ದೇಶ
Breaking News ಆರ್ಎಸ್ಎಸ್ ಕಚೇರಿಗೆ ನುಗ್ಗಿದ ಪೊಲೀಸರು-ತಡರಾತ್ರಿ ಮಂಡ್ಯದಲ್ಲಿ ಮತ್ತೊಂದು ಕಿರಿಕ್!

ಮಂಡ್ಯ: ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಸ್ಪೋಟದ ಘಟನೆ ಮಾಸುವ ಬೆನ್ನಲ್ಲೇ ಮಂಡ್ಯದಲ್ಲಿ ಭಾನುವಾರ ತಡರಾತ್ರಿ ಮತ್ತೊಂದು ವಿವಾದ ನಡೆದಿದೆ, ಪಾಂಡವಪುರದಲ್ಲಿರುವ ಆರ್ಎಸ್ಎಸ್ ಕಚೇರಿಗೆ ಏಕಾಏಕಿ ನುಗ್ಗಿದ ಪೊಲೀಸರು ಅಲ್ಲಿದ್ದವರನ್ನು ವಶಕ್ಕೆ ಪಡೆಯಲು ವಿಫಲ ಯತ್ನ ನಡೆಸಿದ್ದಾರೆ, ರೂಚ್ಚಿಗೆದ್ದ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ರಸ್ತೆ ತಡೆದು ಪ್ರತಿಭಟನೆಯನ್ನೂ ನಡೆಸಿದ್ದಾರೆ,
ಶರಣ್ ಪಂಪ್ವೆಲ್ ಮಂಡ್ಯಕ್ಕೆ ಬಂದಿದ್ದಾರೆಂಬ ಮಾಹಿತಿಯ ಮೇಲೆ ಪೊಲೀಸರು ಆರ್ಎಸ್ಎಸ್ ಕಚೇರಿಗೆ ತೆರಳಿದ್ದರು, ಆದರೆ ಪೊಲೀಸರಿಗೆ ಶರಣ್ ಪೆಂಪ್ವೆಲ್ ಅಥವಾ ಬೇರಾವುದೇ ವ್ಯಕ್ತಿಗಳ ಮುಖ ಪರಿಚಯ ಇರಲಿಲ್ಲ, ಹೀಗಾಗಿ ಅಲ್ಲಿದ್ದ ಕಾರ್ಯಕರ್ತರನ್ನೇ ಬಂಧಿಸಿ ಎಳೆದೊಯ್ಯಲು ಮುಂದಾದರು ಎಂದು ಆರೋಪಿಸಲಾಗಿದೆ, ಅದರೆ ಸುತ್ತಮುತ್ತಲಿದ್ದ ಜನರು ಒಗ್ಗೂಡಿ ಯಾವುದೇ ನೋಟಿಸ್ ಅಥವಾ ಎಫ್ಐಆರ್ ಇಲ್ಲದೇ ಹೀಗೆ ಎಳೆದೊಯ್ಯಲು ಸಾಧ್ಯವಿಲ್ಲ ಎಂದು ಪ್ರತಿಭಟಿಸಿ ಪೊಲೀಸರಿಗೆ ರಸ್ತೆ ತಡೆ ವಿಧಿಸಿದರು,
ಕೊನೆಗೆ ಅಲ್ಲಿದ್ದ 10-15 ಪೊಲೀಸರು 70 ಕ್ಕೂ ಹೆಚ್ಚು ಮಂದಿಯ ಆಕ್ರೋಶಕ್ಕೆ ಮಣಿದಿದ್ದಾರೆನ್ನಲಾಗಿದೆ, ಕೊನೆಗೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಸ್ಧಳಕ್ಕೆ ಬುವವರೆಗೂ ಪೊಲೀಸರು ಇಲ್ಲಿಂದ ಹೋಗಬಾರದು, ಕಚೇರಿಯ ಒಳಗೆ ಬೂಟುಗಾಲಿನಲ್ಲಿ ನುಗ್ಗಿದ ಎಲ್ಲಾ ಪೊಲೀಸರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು,
ಈ ವೇಳೆ ಪ್ರತಿಕ್ರಿಯಿಸಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಾರ್ಕಡೇಯ, ಬಿಜೆಪಿ ಮುಖಂಡ ಮಂಜಣ್ಣ ವಿಎಚ್ಪಿಯ ಬಾಲು, ಪುನೀತ್, ಕೇಶವ ಮತ್ತಿತರರು ನಾವು ಬೈಟಕ್ ನಡೆಸುತ್ತಿರುವಾಗಿ ಪೊಲೀಸರು ಅಕ್ರಮವಾಗಿ ನಮ್ಮನ್ನು ಬಂಧಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ,
ತಡರಾತ್ರಿ 1.30 ಕ್ಕೆ ಮಲ್ಲಿಕಾರ್ಜುನ ಬಾಲದಂಡಿಯವರು ಸ್ಧಳಕ್ಕೆ ಧಾವಿಸಿ ಪರಿಸ್ಧಿತಿಯನ್ನು ತಿಳಿಗೊಳಿಸಿದ್ದಾರೆ,