Connect with us

ಕ್ರೀಡೆ

ಸೆಮಿಸ್​ನಲ್ಲಿ ವಿರಾಟ್‌​ ವೈಲೆಂಟ್.. ನಿರ್ಣಾಯಕ ಪಂದ್ಯದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ; ಕಿಂಗ್ ರೆಕಾರ್ಡ್ಸ್ ಏನು?

Published

on

ಟಿ20 ವಿಶ್ವಕಪ್ ಇಂದು ಮದಗಜಗಳ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಬಲಿಷ್ಠ ಭಾರತ, ಮಾಜಿ ಚಾಂಪಿಯನ್​​ ಇಂಗ್ಲೆಂಡ್​​ ತಂಡವನ್ನ ಎದುರಿಸಲಿದೆ. ಕಿಂಗ್ ಕೊಹ್ಲಿ ಫಾರ್ಮ್​ ಬಗ್ಗೆ ಫ್ಯಾನ್ಸ್ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ವಿರಾಟ್ ಇಲ್ಲಿತನಕ ಹೇಗೆ ಆಡಿದ್ರು ಅನ್ನೋದನ್ನ ಮರೆತು ಬಿಡಿ. ಇಂದು ಮಾತ್ರ ವಿರಾಟ್​​​ ಆರ್ಭಟಿಸೋದು ಪಕ್ಕಾ. ಅದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಕಿಂಗ್​ ಕೊಹ್ಲಿ.. ಈ ಅಗ್ರಜ ಬ್ಯಾಟ್ಸ್​​ಮನ್​​ ಪ್ರಸಕ್ತ ಟಿ20 ವಿಶ್ವಕಪ್​ನ ಗ್ರೂಪ್ ಸ್ಟೇಜ್ ಹಾಗೂ ಸೂಪರ್​​​-8 ನಲ್ಲಿ ಹೇಗೆ ಆಡಿದ್ರೂ ಅನ್ನೋದನ್ನ ಬಿಟ್ಟು ಬಿಡಿ. ಇಂದು ಇಂಗ್ಲೆಂಡ್​​​ ವಿರುದ್ಧ ನಡೆಯುವ ಸೆಮಿಫೈನಲ್​​ ಫೈಟ್​​ನಲ್ಲಿ ವಿರಾಟ್, ವಿರಾಟರೂಪ ತೋರಿಯೇ ತೋರಿರ್ಸಾರೆ. ಯಾಕಂದ್ರೆ ಕೊಹ್ಲಿ ನಾಕೌಟ್​​ ಸ್ಪೆಷಲಿಸ್ಟ್​​​​​. ನಿರ್ಣಾಯಕ ಹಂತದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ. ಏನಿದ್ರೂ ಅಬ್ಬರಕ್ಕೆ ಹೆಸರುವಾಸಿ. ಇದಕ್ಕೆ ಬೆಸ್ಟ್​​ ಎಕ್ಸಾಂಪಲ್​ ಇಲ್ಲಿವೆ ನೋಡಿ.

ಕೊಹ್ಲಿ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾ!

ಅದು 2014 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್​​​ ಪಂದ್ಯ. ಭಾರತ ಗೆಲ್ಲಲು 173 ರನ್​ ಗಳಿಸಬೇಕಿತ್ತು. ಕಿಂಗ್ ಕೊಹ್ಲಿ ರೌದ್ರಾವತಾರ ತಾಳಿದ್ರು. ಬಲಿಷ್ಠ ಆಫ್ರಿಕಾ ಬೌಲಿಂಗ್ ಕೋಟೆಯನ್ನ ಧ್ವಂಸಗೊಳಿಸಿದ್ದ ವಿರಾಟ್, ಸ್ಫೋಟಕ 77 ರನ್ ಚಚ್ಚಿ, ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ರು.

189 ಸ್ಟ್ರೈಕ್​​​ರೇಟ್​​​.. ಸ್ಫೋಟಕ 82 ರನ್​​​.. ವಿಂಡೀಸ್ ಹೈರಾಣ..!

2016ರ ಟಿ20 ವಿಶ್ವಕಪ್​ನಲ್ಲಿ ಭಾರತ ಹಾಗೂ ವೆಸ್ಟ್​ಇಂಡೀಸ್​ ತಂಡಗಳು ಮುಖಾಮುಖಿಯಾಗಿದ್ವು. ಈ ಸೆಮಿಫೈನಲ್​​​​​ ಕಾಳಗದಲ್ಲಿ ಕೊಹ್ಲಿ ಪರಾಕ್ರಮ ಮೆರೆದಿದ್ರು. 189ರ ಸ್ಟ್ರೈಕ್​​ರೇಟ್​​ನಲ್ಲಿ ಬಿರುಸಿನ 89 ರನ್ ಗಳಿಸಿ ತಂಡಕ್ಕೆ ಆಪತ್ಬಾಂಧವರಾಗಿದ್ರು.

ಕ್ರೀಡೆ

ಟೆಸ್ಟ್ ನಾಯಕತ್ವ ಬಿಟ್ಟ ಬಳಿಕ ‘ಸಂಪೂರ್ಣ ಖಾಲಿಯಾಗಿದ್ದೆ’: ವಿರಾಟ್ ಕೊಹ್ಲಿ ಭಾವುಕ ಮಾತು

Published

on

ನವದೆಹಲಿ: ಭಾರತೀಯ ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರ ಪೈಕಿ ವಿರಾಟ್‌ ಕೊಹ್ಲಿ (Virat Kohli) ಹೆಸರು ಸದಾ ಅಗ್ರಸ್ಥಾನದಲ್ಲಿರುತ್ತದೆ. ತಮ್ಮ ಆಕ್ರಮಣಕಾರಿ ನಾಯಕತ್ವ ಮತ್ತು ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ವಿಶ್ವದ ಬಲಿಷ್ಠ ತಂಡವನ್ನಾಗಿ ರೂಪಿಸಿದ್ದ ಕೊಹ್ಲಿ, 2022ರಲ್ಲಿ ಏಕಾಏಕಿ ಟೆಸ್ಟ್‌ ನಾಯಕತ್ವ ತೊರೆದಾಗ ಕ್ರಿಕೆಟ್ ಜಗತ್ತೇ ಅಚ್ಚರಿಗೆ ಒಳಗಾಗಿತ್ತು. ಇದೀಗ ಆ ನಿರ್ಧಾರದ ಹಿಂದಿನ ನಿಜವಾದ ಕಾರಣವನ್ನು ಕೊಹ್ಲಿ ಮೊದಲ ಬಾರಿಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಬೆಂಗಳೂರುದಲ್ಲಿ ನಡೆದ ಆರ್‌ಸಿಬಿ ಇನೋವೇಷನ್‌ ಲ್ಯಾಬ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, ನಾಯಕತ್ವ ಮತ್ತು ಬ್ಯಾಟಿಂಗ್ ಎಂಬ ಎರಡು ದೊಡ್ಡ ಜವಾಬ್ದಾರಿಗಳನ್ನು ಒಂದೇ ವೇಳೆ ನಿರ್ವಹಿಸುವುದು ತಮ್ಮ ಮೇಲೆ ಭಾರೀ ಮಾನಸಿಕ ಒತ್ತಡ ತಂದಿತ್ತು ಎಂದು ಒಪ್ಪಿಕೊಂಡರು.

“ನಾನು ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರನಾಗಿದ್ದೆ. ಜೊತೆಗೆ ನಾಯಕತ್ವದ ಜವಾಬ್ದಾರಿಯೂ ನನ್ನ ಮೇಲಾಗಿತ್ತು. ಈ ಎರಡೂ ಹೊಣೆಗಾರಿಕೆಗಳು ನನ್ನ ದಿನನಿತ್ಯದ ಜೀವನದ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತಿವೆ ಎಂಬುದನ್ನು ನಾನು ಆಗ ಅರಿತುಕೊಂಡಿರಲಿಲ್ಲ,” ಎಂದು ಕೊಹ್ಲಿ ಹೇಳಿದ್ದಾರೆ.

ಭಾರತ ತಂಡ ಯಾವಾಗಲೂ ವಿಶ್ವದ ಅಗ್ರ ಸ್ಥಾನದಲ್ಲಿರಬೇಕು ಎಂಬ ಬಲವಾದ ಬಯಕೆ ತಮ್ಮೊಳಗಿದ್ದ ಕಾರಣ, ಒತ್ತಡವನ್ನು ಕಡೆಗಣಿಸಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿದರು. ಆದರೆ, ಕಾಲಕ್ರಮೇಣ ಅದು ತಮ್ಮ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು ಎಂದು ಭಾವುಕರಾದರು.

“ನಾಯಕತ್ವ ತೊರೆದ ಸಮಯಕ್ಕೆ ನಾನು ಸಂಪೂರ್ಣವಾಗಿ ಖಾಲಿಯಾಗಿದ್ದೆ. ನನ್ನೊಳಗೆ ಯಾವುದೇ ಶಕ್ತಿ ಉಳಿದಿರಲಿಲ್ಲ. ಆ ಜವಾಬ್ದಾರಿಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಅದು ತುಂಬಾ ಕಠಿಣ ಅನುಭವವಾಗಿತ್ತು,” ಎಂದು ಕೊಹ್ಲಿ ಮನದಾಳದ ಮಾತು ಹಂಚಿಕೊಂಡರು.

ವಿರಾಟ್‌ ಕೊಹ್ಲಿ ಭಾರತ ತಂಡವನ್ನು ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಭಾರತ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ನಾಯಕ ಎಂಬ ದಾಖಲೆ ಕೂಡ ಅವರ ಹೆಸರಿನಲ್ಲಿದೆ.

ಆದರೆ ನಾಯಕತ್ವ ತೊರೆದ ಬಳಿಕ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಕುಸಿಯತೊಡಗಿತು. ಬಳಿಕ ಅವರು 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ತಮ್ಮ ಟೆಸ್ಟ್‌ ವೃತ್ತಿಜೀವನದಲ್ಲಿ 123 ಪಂದ್ಯಗಳಿಂದ 9,230 ರನ್ ಗಳಿಸಿರುವ ಕೊಹ್ಲಿ, 30 ಶತಕಗಳನ್ನು ಸಿಡಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

Continue Reading

ಕ್ರೀಡೆ

“ನನ್ನನ್ನೇ ನಾನು ಅನುಮಾನಿಸಿದ್ದೆ”: ಕಠಿಣ ದಿನಗಳ ಬಗ್ಗೆ ಮನಬಿಚ್ಚಿದ ವಿರಾಟ್ ಕೊಹ್ಲಿ

Published

on

ಬೆಂಗಳೂರು: Virat Kohli ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರೂ, ತಮ್ಮ ವೃತ್ತಿಜೀವನದ ಕಠಿಣ ಹಂತದಲ್ಲಿ ತಾವು ಸಹ ಅಸುರಕ್ಷತೆ ಮತ್ತು ಆತ್ಮಸಂಶಯಕ್ಕೆ ಒಳಗಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನ Centre for Sports Excellenceನಲ್ಲಿ ನಡೆದ ಆರ್‌ಸಿಬಿ ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಕೊಹ್ಲಿ, ಭಾರತ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ಎದುರಿಸಿದ ಮಾನಸಿಕ ಒತ್ತಡದ ಬಗ್ಗೆ ಮನಬಿಚ್ಚಿ ಮಾತನಾಡಿದರು.

“ಆ ಸಮಯ ತುಂಬಾ ಕಠಿಣವಾಗಿತ್ತು”

2020ರಿಂದ 2022ರವರೆಗೆ ಶತಕದ ಬರಗಾಲ ಅನುಭವಿಸಿದ್ದ ಕೊಹ್ಲಿ, 2022ರಲ್ಲಿ ಟೆಸ್ಟ್ ನಾಯಕತ್ವ ತೊರೆದ ಬಳಿಕ ತಮ್ಮ ಆತ್ಮವಿಶ್ವಾಸ ಕುಸಿದಿತ್ತು ಎಂದು ಒಪ್ಪಿಕೊಂಡರು.

“ಒಬ್ಬ ಆಟಗಾರನಾಗಿ ನೀವು ಯಾವಾಗಲೂ ಜಾಗರೂಕರಾಗಿರಬೇಕು. ಆದರೆ ಅದೇ ಸಮಯದಲ್ಲಿ ಅಸುರಕ್ಷತೆಯ ಭಾವನೆಗೂ ಒಳಗಾಗಬಹುದು. ನಾನು ಕೂಡ ಆ ಹಂತವನ್ನು ಎದುರಿಸಿದ್ದೆ” ಎಂದು ಹೇಳಿದರು.

ರಾಹುಲ್ ದ್ರಾವಿಡ್–ವಿಕ್ರಮ್ ರಾಥೋಡ್ ಬೆಂಬಲ

ಈ ಕಠಿಣ ಸಮಯದಲ್ಲಿ Rahul Dravid ಮತ್ತು Vikram Rathour ತಮ್ಮ ಬೆಂಬಲವಾಗಿ ನಿಂತಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.

“ರಾಹುಲ್ ಮತ್ತು ವಿಕ್ರಮ್ ನನಗೆ ಕೇವಲ ಕೋಚ್‌ಗಳಾಗಿರಲಿಲ್ಲ. ಅವರು ನನ್ನನ್ನು ಅರ್ಥ ಮಾಡಿಕೊಂಡರು. ಮಾನಸಿಕವಾಗಿ ಧೈರ್ಯ ತುಂಬಿದರು. ಅವರ ಬೆಂಬಲದ ಬಳಿಕ ಮತ್ತೆ ಕ್ರಿಕೆಟ್ ಅನ್ನು ಆನಂದಿಸಲು ಪ್ರಾರಂಭಿಸಿದೆ” ಎಂದು ಕೊಹ್ಲಿ ತಿಳಿಸಿದ್ದಾರೆ.

“ನೆಟ್ಸ್‌ನಲ್ಲೂ ಯುವ ಆಟಗಾರರ ಬಗ್ಗೆ ಯೋಚಿಸುತ್ತೇನೆ”

20 ವರ್ಷಗಳ ಅನುಭವ ಇದ್ದರೂ ಇಂದಿಗೂ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಯುವ ಆಟಗಾರರು ತನ್ನನ್ನು ಗಮನಿಸುತ್ತಿದ್ದಾರೆ ಎಂಬ ಒತ್ತಡ ಇರುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

“ನಾನು ರನ್ ಗಳಿಸಲು ಪರದಾಡಿದರೆ ಯುವ ಆಟಗಾರರು ಏನು ಯೋಚಿಸುತ್ತಾರೋ ಎಂಬ ಚಿಂತೆ ಇರುತ್ತದೆ. ಅದು ಯಾವಾಗಲೂ ಮನಸ್ಸಿನಲ್ಲಿರುತ್ತದೆ” ಎಂದರು.

“ನೀವು ಚೆನ್ನಾಗಿದ್ದೀರಾ? ಎಂದು ಯಾರೂ ಕೇಳಲಿಲ್ಲ”

ತಂಡದ ನಾಯಕನಾಗಿ ಹಲವು ವರ್ಷ ಜವಾಬ್ದಾರಿ ಹೊತ್ತಿದ್ದ ಕಾರಣ, ತಮ್ಮ ಭಾವನೆಗಳ ಬಗ್ಗೆ ಯೋಚಿಸಲು ಸಮಯವೇ ಇರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

“ಸುಮಾರು ಒಂಬತ್ತು ವರ್ಷಗಳ ಕಾಲ ನಾನು ಮಾನಸಿಕವಾಗಿ ಹೇಗಿದ್ದೇನೆ ಎಂದು ಯಾರೂ ಕೇಳಲಿಲ್ಲ. ಯಾರಾದರೂ ‘ನೀವು ಚೆನ್ನಾಗಿದ್ದೀರಾ?’ ಎಂದು ಕೇಳುತ್ತಾರೆ ಎಂಬ ನಿರೀಕ್ಷೆಯೂ ಮನಸ್ಸಿಗೆ ಬರುತ್ತಿರಲಿಲ್ಲ” ಎಂದು ಮನದಾಳದ ಮಾತು ಹಂಚಿಕೊಂಡರು.

ಸೌರವ್ ಗಂಗೂಲಿ ಜೊತೆ ಭಿನ್ನಾಭಿಪ್ರಾಯ ಚರ್ಚೆ

ಟೀಂ ಇಂಡಿಯಾ ನಾಯಕತ್ವ ತೊರೆದ ಬಳಿಕ Sourav Ganguly ಜೊತೆ ಭಿನ್ನಾಭಿಪ್ರಾಯದ ಸುದ್ದಿಗಳು ಹರಿದಾಡಿದ್ದವು. ಇದೇ ಸಮಯದಲ್ಲಿ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಜವಾಬ್ದಾರಿ ವಹಿಸಿಕೊಂಡಿದ್ದರು.

ಕೊಹ್ಲಿ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಪ್ರಾಮಾಣಿಕತೆ ಮತ್ತು ಮಾನಸಿಕ ಹೋರಾಟವನ್ನು ಮೆಚ್ಚಿಕೊಂಡಿದ್ದಾರೆ.

Continue Reading

ಕ್ರೀಡೆ

ಭಾರತ ವಿರುದ್ಧ ಮೊದಲ ಶತಕ ಸಿಡಿಸಿದ್ದ ದಿಗ್ಗಜ ಬ್ಯಾಟರ್ ಮೈಕ್ ಸ್ಮಿತ್ ನಿಧನ

Published

on

ಐಪಿಎಲ್ 2026ರ ನಡುವೆಯೇ ಕ್ರಿಕೆಟ್ ಲೋಕಕ್ಕೆ ದುಃಖದ ಸುದ್ದಿಯೊಂದು ಬಂದಿದೆ. Mike Smith ಎಂದೇ ಖ್ಯಾತರಾಗಿದ್ದ ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟರ್ ಮೈಕ್ ಸ್ಮಿತ್ ಅವರು 92ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಅವರ ಸಾವಿನ ಸುದ್ದಿಯನ್ನು England and Wales Cricket Board ಅಧಿಕೃತವಾಗಿ ಪ್ರಕಟಿಸಿದೆ.

“MJK” ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಮೈಕ್ ಸ್ಮಿತ್, ಜೂನ್ 1958ರಲ್ಲಿ New Zealand national cricket team ವಿರುದ್ಧ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ಪರ ಒಟ್ಟು 50 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅವರು, 25 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 78 ಇನ್ನಿಂಗ್ಸ್‌ಗಳಲ್ಲಿ 31.63 ಸರಾಸರಿಯಲ್ಲಿ 2278 ರನ್ ಗಳಿಸಿದ್ದರು. ಮೂರು ಶತಕ ಹಾಗೂ 11 ಅರ್ಧಶತಕಗಳು ಅವರ ಖಾತೆಯಲ್ಲಿದ್ದು, 121 ರನ್ ಗರಿಷ್ಠ ಸ್ಕೋರ್ ಆಗಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 637 ಪಂದ್ಯಗಳನ್ನು ಆಡಿದ್ದು, 39,832 ರನ್ ಗಳಿಸಿ ಅಪರೂಪದ ಸಾಧನೆ ಮಾಡಿದ್ದರು.

1959ರಲ್ಲಿ India ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಶತಕ ಸಿಡಿಸಿದ್ದ ಮೈಕ್ ಸ್ಮಿತ್, ನಂತರ 1963-64ರ ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಇಂಗ್ಲೆಂಡ್ 25 ಟೆಸ್ಟ್ ಪಂದ್ಯಗಳಲ್ಲಿ ಕೇವಲ ಮೂರು ಸೋಲು ಮಾತ್ರ ಕಂಡಿತ್ತು.

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕವೂ ಅವರು ಐದು ವರ್ಷಗಳ ಕಾಲ ರೆಫರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ Warwickshire County Cricket Club ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜೊತೆಗೆ ಐಸಿಸಿ ಮ್ಯಾಚ್ ರೆಫರಿಯಾಗಿಯೂ ಸೇವೆ ನೀಡಿದ್ದರು.

ಮೈಕ್ ಸ್ಮಿತ್ ನಿಧನಕ್ಕೆ ಕ್ರಿಕೆಟ್ ಅಭಿಮಾನಿಗಳು, ಮಾಜಿ ಆಟಗಾರರು ಹಾಗೂ ಕ್ರೀಡಾ ವಲಯದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ Hosa Suddi ಓದಿ.

Continue Reading

Trending