ದೇಶ
Tejasvi Surya ನನ್ನ ಆಫೀಸ್ ರಸ್ತೆಗೇ ಟಾರ್ ಭಾಗ್ಯವಿಲ್ಲ- ಸಂಸದ ಸೂರ್ಯ ಅಳಲು!!

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಇಂದು ಜೆಪಿ ನಗರದ ವೇಗಾ ಸಿಟಿ ಮಾಲ್ ಬಳಿಯ ದಾಲ್ಮಿಯಾ ಸರ್ಕಲ್ ಬಳಿ ಮೆಟ್ರೋ 3 ನೇ ಹಂತದ ಪರಿಶೀಲನೆ ನಡೆಸಿದರು,
ಬಳಿಕ ಮಾತನಾಡಿದ ಅವರು ಸಾರ್ವಜನಿಕ ಪ್ರಶ್ನೆಗೆ ಉತ್ತರಿಸಿದರು, ರಸ್ತೆ ರಿಪೇರಿ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಂಸದರು ಒಂದೂವರೆ ವರ್ಷದಿಂದ ನನಗೆ ಜಯನಗರದಲ್ಲಿರುವ ನನ್ನ ಕಚೇರಿಯ ರಸ್ತೆಗೇ ಟಾರ್ ಹಾಕಿಸಿಕೊಡೋಕೆ ಆಗಿಲ್ಲ ಎಂದರು,
ಇದರಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ, ಅದರೆ ಈ ಸರ್ಕಾರ ಬಂದಾಗಿಂದ ಯಾವುದಾದರೂ ಒಂದು ಕಡೆ ಒಬ್ಬ ಶಾಸಕನಾದರೂ ಅಭಿವೃದ್ಧಿಯ ಸಂಕೇತವಾಗಿ ಗುದ್ದಲಿ ಪೂಜೆ ಮಾಡಿದ ಫೋಟೋ ನೀವು ನೋಡಿದ್ದೀರಾ ಎಂದರು,
ಸರ್ಕಾರಕ್ಕೆ ಗುಂಡಿ ಮುಚ್ಚಲು ಕಾಳಜಿಯೂ ಇಲ್ಲ, ಆಸಕ್ತಿನೂ ಇಲ್ಲ, ಇಂದು ಕೂಡ ರಸ್ತೆಗಳು ಸರಿ ಇಲ್ಲ, ಸಿಟ್ಟು ಬಂದು ಹತಾಶಾರಾಗುವಷ್ಟು ಬೇಜಾರಾಗುತ್ತೆ ಎಂದು ಸಂಸದರು ತಿಳಿಸಿದರು,