ಬೆಂಗಳೂರು

ಯಾರೇನೇ ಅಂದ್ರೂ ನೀರಿನ ಬೆಲೆ ಏರಿಕೆ ಗ್ಯಾರೆಂಟಿ-ಡಿಸಿಎಂ

ಬೆಂಗಳೂರು: ಯಾರು ಏನೇ ಬೈದರೂ ನೀರಿನ ಬೆಲೆ ಏರಿಕೆ ಶತಸಿದ್ಧ, ವೆಚ್ಚದ ಬಗ್ಗೆ ಯೋಚಿಸಿದ್ದರೆ ನೀರು ಪೂರೈಕೆ ಕಷ್ಟವಾಗಲಿದೆ ಎಂದು ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನೀರು ಸರಬರಾಜು ಪ್ರಕ್ರಿಯೆಗೆ ಎಷ್ಟು ವರ್ಷದಲ್ಲಿ ಎಷ್ಟು ವೆಚ್ಚವಾಗುತ್ತಿದೆ, ಈಗ ಎಷ್ಟು ಹಣ ಖರ್ಚಾಗುತ್ತಿದೆ ಎಂಬ ಮಾಹಿತಿಯನ್ನು ಒಳಗೊಂಡ ಪ್ರಾಜೆಕ್ಟ್ ರೂಪಿಸಿ ಸಂಬಂಧಿಸಿ ಮಂಡಳಿ ಹಾಗೂ ಸಂಸ್ಧೆಗಳು ಬಿಡುಗಡೆಗೊಳಿಸಬೇಕು, ಮಾಧ್ಯಮಗಳು ಸೇರಿದಂತೆ ಎಲ್ಲರೂ ಈ ಮಾಹಿತಿಗಳನ್ನು ಜನರಿಗೆ ಮತ್ತು ವಿರೋಧಪಕ್ಷಗಳಿಗೆ ಮನವರಿಕೆಯಾಗುವ ರೀತಿ ತಲುಪಿಸುವ ಕೆಲಸ ಮಾಡುವ ಮೂಲಕ ನೀರು, ವೆಚ್ಚ ಸರಬರಾಜು ಬಗ್ಗೆ ಜಾಗೃತಿ ಹುಟ್ಟಿಸುವ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ,
ಬೆಂಗಳೂರಿಗೆ ಹೊಂದಿಕೊಂಡಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಅಭಿಯಾನ, ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ವಿಧಾನಸೌಧ ಮೆಟ್ಟಿಲುಗಳ ಮುಂಭಾಗ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಏರಿಕೆ ಕುರಿತು ಮಾಹಿತಿ ನೀಡಿದ್ರು,
ಇದೇ ವೇಳೆ ವಿದ್ಯುತ್ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕಾರ್ಪೋರೇಷನ್, ಪಡಬ್ಲ್ಯುಡಿ ಸೇರಿದಂತೆ ಕೆಲವು ಸಂಸ್ಧೆಗಳು ಒಟ್ಟು ಸೇರಿ ಒಂದು ಘಟಕವನ್ನು ರಚಿಸಿ ಆ ಮೂಲಕ ತಾವೇ ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಆ ಸಂಸ್ತೆಗಳಿಗೆ ವಿದ್ಯುತ್ ಹಣದಲ್ಲಿ ಉಳಿತಾಯಕ್ಕೆ ಅವಕಾಶವೂ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version