ಕಾರದಿಂದ ಮೈತ್ರಿ ಪಕ್ಷಗಳಿಗೆ ಸಚಿವ ಸಂಪುಟ ಸೇರ್ಪಡೆ ಆಹ್ವಾನ
ಚೆನ್ನೈ, ಮೇ 20: ತಮಿಳುನಾಡಿನ ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರವು ತನ್ನ ಮೈತ್ರಿ ಪಕ್ಷಗಳನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸಚಿವ ಸಂಪುಟಕ್ಕೆ ಸೇರುವಂತೆ ಅಧಿಕೃತವಾಗಿ ಆಹ್ವಾನಿಸಿದೆ. ಈ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಕಾಮಗಾರಿಗಳ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಆಧವ್ ಅರ್ಜುನಾ ಮಹತ್ವದ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಾಮಾಜಿಕ ನ್ಯಾಯದ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಎಲ್ಲಾ ಪಕ್ಷಗಳು ಸರ್ಕಾರದ ಭಾಗವಾಗಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ” ಎಂದು ತಿಳಿಸಿದ್ದಾರೆ.
ಮೈತ್ರಿ ಪಕ್ಷಗಳನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಅಂತಿಮ ಘೋಷಣೆಯನ್ನು ಮುಖ್ಯಮಂತ್ರಿ ವಿಜಯ್ ಶೀಘ್ರದಲ್ಲೇ ಮಾಡುವರು ಎಂದು ತಿಳಿಸಿದ ಅರ್ಜುನಾ, “ಎಡಪಕ್ಷಗಳು ಹೊರಗಿನಿಂದ ಬೆಂಬಲ ನೀಡಲು ನಿರ್ಧರಿಸಿರುವುದನ್ನು ನಾವು ಸದಾ ಗೌರವಿಸುತ್ತೇವೆ. ಈ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಧರ್ಮನಿರಪೇಕ್ಷತೆಯ ಪರ ನಿಲ್ಲುವ ಸರ್ಕಾರವಾಗಿರುತ್ತದೆ” ಎಂದು ಹೇಳಿದ್ದಾರೆ.
ವಿಸಿಕೆ, ಐಯುಎಂಎಲ್ಗೆ ಆಹ್ವಾನ
ವಿಡುತಲೈ ಚಿರುತೈಗಳ ಕಚ್ಚಿ (VCK) ಮುಖ್ಯಸ್ಥ ತೋಲ್ ತಿರುಮಾವಳವನ್ ಅವರಿಗೆ ಸಚಿವ ಸಂಪುಟ ಸೇರಲು ಆಹ್ವಾನ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಜೊತೆಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷವನ್ನೂ ಸರ್ಕಾರದ ಭಾಗವಾಗುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
“ಮುಖ್ಯಮಂತ್ರಿಗಳ ಅಭಿಪ್ರಾಯದಂತೆ ಸಚಿವ ಸಂಪುಟ ಒಂದು ಕುಟುಂಬದಂತಿರಬೇಕು. ವಿಸಿಕೆ, ಐಯುಎಂಎಲ್ ಹಾಗೂ ಕಾಂಗ್ರೆಸ್ ಸೇರಿ ಎಲ್ಲಾ ಮೈತ್ರಿ ಪಕ್ಷಗಳೂ ಸರ್ಕಾರದ ಭಾಗವಾಗಬೇಕು ಎಂಬುದು ನಮ್ಮ ಆಶಯ” ಎಂದು ಅರ್ಜುನಾ ತಿಳಿಸಿದ್ದಾರೆ.
ಮೈತ್ರಿ ಪಕ್ಷಗಳ ಸಭೆ
ಈ ಕುರಿತು ಮೈತ್ರಿ ಪಕ್ಷಗಳು ಆಂತರಿಕ ಸಭೆ ನಡೆಸುತ್ತಿದ್ದು, ಶೀಘ್ರದಲ್ಲೇ ತಮ್ಮ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಲಿವೆ ಎಂದು ಅವರು ಹೇಳಿದರು. “ಒಳ್ಳೆಯ ಸುದ್ದಿ ಬರಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆಯೇ ಟಿವಿಕೆ ಸರ್ಕಾರವು ಮೈತ್ರಿ ಪಕ್ಷಗಳನ್ನು ನೇರವಾಗಿ ಆಡಳಿತದಲ್ಲಿ ಪಾಲುಗಾರರನ್ನಾಗಿಸಲು ಮುಂದಾಗಿರುವುದು ತಮಿಳುನಾಡು ರಾಜಕೀಯದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿದೆ.
-
ದೇಶ16 hours agoBreaking News : GBA Election ವಿಳಂಬಕ್ಕೆ ಬ್ರೇಕ್: ಆಗಸ್ಟ್ ಒಳಗೆ ಮುಗಿಸಲು ಕೋರ್ಟ್ ಆದೇಶ
-
ಅಪರಾಧ15 hours agoಅಡಗೂರು ವಿಶ್ವನಾಥ್ ವಿರುದ್ಧ ಎಫ್ಐಆರ್: ಸಾಲದ ಹಣ ಕೇಳಲು ಹೋದ ವ್ಯಕ್ತಿಗೆ ಹಲ್ಲೆ ಆರೋಪ
-
ದೇಶ14 hours agoTVK ಸರ್ಕಾರದಿಂದ ಮೈತ್ರಿ ಪಕ್ಷಗಳಿಗೆ ಸಚಿವ ಸಂಪುಟ ಸೇರ್ಪಡೆ ಆಹ್ವಾನ
-
Blog18 hours agoದರ್ಶನ್ ಆತ್ಮಹತ್ಯೆ ಯತ್ನ ವದಂತಿಗೆ ಬ್ರೇಕ್: ಡಿಜಿಪಿ ಸ್ಪಷ್ಟನೆ
-
ದೇಶ15 hours agoಟಿಎಂಸಿ ಸಂಸದೆ ಸಯೋನಿ ಘೋಷ್ಗೆ ಜೀವ ಬೆದರಿಕೆ?: ಬಿಜೆಪಿ ನಾಯಕರ ಹೇಳಿಕೆ ವಿವಾದ
-
ಕ್ರೀಡೆ13 hours agoಟೆಸ್ಟ್ ನಾಯಕತ್ವ ಬಿಟ್ಟ ಬಳಿಕ ‘ಸಂಪೂರ್ಣ ಖಾಲಿಯಾಗಿದ್ದೆ’: ವಿರಾಟ್ ಕೊಹ್ಲಿ ಭಾವುಕ ಮಾತು
-
Blog18 hours agoರೋಮ್ನಲ್ಲಿ ಪ್ರಧಾನಿ ಮೋದಿ–ಮೆಲೋನಿ ಭೇಟಿ ವೈರಲ್: ಕೊಲೊಸಿಯಂನಲ್ಲಿ ಸೆಲ್ಫಿ ಸದ್ದು
-
ದೇಶ14 hours agoಭಾರತೀಯ ಇನ್ಫ್ಲುಯೆನ್ಸರ್ಗಳಿಗೆ ನೇಪಾಳ ರಾಯಭಾರ ಕಚೇರಿಯಿಂದ ವಿಶೇಷ ಅವಕಾಶ
