Connect with us

ಬೆಂಗಳೂರು

ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ

ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ

Published

on

ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ

ಹೋಗಲ್ಲ ಹಾಗಲ್ಲ ಹೀಗಲ್ಲ ಎನ್ನುತ್ತಲೇ ಬಾಂಬೆ ಶಾಸಕರ ತವರು ಪಕ್ಷದ ಮೋಹ ಹೆಚ್ಚಾಗುತ್ತಿದೆ. ಸೋಮಶೇಖರ್ ಸಿಎಂ ಭೇಟಿ ಬಳಿಕ ಇದೀಗ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆಗೆ ನಾಂದಿ ಹಾಡಿದ್ದು ಯಲ್ಲಾಪುರದ ಶಾಸಕರು. ಬಾಂಬೆ ತಂಡದ ಖಾಯಂ ಸದಸ್ಯರಾಗಿದ್ದ ಶಿವರಾಮ್ ಹೆಬ್ಬಾರ್ ಕೂಡ ಈಗ ಎತ್ತ ಮುಖ ಮಾಡಿದ್ದಾರೆ ಎಂಬುದಕ್ಕೆ ಸಿಎಂ ಭೇಟಿ ಉತ್ತರ ಕೊಟ್ಟಿದೆ. ಇದರೊಂದಿಗೆ ಬಾಂಬೆ ಫ್ರೆಂಡ್ಸ್‌ ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ ಮೂಡಿವೆ.

ಬಾಂಬೆ ಶಾಸಕರು ಮತ್ತೆ ತವರು ಮನೆಯ ಕದವನ್ನು ತಟ್ಟುತ್ತಿರುವ ಸುದ್ದಿ ಹಳೆಯದೇನೂ ಅಲ್ಲ. ಆಪರೇಷನ್ ಹಸ್ತದ ಚಟುವಟಿಕೆ ಗುಟ್ಟಾಗಿಯೂ ಉಳಿದಿಲ್ಲ. ಎಸ್.ಟಿ ಸೋಮಶೇಖರ್  ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಬಿಜೆಪಿ ಬಿಟ್ಟು ವಾಪಸ್‌ ಕಾಂಗ್ರೆಸ್‌ಗೆ ತೆರಳುವ ಸುದ್ದಿಗೆ ಮತ್ತಷ್ಟು ಜೀವ ಬರುವಂತೆ ಮಾಡಿತ್ತು. ಇದೀಗ ಮತ್ತೊಬ್ಬ ಬಾಂಬೆ ಫ್ರೆಂಡ್ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಮತ್ತೆ ಸೋಮಶೇಖರ್ ಹಾದಿಯನ್ನೇ ತುಳಿದಿದ್ದಾರ. ಶಿವರಾಮ್ ಹೆಬ್ಬಾರ್ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೆಬ್ಬಾರ್ ಕೂಡ  ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬುದಕ್ಕೆ ಇದು ಬಲವಾದ ಪುಷ್ಟಿ ನೀಡಿದೆ. ಬಿಜೆಪಿಯ ಉಳಿದ ಶಾಸಕರಿಗೆ ಇಲ್ಲದ ಕ್ಷೇತ್ರದ ಕೆಲಸಗಳು ಬಾಂಬೆ ಫ್ರೆಂಡ್ಸ್ ಖ್ಯಾತಿಯ ಶಾಸಕರಿಗೆ ಮಾತ್ರ ಸಿಎಂ ಸಿದ್ದರಾಮಯ್ಯ ಬಳಿ ಹೆಚ್ಚಾಗಿ ನಡೆಯುತ್ತಿರುವುದು ಎಲ್ಲ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಮುಂಬರುವ ದಿನಗಳಲ್ಲಿ ಶಿವರಾಂ ಹೆಬ್ಬಾರ್ ಕೂಡ ಕಾಂಗ್ರೆಸ್ ಕಡೆ ಮುಖ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ಅಡಿಪಾಯ ಹಾಕಿದಂತಿದೆ.  ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಎಸ್‌ಟಿಎಸ್ ಅವರ ಆಪ್ತರು, ಅನೇಕ ಬೆಂಬಲಿಗರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ… ಯಾವಾಗ ಬೇಕಾದ್ರೂ ಎಸ್‌ಟಿ.ಸೋಮಶೇಖರ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಇದ್ರ ಬೆನ್ನಲ್ಲೇ ಎಸ್‌ಟಿ ಸೋಮಶೇಖರ್ ಕ್ಷೇತ್ರದ ಮೇಲೆ ಡಿಸಿಎಂ ಡಿಕೆಶಿವಕುಮಾರ್‌ಗೂ ಪ್ರೀತಿ ಹೆಚ್ಚಾಗಿದೆ. ನಿನ್ನೆ(ಆಗಸ್ಟ್ 26) ಯಶವಂತಪುರ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಇನ್ನೊಂದೆಡೆ ಸ್ವಪಕ್ಷೀಯ ನಾಯಕರ ವಿರುದ್ಧ ಎಸ್.ಟಿ.ಸೋಮಶೇಖರ್ ಮತ್ತೆ ಬಹಿರಂಗವಾಗಿ ಟೀಕಿಸಿದ್ದಾರೆ. ಬಿಜೆಪಿಯಲ್ಲಿ ಬೂದಿಮುಚ್ಚಿದ ಕೆಂಡದಂಥ ಪರಿಸ್ಥಿತಿ ಇರುವುದು ನಿಜ ಎಂದು ಹೇಳಿರುವುದು ಅಚ್ಚರಿಕೆ ಕಾರಣವಾಗಿದೆ. ಇದೆ ವೇಳೆ ನನ್ನ ರಾಜಕೀಯ ಬೆಳವಣಿಗೆಗೆ ಡಿ.ಕೆ.ಶಿವಕುಮಾರ್ ಕಾರಣ ಅಂತಲೂ ಬಣ್ಣಿಸಿದ್ದಾರೆ.

ಇನ್ನು ಯಶವಂತಪುರದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಿಕೆಶಿ ಮಾತನಾಡಿ, ನನ್ನ, ಸೋಮಶೇಖರ್ ಸಂಬಂಧ ಇಂದಿನದ್ದಲ್ಲ, 35 ವರ್ಷ ಹಳೆಯದ್ದು. ನಾವು ಬಿತ್ತಿದ ಬೀಜ, ನಾವು ಗೊಬ್ಬರ ಹಾಕಿದ ಗಿಡ ಈಗ ಮರವಾಗಿದೆ.. ಹಣ್ಣನ್ನು ಬೇರೆಯವರು ಕಿತ್ತು ತಿನ್ನಬಾರದೆಂದು ಇಲ್ಲಿಗೆ ಅವರ ಜತೆ ಬಂದಿರುವೆ ಅಂತೇಳಿದ್ದಾರೆ.

ಎಸ್.ಟಿ ಸೋಮಶೇಖರ್ ಮನವಿ ಮೇರೆಗೆ ಡಿಸಿಎಂ ಡಿಕೆಶಿವಕುಮಾರ್ ಇಂದು ಕನಕಪುರ ರಸ್ತೆಯ ಯಶವಂತಪುರ ಕ್ಷೇತ್ರದ ರೆಸಿಡೆನ್ಶಿಯಲ್ ಅಸೋಸಿಯೇಷನ್‌ಗಳ ಅಹವಾಲು ಆಲಿಸಲಿದ್ದಾರೆ. ಈ ಮೂಲಕ ಸೋಮಶೇಖರ್ ಕೂಡ ಕಾಂಗ್ರೆಸ್ ಸೇರ್ಪಡೆಗೆ ಬೇಕಾದ ವೇದಿಕೆಯನ್ನು ಕನಕಪುರ ರಸ್ತೆಯಿಂದಲೇ ಗಟ್ಟಿ ಮಾಡಿಕೊಳ್ಳುವಂತೆ ಕಾಣುತ್ತಿದೆ.

ಸದ್ಯಕ್ಕೆ ಆಪರೇಷನ್ ಹಸ್ತದ ತಂತ್ರಗಾರಿಕೆಗೆ ಸೋಮಶೇಖರ್ ಹಾಗೂ ಹೆಬ್ಬಾರ್ ತಾವೇ ಒಳಗಾದಂತೆ ಕಾಣುತ್ತಿದೆ. ಬರುವವರೆಲ್ಲ ಬರಲಿ ಎಂಬ ಮಾತಿನ ಮೂಲಕ ಉಳಿದ ನಾಯಕರಿಗೆ ಸಿದ್ದರಾಮಯ್ಯ, ಡಿ.ಕೆಶಿವಕುಮಾರ್ ಜೋಡಿ ರೆಡ್ ಕಾರ್ಪೇಟ್ ಹಾಕುತ್ತಿರುವುದು ಸ್ಪಷ್ಟ.

ದೇಶ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೆ ಪವರ್ ಶೇರಿಂಗ್ ಚರ್ಚೆ: ಸಿಎಂ, ಡಿಸಿಎಂಗೆ ದೆಹಲಿ ಬುಲಾವ್?

Published

on

ಬೆಂಗಳೂರು: Siddaramaiah ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮತ್ತೆ ಪವರ್ ಶೇರಿಂಗ್ ಹಾಗೂ ಸಂಪುಟ ಪುನಾರಚನೆ ಚರ್ಚೆಗಳು ಜೋರಾಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ D. K. Shivakumar ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ದೆಹಲಿಗೆ ಬರುವಂತೆ ಸೂಚನೆ ನೀಡಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದತ್ತ ಎಐಸಿಸಿ ಚಿತ್ತ

ಇತ್ತೀಚೆಗೆ Keralaದಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆ, ಇದೀಗ ಎಐಸಿಸಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳತ್ತ ಗಮನ ಹರಿಸಿದೆ ಎನ್ನಲಾಗಿದೆ.

Mallikarjun Kharge ಅವರು ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

2.5 ವರ್ಷಗಳ ಅಧಿಕಾರ ಹಂಚಿಕೆ ಸೂತ್ರಕ್ಕೆ ಅಂತ್ಯ?

ರಾಜ್ಯ ಕಾಂಗ್ರೆಸ್‌ನಲ್ಲಿ ಬಹುಕಾಲದಿಂದ ಚರ್ಚೆಯಾಗುತ್ತಿರುವ 2.5 ವರ್ಷಗಳ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕ Rahul Gandhi ಅವರು ಶೀಘ್ರದಲ್ಲೇ ವಿದೇಶ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆ, ಅದಕ್ಕೂ ಮುನ್ನವೇ ಕರ್ನಾಟಕ ರಾಜಕೀಯದ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆಗಳಿವೆ.

ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ Satish Jarkiholi, “ದೆಹಲಿ ಸಭೆಯಲ್ಲೇ ಎಲ್ಲವೂ ನಿರ್ಧಾರವಾಗಲಿದೆ. ಸದ್ಯದಲ್ಲೇ ಕುತೂಹಲಕ್ಕೆ ತೆರೆ ಬೀಳಲಿದೆ” ಎಂದು ಹೇಳಿರುವುದು ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಸಂಪುಟ ಪುನಾರಚನೆಗೂ ವೇದಿಕೆ?

ಇದೀಗ ಕಾಂಗ್ರೆಸ್ ವಲಯದಲ್ಲಿ ನಾಯಕತ್ವ ಬದಲಾವಣೆಯೋ ಅಥವಾ ಸಂಪುಟ ಪುನಾರಚನೆಯೋ ಎಂಬ ಪ್ರಶ್ನೆ ಮತ್ತೆ ತೀವ್ರಗೊಂಡಿದೆ.

ಡಿಕೆ ಶಿವಕುಮಾರ್ ಬಣ ಪವರ್ ಶೇರಿಂಗ್ ಜಾರಿಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಸಿದ್ದರಾಮಯ್ಯ ಆಪ್ತರು ಸಂಪುಟ ಪುನಾರಚನೆ ಮೂಲಕ ಅಸಮಾಧಾನ ಶಮನಕ್ಕೆ ಹೈಕಮಾಂಡ್ ಮುಂದಾಗಬಹುದು ಎಂದು ಲೆಕ್ಕಾಚಾರ ನಡೆಸುತ್ತಿದ್ದಾರೆ.

Continue Reading

ದೇಶ

14ರ ಬಾಲಕನ ‘RASTHE’ ಆ್ಯಪ್ ವೈರಲ್: ಬೆಂಗಳೂರಿನ ರಸ್ತೆ ಸಮಸ್ಯೆಗೆ ಟಿಂಡರ್ ಸ್ಟೈಲ್ ಪರಿಹಾರ!

Published

on

ಬೆಂಗಳೂರು: Bengaluru ನಗರದ ಟ್ರಾಫಿಕ್, ರಸ್ತೆ ಗುಂಡಿಗಳು ಹಾಗೂ ಹಾಳಾದ ಫುಟ್‌ಪಾತ್ ಸಮಸ್ಯೆಯಿಂದ ಜನರು ಬೇಸತ್ತಿರುವ ನಡುವೆಯೇ, 14 ವರ್ಷದ ಬಾಲಕನೊಬ್ಬ ತಂತ್ರಜ್ಞಾನದ ಮೂಲಕ ವಿಭಿನ್ನ ಪರಿಹಾರ ಕಂಡುಹಿಡಿದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಗಳಿಸಿದ್ದಾನೆ.

ನಗರದ ಸೂರ್ಯ ಉತ್ಕರ್ಷ ಎಂಬ ಬಾಲಕ ಅಭಿವೃದ್ಧಿಪಡಿಸಿರುವ ‘RASTHE’ ಆ್ಯಪ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಡೇಟಿಂಗ್ ಆ್ಯಪ್ Tinder ಮಾದರಿಯಲ್ಲಿ ಕಾರ್ಯನಿರ್ವಹಿಸುವ ಈ ಆ್ಯಪ್ ಮೂಲಕ ನಾಗರಿಕರು ರಸ್ತೆಗಳು ಹಾಗೂ ಫುಟ್‌ಪಾತ್‌ಗಳ ಸ್ಥಿತಿಗೆ ರೇಟಿಂಗ್ ನೀಡಬಹುದು.

‘ರೈಟ್ ಸ್ವೈಪ್’ ಮಾಡಿದ್ರೆ ರಸ್ತೆ ಒಳ್ಳೆಯದು!

ಈ ಆ್ಯಪ್‌ನಲ್ಲಿ ನಾಗರಿಕರು ಹಾಳಾದ ರಸ್ತೆ, ಒಡೆದ ಫುಟ್‌ಪಾತ್ ಅಥವಾ ಸಂಚಾರ ಸಮಸ್ಯೆಗಳ ಫೋಟೋ ತೆಗೆದು ಅಪ್‌ಲೋಡ್ ಮಾಡಬಹುದು. ರಸ್ತೆ ಚೆನ್ನಾಗಿದ್ದರೆ ‘ರೈಟ್ ಸ್ವೈಪ್’, ಸಮಸ್ಯೆಯಿದ್ದರೆ ‘ಲೆಫ್ಟ್ ಸ್ವೈಪ್’ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅದೇ ಕಾರಣಕ್ಕೆ ನೆಟ್ಟಿಗರು ಈ ಆ್ಯಪ್‌ಗೆ “ಫುಟ್‌ಪಾತ್‌ಗಳ ಟಿಂಡರ್” ಎಂದು ಹೆಸರಿಟ್ಟಿದ್ದಾರೆ.

ಕೇವಲ 30 ನಿಮಿಷಗಳಲ್ಲಿ ಆ್ಯಪ್ ಅಭಿವೃದ್ಧಿ

ಸೂರ್ಯ ಉತ್ಕರ್ಷ ತನ್ನ X ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ‘10x Apps’ ಪ್ಲಾಟ್‌ಫಾರ್ಮ್ ಬಳಸಿ ಕೇವಲ 30 ನಿಮಿಷಗಳಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾನೆ.

“ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು 30 ನಿಮಿಷಗಳಲ್ಲಿ ಫಿಕ್ಸ್ ಮಾಡಿದ್ದೇನೆ” ಎಂದು ಆತ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

BBMPಗೆ ನೇರ ದೂರು ಸೌಲಭ್ಯ

ಈ ಆ್ಯಪ್‌ನ ಮತ್ತೊಂದು ವಿಶೇಷತೆಯೆಂದರೆ, ನಾಗರಿಕರು ಅಪ್‌ಲೋಡ್ ಮಾಡುವ ಫೋಟೋಗಳು ಜಿಯೋ-ಟ್ಯಾಗ್ ಮೂಲಕ ಸಂಬಂಧಿತ ವಾರ್ಡ್‌ಗೆ ಮ್ಯಾಪ್ ಆಗುತ್ತವೆ.

ಇದರಿಂದ Bruhat Bengaluru Mahanagara Palike ಅಧಿಕಾರಿಗಳಿಗೆ ಸಮಸ್ಯೆ ಇರುವ ಪ್ರದೇಶವನ್ನು ತಕ್ಷಣ ಗುರುತಿಸಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

ಜನರೇ ನಗರದ ‘ಸೆನ್ಸರ್’

“ರಸ್ತೆಗಳನ್ನು ಕಾರುಗಳಿಗಾಗಿ ನಿರ್ಮಿಸಲಾಗಿದೆ, ಆದರೆ ಈ ಆ್ಯಪ್ ಜನರಿಗಾಗಿ” ಎಂದು ಸೂರ್ಯ ಹೇಳಿದ್ದಾನೆ.

ಫುಟ್‌ಪಾತ್‌ಗಳು ಉತ್ತಮವಾಗಿದ್ದರೆ ಜನರು ರಸ್ತೆಯ ಮೇಲೆ ನಡೆಯುವುದು ಕಡಿಮೆಯಾಗುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆಯೂ ತಗ್ಗುತ್ತದೆ ಎಂಬುದು ಆತನ ಯೋಚನೆ.

ನಗರದ ಪ್ರತಿಯೊಬ್ಬ ನಾಗರಿಕನನ್ನೂ ಸಮಸ್ಯೆ ಗುರುತಿಸುವ ‘ಸೆನ್ಸರ್’ ಆಗಿ ರೂಪಿಸುವುದು ಈ ಆ್ಯಪ್‌ನ ಮುಖ್ಯ ಉದ್ದೇಶವಾಗಿದೆ.

ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಸದ್ಯ ಈ ಆ್ಯಪ್ ಅನ್ನು ಆ್ಯಪ್ ಸ್ಟೋರ್‌ಗೆ ಬಿಡುಗಡೆ ಮಾಡಲು ಸೂರ್ಯ ಸಜ್ಜಾಗಿದ್ದಾನೆ. ಸಾಮಾಜಿಕ ಕಳಕಳಿ ಹಾಗೂ ಹೊಸತನದ ಯೋಚನೆಗಾಗಿ ಬಾಲಕನಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬಹುತೇಕ ಬೆಂಗಳೂರಿಗರು, ಬಿಬಿಎಂಪಿಯ ಪ್ರಸ್ತುತ ದೂರು ಆ್ಯಪ್‌ಗಿಂತ ‘RASTHE’ ಹೆಚ್ಚು ಜನಸ್ನೇಹಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading

ದೇಶ

Breaking News : GBA Election ವಿಳಂಬಕ್ಕೆ ಬ್ರೇಕ್: ಆಗಸ್ಟ್ ಒಳಗೆ ಮುಗಿಸಲು ಕೋರ್ಟ್ ಆದೇಶ

Published

on

ನವದೆಹಲಿ: Supreme Court of India ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯನ್ನು ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಚುನಾವಣೆಗೆ ಹೆಚ್ಚುವರಿ ಕಾಲಾವಕಾಶ ನೀಡಿದೆ.

ರಾಜ್ಯ ಸರ್ಕಾರದ ಮನವಿ ಪುರಸ್ಕಾರ

ಜನಗಣತಿ ಹಾಗೂ ಎಸ್‌ಐಆರ್ ಕಾರ್ಯಗಳ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಈಗಾಗಲೇ ವಿವಿಧ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಚುನಾವಣೆ ನಡೆಸಲು ಕಷ್ಟವಾಗುತ್ತಿದೆ ಎಂದು ರಾಜ್ಯ ಸರ್ಕಾರ ಕೋರ್ಟ್‌ಗೆ ಮನವಿ ಮಾಡಿತ್ತು.

ಈ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಆಗಸ್ಟ್ ಅಂತ್ಯದೊಳಗೆ ಚುನಾವಣೆ ಪೂರ್ಣಗೊಳಿಸಲು ಅವಕಾಶ ನೀಡಿದೆ.

ಮತ್ತೆ ಕಾಲಾವಕಾಶ ಕೇಳಬೇಡಿ: ಕೋರ್ಟ್ ತಾಖೀತು

ಆದರೆ ಇದೇ ವೇಳೆ, ಈಗ ನೀಡಿರುವ ಕಾಲಾವಕಾಶದಲ್ಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.

ಮುಂದೆ ಮತ್ತೆ ಕಾಲಾವಕಾಶ ಕೇಳಬಾರದು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ತಾಖೀತು ಮಾಡಿದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗ ಮತ್ತು ಸರ್ಕಾರದ ಮೇಲೆ ಇದೀಗ ಸಮಯದ ಒತ್ತಡ ಹೆಚ್ಚಾಗಿದೆ.

ಚುನಾವಣಾ ಸಿದ್ಧತೆಗಳಿಗೆ ವೇಗ

ಸುಪ್ರೀಂ ಕೋರ್ಟ್ ಆದೇಶದ ಬಳಿಕ Karnataka State Election Commission ಚುನಾವಣಾ ಸಿದ್ಧತೆಗಳಿಗೆ ವೇಗ ನೀಡುವ ಸಾಧ್ಯತೆ ಇದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯಲಿರುವ ಈ ಚುನಾವಣೆ ರಾಜಕೀಯವಾಗಿ ಕೂಡ ಮಹತ್ವ ಪಡೆದುಕೊಂಡಿದೆ.

Continue Reading

Trending