ದೇಶ
ರಾಜ್ಯದಲ್ಲಿ ಲೀಥಿಯಂ ನಿಕ್ಷೇಪ ಪತ್ತೆ ಮಂಡ್ಯ, ಯಾದಗಿರಿಗೆ ಬಂಪರ್!

ನವದೆಹಲಿ: ಕರ್ನಾಟಕ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ರಾಜ್ಯ ಸಭೆಯಲ್ಲಿ ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ ,
ಈ ಜೆಲ್ಲೆಗಳಲ್ಲಿ ಲಿಥಿಯಂ ಸಂಪನ್ಮೂಲ ಇರುವುದನ್ನು ಪರಮಾಣು ಶಕ್ತಿ ಇಲಾಖೆಯ ಘಟಕವಾದ ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್ ಪ್ಲೋರೇಷನ್ ಮತ್ತು ರಿಸರ್ಚ್ ಪತ್ತೆ ಮಾಡಿದೆ ಎಂದು ಸಚಿವರು ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ,
ಮಂಡ್ಯ ಜಿಲ್ಲೆಯ ಮರ್ಲಗಲ್ಲ ಪ್ರದೇಶದಲ್ಲಿ ಎಎಂಡಿ 1,600 ಟನ್ ಲಿಥಿಯಂ ಸಂಪನ್ಮೂಲ ಇದೆ, ಯಾದಗಿರಿ ಜಿಲ್ಲೆಯಲ್ಲಿ ಪ್ರಾಥಮಿಕ ಸಮೀಕ್ಷೆಗಳ ಮತ್ತು ಭೂಗರ್ಭ ಪರಿಶೋಧನೆ ನಡೆಸಲಾಗುತ್ತಿದೆ, ಛತೀಸ್ಗಢದ ಕೂರ್ಬಾ ಜಿಲ್ಲೆಯ ಭಾಗಗಳಲ್ಲಿ ಪರಿಶೋಧನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರ ಮತ್ತು ರಷ್ಟಾದ ಒಕ್ಕೂಟ ಸರ್ಕಾರವು ಪರಮಾಣು ಶಕ್ತಿಯ ಬಳಕೆಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವರ್ಧನೆಗೆ ಅಸಕ್ತಿ ಹೊಂದಿವೆ.