ರಾಜಕೀಯ
ಬಾಂಗ್ಲಾದಂತೆ ಪ್ರಧಾನಿ ಮನೆಗೆ ಮುತ್ತಿಗೆ ಹಾಕುವ ದಿನ ದೂರವಿಲ್ಲ-ಕೈ ಶಾಸಕ ವಿವಾದ!

ಗದಗ: ಇತ್ತೀಚಿಗೆ ಕೈ ನಾಯಕರು ಬಿಜೆಪಿಯನ್ನು ಟೀಕಿಸುವ ಬರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದು, ಇವೆಲ್ಲದರ ನಡುವೆ ಕೇಂದ್ರ ಸರ್ಕಾರ, ಮೋದಿ ಹಾಗೂ ಅಮಿತ್ ಶಾ ಅವರು ವಿರುದ್ಧ ಮಾತನಾಡುವ ಬರದಲ್ಲಿ ಗದಗದ ರೋಣ ಶಾಸಕ ಜೆಎಸ್ ಪಾಟೀಲ ಎಡವಟ್ಟು ಮಾಡಿಕೊಂಡಿದ್ದಾರೆ,
ಗಜೇಂದ್ರಗಡದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಭಾಷಣ ಮಾಡುತ್ತಿದಾಗ ಕೇಂದ್ರವನ್ನು ಟೀಕಿಸುವ ಬರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹುನ್ನಾರ ನಡೆಸುತ್ತಿದ್ದಾರೆ ಇಂದು ಜೆ ಎಸ್ ಪಾಟೀಲ್ ಹೇಳಿದ್ದಾರೆ,
ಅಷ್ಟೇ ಅಲ್ಲದೆ ಯಾವ ರೀತಿ ಬಾಂಗ್ಲಾದಲ್ಲಿ ಜನ ಪ್ರಧಾನಿ ಮನೆ ಹೊಕ್ಕೊರೊ ಅದೇ ರೀತಿ ನಮ್ಮ ದೇಶದಲ್ಲೂ ಪ್ರಧಾನಿ ಮನೆಗೆ ಕೊಕ್ಕೊದು ಬಹಳ ದೂರವಿಲ್ಲ..! ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ,
ಮೋದಿ ಅಮಿತ್ ಶಾ ಯಾವ ರೀತಿ ರಾಜಕೀಯ ಮಾಡುತ್ತಾ ಬಂದಿದ್ದಾರೆ ಎಂದು ಎಲ್ಲರಿಗೂ ಗೊತ್ತಾಗಿದೆ, ಇವತ್ತು ಅಂಥವರ ಕೈಯಲ್ಲಿ ದೇಶ ಕೊಟ್ಟಿದ್ದೇವೆ, ನಾವೆಲ್ಲರೂ ಒಂದಾಗಬೇಕು, ಗಟ್ಟಿಯಾಗಬೇಕು, ಧ್ವನಿಗಟ್ಟಿಗೊಳಿಸಬೇಕು ಹೋರಾಟ ಮುಂದುವರೆಯಬೇಕು ಎಂದರು,