ಆರೋಗ್ಯ
Skipping Health Benefits : ಅಧಿಕ ತೂಕ ಹೊಂದಿದ್ದವರು ತೂಕ ಇಳಿಸಿಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಇಂತವರಿಗೆ ಸ್ಕಿಪ್ಪಿಂಗ್ ಉತ್ತಮ ಮಾರ್ಗವಾಗಿದೆ. ನಿತ್ಯ ಸ್ಕಿಪ್ಪಿಂಗ್ ವ್ಯಾಯಾಮ ಮಾಡುವುದರಿಂದ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣಾ ಬನ್ನಿ..
Skipping Health Benefits : ಅನೇಕರು ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆದಿಂದ ಬಳಲುತ್ತಿದ್ದಾರೆ.
ತೂಕ ಇಳಿಸಿಕೊಳ್ಳಲು ಹಲವು ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ, ತೂಕವನ್ನು ವೇಗವಾಗಿ ಇಳಿಸಲು ಉತ್ತಮ ವ್ಯಾಯಾಮ ಯಾವುದು ಎಂಬುದು ಅನೇಕರಿಗೆ ತಿಳಿದಿಲ್ಲ. ಪ್ರತಿಯೊಂದು ರೀತಿಯ ವ್ಯಾಯಾಮವು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ‘ಸ್ಕಿಪ್ಪಿಂಗ್’ ಎಂಬುದು ದೇಹದ ಎಲ್ಲ ಪ್ರಕಾರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ವ್ಯಾಯಾಮವಾಗಿದೆ.
ಕೆಲವರು ತೂಕವನ್ನು ಕಳೆದುಕೊಳ್ಳುವ ಸಂಬಂಧ ವ್ಯಾಯಾಮದ ಜೊತೆಗೆ ಡಯಟ್ ಪದ್ಧತಿಯನ್ನು ಅನುಸರಿಸುತ್ತಾರೆ. ಸ್ಕಿಪ್ಪಿಂಗ್ ಎಲ್ಲರೂ ಅನುಸರಿಸುವ ವ್ಯಾಯಾಮದ ಅತ್ಯುತ್ತಮ ರೂಪವಾಗಿದೆ. ಸ್ಕಿಪ್ಪಿಂಗ್ಗಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಜಿಮ್ಗೆ ಹೋಗುವವರಿಗೆ ಇದು ಬಹಳ ಉಪಯುಕ್ತ. ಈ ವ್ಯಾಯಾಮಕ್ಕೆ ಕೇವಲ ಒಂದು ಹಗ್ಗ ಮತ್ತು ಒಂದು ಜೋಡಿ ಶೂ ಇದ್ರೆ ಸಾಕು. ಆದರೆ ನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ನಮ್ಮ ದೇಹದ ಅಂಗಾಂಗಗಳ ಕಾರ್ಯನಿರ್ವಹಣೆ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.
ಖಂಡಗಳ ಶಕ್ತಿ ಹೆಚ್ಚಳ.. (Skipping Muscle Benefits): ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹಕ್ಕೆ ಒಳ್ಳೆಯದು. ಇದರಿಂದಾಗಿ ದೇಹದಲ್ಲಿ ಕ್ಯಾಲೊರಿಗಳನ್ನು ಬರ್ನ್ ಆಗುತ್ತವೆ. ಅಷ್ಟೇ ಅಲ್ಲ ಖಂಡಗಳು ಅಥವಾ ಸ್ನಾಯುಗಳು ಬಲಗೊಳ್ಳುತ್ತವೆ. ಕೈಗಳು ಮತ್ತು ಕಾಲುಗಳು ಜೊತೆಗೆ ವರ್ಕೌಟ್ ಆಗುವುದರಿಂದ ದೇಹ ಸಹ ಫಿಟ್ ಆಗಿರುತ್ತದೆ.
ಹಾರ್ಟ್ ಫಿಟ್ (Skipping Health Benefits..) : ಸ್ಕಿಪ್ಪಿಂಗ್ನಿಂದ ದೇಹದ ತೂಕ ಕಡಿಮೆ ಆಗುವುದರ ಜೊತೆ ಹೃದಯ ಸ್ನಾಯುಗಳನ್ನು ಬಲಗೊಳ್ಳುತ್ತವೆ. ಸ್ಕಿಪ್ಪಿಂಗ್ ವೇಳೆ ನಾವು ಜಂಪ್ ಮಾಡುವುದರಿಂದ ಹೃದಯ ಬಡಿತ ಮತ್ತು ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೃದಯ ಮತ್ತು ಶ್ವಾಸಕೋಶದ ಕಾರ್ಯ ಸುಧಾರಣೆಗೊಳ್ಳುತ್ತದೆ. ಅಷ್ಟೇ ಅಲ್ಲ ದೇಹದ ಎಲ್ಲ ಭಾಗಗಳಿಗೂ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಳವಾಗಿ ಮತ್ತು ಅಡತಡೆವಿಲ್ಲದೆ ಸರಾಗವಾಗಿ ನಡೆಯುತ್ತದೆ.
ಬಾಡಿ ಬ್ಯಾಲೆನ್ಸ್ ಹೆಚ್ಚು ಮಾಡಲು ಸಹಾಯ (Body Balance rise from Skipping) : ಸ್ಕಿಪ್ಪಿಂಗ್ ದೇಹದ ಎಲ್ಲ ಭಾಗಗಳು ಚಲಿಸುವಂತಾಗುತ್ತದೆ. ಇದು ಕಾಲುಗಳು, ತೋಳುಗಳು ಮತ್ತು ಇತರ ಅಂಗಗಳ ನಡುವಿನ ಸಮನ್ವಯವನ್ನು ಸುಧಾರಿಸುತ್ತದೆ. ಇದು ದೇಹದ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ.
ತೂಕ ಇಳಿಕೆ.. (Skipping Weight Loss): ಸ್ಕಿಪ್ಪಿಂಗ್ ಮಾಡುವುದರಿಂದ ದೇಹದ ಭಾಗಗಳ ಚಲನವಲನಗಳು ವೇಗ ಪಡೆಯುತ್ತವೆ. ಪರಿಣಾಮ ನಮ್ಮ ದೇಹದಲ್ಲಿರುವ ಹೆಚ್ಚು ಕ್ಯಾಲೊರಿಗಳನ್ನು ಸುಟ್ಟು ಹಾಕುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆ ಆಗುತ್ತದೆ. ಸ್ಕಿಪ್ಪಿಂಗ್ ಮಾಡುವುದರಿಂದ ಭುಜಗಳ ಮೇಲೆ ಮತ್ತು ಮುಂಡದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ದೇಹದ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬನ್ನು ಕರಿಗಿಸಿ ಆರೋಗ್ಯವಂತನಾಗಿ ಮಾಡುತ್ತದೆ.
ಒತ್ತಡದಿಂದ ರಿಲೀಫ್.. (Stress Free From Skipping) : ಯಾವುದೇ ರೀತಿಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಸ್ಕಿಪ್ಪಿಂಗ್ ಮಾಡುವ ಮೂಲಕ ಹೆಚ್ಚು ಬಿಡುಗಡೆ ಮಾಡುತ್ತದೆ. ಇವುಗಳ ಬಿಡುಗಡೆಯಿಂದ ನಮ್ಮ Stress ಅಥವಾ ಒತ್ತಡ ಕಡಿಮೆಯಾಗುತ್ತದೆ.
ಮೂಳೆ ಗಟ್ಟಿಯಾಗುವುದು.. (Skipping For Bone Health): ಸ್ಕಿಪ್ಪಿಂಗ್ ಮಾಡವಾಗ ನಾವು ಮೇಲಕ್ಕೆ ಮತ್ತು ಕೆಳಕ್ಕೆ ಜಿಗಿಯುತ್ತೇವೆ. ಇದರಿಂದಾಗಿ ನಮ್ಮ ಮೂಳೆಗಳ ಮೇಲೆ ಒತ್ತಡ ಬೀಳುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ಮೂಳೆಗಳನ್ನು ಗಟ್ಟಿಗೊಳಿಸುತ್ತವೆ. ಒಟ್ನಲ್ಲಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹಕ್ಕೆ ಹೆಚ್ಚು ಅನುಕೂಲವಾಗಿದೆ. ಆದ್ರೆ ಸ್ಕಿಪ್ಪಿಂಗ್ ಮಾಡುವಾಗ ಎಚ್ಚರ ವಹಿಸುವುದು ಸೂಕ್ತ.. ಸ್ವಲ್ಪ ಎಡವಿದರೂ ಕಾಲು ಮುರಿತಗೊಳ್ಳುವುದು. ಹೀಗಾಗಿ ಸ್ಕಿಪ್ಪಿಂಗ್ ಮಾಡುವಾಗ ಎಚ್ಚರ ವಹಿಸುವುದು ಒಳ್ಳೆಯದು.
ಆರೋಗ್ಯ
10 ವರ್ಷಗಳ ಸಂಶೋಧನೆಗೆ ಫಲ! Wockhardt ಔಷಧಿಗೆ ಅಮೆರಿಕದ ಗ್ರೀನ್ ಸಿಗ್ನಲ್
ನವದೆಹಲಿ: ವಿಶ್ವದ ಔಷಧಾಲಯ (Pharmacy of the World) ಎಂದೇ ಗುರುತಿಸಿಕೊಂಡಿರುವ ಭಾರತವು ಇದೀಗ ಔಷಧ ಸಂಶೋಧನಾ ಕ್ಷೇತ್ರದಲ್ಲೂ ಹೊಸ ಇತಿಹಾಸ ನಿರ್ಮಿಸಿದೆ. ಮುಂಬೈ ಮೂಲದ Wockhardt ಅಭಿವೃದ್ಧಿಪಡಿಸಿರುವ ‘ಜೈನಿಚ್’ (Zaynich) ಎಂಬ ಹೊಸ ಆ್ಯಂಟಿಬಯಾಟಿಕ್ಗೆ ಅಮೆರಿಕದ ಕಠಿಣ ಔಷಧ ನಿಯಂತ್ರಣ ಸಂಸ್ಥೆಯಾದ U.S. Food and Drug Administration ಅನುಮೋದನೆ ನೀಡಿದೆ.
ಭಾರತೀಯ ಔಷಧ ಕಂಪನಿಯೊಂದು ಸಂಪೂರ್ಣವಾಗಿ ಸಂಶೋಧಿಸಿ, ಅಭಿವೃದ್ಧಿಪಡಿಸಿ, ಜಾಗತಿಕ ಮಾರುಕಟ್ಟೆಗೆ ತಂದ ಮೊದಲ New Chemical Entity (NCE) ಎಂಬ ಹೆಗ್ಗಳಿಕೆಗೆ ಜೈನಿಚ್ ಪಾತ್ರವಾಗಿದೆ. ಈ ಔಷಧಿ ಔಷಧ ನಿರೋಧಕ (Drug-Resistant) ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಂಕೀರ್ಣ ಮೂತ್ರನಾಳದ ಸೋಂಕುಗಳ (UTI) ಚಿಕಿತ್ಸೆಗೆ ಬಳಸಲಾಗುತ್ತದೆ.
ಜೈನಿಚ್ ವಿಶೇಷತೆ ಏನು?
ಸಾಮಾನ್ಯ ಆ್ಯಂಟಿಬಯಾಟಿಕ್ಗಳಿಗಿಂತ ಭಿನ್ನವಾಗಿ, ಜೈನಿಚ್ ಎರಡು ಪ್ರಮುಖ ಅಂಶಗಳ ಸಂಯೋಜನೆಯಾಗಿದೆ. ಈಗಾಗಲೇ ಬಳಕೆಯಲ್ಲಿರುವ Cefepime ಮತ್ತು ವಾಕ್ಹಾರ್ಡ್ ಕಂಡುಹಿಡಿದ ಹೊಸ ಅಣು Zidebactam ಸೇರಿ ಬ್ಯಾಕ್ಟೀರಿಯಾದ ಜೀವಕೋಶ ಗೋಡೆಯ ನಿರ್ಮಾಣವನ್ನು ಎರಡು ಹಂತಗಳಲ್ಲಿ ತಡೆಯುತ್ತವೆ. ಇದರಿಂದ ಔಷಧ ನಿರೋಧಕ ಬ್ಯಾಕ್ಟೀರಿಯಾಗಳನ್ನೂ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಕ್ಲಿನಿಕಲ್ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು
530 ರೋಗಿಗಳ ಮೇಲೆ ನಡೆಸಿದ ಮೂರನೇ ಹಂತದ ಪರೀಕ್ಷೆಯಲ್ಲಿ ಜೈನಿಚ್ ಪಡೆದ ರೋಗಿಗಳಲ್ಲಿ 89% ಮಂದಿಗೆ ಸೋಂಕು ಸಂಪೂರ್ಣ ಗುಣಮುಖವಾಗಿದೆ. ಹೋಲಿಕೆಗೆ, ಸಾಮಾನ್ಯವಾಗಿ ಬಳಸುವ ಆ್ಯಂಟಿಬಯಾಟಿಕ್ Meropenem ಬಳಕೆ ಮಾಡಿದವರಲ್ಲಿ ಈ ಪ್ರಮಾಣ 68.4% ಮಾತ್ರ ದಾಖಲಾಗಿದೆ.
ಭಾರತಕ್ಕೆ ಏಕೆ ಮಹತ್ವ?
ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR) ವಿಶ್ವದ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ರತಿವರ್ಷ ಜಾಗತಿಕವಾಗಿ ಸುಮಾರು 12.7 ಲಕ್ಷ ಸಾವುಗಳಿಗೆ ಇದು ನೇರ ಕಾರಣವಾಗುತ್ತಿದೆ. ಭಾರತದಲ್ಲಿಯೂ ಲಕ್ಷಾಂತರ ಜನರು ಔಷಧ ನಿರೋಧಕ ಸೋಂಕುಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಜೈನಿಚ್ ಅಭಿವೃದ್ಧಿಯು ಭಾರತೀಯ ವಿಜ್ಞಾನಿಗಳ ಸಂಶೋಧನಾ ಸಾಮರ್ಥ್ಯಕ್ಕೆ ಜಾಗತಿಕ ಮಾನ್ಯತೆ ತಂದುಕೊಟ್ಟಿದ್ದು, ದೇಶವನ್ನು ಕೇವಲ ಜೆನೆರಿಕ್ ಔಷಧ ತಯಾರಕ ರಾಷ್ಟ್ರವಲ್ಲ, ಹೊಸ ಔಷಧ ಕಂಡುಹಿಡಿಯುವ ರಾಷ್ಟ್ರವಾಗಿಯೂ ಗುರುತಿಸುವಂತೆ ಮಾಡಿದೆ.
ಸವಾಲು ಇನ್ನೂ ಉಳಿದಿದೆ
ತಜ್ಞರ ಪ್ರಕಾರ, ಔಷಧ ಕಂಡುಹಿಡಿಯುವುದು ಒಂದು ಹಂತವಾದರೆ, ಅದು ಸಾಮಾನ್ಯ ರೋಗಿಗಳಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವುದು ಮತ್ತೊಂದು ದೊಡ್ಡ ಸವಾಲಾಗಿದೆ. ಜೈನಿಚ್ ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ರೋಗಿಗಳಿಗೆ ಶೀಘ್ರ ಲಭ್ಯವಾಗಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಆರೋಗ್ಯ
ಬೇಸಿಗೆಯ ಬಿಸಿಗೆ ರಾಮಬಾಣ: ಮೋದಿ ಮೆಚ್ಚಿದ ಸಾಂಪ್ರದಾಯಿಕ ಭಾರತೀಯ ಪಾನೀಯಗಳು
ಬೇಸಿಗೆಯ ಉರಿ ಬಿಸಿಯನ್ನು ಎದುರಿಸಲು ಭಾರತೀಯರು ತಲೆಮಾರುಗಳಿಂದ ಸಾಂಪ್ರದಾಯಿಕ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ Narendra Modi ಅವರು ದೇಶದ ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳ ಮಹತ್ವವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಇವು ಕೇವಲ ಪಾನೀಯಗಳಲ್ಲ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದು ಅವರು ಹೇಳಿದರು.
ಬೇಸಿಗೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಪಾನೀಯಗಳಲ್ಲಿ ಆಮ್ ಪನ್ನಾ ಪ್ರಮುಖವಾಗಿದೆ. ಕಚ್ಚಾ ಮಾವು, ಬೆಲ್ಲ ಅಥವಾ ಸಕ್ಕರೆ, ಪುದೀನ, ಜೀರಿಗೆ ಹಾಗೂ ಕಪ್ಪು ಉಪ್ಪಿನಿಂದ ತಯಾರಾಗುವ ಈ ಪಾನೀಯ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೈಡ್ರೇಶನ್ ಕಾಪಾಡಲು ಸಹಕಾರಿ.
ಲಸ್ಸಿ ಮತ್ತು ಮಜ್ಜಿಗೆ (ಚಾಸ್) ಕೂಡ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯಕರ ಪಾನೀಯಗಳಾಗಿವೆ. ಮೊಸರು ಆಧಾರಿತ ಈ ಪಾನೀಯಗಳು ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತವೆ.
ಪಶ್ಚಿಮ ಭಾರತದ ಕರಾವಳಿ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಕೋಕಂ ಶರಬತ್ ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ಅದರ ವಿಶಿಷ್ಟ ಸಿಹಿ-ಹುಳಿ ರುಚಿಗೆ ಹೆಸರುವಾಸಿಯಾಗಿದೆ.
ಬಿಹಾರ ಮತ್ತು ಜಾರ್ಖಂಡ್ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಸಟ್ಟು ಶರಬತ್ ಪ್ರೋಟೀನ್, ಫೈಬರ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ದಕ್ಷಿಣ ಭಾರತದ ಪಾನಕಂ ಮತ್ತು ನೀರ್ ಮೋರ್ ಕೂಡ ಬೇಸಿಗೆಯ ಜನಪ್ರಿಯ ಪಾನೀಯಗಳಾಗಿವೆ. ಬೆಲ್ಲ, ಶುಂಠಿ ಹಾಗೂ ನಿಂಬೆರಸದಿಂದ ತಯಾರಾಗುವ ಪಾನಕಂ ಶಕ್ತಿದಾಯಕವಾಗಿದ್ದರೆ, ಮಜ್ಜಿಗೆ ಆಧಾರಿತ ನೀರ್ ಮೋರ್ ಜೀರ್ಣಕ್ರಿಯೆಗೆ ನೆರವಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಈ ಸಾಂಪ್ರದಾಯಿಕ ಪಾನೀಯಗಳು ದೇಹದಲ್ಲಿ ನೀರಿನ ಪ್ರಮಾಣ ಕಾಪಾಡಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಬೇಸಿಗೆಯ ಉಷ್ಣತೆಯಿಂದ ರಕ್ಷಿಸಲು ಸಹಕಾರಿ. ಆದ್ದರಿಂದ ಮಾರುಕಟ್ಟೆಯ ಕೃತಕ ಪಾನೀಯಗಳಿಗಿಂತ ದೇಶಿ ಪಾನೀಯಗಳೇ ಆರೋಗ್ಯಕ್ಕೆ ಹೆಚ್ಚು ಲಾಭದಾಯಕವೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಆರೋಗ್ಯ
Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?
ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.
ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.
ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
