ರಾಜಕೀಯ
ಚಿಲ್ಲರೆ ಕಾಸಿಗೆ ನೂರಾರು ಕೋಟಿ ರೂ.ಮೌಲ್ಯದ ಭೂಮಿ ಮಾರಾಟ-ಕೈ ವಿರುದ್ದ ಹೊಸ ಆರೋಪ!

ಬೆಂಗಳೂರು: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಚುನಾವಣಾ ವೆಚ್ಚಕ್ಕಾಗಿ ಬಾಗಮನೆ ಡೆವಲಪರ್ಸ್ ಅವರಿಂದ 4 ಕೋಟಿ ಸಾಲ ಪಡೆದು, ಇದಕ್ಕೆ ಪ್ರತಿಯಾಗಿ ಎಂಟು ಎಕರೆ ಜಾಗವನ್ನು ಮಂಜೂರು ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ,
ಬಿಜೆಪಿ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದು, ಚುನಾವಣೆ ವೆಚ್ಚಕ್ಕೆಂದು ಬಾಗಮನೆ ಡೆವಲಪರ್ಸ್ ನಿಂದ ಸಚಿವರು 4 ಕೋಟಿ ಪಡೆದಿರುವುದು ಅವರ ಚುನಾವಣಾ ಅಫಿಡವಿಟ್ನಲ್ಲಿಯೇ ಬಹಿರಂಗವಾಗಿದೆ,
ಚುನಾವಣೆ ಮುಗಿದ ತಕ್ಷಣ ಬಾಗಮನೆ ಡೆವಲಪರ್ಸ್ನ ಪಾಲುದಾರರ ಮತ್ತೊಂದು ಕಂಪನಿಯಾದ ವೈಗೈ ಇನ್ವೆಸ್ಟ್ಮೆಂಟ್ ಪ್ರೈಲಿಗೆ ಬೆಂಗಳೂರಿನ ಡಿಫನ್ಸ್ ಎಸ್,ಇ.ಝಡ್ ಪಾರ್ಕ್ ನಲ್ಲಿ ಅಂದಾಜು 160 ಕೋಟಿ ಬೆಲೆಬಾಳುವ 8 ಎಕೆರೆ ಭೂಮಿ ನೀಡಲಾಗಿದೆ,
ವೈಗೈ ಇನ್ವೆಸ್ಟ್ಮೆಂಟ್ ಪ್ರೈಲಿಗೆ ಭೂಮಿ ನೀಡಿದ್ದು ತಮ್ಮ ಸಾಲದ ಋಣಬಾಬತ್ತನ್ನು ತೀರಿಸಲೋ ಅಥವಾ ಅದರಲ್ಲಿಯೂ ವಸೂಲಿಬಾಜಿ ನಡೆದಿದೆಯೋ ಎಂಬುದನ್ನು ಟಾಕಾಟ್ ಎಂದು ಭೂಮಿ ಮಂಜೂರು ಮಾಡಿರುವ ಎಂ.ಬಿ.ಪಾಟೀಲರೇ ತಿಳಸಬೇಕು ಎಂದು ಬಿಜೆಪಿ ಕಿಡಿಕಾರಿದೆ,