ದೇಶ
ತಿಂಗಳ ಕೊನೆಗೆ ಬರಿದಾಗಲಿದೆ ರಾಜ್ಯದ ಎಲ್ಲಾ ಡ್ಯಾಂಗಳು ಮಳೆ ಬರದಿದ್ರೆ ದೇವ್ರೇ ಗತಿ!

ಬೆಂಗಳೂರು: ಮಳೆಯ ಕೊರತೆ ಬಿಸಿಲಿನ ಪ್ರಮಾಣ ಹೆಚ್ಚಳದಿಂದಾಗಿ ರಾಜ್ಯದಲ್ಲಿನ ಜಲಾಶಯಗಳು ನೀರಿನ ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು ಕೇವಲ ಶೇಕಡ 10.83ರಷ್ಟು ಮಾತ್ರ ನೀರು ಉಳಿದಿದೆ,
ರಾಜ್ಯದಲ್ಲಿನ 22 ಜಲಾಶಯಗಳಲ್ಲಿ ಸದ್ಯ ಡೇಟ್ ಸ್ಟೋರೇಜ್ ಹೊರತುಪಡಿಸಿ 57.62 ಟಿಎಂಸಿ ನೀರು ಮಾತ್ರ ಉಳಿದಿದೆ, ಸಕಾಲದಲ್ಲಿ ಮಳೆಯಾಗದಿದ್ದರೆ ರಾಜ್ಯದ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ,
ಕೃಷ್ಣ ಕೊಳ್ಳದ ಜಲಾಶಯಗಳಲ್ಲಿಯೇ 47.19 ಟಿಎಂಸಿ ನೀರು ಶೇಖರಣೆಯಾಗಿದೆ, ಅದರೆ ಬೆಂಗಳೂರು ಸೇರಿದಂತೆ ನಾಲ್ಕೆöÊದು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಮಾತ್ರ 10.43 ಟಿಎಂಸಿ ನೀರು ಶೇಖರಣೆಯಾಗಿದ್ದು ಮುಂಗಾರು ಮಳೆ ಆರಂಭವಾಗವವರೆಗೆ ಆ ನೀರಿನಲ್ಲಿಯೇ ಜಿಲ್ಲೆಗಳಿಗೆ ನೀರು ಪೂರೈಸಬೇಕಾಗುತ್ತದೆ,
ಒಂದು ವೇಳೆ ಮಳೆಯಾಗದಿದ್ದರೆ ತಿಂಗಳ ಕೊನೆಯಲ್ಲಿ ಡ್ಯಾಮ್ಗಳಲ್ಲಿ ಬರಿದಾಗಲಿದ್ದು ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಲಿದೆ,