ಬೆಂಗಳೂರು
ತಾನು ತಪ್ಪಿಸಿಕೊಳ್ಳಲು ಸಿಎಂ ಬೇರೆಯವರನ್ನು ಕಳ್ಳ ಎನ್ನುತ್ತಿದ್ದಾರೆ-ಜನಾರ್ಧನ ರೆಡ್ಡಿ ಆರೋಪ

ಬೆಂಗಳೂರು: ಕೊಪ್ಪಳ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರಿಗೆ ಸರ್ಕಾರದಿಂದ ಒತ್ತಡ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಗೆ ಮೂಡಾ ಹಗರಣ ಕಂಟಕವಾಗಿದೆ ಹೀಗಾಗಿ ಉಳಿದವರನ್ನು ಕಳ್ಳರ ರೀತಿ ನೋಡ್ತಿದ್ದಾರೆ ಎಂದು ಆರೋಪಿಸಿದ್ದಾರೆ,
ಈ ಬಗ್ಗೆ ಮಾತನಾಡಿದ ಅವರು ನಾನು ಜೈಲಿನಿಂದ ಹೊರಬಂದ ಮೇಲೆ ಅಕ್ರಮ ಆಸ್ತಿ ಕೇಸ್ ಹಾಕಿಸಿದ್ರ, ಈ ಬಗ್ಗೆ ಎರಡು ಸಲ ಬಿ ರಿಪೋರ್ಟ್ ಸಲ್ಲಿಸಲಾಗಿದೆ, ಲೋಕಾಯುಕ್ತ ಎಸ್ಪಿಯವರು ಮೂರು ಬಾರಿ ನೋ ಅಬ್ಜೆಕ್ಷನ್ ಫೈಲ್ ಮಾಡಿದ್ದಾರೆ ಎಂದರು.
ಮುಡಾ ಹಗರಣ ಸಿದ್ದರಾಮಯ್ಯನವರಿಗೆ ಕಂಟಕವಾಗಿದೆ, ಈ ಪ್ರಕರಣದಿಂದ ಹೊರ ಬರಲು ಪರದಾಡುತ್ತಿದ್ದು, ಇದರಲ್ಲಿ ಮುಳಗುತ್ತಿದ್ದಾರೆ ಹೀಗಾಗಿ ಉಳಿದವರನ್ನು ಎಳೆದುಕೊಳ್ಳೋ ಕೆಲಸ ಮಾಡುತ್ತಿದ್ದಾರೆ ಎಂದು ಜನಾರ್ದನ್ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ,
ಈಗಾಗಲೇ ಒಂದು ಸಲ ಪ್ರಾಸಿಕ್ಯೂಷನ್ ಗೆ ಕೇಳಿ ಎಲ್ಲೆಡೆ ಸುದ್ದಿಯಾಗಿದ್ದಾರೆ, ಇದೀಗ ಮತ್ತೆ ಪ್ರಾಸಿಕ್ಯೂಷನ್ ಗೆ ಕಳಿಸಿದ್ರೆ, ಸಿದ್ದರಾಮಯ್ಯ ಸರ್ಕಾರ ನಗೆಪಾಟಲಿಗೀಡಾಗುತ್ತದೆ, ಇಂತಹ ಬೆದರಿಕೆಗೆ ಜನಾರ್ದನ ರೆಡ್ಡಿ ಬೆದರಲ್ಲಾ ಸಿದ್ದರಾಮಯ್ಯ ಅಹಿಂದ ಮುಖವಾಡ ಹಾಕಿಕೊಂಡು ಜನರಿಗೆ ವಂಚಿಸಿದ್ದಾರೆ ಎಂದು ಹೇಳಿದರು,
ಅನಾಮಧೇಯ ಹೆಸರಿನ ಮೇಲೆ ನೂರಾರು ಸೈಟು ತೆಗೆದುಕೊಂಡಿದ್ದಾರೆ ಇದು ಬರೋಬ್ಬರಿ ನಾಲ್ಕು ಸಾವಿರ ಕೋಟಿ ಹಗರಣವಾಗಿದೆ, ಈ ಹಿಂದೆ ಡ್ಯಾನ್ಸ್ ಮಾಡ್ತಾ ಕುಣಿತಾ ಬಳ್ಳಾರಿಗೆ ಬಂದ ದೊಡ್ಡ ಮನುಷ್ಯ ಸಿದ್ದರಾಮಯ್ಯ ಬಡವರಿಗೆ ಮನೆ ಕಟ್ಟಿಸಿಕೊಡುತ್ತಿನಿ ಅಂತ ಹೇಳಿದ್ರು, ಅದರೆ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ,
ಸಿದ್ದರಾಮಯ್ಯ ಅವರು ಎರಡು ಸಲ ಅಧಿಕಾರಕ್ಕೆ ಬಂದಿದ್ದಾರೆ ಹಾಗಾದ್ರೆ ಅವರು ಮಾಡಿದ್ದ ಲಕ್ಷ ಕೋಟಿ ಎಲ್ಲಿಗೆ ಹೋಯ್ತು? ಸಿಎಂ ಪದವಿಗೆ ಆಸೆಗೆ ಬಿದ್ದು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು, ಅವರ ಕೆಟ್ಟ ಹಣೆಬರಹವನ್ನು ಅವರೇ ಬರೆದುಕೊಂಡಿದ್ದಾರೆ ಅವರ ಕೆಟ್ಟ ಕರ್ಮದಿಂದ ತಪ್ಪಿಸಿಕೊಳ್ಳಲು ಆಗಲ್ಲ ಎಂದು ಜನಾರ್ದನ್ ರೆಡ್ಡಿ ಕಿಡಿಕಾರಿದ್ದಾರೆ ,