Connect with us

ದೇಶ

ಭಾರತವನ್ನು ವಿಶ್ವಗುರುವನ್ನಾಗಿಸಲು ಕಾಲಾವಕಾಶ ಬೇಕಿದೆ – ಶೋಭಾ ಕರಂದ್ಲಾಜೆ

2024ರ ಲೋಕಾಸಭಾ ಚುನಾವಣೆ ಅಭ್ಯರ್ಥಿಯ ಚುನಾವಣೆ ಅಲ್ಲ ಈ ಚುನಾವಣೆ ನಮ್ಮ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ಚುನಾವಣೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಹೇಳಿದರು. ಯಶವಂತಪುರ ಕ್ಷೇತ್ರದ ವೈಟ್ ಪ್ಯಾಲೆಸ್‌ನಲ್ಲಿ 427 ವೈದ್ಯರು, ಎಂಜಿನಿಯರ್, ಲಾಯರ್, ಮಾಜಿ ಸೈನಿಕರು ಇನ್ನೂ ಹಲವಾರು ಪ್ರಬದ್ದರು ಒಳಗೊಂಡಂಥಾ ಸಭೆಯಲ್ಲಿ ಅಭ್ಯರ್ಥಿ ಶೋಭ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತ 2014ರಲ್ಲಿ ಮೊದಲ ಬಾರಿ ಮೋದಿ ಅವರು ಪ್ರಧಾನಿ ಮಂತ್ರಿಯಾಗಿ ತಮ್ಮ ಮೊದಲ ಸಭೆಯಲ್ಲಿ ಭಾರತವನ್ನು ವಿಶ್ವ ಗುರುವನ್ನು ಮಾಡುವ ಸಂಕಲ್ಪ ನನ್ನದು, ಭಾರತವನ್ನು ವಿಶ್ವಗುರು ಮಾಡಲು ನನಗೆ 10 ವರ್ಷಗಳಕ್ಕಿಂತ ಹೆಚ್ಚು ಸಮಯ ಬೇಕು ಎಂದೇ ಅವರು ಸಭೆಯಲ್ಲಿ ಅವರು ತಿಳಿಸಿದ್ದರು. ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ದೇಶದ ಮಾತುಗಳನ್ನು ಪರಿಗಣಿಸಲು ಯಾವ ದೇಶವು ಮುಂದಾಗುತ್ತಿರಲಿಲ್ಲ. ಇಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ದೇಶದ ಮಾತುಗಳನ್ನು ಮೊದಲು ಪರಿಗಣಿಸಲು ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಹಾಗೂ ಅವರ ಜೊತೆ ನಮ್ಮ ಪ್ರಧಾನಿ ಬೆಳಸಿಕೊಂಡಿರುವ ಸಂಬಂಧ ಎಂದರು. ಉಕ್ರೇನ್ ಯುದ್ಧದಲ್ಲಿ ನಮ್ಮ ಭಾರತ ದೇಶದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು ಸುಮಾರು ನಾಲ್ಕು ಗಂಟೆಗಳ ಕಾಲ ಯುದ್ಧವನ್ನು ನಿಲ್ಲಿಸಿ ನಮ್ಮ ಭಾರತ ದೇಶದ ವಿದ್ಯಾರ್ಥಿಗಳನ್ನು ನಾವು ಕರಕೊಂಡು ಬರಬೇಕು ಎಂದು ಇಬ್ಬರ ಪ್ರಧಾನಿಗಳ ಜೊತೆ ಮಾತನಾಡಿ ಯುದ್ಧ ನಿಲ್ಲಿಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರತರಲಾಯಿತು. ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳ ಜೊತೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ವಿದ್ಯಾರ್ಥಿಗಳು ಕೂಡ ನಮ್ಮ ಭಾರತದ ದ್ವಜವನ್ನು ಹಿಡಿದು ಬಸ್ಸಿನಲ್ಲಿ ಭಾರತ್ ಮಾತಾ ಕೀ ಜೈ ಎಂದು ಬಂದರು. ಇಂತಹ ಶಕ್ತಿ ಇಂದು ನಮ್ಮ ಭಾರತ ದೇಶ ಹಾಗೂ ಪ್ರಧಾನಿ ಅವರದ್ದು ಎಂದರು. ಭ್ರಷ್ಟರಹಿತ ಸರ್ಕಾರವನ್ನು ನೀಡಿ ಅವರ ಅಡಳಿತದ ಶಕ್ತಿಯನ್ನು ಪ್ರತಿಯೊಬ್ಬರಿಗೆ ತಿಳಿಸಿದ್ದಾರೆ, ಸುಮಾರು ವರ್ಷಗಳ ಹಿಂದೆ ಜಾಗತಿಕ ಮಟ್ಟದ ಸಭೆಗಳಲ್ಲಿ ಭಾರತ ದೇಶ ಮಾತನಾಡಿದರೆ ಬೇರೆ ದೇಶಗಳು ಇವರು ಅನುದಾನ ಕೇಳುತ್ತಾರೆ ಎಂದು ನಮ್ಮ ದೇಶದ ಪ್ರಧಾನಿಗಳನ್ನು ಅವಮಾನ ಮಾಡುತ್ತಿದ್ದರು. ಈ ಅವಮಾನಗಳು ನಮ್ಮ ಪ್ರಧಾನಿಗೆ ಮಾಡಿದ್ದು ಅಲ್ಲ ನಮ್ಮ ದೇಶಕ್ಕೆ ಮಾಡಿರುವುದು. ಅದರೆ ಈಗ ಪರಿಸ್ಧಿತಿ ಬದಲಾಗಿದೆ ಅದಕ್ಕೆ ಮುಖ್ಯ ಕಾರಣ ಪ್ರಧಾನಿ ಮೋದಿ ಅವರ ತೆಗೆದುಕೊಂಡ ನಿರ್ಧಾರಗಳು ಎಂದರು. ವಿದೇಶದಲ್ಲಿ ಇರುವ ಭಾರತೀಯರನ್ನು ಕೇಳಿ ಅವರು ಇರುವ ದೇಶದಲ್ಲಿ ಇಂದು ಭಾರತೀಯರನ್ನು ಹೇಗೆ ನೋಡುತ್ತಾರೆ ಎಂದು, ಇಂದು ನಾವು ಬಹು ಹೆಮ್ಮೆಯಿಂದ ಈ ವೇದಿಕೆಯಲ್ಲಿ ಹೇಳುತ್ತೇನೆ ಕೇಂದ್ರ ಸರ್ಕಾರ ಇಂದು ನಮ್ಮ ದೇಶದ ಗೋದಿ ಹಾಗೂ ರಾಗಿಯನ್ನು ಇಡೀ ವಿಶ್ವಕ್ಕೆ ಕಳುಹಿಸುತ್ತಿದ್ದೇವೆ. ನಮ್ಮ ದೇಶದ ಪ್ರಾಚೀನ ಆಯುರ್ವೇದದಲ್ಲಿ ಇರುವ ಪ್ರಯೋಜನಗಳನ್ನು ವಿಶ್ವಕ್ಕೆ ಪರಿಚಯ ಮಾಡಿದ್ದೇವೆ. ಯೋಗಭ್ಯಾಸದಲ್ಲಿ ಇರುವ ಲಾಭಗಳನ್ನು ವಿಶ್ವಕ್ಕೆ ಯೋಗ ಡೇ ಮೂಲಕ ತಿಳಿಸಿ ಇಂದು ಅನೇಕ ದೇಶದಲ್ಲಿ ಯೋಗಭ್ಯಾಸವನ್ನು ಮಾಡುತ್ತಿದ್ದಾರೆ. ದೇಶದ ರಕ್ಷಣೆಯಲ್ಲಿ ರಾಜಿಯಿಲ್ಲ ಎಂದು ಭಾರತದಲ್ಲೇ ನಾವು ಬುಲೆಟ್ಸ್, ರೈಫಲ್, ಹಾಗೂ ಹಲವಾರು ಯುದ್ಧಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಭಾರತದಲ್ಲೇ ಉತ್ಪನ್ನ ಮಾಡಿ ವಿದೇಶಗಳಿಗೆ ಮಾರಾಟ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ದೇಶದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ರಾಮ ಮಂದಿರ ನಿರ್ಮಾಣದ ಕೇಸ್ ಕೋರ್ಟ್ನಲ್ಲಿ ಇತ್ತು. ಪ್ರಧಾನಿ ಮೋದಿ ಅವರು ಸರಿಯಾದ ದಾಖಲೆಗಳನ್ನು ಸರ್ಕಾರದಿಂದ ನೀಡಿ ರಾಮ ಮಂದಿರ ನಿರ್ಮಾಣದ ಕೆಲಸಗಳನ್ನು ಯಾವುದೇ ರಕ್ತಪಾತವಿಲ್ಲದೆ ಪೂರ್ಣಗೊಳಿಸಿದರು ಎಂದರು. ಕಾರ್ಯಕ್ರಮದಲ್ಲಿ ನಗರಮಂಡಲಾಧ್ಯಕ್ಷ ಅನಿಲ್ ಚಳಗೇರಿ, ಮಾಜಿ ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ, ರ.ಅಂಜನಪ್ಪ, ರಾಜ್ಯ ಒಬಿಸಿ ಸದಸ್ಯ ಆರ್ ಪಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಕೆಂಗೇರಿ ವಾರ್ಡ್ ಅಧ್ಯಕ್ಷ ಸಂತೋಷ್, ಬಿಜೆಪಿ ಮುಖಂಡರುಗಳಾದ ನವೀನ್, ರಾಮಣ್ಣ,ಜಂಗಾಮ ರಮೇಶ್, ಬಾಲಾಜಿ ಹಾಗೂ ಹಲವಾರು ಸ್ಧಳೀಯ ಮುಖಂಡರುಗಳು ಉಪಸ್ಥಿತರಿದ್ದರು.

ದೇಶ

ಮಹಾದೇವಪುರದಲ್ಲಿ ಮತಗಳ್ಳತನದ ಬೃಹತ್ ಆರೋಪ: ರಾಹುಲ್ ಗಾಂಧಿಯಿಂದ ದಾಖಲೆ ಸಮೇತ ಸ್ಫೋಟಕ ವಿವರಣೆ

ಬೆಂಗಳೂರು, ಆಗಸ್ಟ್ 7 – ಲೋಕಸಭಾ ಚುನಾವಣೆಯ ವೇಳೆ ಮಹಾದೇವಪುರದಲ್ಲಿ ಭಾರೀ ಮತಗಳ್ಳತನ ನಡೆದಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಾಡಿದ್ರು. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸ್ಫೋಟಕ ದಾಖಲೆಗಳೊಂದಿಗೆ ಈ ಆರೋಪ ಮಾಡಿದ್ದಾರೆ.

16 ಸ್ಥಾನ ಗೆದ್ದ ಬಿಜೆಪಿಗೆ 1.14 ಲಕ್ಷ ಮತಗಳ ಮುನ್ನಡೆ ಹೇಗೆ?

ರಾಹುಲ್ ಗಾಂಧಿ ಪ್ರಕಾರ, ಮಹಾದೇವಪುರ ಕ್ಷೇತ್ರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2,29,632 ಮತಗಳು, ಕಾಂಗ್ರೆಸ್ 1,15,586 ಮತಗಳನ್ನು ಪಡೆದಿದ್ದು, ಬಿಜೆಪಿಗೆ 1,14,046 ಮತಗಳ ಮುನ್ನಡೆ ದೊರೆತಿದೆ. ಆದರೆ ಈ ಅಂತರ ಅನುಮಾನಾಸ್ಪದವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೀಗ ಬಹಿರಂಗಗೊಂಡ ಅಕ್ರಮ ವಿವರಗಳು:

  • 11,965 ನಕಲಿ ಮತದಾರರು
  • 40,009 ನಕಲಿ ವಿಳಾಸದ ಮತಗಳು
  • 10,452 ಒಂದೇ ವಿಳಾಸದಲ್ಲಿ ಹಲವಾರು ಮತದಾರರು
  • 4,132 ಫೋಟೋ ಇಲ್ಲದ ಮತಗಳು
  • 33,692 ಫಾರಂ 6 ದುರ್ಬಳಕೆ

ಇವುಗಳನ್ನು ಉಲ್ಲೇಖಿಸಿ ಅವರು ಚುನಾವಣಾ ಆಯೋಗದ ನಿಷ್ಕ್ರಿಯತೆಯನ್ನು ತೀವ್ರವಾಗಿ ಟೀಕಿಸಿದರು.

ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಸೇರಿ ಮತಗಟ್ಟೆಗಳಲ್ಲಿ ಅವ್ಯವಸ್ಥೆ?

ಕೇವಲ ಕರ್ನಾಟಕವಲ್ಲದೆ, ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿಯೂ ಮತಗಳ್ಳತನ ನಡೆಯುತ್ತಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಅಕ್ರಮವಾಗಿ ಜನಸಂಖ್ಯೆಗಿಂತ ಹೆಚ್ಚು ಮತದಾರರು ಸೇರ್ಪಡೆಯಾಗಿರುವುದು ಗಮನ ಸೆಳೆಯುವ ವಿಷಯ ಎಂದು ಹೇಳಿದರು.

ಚುನಾವಣಾ ಆಯೋಗ ನಿರ್ಲಕ್ಷ್ಯ ಆರೋಪ

ಈ ಗಂಭೀರ ಆರೋಪಗಳ ಬಗ್ಗೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಇಲ್ಲದಿರುವುದನ್ನು ಅವರು ಖಂಡಿಸಿದ್ದಾರೆ. ಅಲ್ಲದೆ, ಮತದಾರರ ಪಟ್ಟಿ ನೀಡಲು ನಿರಾಕರಿಸಿರುವುದು, ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿರುವುದು, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಘಟನೆಗಳು ಎಂದು ಹೇಳಿದರು.

Continue Reading

ದೇಶ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರ ಅಂಜನಾದ್ರಿ ಬೆಟ್ಟ ಭೇಟಿ – ಆಂಜನೇಯ ದರ್ಶನ ಪಡೆದು ವಿಶೇಷ ಪೂಜೆ

ಕೊಪ್ಪಳ, ಆಗಸ್ಟ್ 7 – ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಕುಟುಂಬದ ಸದಸ್ಯರೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ವಾಯುಪುತ್ರ ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲ್ಪಡುವ ಈ ಪವಿತ್ರ ಸ್ಥಳದಲ್ಲಿ ಅವರು 575 ಮೆಟ್ಟಿಲುಗಳನ್ನು 30 ನಿಮಿಷಗಳಲ್ಲಿ ಏರಿ ಭಕ್ತಿಯಿಂದ ದರ್ಶನ ಪಡೆದರು.


🌄 ಅಂಜನಾದ್ರಿ ಬೆಟ್ಟ – ಭಕ್ತರ ಆಸ್ಥೆಯ ಗಗನಚುಂಬಿ ಸಂಕೇತ

ಅಂಜನಾದ್ರಿ ಬೆಟ್ಟವು ಹನುಮಂತನ ಜನ್ಮಸ್ಥಳ ಎಂಬ ನಂಬಿಕೆಯಿಂದ ಹೆಸರಾಗಿದ್ದು, ಪ್ರತಿದಿನ ನೂರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಶ್ರೀ ರಾಮ, ಸೀತಾ ದೇವಿಗಳ ಮೂರ್ತಿಗಳೂ ಇಲ್ಲಿ ಪೂಜಿಸಲ್ಪಡುತ್ತವೆ. ಬೆಟ್ಟದ ಶಿಖರದಿಂದ ತುಂಗಭದ್ರಾ ನದಿಯ ನೋಟ, ಸೂರ್ಯಾಸ್ತದ ಸೌಂದರ್ಯ ಮತ್ತು ಹಂಪಿಯ ಇತಿಹಾಸದ ಅವಶೇಷಗಳು ಮನ ಮೋಹಿಸುತ್ತವೆ.


🛕 ಅಂಜನಾದ್ರಿ ಬೆಟ್ಟದ ಪ್ರಮುಖ ಅಂಶಗಳು:

  • 575 ಮೆಟ್ಟಿಲುಗಳನ್ನು ಏರಿ ಸ್ವಾಮಿದರ್ಶನ
  • ರಾಜ್ಯಪಾಲರಿಗೆ ಜಿಲ್ಲಾಡಳಿತದಿಂದ ಸನ್ಮಾನ
  • ದೇವಾಲಯದ ಆಂತರಿಕ ಶ್ರದ್ಧಾ ಭರವಸೆಯ ಸ್ಥಳ
  • ಹಂಪಿಯಿಂದ ನದಿ ದಾಟಿ ಬೋಟ್ ಮೂಲಕ ಪ್ರವೇಶದ ಅನುಕೂಲ
  • ರೈಲು ಮಾರ್ಗ: ಕೊಪ್ಪಳ ಅಥವಾ ಮುನಿರಾಬಾದ್‌ ಮೂಲಕ
  • ರಸ್ತೆ ಸಂಪರ್ಕ ಉತ್ತಮ, ವಿಮಾನ ಸಂಪರ್ಕ ಇಲ್ಲ

📜 ಅಂಜನಾದ್ರಿ ಅಭಿವೃದ್ಧಿಯ ಬಗ್ಗೆ ಸರ್ಕಾರದ ದೃಷ್ಟಿಕೋನ

ಹನುಮ ಮಾಲೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಾಗ್ದಾನ ನೀಡಿದ್ದರು. ರಾಜ್ಯ ಸರಕಾರ ಕೂಡ ಈ ಸ್ಥಳವೇ ಆಂಜನೇಯನ ಜನ್ಮಭೂಮಿ ಎಂದು ಧರ್ಮಗ್ರಂಥಗಳ ಆಧಾರದ ಮೇಲೆ ದೃಢಪಡಿಸಿದೆ.

Continue Reading

ದೇಶ

ಅಮೆರಿಕದ ಒತ್ತಡಕ್ಕೂ headstrong ಭಾರತದ ನಿಲುಹೊರೆ: ರೈತ ಮತ್ತು ಮೀನುಗಾರರ ಹಿತಾಸಕ್ತಿಗೆ ಪ್ರಧಾನಿಯರಿಂದ ಖಡಕ್ ಸಂದೇಶ

ನವದೆಹಲಿ, ಆಗಸ್ಟ್ 7 – ರೈತರು ಹಾಗೂ ಮೀನುಗಾರರ (Farmers & Fishermen) ಹಿತಾಸಕ್ತಿಗೆ ವಿರುದ್ಧವಾಗುವ ಯಾವುದೇ ಒಪ್ಪಂದವನ್ನು ಭಾರತ ಎಂದಿಗೂ ಮಾಡದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ ಬೆನ್ನಲ್ಲೇ ಮೋದಿ ಈ ಹೇಳಿಕೆಯಿಂದ ಅಮೆರಿಕಕ್ಕೆ ತೀಕ್ಷ್ಣ ಸಂದೇಶ ನೀಡಿದ್ದಾರೆ.

ರೈತರಿಗೆ ಬೆಂಬಲವೇ ಪ್ರಮುಖ ಆದ್ಯತೆ
ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, “ರೈತರು, ಮೀನುಗಾರರು, ಹೈನುಗಾರರು ನಮ್ಮ ಆರ್ಥಿಕ ವ್ಯವಸ್ಥೆಯ ಪ್ರಮುಖ ಅಂಶಗಳು. ಅವರ ಹಿತಾಸಕ್ತಿಗೆ ಭಾರತ ಯಾವತ್ತೂ ರಾಜಿ ಆಗುವುದಿಲ್ಲ” ಎಂದರು.

ಸಾಂಸ್ಕೃತಿಕ ನಂಬಿಕೆಗೆ ಧಕ್ಕೆಯಾಗದಂತೆ ನಿರ್ಧಾರ
ಅಮೆರಿಕ ಭಾರತ ಮಾರುಕಟ್ಟೆಗೆ ಡೈರಿ ಉತ್ಪನ್ನ ಪ್ರವೇಶಕ್ಕೆ ಒತ್ತಡ ಹಾಕುತ್ತಿದ್ದರೂ ಭಾರತ ಅದನ್ನು ನಿರಾಕರಿಸಿದೆ. ಕಾರಣ, ಅಮೆರಿಕದಲ್ಲಿ ಜಾನುವಾರುಗಳಿಗೆ ಮಾಂಸಾಂಶ ಆಹಾರ ನೀಡಲಾಗುತ್ತದೆ. ಹೀಗೆ ಪಶು ಉತ್ಪನ್ನಗಳಿಂದ ಉತ್ಪತ್ತಿಯಾದ ಹಾಲು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ವಿರುದ್ಧವಾಗಿರುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಅಮೆರಿಕದ ಸುಂಕ ಸಮರ – ಭಾರತದ ತೀವ್ರ ಪ್ರತಿಕ್ರಿಯೆ
ಟ್ರಂಪ್ ಸರಕಾರ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿರುದ್ಧ ಸುಂಕ ಸಮರ ಘೋಷಿಸಿದ್ದು, ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದೆ. ಆದರೆ ಭಾರತ ಕೃಷಿ, ಹೈನು ಉತ್ಪನ್ನ, ಮೀನುಗಾರಿಕೆ ಕ್ಷೇತ್ರಗಳ ಮೇಲೆ ಸಂಬಂಧಿತ ಮೌಲ್ಯಗಳನ್ನು ಬಲಪಡಿಸಿ ಅಮೆರಿಕದ ಒತ್ತಡಕ್ಕೆ ಕೀಳ್ಮಣೆ ನೀಡಿಲ್ಲ.

ಪ್ರಧಾನಿಯ ಮಾತುಗಳಲ್ಲಿ ಸ್ಪಷ್ಟ ಸಂದೇಶ:

“ಭಾರತದ ರೈತ, ಮೀನುಗಾರ ಮತ್ತು ಹೈನುಗಾರರು ನಮ್ಮ ಅಸ್ಥಿ-ಮಜ್ಜೆಯಂತಹವರು. ಅವರ ಹಿತದೃಷ್ಟಿಗೆ ಯಾವುದೇ ಬೆಲೆ ಕಟ್ಟಲು ನಾನು ಸಿದ್ಧ” ಎಂದು ಮೋದಿ ಹೇಳಿದ್ದಾರೆ.

Continue Reading

Trending