ದೇಶ
ಬ್ರಾಹ್ಮಿನ್ ಜೀನ್ಸ್ ವಿವಾದ? ಯಾರಿದು ಅನುರಾಧಾ ತಿವಾರಿ?

ಬೆಂಗಳೂರು: ಕಂಟೆಂಟ್ ಮಾರ್ಕೆಟಿಂಗ್ ಕಂಪನಿಯ ಸಿಇಓ ಅನುರಾಧಾ ತಿವಾರಿ ಎಕ್ಸ್ ನಲ್ಲಿ ಎಳನೀರು ಹೀರುತ್ತಿರುವ ಫೋಟೋ ಜೊತೆಗೆ ಬ್ರಾಹ್ಮಿನ್ ಜೀನ್ಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಆಗಸ್ಟ್ 22 ರಂದು ಗುರುವಾರ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಳಗಗಿರುವುದಷ್ಟೇ ಅಲ್ಲದೇ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ,
ತನ್ನು ಬ್ರಾಹ್ಮಣ ವಂಶವಾಹಿ ಎಂಬ ಅರ್ಥ ನೀಡುತ್ತಿರುವ ಪೋಸ್ಟ್ ಜಾತೀಯವಾದವನ್ನು ಪ್ರೋತ್ಸಾಹಿಸುತ್ತಿದೆ ಎಂದು ಹಲವಾರು ಆರೋಪಿಸಿದ್ದಾರೆ,
ಯಾವುದೇ ಮೀಸಲಾತಿ ಸೌಲಭ್ಯಗಳನ್ನು ಪಡೆಯದೇ ಬ್ರಾಹ್ಮಣರು ಮೇಲೆ ಬಂದಿದ್ದಾರೆ, ನಾವು ಬ್ರಾಹ್ಮಣರು ಎಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು ಎಂದು ಅನುರಾಧಾ ತಿವಾರಿ ಹೇಳಿಕೊಂಡಿದ್ದರು,
ನನ್ನ ಪೋಸ್ಟ್ ನಲ್ಲಿ ಕೇವಲ ಬ್ರಾಹ್ಮಣ ಎಂಬ ಉಲ್ಲೇಖವು ಹೇಗೆ ಇಂಥಾ ತೀವ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ? ಬ್ರಾಹ್ಮಣ ಸಮುದಾಯವು ಮೀಸಲಾತಿ ಅಥವಾ ಉಚಿತಗಳಿಂದ ಪ್ರಯೋಜನ ಪಡೆಯುವುದಿಲ್ಲವಾದ್ದರಿಂದ ಅವರು ತಮ್ಮ ಸಾಧನೆಗಳಲ್ಲಿ ಹೆಮ್ಮೆಪಡುವ ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಅನುರಾಧಾ ತಿವಾರಿ ಹೇಳಿದ್ದಾರೆ,
ಬ್ರಾಹ್ಮಣರಿಗೆ ಸರಕಾರದಿಂದ ಯವುದೇ ಮೀಸಲಾತಿಗಳಲ್ಲ ಹಾಗೂ ಉಚಿತಗಳಲ್ಲ, ನಾವು ಎಲ್ಲವನ್ನು ಸ್ವಂತವಾಗಿ ಗಳಿಸುತ್ತೇವೆ ಎಂದು ತಿವಾರಿ ಎಕ್ಸ್ ನಲ್ಲಿ ಬರೆದಿದ್ದಾರೆ,
ಇಷ್ಟೇ ಅಲ್ಲದೇ ಭಾರತದಲ್ಲಿ ಬ್ರಾಹ್ಮಣರು ಮುಂದಿನ ಯಹೂದ್ಯರಾಗಿಲಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಸಹ ಈ ಪೋಸ್ಟ್ ಹುಟ್ಟುಹಾಕಿದೆ, ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಿಣ್ ಜೀನ್ಸ್ ಪೋಸ್ಟ್ ವೈರಲ್ ಆಗಿದ್ದು, ಪ್ರತಿಯೊಬ್ಬರೂ ತಮ್ಮ ಜನಿವಾರದೊಡನೆ ಫೋಟೋ ಕ್ಲಿಕ್ಕಿಸಿ ಹಾಕಿಕೊಳ್ಳಲಾರಂಭಿಸಿದ್ದಾರೆ, ಸೋಮವಾರ ಎಕ್ಸ್ ನಲ್ಲಿ ಬ್ರಾಹ್ಮಿನ್ ಎಂಬ ಪದ ಟ್ರೆಂಡಿಂಗ್ ವಿಷಯವಾಗಿತ್ತು,