ದೇಶ

BJP vs CONGRESS 15 ತಿಂಗಳಲ್ಲಿ ಹಲವಾರು ಕೋಮುಗಲಭೆ- ಸಿಎಂ ಸುಳ್ಳುರಾಮಯ್ಯ ಎಂದ ಬಿಜೆಪಿ!

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಕೋಮುಗಲಭೆಗಳು ನಡೆದೇ ಇಲ್ಲ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ಕಿಡಿಕಾರಿದೆ, ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಬಿಜೆಪಿ, ರಾಜೀನಾಮೆ ಬರೆಯುವ ಗಡಿಬಿಡಿಯಲ್ಲಿ ನಿಮಗೆ ಕಳೆದು 15 ತಿಂಗಳಲ್ಲಿ ನಡೆದ ಸಂಗತಿಗಳು ಮರೆತೇ ಹೋಗಿದೆ ಎಂದು ಲೇವಡಿ ಮಾಡಿದೆ,
ಜೊತೆಗೆ ಹದಿನೈದು ತಿಂಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಗಲಭೆಗಳ ಬಗ್ಗೆ ಪಟ್ಟಿಯನ್ನು ಸಹ ಬಿಜೆಪಿ ನೀಡಿದೆ,
ನೀವು ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣದಿಂದಲೇ ಶಾಂತಿ, ನೆಮ್ಮದೆ ಹಾಗೂ ಸಮೃದ್ಧಿಗೆ ಹೆಸರಾಗಿದ್ದ ಕರುನಾಡು ಅರಾಜಕತೆಯ ಬೀಡಾಯಿತು, ಬಹುಶಃ ರಾಜೀನಾಮೆ ಪತ್ರ ಬರೆಯುವ ಟೆನ್ಷನ್‍ನಲ್ಲಿ ನೀವು ನಿಮ್ಮ 15 ತಿಂಗಳ ದುರಾಡಳಿತದಲ್ಲಿ ನಡೆದಿರುವುದನ್ನು ಮರೆತಿರಬಹುದು, ಚಿಂತಸಬೇಡಿ ನಾವು ಅದನ್ನು ನಿಮಗೆ ನೆನಪಿಸುತ್ತೇವೆ ಎಂದಿರುವ ಬಿಜೆಪಿ, ಟಿ ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಕೋಪಾಲ್ ಹತ್ಯೆಯಿಂದ ನರಸೀಪುರ ಉದ್ವಿಗ್ನ, ಕೋಲಾರದಲ್ಲಿ ತಲ್ವಾರ್ ಮಾದರಿ ಪ್ರಚೋದನಕಾರಿ ಕಟೌಟ್, ಶಿವಮೊಗ್ಗದಲ್ಲಿ ಔರಂಗಜೇಬನ ಹಾಗೂ ತಲ್ವಾರ್ ಮಾದರಿ ಕಟೌಟ್, ಶಿವಮೊಗ್ಗದಲ್ಲಿ ಮತಾಂಧ ಜಿಹಾದಿಗಳಿಂದ ಬಡ ಹಿಂದೂಗಳ ಮನೆಗೆ ಬೆಂಕಿ, ಕಲ್ಲು ತೂರಾಟ, ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ವಿಡಿಯೋವನ್ನು ಕದ್ದು ಶೂಟ್ ಮಾಡಿದ್ದು, ಬೆಳಗಾವಿಯಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಬೆತ್ತಲುಗೊಳಿಸಿ ಹಲ್ಲೆ, ಹಾನಗಲ್ ನಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಗ್ಯಾಂಗ್ ರೇಪ್, ರಾಮೇಶ್ವರಂ ಕಫೆಯಲ್ಲಿ ಬಾಂಬ್ ಬ್ಲಾಸ್ಟ್, ಕಲುಬುರ್ಗಿಯಲ್ಲಿ ಪೊಲೀಸ್ ಪೇದೆ ಮೇಲೆ ಮರಳು ಟ್ರಾಕ್ಟರ್ ಹರಿಸಿ ಕೊಲೆ, ಹುಬ್ಬಳ್ಳಿಯಲಿ ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆ, ಪ್ರತಿನಿತ್ಯ ಬೆಂಗಳೂರಿನಲ್ಲಿ ವರದಿಯಾಗುತ್ತಿರುವ ರೋಡ್‍ರೇಜ್ ಪ್ರಕರಣಗಳು,, ಇವಿಷ್ಟು ಕೇವಲ 15 ತಿಂಗಳ ಅರಾಜಕತೆಯ ಆಡಳಿತದ ಹೈಲೈಟ್ಸ್‍ಗಳು,
ಈ ಬಗ್ಗೆ ನಿಮಗೆ ಅನುಮಾನವಿದ್ದರೆ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಚೀಫ್ ಬಳಿ ಒಮ್ಮೆ ಫ್ಯಾಕ್ಟ್‍ಚೆಕ್ ಮಾಡಿಸಿ ಎಂದು ಬಿಜೆಪಿ ಟಾಂಗ್ ನೀಡಿದೆ,

Leave a Reply

Your email address will not be published. Required fields are marked *

Trending

Exit mobile version