Connect with us

ಆರೋಗ್ಯ

ದಿನಕ್ಕೆ ಕನಿಷ್ಠ 4 ಸಾವಿರ ಹೆಜ್ಜೆ ಹಾಕಿ… ಸಾವನ್ನು ತಡೆ ಗಟ್ಟಿ..!!

Published

on

ದಿನಕ್ಕೆ ಕನಿಷ್ಠ 4 ಸಾವಿರ ಹೆಜ್ಜೆ ಹಾಕಿ... ಸಾವನ್ನು ತಡೆ ಗಟ್ಟಿ

ದಿನವೊಂದಕ್ಕೆ ಕನಿಷ್ಠ ಸಾವಿರ ಹೆಜ್ಜೆ ಹಾಕುವುದರಿಂದ ಶೇ 15 ರಷ್ಟು ಸಾವುಗಳನ್ನು ತಡೆಗಟ್ಟಬಹುದಂತೆ. ಹೀಗಂತಾ ಈ ಬಗ್ಗೆ ಅಧ್ಯಯನಗಳು ಬಹಿರಂಗ ಪಡಿಸಿವೆ.

 ನಿತ್ಯ ಅಗತ್ಯ ವಾಕಿಂಗ್​ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ.

ದಿನಕ್ಕೆ ಕನಿಷ್ಠ 3967 ಹೆಜ್ಜೆಗಳನ್ನು ಹಾಕುವುದರಿಂದ ನಿಮ್ಮ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು ಅನ್ನುತ್ತಿದೆ ಈ ಅಧ್ಯಯನ.

ನಿತ್ಯ ನೀವು ಕನಿಷ್ಠ 2337 ಹೆಜ್ಜೆಗಳನ್ನು ಹಾಕಿದರೆ ಹೃದಯ ಸಂಬಂಧಿ ಕಾಯಿಲೆಯನ್ನು ಆದಷ್ಟು ಕಡಿಮೆ ಮಾಡಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ. ಈ ಸಂಬಂಧ ಸಂಶೋಧಕರು ಸುಮಾರು 2,26,889 ಜನರ ಮೇಲೆ ಈ ಅಧ್ಯಯನ ನಡೆಸಿ, ವಾಕಿಂಗ್​ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತಿ ದಿನವೂ ಬಿರುಸಿನ ವಾಕಿಂಗ್​ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಬಹಿರಂಗ ಕೂಡಾ ಆಗಿದೆ. ವಿವಿಧ 17 ಬಗೆಯ ಪ್ರಯೋಗಗಳನ್ನ ಇವರೆಲ್ಲ ಮೇಲೆ ಮಾಡಿ, ಈ ಅಂಶಗಳನ್ನು ಗುರುತಿಸಲಾಗಿದೆ.

ನೀವು ನಾಲ್ಕು ಸಾವಿರ ಹೆಜ್ಜೆಗಳನ್ನೇ ಹಾಕಬೇಕೆಂದೇನೂ ಇಲ್ಲ. ಜಸ್ಟ್​ ಸಾವಿರ ಹೆಜ್ಜೆಗಳನ್ನು ದಿನವೂ ಹಾಕಿದರೆ ಸಾಕು ಶೇ 15 ರಷ್ಟು ಅಪಾಯವನ್ನು ಕಡಿಮೆ ಮಾಡಬಹುದು ಅನ್ನುತ್ತಾರೆ ತಜ್ಞರು. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 500 ರಿಂದ 1,000 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯ ಕಾಯಿಲೆಗಳಿಂದ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬ ಅಂಶವನ್ನು ಗಮನಿಸಲಾಗಿದೆ.

500 ಹೆಜ್ಜೆ ನಡುಗೆ ಶೇ 7 ರಷ್ಟು ಮರಣ ಪ್ರಮಾಣ ಕಡಿಮೆದಿನವೊಂದಕ್ಕೆ 1000 ಹೆಜ್ಜೆ ನಡೆಯುವುದರಿಂದ ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಈ ಅಧ್ಯಯನ ಖಚಿತ ಪಡಿಸಿದೆ. ಮತ್ತೊಂದೆಡೆ, ನಿತ್ಯ ಕನಿಷ್ಠ 500 ಹೆಜ್ಜೆ ನಡೆಯುವುದರಿಂದ ಹೃದ್ರೋಗದಿಂದ ಉಂಟಾಗುವ ಮರಣವನ್ನು ಶೇಕಡಾ 7 ರಷ್ಟು ಕಡಿಮೆ ಮಾಡಬಹುದು ಅನ್ನುತ್ತೆ ಈ ವರದಿ.

ಯಾವುದೇ ಕಾರಣದಿಂದ ಸಾವುಗಳನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 4000 ಹೆಜ್ಜೆಗಳಷ್ಟು ನಡೆಯುವುದರಿಂದ ಎಲ್ಲ ರೋಗಗಳಿಂದ ದೂರು ಇರಬಹುದು ಅಂತಾರೆ ಪೋಲೆಂಡ್‌ನ ಲೋಡ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಮಾಸಿಜ್ ಬನಾಚ್​. ವಾಕಿಂಗ್​​​​ ಮಾಡುವುದು ಪುರುಷರು ಮತ್ತು ಮಹಿಳೆಯಲ್ಲಿ ಸಮಾನ ಪ್ರಭಾವ ಬೀರುತ್ತದೆ ಎನ್ನುತಾರೆ ಅವರು.

ಕಾಲುಭಾಗದಷ್ಟು ಜನ ದೈಹಿಕ ಚಟುವಟಿಕೆಯನ್ನೇ ಮಾಡಲ್ಲದುರ್ದೈವದ ಸಂಗತಿ ಎಂದರೆ ವಿಶ್ವದ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನರು ದೈಹಿಕ ಚಟುವಟಿಕೆಯನ್ನೇ ಮಾಡುವುದಿಲ್ಲ ಎನ್ನುತ್ತವೆ ಸಾಕಷ್ಟು ಅಧ್ಯಯನದ ವರದಿಗಳು. ಅಧ್ಯಯನದ ಪ್ರಕಾರ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತ್ತು ಕಡಿಮೆ ಆದಾಯದ ದೇಶಗಳಿಗಿಂತ ಹೆಚ್ಚಿನ ಆದಾಯದ ದೇಶಗಳಲ್ಲಿ ಹೆಚ್ಚಿನ ಜನರು ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ – ಅಂಶಗಳ ಪ್ರಕಾರ, ದೈಹಿಕ ಚಟುವಟಿಕೆ ಕೊರತೆ ವಿಶ್ವದಲ್ಲಿ ಸಾವಿಗೆ ನಾಲ್ಕನೇ ಅತಿ ದೊಡ್ಡ ಕಾರಣವಾಗಿದೆ. ದೈಹಿಕ ಚಟುವಟಿಕೆಯ ಕೊರತೆಯು ಪ್ರತಿ ವರ್ಷ 3.2 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆಯಂತೆ.

ಸುಮಾರು 7 ವರ್ಷಗಳ ಕಾಲ ವಿಶ್ಲೇಷಣೆ ನಡೆಸಿರುವ ಸಂಶೋಧಕರು ಈ ಎಲ್ಲ ಸತ್ಯಗಳನ್ನು ಪತ್ತೆ ಹಚ್ಚಿದ್ದಾರೆ. ಇದರಲ್ಲಿ 64 ವರ್ಷ ವಯೋಮಿತಿಯ ಶೇ.49 ರಷ್ಟು ಮಹಿಳೆಯರು ಭಾಗವಹಿಸಿದ್ದರು. ಇನ್ನು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾವಿನ ಅಪಾಯವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗಿಂತ ಕಡಿಮೆ ಎಂದು ಅಧ್ಯಯನವು ಕಂಡು ಹಿಡಿದಿದೆ.

ದಿನಕ್ಕೆ 6,000 ರಿಂದ 10,000 ಹೆಜ್ಜೆಗಳನ್ನು ನಡೆದ ಹಿರಿಯ ವಯಸ್ಕರು ತಮ್ಮ ಸಾವಿನ ಅಪಾಯವನ್ನು 42 ಪ್ರತಿಶತದಷ್ಟು ಕಡಿಮೆಗೊಳಿಸಿದರೆ, ದಿನಕ್ಕೆ 7,000 ರಿಂದ 13,000 ಹೆಜ್ಜೆಗಳನ್ನು ನಡೆದ ಕಿರಿಯ ವಯಸ್ಕರು ತಮ್ಮ ಸಾವಿನ ಅಪಾಯವನ್ನು 49 ಪ್ರತಿಶತದಷ್ಟು ಕಡಿಮೆ ಮಾಡಿದ್ದಾರೆ.

ಆರೋಗ್ಯ

40 ವರ್ಷದ ರಹಸ್ಯ ಭೇದಿಸಿದ ಹೊಸ ಔಷಧಿ: ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ದೊಡ್ಡ ಬ್ರೇಕ್‌ಥ್ರೂ

Published

on

ನವದೆಹಲಿ: ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಬ್ರೇಕ್‌ಥ್ರೂ ಸಿಕ್ಕಿದೆ. ಕಳೆದ ನಾಲ್ಕು ದಶಕಗಳಿಂದ ವಿಜ್ಞಾನಿಗಳನ್ನು ಕಾಡುತ್ತಿದ್ದ KRAS ಜೀನ್ ಮ್ಯೂಟೇಷನ್‌ಗೆ ಕೊನೆಗೂ ಪರಿಣಾಮಕಾರಿ ಔಷಧಿ ಪತ್ತೆಯಾಗಿದ್ದು, ಇದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಹೊಸ ಭರವಸೆ ಮೂಡಿಸಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ Revolution Medicines ಅಭಿವೃದ್ಧಿಪಡಿಸಿರುವ ‘Daraxonrasib’ ಎಂಬ ಹೊಸ ಔಷಧಿ ಇದೀಗ ವೈದ್ಯಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ನಡೆದ Phase-3 ಕ್ಲಿನಿಕಲ್ ಟ್ರಯಲ್‌ನಲ್ಲಿ ಈ ಔಷಧಿ ಪಡೆದ ರೋಗಿಗಳು ಸರಾಸರಿ 13.2 ತಿಂಗಳು ಬದುಕಿದ್ದರೆ, ಸಾಮಾನ್ಯ ಕೀಮೋಥೆರಪಿ ಪಡೆದವರು ಕೇವಲ 6.7 ತಿಂಗಳು ಮಾತ್ರ ಬದುಕಿದ್ದಾರೆ ಎಂದು ವರದಿಯಾಗಿದೆ.

ಈ ಫಲಿತಾಂಶಗಳು ಪ್ರಸಿದ್ಧ New England Journal of Medicine ನಲ್ಲಿ ಪ್ರಕಟವಾಗಿದ್ದು, ಅಮೆರಿಕದ United States Food and Drug Administration ಈಗಾಗಲೇ ಔಷಧಿಗೆ ವಿಸ್ತೃತ ಬಳಕೆಗೆ ಅನುಮತಿ ನೀಡಿದೆ.

Daraxonrasib ಒಂದು ಟಾರ್ಗೆಟೆಡ್ ಓರಲ್ ಡ್ರಗ್ ಆಗಿದ್ದು, KRAS ಎಂಬ ಜೀನ್‌ನ ಮ್ಯೂಟೇಷನ್‌ನ್ನು ತಡೆಗಟ್ಟುತ್ತದೆ. ಸಾಮಾನ್ಯವಾಗಿ ಈ ಜೀನ್ ಮಾನವ ದೇಹದ ಪ್ರತಿಯೊಂದು ಕೋಶದಲ್ಲೂ ಇರುತ್ತದೆ. ಆದರೆ ಮ್ಯೂಟೇಷನ್ ಆದಾಗ ಅದು ನಿರಂತರವಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಔಷಧಿ ಆ ಸಿಗ್ನಲ್‌ನ್ನು ತಡೆದು ಕ್ಯಾನ್ಸರ್ ಹರಡುವಿಕೆಯನ್ನು ನಿಯಂತ್ರಿಸುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಆರಂಭಿಕ ಹಂತದಲ್ಲಿ ಲಕ್ಷಣಗಳು ಸ್ಪಷ್ಟವಾಗದ ಕಾರಣ ಬಹುತೇಕ ಪ್ರಕರಣಗಳು ತಡವಾಗಿ ಪತ್ತೆಯಾಗುತ್ತವೆ. ಪರಿಣಾಮವಾಗಿ ಚಿಕಿತ್ಸೆ ಸವಾಲಾಗುತ್ತದೆ.

ಈ ಹೊಸ ಔಷಧಿ ಭವಿಷ್ಯದಲ್ಲಿ ಶ್ವಾಸಕೋಶ ಮತ್ತು ಕೊಲೆರೆಕ್ಟಲ್ ಕ್ಯಾನ್ಸರ್‌ಗಳಿಗೂ ಉಪಯೋಗವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತದಲ್ಲಿ ಈ ಔಷಧಿ ಲಭ್ಯವಾಗಲು ಇನ್ನೂ ಸಮಯ ಬೇಕಾಗಬಹುದು ಎಂದು ವೈದ್ಯಕೀಯ ವಲಯ ಹೇಳುತ್ತಿದೆ.

ಹೆಚ್ಚಿನ ಸುದ್ದಿಗಳಿಗಾಗಿ Hosa Suddi ಓದಿ.

Continue Reading

ಆರೋಗ್ಯ

ಕೋವಿಡ್ ಬಳಿಕ ಮತ್ತೊಂದು ಭೀತಿ: ಲಸಿಕೆ ಇಲ್ಲದ ಎಬೋಲಾ ವೈರಸ್ ಆತಂಕ

Published

on

By

ನೈಜೀರಿಯಾ/ಕಾಂಗೋ: ಆಫ್ರಿಕಾ ಖಂಡದ Democratic Republic of the Congo ಮತ್ತು Uganda ದೇಶಗಳಲ್ಲಿ ಎಬೋಲಾ ಸೋಂಕು ಭೀಕರವಾಗಿ ಹರಡುತ್ತಿದ್ದು, ಈಗಾಗಲೇ 88 ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ World Health Organization ಈ ಎರಡೂ ದೇಶಗಳಲ್ಲಿ ‘ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸಿದೆ.

ಕಾಂಗೋದ ಪೂರ್ವ ಭಾಗದ ಇಟುರಿ ಪ್ರಾಂತ್ಯ ಸದ್ಯ ಸೋಂಕಿನ ಪ್ರಮುಖ ಕೇಂದ್ರವಾಗಿದೆ. ಅಲ್ಲಿಂದ ಸುಮಾರು 1,000 ಕಿಲೋಮೀಟರ್ ದೂರದ ರಾಜಧಾನಿ ಕಿನ್ಶಾಸಾಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿರುವುದು ಅಧಿಕಾರಿಗಳ ಆತಂಕವನ್ನು ಹೆಚ್ಚಿಸಿದೆ. ಅಲ್ಲದೆ ಉತ್ತರ ಕಿವು ಪ್ರಾಂತ್ಯದಲ್ಲೂ ಸೋಂಕು ಪತ್ತೆಯಾಗಿರುವುದು ಪರಿಸ್ಥಿತಿಯನ್ನು ಗಂಭೀರಗೊಳಿಸಿದೆ.

ಸದ್ಯ ಹರಡುತ್ತಿರುವ ವೈರಸ್ ‘ಬುಂಡಿಬುಗ್ಯೋ’ ಪ್ರಭೇದದ ಎಬೋಲಾ ವೈರಸ್ ಆಗಿದ್ದು, ಇದು ಮೊದಲು ಪ್ರಾಣಿಗಳಲ್ಲಿ ಕಾಣಿಸಿಕೊಂಡು ನಂತರ ಮನುಷ್ಯರಿಗೆ ಹರಡುತ್ತದೆ. ತೀವ್ರ ಜ್ವರ, ಅಸಹನೀಯ ತಲೆನೋವು, ಮೈಕೈ ನೋವು, ವಾಂತಿ ಮತ್ತು ರಕ್ತಸ್ರಾವ ಇದರ ಪ್ರಮುಖ ಲಕ್ಷಣಗಳಾಗಿವೆ. ಈ ಅಪರೂಪದ ಎಬೋಲಾ ರೂಪಕ್ಕೆ ಸದ್ಯ ಯಾವುದೇ ಪರಿಣಾಮಕಾರಿ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ ಎಂಬುದು ಜಾಗತಿಕ ಕಳವಳಕ್ಕೆ ಕಾರಣವಾಗಿದೆ.

2007-08ರಲ್ಲಿ ಮೊದಲ ಬಾರಿ ಉಗಾಂಡಾದ ಬುಂಡಿಬುಗ್ಯೋ ಜಿಲ್ಲೆಯಲ್ಲಿ ಈ ವೈರಸ್ ಪತ್ತೆಯಾಗಿತ್ತು. ಆಗ 149 ಪ್ರಕರಣಗಳು ದಾಖಲಾಗಿದ್ದು, 37 ಮಂದಿ ಸಾವನ್ನಪ್ಪಿದ್ದರು. ಬಳಿಕ 2012ರಲ್ಲಿ ಕಾಂಗೋದ ಇಸಿರೋ ಪ್ರದೇಶದಲ್ಲಿ ಸೋಂಕು ಹರಡಿ 29 ಜನರನ್ನು ಬಲಿ ಪಡೆದಿತ್ತು. ಈಗ ಮೂರನೇ ಬಾರಿಗೆ ವೈರಸ್ ಮತ್ತೆ ಅಬ್ಬರಿಸಲು ಆರಂಭಿಸಿದೆ.

ಆಫ್ರಿಕಾ ಸಿಡಿಸಿ ನಿರ್ದೇಶಕ Jean Kaseya ಅವರ ಪ್ರಕಾರ, ಐಸಿಸ್ ಬೆಂಬಲಿತ ಉಗ್ರರ ಚಟುವಟಿಕೆಗಳು, ಗಣಿಗಾರಿಕೆ ಪ್ರದೇಶಗಳಲ್ಲಿನ ಸಂಘರ್ಷ ಹಾಗೂ ನಾಗರಿಕರ ನಿರಂತರ ವಲಸೆ ಸೋಂಕು ನಿಯಂತ್ರಣಕ್ಕೆ ದೊಡ್ಡ ಸವಾಲಾಗಿದೆ. ಸೋಂಕಿತರ ಸಂಪರ್ಕ ಪತ್ತೆಹಚ್ಚುವ ಕಾರ್ಯವೂ ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ Hosa Suddi Kannada News Portal ಓದಿ.

Continue Reading

ಆರೋಗ್ಯ

ಹಾಂಟಾ ವೈರಸ್‌ ಲಕ್ಷಣಗಳೇನು? ಹೇಗೆ ಹರಡುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಬೆಂಗಳೂರು: ಅರ್ಜೆಂಟೀನಾದ Ushuaia ನಗರದಿಂದ ಏಪ್ರಿಲ್ 1ರಂದು ಹೊರಟಿದ್ದ ಕ್ರೂಸ್ ಹಡಗಿನಲ್ಲಿ ಹಾಂಟಾ ವೈರಸ್‌ ಸೋಂಕು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ. ಹಡಗಿನಲ್ಲಿ ಒಟ್ಟು 147 ಪ್ರಯಾಣಿಕರಿದ್ದು, ಈಗಾಗಲೇ ಮೂವರು ಮೃತಪಟ್ಟಿದ್ದಾರೆ. 70 ವರ್ಷದ ಡಚ್ ಪ್ರಜೆ, ಅವರ 69 ವರ್ಷದ ಪತ್ನಿ ಹಾಗೂ ಜರ್ಮನಿಯ ಒಬ್ಬ ಪ್ರಯಾಣಿಕ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಜೊತೆಗೆ 7 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಹಡಗಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳೂ ಇದ್ದರು ಎನ್ನಲಾಗಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಹಾಂಟಾ ವೈರಸ್‌ ಹೊಸ ವೈರಸ್ ಅಲ್ಲ. ಇದು ಮುಖ್ಯವಾಗಿ ಇಲಿ ಮತ್ತು ಕಾಡುಮೂಷಿಕಗಳ ಮೂಲಕ ಹರಡುವ ಆರ್‌ಎನ್‌ಎ ವೈರಸ್‌ ಗುಂಪಿಗೆ ಸೇರಿದೆ. ಸೋಂಕಿತ ಇಲಿಗಳ ಮಲ, ಮೂತ್ರ ಮತ್ತು ಲಾಲಾರಸದಿಂದ ಪರಿಸರ ಕಲುಷಿತಗೊಂಡಾಗ, ಆ ಧೂಳನ್ನು ಉಸಿರಾಟದ ಮೂಲಕ ಒಳಗೆಳೆದರೆ ಮನುಷ್ಯರಿಗೆ ಸೋಂಕು ತಗುಲಬಹುದು.

ಹಾಂಟಾ ವೈರಸ್‌ ಪಲ್ಮನರಿ ಸಿಂಡ್ರೋಮ್‌ ಅತ್ಯಂತ ಅಪಾಯಕಾರಿ ರೂಪವಾಗಿದ್ದು, ಆರಂಭದಲ್ಲಿ ಜ್ವರ, ತಲೆನೋವು, ದೌರ್ಬಲ್ಯ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ನಂತರ ಉಸಿರಾಟದ ತೊಂದರೆ, ಎದೆ ಬಿಗಿತ ಹಾಗೂ ಶ್ವಾಸಕೋಶದಲ್ಲಿ ನೀರು ತುಂಬುವಂತಹ ಗಂಭೀರ ಲಕ್ಷಣಗಳು ಕಾಣಿಸಬಹುದು.

ತಜ್ಞರು ಸ್ಪಷ್ಟಪಡಿಸಿರುವಂತೆ, ಇದು COVID-19 ರೀತಿಯಲ್ಲಿ ವೇಗವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕಲ್ಲ. ಆದರೆ ದಕ್ಷಿಣ ಅಮೆರಿಕಾದ ಕೆಲವು ರೂಪಗಳಲ್ಲಿ ಸೀಮಿತ ಮಾನವ-ಮಾನವ ಹರಡುವಿಕೆ ದಾಖಲಾಗಿರುವುದರಿಂದ World Health Organization ಮತ್ತು Centers for Disease Control and Prevention ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿವೆ.

ಪ್ರಸ್ತುತ ಈ ವೈರಸ್‌ಗೆ ಪರಿಣಾಮಕಾರಿ ಲಸಿಕೆ ಅಥವಾ ನಿರ್ದಿಷ್ಟ ಔಷಧ ಲಭ್ಯವಿಲ್ಲ. ಐಸಿಯು ಆರೈಕೆ, ಆಮ್ಲಜನಕ ಚಿಕಿತ್ಸೆ ಮತ್ತು ತ್ವರಿತ ವೈದ್ಯಕೀಯ ನೆರವೇ ಜೀವ ಉಳಿಸುವ ಪ್ರಮುಖ ಮಾರ್ಗವಾಗಿದೆ.

Continue Reading

Trending