ಬೆಂಗಳೂರು

ಸ್ವಾತಂತ್ರೋತ್ಸವ ದಿನವನ್ನು ಅರ್ಥಪೂರ್ಣವಾಗಿ ಅಚರಿಸಬೇಕು-ಕೇಂದ್ರ ಸಚಿವೆ ಶೋಭಾ

ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಕುರಿತು ಜನಜಾಗೃತಿಗಾಗಿ ಪ್ರತಿಯೊಂದು ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವ ಉದ್ದೇಶದಿಂದ ಹರ್ ಘರ್ ತಿರಂಗ ಕಾರ್ಯಕ್ರಮ ದೇಶಾದ್ಯಂತ ಅಚರಿಸಲಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಜೆ ಹೇಳಿದರು, ಯಶವಂತಪುರ ಕ್ಷೇತ್ರದಲ್ಲಿ ಹರ್ ಘರ್ ತಿರಂಗ ಹಾಗೂ ಬೈಕ್ ರ್ಯಾಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಾತಂತ್ರೋತ್ಸವ ದಿನವನ್ನು ಅರ್ಥಪೂರ್ಣವಾಗಿ ಅಚರಿಸಬೇಕು, ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನಪಿಸಿಕೊಳ್ಳಬೇಕು, ಸ್ವಾತಂತ್ರ್ಯದ ಮಹಾ ಹಬ್ಬವನ್ನು ವಿಶೇಷವಾಗಿಸಲು ಕೇಂದ್ರ ಆಗಸ್ಟ್ 9 ರಿಂದ ದೇಶದ ಪ್ರತಿ ಮನೆಗಳಲ್ಲಿ ತ್ರಿವರ್ಣ ಅಭಿಯಾನವನ್ನು ನಡೆಸುತ್ತದೆ ಆಗಸ್ಟ್ 15 ರಂದು ಕೊನೆಗೊಳ್ಳುತ್ತದೆ ಎಂದು ಹೇಳಿದರು, ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಅನಿಲ್ ಚಳಗೇರಿ, ಬಿಜೆಪಿ ಮುಖಂಡರಾದ ಜ.ರಮೇಶ್, ರ.ಅಂಜನಪ್ಪ, ಮಾರೇಗೌಡ, ಶಶಿಕುಮಾರ್ ಹಾಗೂ ಹಲವಾರು ಬಿಜೆಪಿ ಮುಖಂಡರು ಉಪಸ್ಧಿತರಿದ್ದರು,

Leave a Reply

Your email address will not be published. Required fields are marked *

Trending

Exit mobile version