ದೇಶ

ಬಿಹಾರ ಉದ್ಧಾರವಾದರೆ ಭಾರತ ಉದ್ಧಾರವಾದಂತೆ: ಸಂಸದ ಡಾ.ಮಂಜುನಾಥ್ ಉವಾಜ

ಬೆಂಗಳೂರು: ಈ ಬಾರಿಯ ಬಜೆಟ್‍ನಲ್ಲಿ ಆಂಧ್ರಪ್ರದೇಶ ಹೊರತುಪಡಿಸಿ ದಕ್ಷಿಣದ ರಾಜ್ಯಗಳಿಗೆ ಬಹಳಷ್ಟು ಅನ್ಯಾಯ ಮಾಡಲಾಗಿದೆ, ಬಿಜೆಪಿ ಅಧಿಕಾರಿದಲ್ಲಿರುವ ರಾಜ್ಯಗಳಿಗೆ ಮಾತ್ರ ಅನುದಾನ ನೀಡಿ ತಾರತಮ್ಮ ಎಸಗಲಾಗಿದೆ, ಬಿಹಾರ ಆಂಧ್ರಪ್ರದೇಶಗಳಿಗೆ ಭರುಪೂರ ಕೊಡುಗಡ ನೀಡುವ ಮೂಲಕ ಇದೊಂದು ಅಧಿಕಾರ ಉಳಿಸಿಕೊಳ್ಳುವುದಕ್ಕೆ ಮೀಸಲಿಟ್ಟ ಬಜೆಟ್ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸುತ್ತಿವೆ,
ಈ ನಡುವೆ ಖಾಸಗಿ ವಾಹಿನಿಯ ಡಿಬೇಟ್ ಒಂದರಲ್ಲಿ ಪಾಲ್ಗೊಂಡಿದ್ದ ಸಂಸದ ಡಾ.ಮಂಜುನಾಥ್‍ರವರಿಗೆ ಮೋದಿ ಸರ್ಕಾರ ಬಿಹಾರಕ್ಕೆ ಕೋಟಿ ಕೋಟಿ ಕೊಟ್ಟಿದ್ದು ಏಕೆ ಕೇಳಿದಾಗ ಹೀಗೆ ಪ್ರತಿಕ್ರಿಯಿಸಿದ್ದಾರೆ, ಬಿಹಾರ ಅಭಿವೃದ್ಧಿ ಆದ್ರೆ ಭಾರತವೇ ಅಭಿವೃದ್ಧಿ ಆದಂತೆ ಎಂದು ಹೇಳಿದ್ದಾರೆ, ಇಷ್ಟು ವರ್ಷ ಬಿಹಾರ ರಾಜ್ಯವನ್ನು ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಕಡೆಗಣಿಸಲಾಗಿತ್ತು, ಈ ಆ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ,
ಆದರೆ ರಾಜ್ಯಕ್ಕೆ ಆಗಿರುವ ಈ ಪ್ರಮಾಣದ ಅನ್ಯಾಯದ ಬಗ್ಗೆ ಸಂಸದರು ಯಾವುದೇ ಮಾತು ಕೂಡ ಆಡಿಲ್ಲ ಎಂಬುದು ಜನತೆಯ ದುರದೃಷ್ಟ ಸಾಮಾಜಿಕ ಮಾಧ್ಯಮದಲ್ಲಿ ಡಾ.ಮಂಜುನಾಥ್ ಅವರ ಈ ಮಾತುಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ, ಇದು ಓಲೈಕೆ ರಾಜಕಾರಣದ ಮನಸ್ಧಿತಿಯನ್ನು ಬಿಂಬಿಸುವ ಮನಸ್ಧಿತಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version